newsfirstkannada.com

ಹಬ್ಬದ ಖುಷಿಯಲ್ಲಿದ್ದ ಪ್ರಯಾಣಿಕರಿಗೆ ಬಿಗ್​ ಶಾಕ್; ಟಿಕೆಟ್​ ದರ ಹೆಚ್ಚಳಕ್ಕೆ ಕಂಗಾಲು!

Share :

17-09-2023

    ಹಬ್ಬಕ್ಕೆಂದು ಊರಿಗೆ ಹೊರಟೋರಿಗೆ ಟಿಕೆಟ್​ ಬೆಲೆ ಏರಿಕೆ ಬಿಸಿ!

    ಹೆಚ್ಚುವರಿಯಾಗಿ 1200 ಬಸ್​ಗಳನ್ನ ಬಿಟ್ಟ ಕೆಸ್​ಆರ್​ಟಿಸಿ ಸಂಸ್ಥೆ

    ದುಬಾರಿ ಟಿಕೆಟ್​ ದರ ನೀಡಲಾಗದೆ ಪ್ರಯಾಣಿಕರು ಕಂಗಾಲು

ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆಂದು ಊರಿಗೆ ತೆರಳೋಕೆ ಸಿದ್ಧವಾಗಿರೋರಿಗೆ ಸಾರಿಗೆ ಇಲಾಖೆಯವರು ಬೆಲೆ ಏರಿಕೆ ಹೆಚ್ಚಳ ಮಾಡಿ ಶಾಕ್​ ನೀಡಿದ್ದಾರೆ. ಇಲಾಖೆ ಆಯುಕ್ತರ ಆದೇಶಕ್ಕೂ ಡೋಂಟ್​ ಕೇರ್​ ಅನ್ನದೇ ಖಾಸಗಿ ಬಸ್​​ನವರು ಪ್ರಯಾಣಿಕರಿಗೆ ಟಿಕೆಟ್​ ಭಾರ ಹೊರಿಸುತ್ತಿದ್ದಾರೆ.

ಬೆಂಗಳೂರಿನಿಂದ ಹಬ್ಬಕ್ಕೆ ಹೊರಟೋರಿಗೆ ಟಿಕೆಟ್​ ರೇಟ್​ ಕೇಳಿ ದಂಗು ಬಡಿದಂತಾಗಿದೆ. ಒಂದು​ ಕಡೆ ಗಣೇಶ ಹಬ್ಬದ ಸಂಭ್ರಮ. ಮತ್ತೊಂದು ಕಡೆ ಖಾಸಗಿ ಬಸ್​​ನ ಟಿಕೆಟ್​ ದರ ಹೆಚ್ಚಳ. ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ಪ್ರಯಾಣಿಕರ ಸಂತಸಕ್ಕೆ ಖಾಸಗಿ ಸಾರಿಗೆ ಬ್ರೇಕ್​ ಹಾಕಿದೆ. ಇತ್ತ ದುಬಾರಿ ಟಿಕೆಟ್​ ದರ ನೀಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಹೌದು ಕೆಸ್​ಆರ್​ಟಿಸಿ ಹೆಚ್ಚುವರಿಯಾಗಿ 1200 ಬಸ್​ಗಳನ್ನ ಬಿಟ್ಟರೂ ಕೂಡ ಖಾಸಗಿ ಬಸ್​ 20% ದರ ಏರಿಕೆ ಮಾಡಿದೆ. ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ತೆರಳುವವರು ಡಬಲ್- ತ್ರಿಬಲ್ ಹಣ ಕೊಟ್ಟು ಹೋಗಬೇಕಾಗಿದೆ.

ಖಾಸಗಿ ಬಸ್​ ಮಾಲೀಕರಿಗೆ ಈಗಾಗಲೇ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್​​ ಬಸ್​ ದರ ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ಎಚ್ಚರಿಕೆಯನ್ನೂ ಕಡೆಗಣಿಸಿ ಖಾಸಗಿ ಬಸ್ ಮಾಲೀಕರು ಹಾಗೂ ಟಿಕೆಟ್​ ಬುಕ್ಕಿಂಗ್​ ಕಂಪನಿಯವರು ಟಿಕೆಟ್​ ದರ ಹೆಚ್ಚಿಸಿದ್ದಾರೆ.

ಖಾಸಗಿ ಬಸ್ ಹಳೆ- ಹೊಸ ದರ

ಬೆಂಗಳೂರು TO ಉಡುಪಿ- 700-800- 1400- 1800
ಬೆಂಗಳೂರು TO ಬೆಳಗಾವಿ- 800-900- 1500-2500
ಬೆಂಗಳೂರು TO ಹುಬ್ಬಳ್ಳಿ- 700-800- 1500-2000
ಬೆಂಗಳೂರು TO ಶಿವಮೊಗ್ಗ -700-800- 1200-1800
ಬೆಂಗಳೂರು TO ಕಲಬುರಗಿ-1000-1200- 1500-2000
ಬೆಂಗಳೂರು TO ರಾಯಚೂರು- 700-800- 1000-1400

ಖಾಸಗಿ ಬಸ್​ ಟಿಕೆಟ್​ ದರ ಹೆಚ್ಚಳವಾಗಿರೋದು ಪ್ರಯಾಣಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸುವ ಅಗತ್ಯ ಇದೆ. ಹಾಗೂ ಟಿಕೆಟ್​ ದರವನ್ನ ಕಡಿಮೆ ಮಾಡಿ ಪ್ರಯಾಣಿಕರ ಟಿಕೆಟ್​ ಭಾರ ಇಳಿಸುವ ಕೆಲಸ ಸಾರಿಗೆ ಇಲಾಖೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಬ್ಬದ ಖುಷಿಯಲ್ಲಿದ್ದ ಪ್ರಯಾಣಿಕರಿಗೆ ಬಿಗ್​ ಶಾಕ್; ಟಿಕೆಟ್​ ದರ ಹೆಚ್ಚಳಕ್ಕೆ ಕಂಗಾಲು!

https://newsfirstlive.com/wp-content/uploads/2023/09/bus-3.jpg

    ಹಬ್ಬಕ್ಕೆಂದು ಊರಿಗೆ ಹೊರಟೋರಿಗೆ ಟಿಕೆಟ್​ ಬೆಲೆ ಏರಿಕೆ ಬಿಸಿ!

    ಹೆಚ್ಚುವರಿಯಾಗಿ 1200 ಬಸ್​ಗಳನ್ನ ಬಿಟ್ಟ ಕೆಸ್​ಆರ್​ಟಿಸಿ ಸಂಸ್ಥೆ

    ದುಬಾರಿ ಟಿಕೆಟ್​ ದರ ನೀಡಲಾಗದೆ ಪ್ರಯಾಣಿಕರು ಕಂಗಾಲು

ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆಂದು ಊರಿಗೆ ತೆರಳೋಕೆ ಸಿದ್ಧವಾಗಿರೋರಿಗೆ ಸಾರಿಗೆ ಇಲಾಖೆಯವರು ಬೆಲೆ ಏರಿಕೆ ಹೆಚ್ಚಳ ಮಾಡಿ ಶಾಕ್​ ನೀಡಿದ್ದಾರೆ. ಇಲಾಖೆ ಆಯುಕ್ತರ ಆದೇಶಕ್ಕೂ ಡೋಂಟ್​ ಕೇರ್​ ಅನ್ನದೇ ಖಾಸಗಿ ಬಸ್​​ನವರು ಪ್ರಯಾಣಿಕರಿಗೆ ಟಿಕೆಟ್​ ಭಾರ ಹೊರಿಸುತ್ತಿದ್ದಾರೆ.

ಬೆಂಗಳೂರಿನಿಂದ ಹಬ್ಬಕ್ಕೆ ಹೊರಟೋರಿಗೆ ಟಿಕೆಟ್​ ರೇಟ್​ ಕೇಳಿ ದಂಗು ಬಡಿದಂತಾಗಿದೆ. ಒಂದು​ ಕಡೆ ಗಣೇಶ ಹಬ್ಬದ ಸಂಭ್ರಮ. ಮತ್ತೊಂದು ಕಡೆ ಖಾಸಗಿ ಬಸ್​​ನ ಟಿಕೆಟ್​ ದರ ಹೆಚ್ಚಳ. ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ಪ್ರಯಾಣಿಕರ ಸಂತಸಕ್ಕೆ ಖಾಸಗಿ ಸಾರಿಗೆ ಬ್ರೇಕ್​ ಹಾಕಿದೆ. ಇತ್ತ ದುಬಾರಿ ಟಿಕೆಟ್​ ದರ ನೀಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಹೌದು ಕೆಸ್​ಆರ್​ಟಿಸಿ ಹೆಚ್ಚುವರಿಯಾಗಿ 1200 ಬಸ್​ಗಳನ್ನ ಬಿಟ್ಟರೂ ಕೂಡ ಖಾಸಗಿ ಬಸ್​ 20% ದರ ಏರಿಕೆ ಮಾಡಿದೆ. ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ತೆರಳುವವರು ಡಬಲ್- ತ್ರಿಬಲ್ ಹಣ ಕೊಟ್ಟು ಹೋಗಬೇಕಾಗಿದೆ.

ಖಾಸಗಿ ಬಸ್​ ಮಾಲೀಕರಿಗೆ ಈಗಾಗಲೇ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್​​ ಬಸ್​ ದರ ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ಎಚ್ಚರಿಕೆಯನ್ನೂ ಕಡೆಗಣಿಸಿ ಖಾಸಗಿ ಬಸ್ ಮಾಲೀಕರು ಹಾಗೂ ಟಿಕೆಟ್​ ಬುಕ್ಕಿಂಗ್​ ಕಂಪನಿಯವರು ಟಿಕೆಟ್​ ದರ ಹೆಚ್ಚಿಸಿದ್ದಾರೆ.

ಖಾಸಗಿ ಬಸ್ ಹಳೆ- ಹೊಸ ದರ

ಬೆಂಗಳೂರು TO ಉಡುಪಿ- 700-800- 1400- 1800
ಬೆಂಗಳೂರು TO ಬೆಳಗಾವಿ- 800-900- 1500-2500
ಬೆಂಗಳೂರು TO ಹುಬ್ಬಳ್ಳಿ- 700-800- 1500-2000
ಬೆಂಗಳೂರು TO ಶಿವಮೊಗ್ಗ -700-800- 1200-1800
ಬೆಂಗಳೂರು TO ಕಲಬುರಗಿ-1000-1200- 1500-2000
ಬೆಂಗಳೂರು TO ರಾಯಚೂರು- 700-800- 1000-1400

ಖಾಸಗಿ ಬಸ್​ ಟಿಕೆಟ್​ ದರ ಹೆಚ್ಚಳವಾಗಿರೋದು ಪ್ರಯಾಣಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸುವ ಅಗತ್ಯ ಇದೆ. ಹಾಗೂ ಟಿಕೆಟ್​ ದರವನ್ನ ಕಡಿಮೆ ಮಾಡಿ ಪ್ರಯಾಣಿಕರ ಟಿಕೆಟ್​ ಭಾರ ಇಳಿಸುವ ಕೆಲಸ ಸಾರಿಗೆ ಇಲಾಖೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More