newsfirstkannada.com

ಬರೋಬ್ಬರಿ 1.70 ಕೋಟಿ ಹಣ ಸುಲಿಗೆ.. ಯಾರದ್ದೋ ಸಹಾಯಕ್ಕೆ ಹೋದ PSI ಲಾಕ್​ ಆಗಿದ್ಹೇಗೆ?

Share :

21-11-2023

    ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್​ಐ

    ಠಾಣೆ ಬಳಿ PSI ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್!

    ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ PSI ಜೈಲಿಗೆ

ಬೆಂಗಳೂರು: ಜಸ್ಟ್​​ ಒಂದು ಬೈಕ್​ ರಿಪೇರಿ ಮಾಡೋ ವಿಚಾರವಾಗಿ ಅವರಿಬ್ಬರ ಪರಿಚಯವಾಗಿತ್ತು. ಕೇವಲ ಪರಿಚಯವಲ್ಲ. ಇಬ್ಬರು ಕ್ಲೋಸ್​ ಫ್ರೆಂಡ್ಸ್​ ಕೂಡಾ ಆಗಿದ್ದರು. ಆದ್ರೆ ಈ ಫ್ರೆಂಡ್​ಶಿಪ್​ನಿಂದ ತಾನು ಜೈಲಿಗೆ ಹೋಗ್ತೀನಿ ಅಂತ ಮಾತ್ರ ಆ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​​​ಗೆ ಗೊತ್ತೇ ಇರಲಿಲ್ಲ. ಪ್ರೊಬೆಷನರಿ ಪಿಎಸ್ಐ ಸಿದ್ದಾರೂಡ್​ ಇವರು ಕಾನ್ಸ್​​ಟೇಬಲ್​​​ ಅಲ್ಲಾಭಕ್ಷಿ. ಇವರಿಬ್ಬರಿಗೆ ಚಳ್ಳೆ ಹಣ್ಣು ತಿನ್ನಿಸಿದೋನ ಹೆಸರು ರಾಜ್ ಕಿಶೋರ್. ಈ ಕಥೆಯಲ್ಲಿ ಮೇಯ್ನ್​​ ಕ್ಯಾರೆಕ್ಟರ್ಸ್​ ಅಂದ್ರೆ ಸಿದ್ದಾರೂಡ್​ ಮತ್ತು ರಾಜ್​ ಕಿಶೋರ್​​.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್​ಐ ಸಿದ್ದರೂಡ್​​ಗೆ ಭದ್ರತಾ ಕೆಲಸವೊಂದರ ಟೈಮಲ್ಲಿ ತಾನು ಹೋಮ್ ಗಾರ್ಡ್ ಎಂದು ರಾಜ್​ ಕಿಶೋರ್​ ಪರಿಚಯ ಮಾಡಿಕೊಂಡಿದ್ದ. ಆದ್ರೆ ಈಗ ಆತ ಎಲ್ಲಿಯೂ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿರಲಿಲ್ಲ. ಒಮ್ಮೆ ಠಾಣೆ ಬಳಿ ಬಂದು ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್, ಬೈಕ್ ಸಮಸ್ಯೆ ಆಗಿದೆ ತಾನೆ, ರಿಪೇರಿ ಮಾಡಿಸುತ್ತೇನೆಂದು ಹತ್ತಿರವಾಗಿದ್ದ. ಪಿಎಸ್​ಐ ಬಳಿ ಬಂದವನೇ ನನ್ನಣ್ಣನಿಗೆ ಹಣ ಬರಬೇಕು ನೀವು ಕೊಡಿಸಿ ಎಂದು ಕೇಳಿದ್ದ. ಹಿಂದೆ ಮುಂದೆ ಯೋಚನೆ ಮಾಡದೇ PSI ಸಿದ್ಧಾರೂಡ, ಕಾನ್ಸ್​ಟೇಬಲ್​​ ಅಲ್ಲಾಭಾಕ್ಷ್​​ನ ಕರೆದುಕೊಂಡು, ರಾಜ್​ ಕಿಶೋರ್​ ಜೊತೆ ಹೋಗಿದ್ದರು. ಹೋದವರು ಕಾರ್ತಿಕ್ ಎಂಬಾತನ ಮೇಲೆ ದೌರ್ಜನ್ಯ ಮಾಡಿ ಹೆಚ್​ಎಸ್​ಆರ್ ಲೇಔಟ್​​ನಿಂದ ಕಿಡ್ನಾಪ್ ಮಾಡಿದ್ದರು. ಜುಲೈ 25ರಂದು ಈ ಘಟನೆ ನಡೆದಿದ್ದು ಕಾರ್ತಿಕ್​​ನನ್ನ ಬೆದರಿಸಿ ಒಂದೂವರೆ ಕೋಟಿ ಕ್ರಿಪ್ಟೋ ಕರೆನ್ಸಿ, ₹20 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

ಹಣ ಕೊಟ್ಟು ಎಸ್ಕೇಪ್​ ಆದ ಕಾರ್ತಿಕ್​ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆದರೆ ಕೆ ಜಿ ಹಳ್ಳಿಯಲ್ಲಿ ತನಿಖೆ ಸರಿಯಾಗದ ಕಾರಣ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಪ್ರೊಬೆಷನರಿ ಪಿಎಸ್​ಐ ಸೇರಿ ಮೂವನ್ನ ಅರೆಸ್ಟ್ ಮಾಡಿದ್ದಾರೆ. ಹಾಗೂ ಬ್ಯಾಂಕ್​ನಲ್ಲಿದ್ದ 20 ಲಕ್ಷ ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನ ವಶಕ್ಕೆ ಪಡೆಯಲಾಗಿದೆ. ಅದೇನೇ ಇರಲಿ ಪಿಎಸ್​ಐ ಆಗಿ ತಪ್ಪು ಸರಿ. ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ ಕಂಬಿ ಹಿಂದೆ ಹೋಗಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 1.70 ಕೋಟಿ ಹಣ ಸುಲಿಗೆ.. ಯಾರದ್ದೋ ಸಹಾಯಕ್ಕೆ ಹೋದ PSI ಲಾಕ್​ ಆಗಿದ್ಹೇಗೆ?

https://newsfirstlive.com/wp-content/uploads/2023/11/bng-29.jpg

    ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್​ಐ

    ಠಾಣೆ ಬಳಿ PSI ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್!

    ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ PSI ಜೈಲಿಗೆ

ಬೆಂಗಳೂರು: ಜಸ್ಟ್​​ ಒಂದು ಬೈಕ್​ ರಿಪೇರಿ ಮಾಡೋ ವಿಚಾರವಾಗಿ ಅವರಿಬ್ಬರ ಪರಿಚಯವಾಗಿತ್ತು. ಕೇವಲ ಪರಿಚಯವಲ್ಲ. ಇಬ್ಬರು ಕ್ಲೋಸ್​ ಫ್ರೆಂಡ್ಸ್​ ಕೂಡಾ ಆಗಿದ್ದರು. ಆದ್ರೆ ಈ ಫ್ರೆಂಡ್​ಶಿಪ್​ನಿಂದ ತಾನು ಜೈಲಿಗೆ ಹೋಗ್ತೀನಿ ಅಂತ ಮಾತ್ರ ಆ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​​​ಗೆ ಗೊತ್ತೇ ಇರಲಿಲ್ಲ. ಪ್ರೊಬೆಷನರಿ ಪಿಎಸ್ಐ ಸಿದ್ದಾರೂಡ್​ ಇವರು ಕಾನ್ಸ್​​ಟೇಬಲ್​​​ ಅಲ್ಲಾಭಕ್ಷಿ. ಇವರಿಬ್ಬರಿಗೆ ಚಳ್ಳೆ ಹಣ್ಣು ತಿನ್ನಿಸಿದೋನ ಹೆಸರು ರಾಜ್ ಕಿಶೋರ್. ಈ ಕಥೆಯಲ್ಲಿ ಮೇಯ್ನ್​​ ಕ್ಯಾರೆಕ್ಟರ್ಸ್​ ಅಂದ್ರೆ ಸಿದ್ದಾರೂಡ್​ ಮತ್ತು ರಾಜ್​ ಕಿಶೋರ್​​.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್​ಐ ಸಿದ್ದರೂಡ್​​ಗೆ ಭದ್ರತಾ ಕೆಲಸವೊಂದರ ಟೈಮಲ್ಲಿ ತಾನು ಹೋಮ್ ಗಾರ್ಡ್ ಎಂದು ರಾಜ್​ ಕಿಶೋರ್​ ಪರಿಚಯ ಮಾಡಿಕೊಂಡಿದ್ದ. ಆದ್ರೆ ಈಗ ಆತ ಎಲ್ಲಿಯೂ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿರಲಿಲ್ಲ. ಒಮ್ಮೆ ಠಾಣೆ ಬಳಿ ಬಂದು ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್, ಬೈಕ್ ಸಮಸ್ಯೆ ಆಗಿದೆ ತಾನೆ, ರಿಪೇರಿ ಮಾಡಿಸುತ್ತೇನೆಂದು ಹತ್ತಿರವಾಗಿದ್ದ. ಪಿಎಸ್​ಐ ಬಳಿ ಬಂದವನೇ ನನ್ನಣ್ಣನಿಗೆ ಹಣ ಬರಬೇಕು ನೀವು ಕೊಡಿಸಿ ಎಂದು ಕೇಳಿದ್ದ. ಹಿಂದೆ ಮುಂದೆ ಯೋಚನೆ ಮಾಡದೇ PSI ಸಿದ್ಧಾರೂಡ, ಕಾನ್ಸ್​ಟೇಬಲ್​​ ಅಲ್ಲಾಭಾಕ್ಷ್​​ನ ಕರೆದುಕೊಂಡು, ರಾಜ್​ ಕಿಶೋರ್​ ಜೊತೆ ಹೋಗಿದ್ದರು. ಹೋದವರು ಕಾರ್ತಿಕ್ ಎಂಬಾತನ ಮೇಲೆ ದೌರ್ಜನ್ಯ ಮಾಡಿ ಹೆಚ್​ಎಸ್​ಆರ್ ಲೇಔಟ್​​ನಿಂದ ಕಿಡ್ನಾಪ್ ಮಾಡಿದ್ದರು. ಜುಲೈ 25ರಂದು ಈ ಘಟನೆ ನಡೆದಿದ್ದು ಕಾರ್ತಿಕ್​​ನನ್ನ ಬೆದರಿಸಿ ಒಂದೂವರೆ ಕೋಟಿ ಕ್ರಿಪ್ಟೋ ಕರೆನ್ಸಿ, ₹20 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.

ಹಣ ಕೊಟ್ಟು ಎಸ್ಕೇಪ್​ ಆದ ಕಾರ್ತಿಕ್​ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆದರೆ ಕೆ ಜಿ ಹಳ್ಳಿಯಲ್ಲಿ ತನಿಖೆ ಸರಿಯಾಗದ ಕಾರಣ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಪ್ರೊಬೆಷನರಿ ಪಿಎಸ್​ಐ ಸೇರಿ ಮೂವನ್ನ ಅರೆಸ್ಟ್ ಮಾಡಿದ್ದಾರೆ. ಹಾಗೂ ಬ್ಯಾಂಕ್​ನಲ್ಲಿದ್ದ 20 ಲಕ್ಷ ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನ ವಶಕ್ಕೆ ಪಡೆಯಲಾಗಿದೆ. ಅದೇನೇ ಇರಲಿ ಪಿಎಸ್​ಐ ಆಗಿ ತಪ್ಪು ಸರಿ. ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ ಕಂಬಿ ಹಿಂದೆ ಹೋಗಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More