newsfirstkannada.com

VIDEO: ಬಂದ, ನೋಡ್ದ, ಚುಚ್ಚಿ ಹೊರಟೇ ಬಿಟ್ಟ; ಬೆಂಗಳೂರಿನ ಈ ಸೈಕೋ ಕಿಲ್ಲರ್​​​ ಡೆಡ್ಲಿ ಸ್ಟೋರಿ!

Share :

27-06-2023

    ಸೆಕ್ಯುರಿಟಿ ಗಾರ್ಡ್​​ಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ

    ಸೈಕೋ ಕ್ರಿಮಿನಲ್ ಅಟ್ಟಹಾಸಕ್ಕೆ ಸೆಕ್ಯುರಿಟಿ ಗಾರ್ಡ್​ಗಳು ವಿಲವಿಲ

    ಇದು ಇಡೀ ಸಿಲಿಕಾನ್ ಸಿಟಿ ಮಂದಿ ನಿಜಕ್ಕೂ ಬೆಚ್ಚಿ ಬೀಳುವ ಸುದ್ದಿ

ಬೆಂಗಳೂರು: ಒಂಟಿಯಾಗಿದ್ದ ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ ಕಿಲ್ಲರ್​​ನನ್ನು ಕೊನೆಗೂ ಆರ್​​. ಟಿ ನಗರ ಪೊಲೀಸರು ಬಂಧಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. ತೌಸೀಪ್​​​ ಬಂಧಿತ ಆರೋಪಿ.

 

ಈ ಖತರ್ನಾಕ್ ಆರೋಪಿ ತೌಸೀಪ್​​ ವಿಚಿತ್ರ ಸೈಕೋ ಕಿಲ್ಲರ್​​ ಆಗಿದ್ದ. ಸಿನಿಮೀಯ ಶೈಲಿಯಲ್ಲಿ ಬಂದು ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಕೊಲ್ಲುತ್ತಿದ್ದನು. ಜೊತೆಗೆ ಡ್ರ್ಯಾಗರ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದ. ಎರಡರಿಂದ ಮೂರು ಗಂಟೆ ಹೊತ್ತಿಗೆ ಸಿಕ್ಕ ಸಿಕ್ಕ ಸೆಕ್ಯುರಿಟಿ ಗಾರ್ಡ್​​ಗಳ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಆರೋಪಿಯು ಆರ್​.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್​​​ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ತೌಸೀಪ್​​​ ಬಂಧಿತ ಆರೋಪಿ

ಇನ್ನು, ಈ ಆರೋಪಿ ವಿರುದ್ಧ ಸಾಕಷ್ಟು ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಹೀಗಾಗಿ ಪೊಲೀಸ್​​ ಅಧಿಕಾರಿಗಳು ಮೂರು ದಿನಗಳ ಕಾಲ ಹಗಲು ರಾತ್ರಿ ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್​.ಟಿ ನಗರ 80 FT ರೋಡ್​​ ಬಳಿ ಪೊಲೀಸರ ಕಣ್ಣಿಗೆ ಬಿದಿದ್ದಾನೆ. ಈ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಆರೋಪಿ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಸೈಕೋ ಕಿಲ್ಲರ್ ಪೊಲೀಸರ ಅಥಿತಿಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಂದ, ನೋಡ್ದ, ಚುಚ್ಚಿ ಹೊರಟೇ ಬಿಟ್ಟ; ಬೆಂಗಳೂರಿನ ಈ ಸೈಕೋ ಕಿಲ್ಲರ್​​​ ಡೆಡ್ಲಿ ಸ್ಟೋರಿ!

https://newsfirstlive.com/wp-content/uploads/2023/06/bangaluru-2.jpg

    ಸೆಕ್ಯುರಿಟಿ ಗಾರ್ಡ್​​ಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ

    ಸೈಕೋ ಕ್ರಿಮಿನಲ್ ಅಟ್ಟಹಾಸಕ್ಕೆ ಸೆಕ್ಯುರಿಟಿ ಗಾರ್ಡ್​ಗಳು ವಿಲವಿಲ

    ಇದು ಇಡೀ ಸಿಲಿಕಾನ್ ಸಿಟಿ ಮಂದಿ ನಿಜಕ್ಕೂ ಬೆಚ್ಚಿ ಬೀಳುವ ಸುದ್ದಿ

ಬೆಂಗಳೂರು: ಒಂಟಿಯಾಗಿದ್ದ ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ ಕಿಲ್ಲರ್​​ನನ್ನು ಕೊನೆಗೂ ಆರ್​​. ಟಿ ನಗರ ಪೊಲೀಸರು ಬಂಧಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. ತೌಸೀಪ್​​​ ಬಂಧಿತ ಆರೋಪಿ.

 

ಈ ಖತರ್ನಾಕ್ ಆರೋಪಿ ತೌಸೀಪ್​​ ವಿಚಿತ್ರ ಸೈಕೋ ಕಿಲ್ಲರ್​​ ಆಗಿದ್ದ. ಸಿನಿಮೀಯ ಶೈಲಿಯಲ್ಲಿ ಬಂದು ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಕೊಲ್ಲುತ್ತಿದ್ದನು. ಜೊತೆಗೆ ಡ್ರ್ಯಾಗರ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದ. ಎರಡರಿಂದ ಮೂರು ಗಂಟೆ ಹೊತ್ತಿಗೆ ಸಿಕ್ಕ ಸಿಕ್ಕ ಸೆಕ್ಯುರಿಟಿ ಗಾರ್ಡ್​​ಗಳ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಆರೋಪಿಯು ಆರ್​.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್​​​ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ತೌಸೀಪ್​​​ ಬಂಧಿತ ಆರೋಪಿ

ಇನ್ನು, ಈ ಆರೋಪಿ ವಿರುದ್ಧ ಸಾಕಷ್ಟು ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಹೀಗಾಗಿ ಪೊಲೀಸ್​​ ಅಧಿಕಾರಿಗಳು ಮೂರು ದಿನಗಳ ಕಾಲ ಹಗಲು ರಾತ್ರಿ ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್​.ಟಿ ನಗರ 80 FT ರೋಡ್​​ ಬಳಿ ಪೊಲೀಸರ ಕಣ್ಣಿಗೆ ಬಿದಿದ್ದಾನೆ. ಈ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಆರೋಪಿ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಸೈಕೋ ಕಿಲ್ಲರ್ ಪೊಲೀಸರ ಅಥಿತಿಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More