ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭಗವಂತ್ ಮಾನ್ ಭೇಟಿ
ಬೋಟ್ ಏರಿ ಪ್ರವಾಹ ಪೀಡಿತ ಗ್ರಾಮಗಳನ್ನು ನೋಡಲು ಹೊರಟ ಪಂಜಾಬ್ ಸಿಎಂ
ಈ ವೇಳೆ ನೀರಿನಲ್ಲಿ ಅತ್ತಿಂದಿತ್ತ ತೇಲಿದ ಬೋಟ್; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಮಳೆಯಿಂದಾಗಿ ಹಲವೆಡೆ ಪ್ರವಾಹ ಏರ್ಪಟ್ಟಿದೆ. ಪಂಜಾಬ್ ಜಲಂದರ್ ಜಿಲ್ಲೆಯಲ್ಲಿ ಕೆಲವು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಸಮಯದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಸಿಎಂ ಭಗವಂತ್ ಮಾನ್ ಮುಂದಾಗಿದ್ದರು. ಆದರೆ ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಬೋಟ್ ನಿಯಂತ್ರಣ ಕಳೆದುಕೊಂಡಿದ್ದು, ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಸಿಎಂ ಭಗವಂತ್ ಮಾನ್ ಪ್ರವಾಹ ಪೀಡಿತ ಗಿಡರಪಿಂಡಿ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಈ ವೇಳೆ ಬೋಟ್ ಮೂಲಕ ಪ್ರಯಾಣ ಬೆಳೆಸಬೇಕಾಗಿತ್ತು. ಹಾಗಾಗಿ ಬೋಟ್ ಹತ್ತಿದ್ದರು. ಆದರೆ ಸಿಎಂ ಸೇರಿದಂತೆ ಜನರು ತುಂಬಿದ್ದ ಬೋಟ್ ನೀರಿನಲ್ಲಿ ಚಲಿಸುತ್ತಿದ್ದಂತೆಯೇ ಅತ್ತಿಂದಿತ್ತ ತೇಲಿದೆ. ಈ ವೇಳೆ ಅದರಲ್ಲಿದ್ದವರು ಗಾಬರಿಗೆ ಒಳಗಾಗಿದ್ದಾರೆ.
#FloodRescueOperation #FloodReliefAndRescue has become a publicity carnival in Punjab. Eager to accompany @CMOPb @BhagwantMann on a boat survey in #Jalandhar people overload it and he narrowly escapes an accident. #PunjabFloods2023 are not photo ops. @AAPPunjab #PunjabFloods pic.twitter.com/tqPVJqmFVB
— Sumedha Sharma (@sumedhasharma86) July 15, 2023
ಇನ್ನು ಸಿಎಂ ತೆರಳುತ್ತಿದ್ದ ಬೋಟ್ ಅತ್ತಿಂದಿತ್ತ ತೇಲಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ದೃಶ್ಯ ವೈರಲ್ ಆಗಿದೆ. ಬೋಟ್ ಅತ್ತಿಂದಿತ್ತ ತೇಲಾಡಿದಂತೆ ನಾವಿಕ ನಿಯಂತ್ರಣಕ್ಕೆ ತಂದಿದ್ದಾನೆ. ಹೀಗಾಗಿ ಭಾರೀ ಅನಾಹುತವೊಂದು ಕೈತಪ್ಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭಗವಂತ್ ಮಾನ್ ಭೇಟಿ
ಬೋಟ್ ಏರಿ ಪ್ರವಾಹ ಪೀಡಿತ ಗ್ರಾಮಗಳನ್ನು ನೋಡಲು ಹೊರಟ ಪಂಜಾಬ್ ಸಿಎಂ
ಈ ವೇಳೆ ನೀರಿನಲ್ಲಿ ಅತ್ತಿಂದಿತ್ತ ತೇಲಿದ ಬೋಟ್; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಮಳೆಯಿಂದಾಗಿ ಹಲವೆಡೆ ಪ್ರವಾಹ ಏರ್ಪಟ್ಟಿದೆ. ಪಂಜಾಬ್ ಜಲಂದರ್ ಜಿಲ್ಲೆಯಲ್ಲಿ ಕೆಲವು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಸಮಯದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಸಿಎಂ ಭಗವಂತ್ ಮಾನ್ ಮುಂದಾಗಿದ್ದರು. ಆದರೆ ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಬೋಟ್ ನಿಯಂತ್ರಣ ಕಳೆದುಕೊಂಡಿದ್ದು, ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಸಿಎಂ ಭಗವಂತ್ ಮಾನ್ ಪ್ರವಾಹ ಪೀಡಿತ ಗಿಡರಪಿಂಡಿ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಈ ವೇಳೆ ಬೋಟ್ ಮೂಲಕ ಪ್ರಯಾಣ ಬೆಳೆಸಬೇಕಾಗಿತ್ತು. ಹಾಗಾಗಿ ಬೋಟ್ ಹತ್ತಿದ್ದರು. ಆದರೆ ಸಿಎಂ ಸೇರಿದಂತೆ ಜನರು ತುಂಬಿದ್ದ ಬೋಟ್ ನೀರಿನಲ್ಲಿ ಚಲಿಸುತ್ತಿದ್ದಂತೆಯೇ ಅತ್ತಿಂದಿತ್ತ ತೇಲಿದೆ. ಈ ವೇಳೆ ಅದರಲ್ಲಿದ್ದವರು ಗಾಬರಿಗೆ ಒಳಗಾಗಿದ್ದಾರೆ.
#FloodRescueOperation #FloodReliefAndRescue has become a publicity carnival in Punjab. Eager to accompany @CMOPb @BhagwantMann on a boat survey in #Jalandhar people overload it and he narrowly escapes an accident. #PunjabFloods2023 are not photo ops. @AAPPunjab #PunjabFloods pic.twitter.com/tqPVJqmFVB
— Sumedha Sharma (@sumedhasharma86) July 15, 2023
ಇನ್ನು ಸಿಎಂ ತೆರಳುತ್ತಿದ್ದ ಬೋಟ್ ಅತ್ತಿಂದಿತ್ತ ತೇಲಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ದೃಶ್ಯ ವೈರಲ್ ಆಗಿದೆ. ಬೋಟ್ ಅತ್ತಿಂದಿತ್ತ ತೇಲಾಡಿದಂತೆ ನಾವಿಕ ನಿಯಂತ್ರಣಕ್ಕೆ ತಂದಿದ್ದಾನೆ. ಹೀಗಾಗಿ ಭಾರೀ ಅನಾಹುತವೊಂದು ಕೈತಪ್ಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ