newsfirstkannada.com

ಪಾಕ್​ ವಿರುದ್ಧ ಭಾರತ ಗೆಲ್ಲಲು 2 ರನ್​ ಬೇಕಿದ್ದಾಗ ಅಶ್ವಿನ್​ಗೆ 7 ಟಿಪ್ಸ್​ ಕೊಟ್ಟಿದ್ದ​ ಕೊಹ್ಲಿ..! ಆಮೇಲೆ ಏನಾಯ್ತು ಅಂದರೆ..?

Share :

03-07-2023

    ಕೊನೆ ಬಾಲ್​ನಲ್ಲಿ ಗೆಲ್ಲಲು ವಿರಾಟ್​ ಮಾಡಿದ ಪ್ಲಾನ್ ಏನು?

    2 ಬಾಲ್​ಗೆ 2 ರನ್​ ಬೇಕಿದ್ದಾಗ ಕಾರ್ತಿಕ್ ಔಟ್​ ಆಗಿದ್ದರು

    ಧೈರ್ಯ ತುಂಬಲು ಕ್ರೀಸ್​ನಲ್ಲಿ ಕೊಹ್ಲಿ ಇದ್ರೆ ಸಾಕು ಪಂದ್ಯ ನಮ್ದೆ

ವಿರಾಟ್​ ಕೊಹ್ಲಿ ಒಬ್ಬ ಸೂಪರ್​ ಸ್ಟಾರ್​​ ಬ್ಯಾಟ್ಸ್​​ಮನ್​ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಎಂತಹ ಸ್ಮಾರ್ಟ್​​​ ಕ್ರಿಕೆಟರ್​​ ಅನ್ನೋದು ನಿಮಗೆ ಗೊತ್ತಾ?. ಇವತ್ತಿನ ಸಖತ್​ ಸ್ಟೋರಿಯಲ್ಲಿ ಸ್ಮಾರ್ಟ್​ ಕೊಹ್ಲಿಯ ಕಥೆ ಏನಿದೆ?

2022 ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಯಾರಾದ್ರೂ ಅನ್ನೋದು ಬಹುತೇಕರಿಗೆ ಮರೆತು ಹೋಗಿರಬಹುದು. ಆದ್ರೆ ಭಾರತ -ಪಾಕಿಸ್ತಾನ ನಡುವಿನ ಪಂದ್ಯ ಯಾವೊಬ್ಬ ಕ್ರಿಕೆಟಿಗ ಮರೆತಿರಲ್ಲ. ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯ ಅಭಿಮಾನಿಗಳ ಮೈನಿವಿರೇಳಿಸಿತ್ತು. ಅದ್ರಲ್ಲೂ ಕೊನೆಯ 2 ಎಸೆತದಲ್ಲಾದ ಡ್ರಾಮಾ ಇತ್ತಲ್ಲ, ಅದಂತೂ ಅಲ್ಟಿಮೇಟ್​​.

ಕೊನೆಯ 2 ಎಸೆತದಲ್ಲಿ ಟೀಮ್​ ಇಂಡಿಯಾ ಗೆಲುವಿಗೆ 2 ರನ್​ ಬೇಕಿತ್ತು. 5ನೇ ಎಸೆತದಲ್ಲಿ ಕಾರ್ತಿಕ್​ ಸ್ಟಂಪ್​ ಔಟ್​ ಆದ್ರು. ಆ ಬಳಿಕ ವೈಡ್​ನಲ್ಲಿ ಒಂದು ರನ್​ ಬಂದ್ರೆ, ಕೊನೆಯ ಎಸೆತದಲ್ಲಿ ಅಶ್ವಿನ್​, ಸಿಂಗಲ್​ ತೆಗೆದು ವಿನ್ನಿಂಗ್​​ ಶಾಟ್​ ಬಾರಿಸಿದರು. ಇದು ಎಲ್ಲರಿಗೂ ಗೊತ್ತಿರುವ ಕಥೆ. ಆದರೆ ಅದಕ್ಕೂ ಮುನ್ನ ನಡೆದಿದ್ದೇನು?.

ಇದನ್ನು ಓದಿ: BREAKING: ಪ್ರಧಾನಿ ಮೋದಿ ನಿವಾಸದ ಮೇಲೆ ನಿಗೂಢ ಡ್ರೋನ್ ಹಾರಾಟ.. ಹಲವು ಅನುಮಾನ

ಕೊನೆಯ ಒಂದು ಎಸೆತದಲ್ಲಿ 2 ರನ್​ ಬೇಕಿದ್ದಾಗ ಕಣಕ್ಕಿಳಿದ ಅಶ್ವಿನ್​ ಬ್ಯಾಟಿಂಗ್​ಗೆ ಬಂದಾಗ ಕೊಹ್ಲಿ ಒಂದು ಸಲಹೆ ನೀಡಿದ್ದರಂತೆ. 1 ಎಸೆತವನ್ನು ಎದುರಿಸೋಕೆ 7 ಆಪ್ಷನ್​ ನೀಡಿದ್ದರಂತೆ. ಇದನ್ನ ಸ್ವತಃ ಅಶ್ವಿನ್​ ಇದೀಗ ಹೇಳಿಕೊಂಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಎಂಥ ಕ್ರಿಕೆಟರ್​ ಆದರೂ ಒಂದು ಕ್ಷಣ ಏಕಾಗ್ರತೆ ಕಳೆದುಕೊಂಡು ದಿಕ್ಕೇ ತೋಚದಂತಾಗ್ತಾರೆ. 1 ಎಸೆತ ಎದುರಿಸೋಕೆ 7 ಶಾಟ್​​ ಪ್ಲೇ ಮಾಡಬಹುದೆಂದು ಯೋಚಿಸೋದು ಸಾಧ್ಯಾನಾ?. ಇದು ಅಸಾಧ್ಯವನ್ನ ಸಾಧ್ಯವಾಗಿಸಿದ್ದು ಮಾತ್ರ ಕೊಹ್ಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​ ವಿರುದ್ಧ ಭಾರತ ಗೆಲ್ಲಲು 2 ರನ್​ ಬೇಕಿದ್ದಾಗ ಅಶ್ವಿನ್​ಗೆ 7 ಟಿಪ್ಸ್​ ಕೊಟ್ಟಿದ್ದ​ ಕೊಹ್ಲಿ..! ಆಮೇಲೆ ಏನಾಯ್ತು ಅಂದರೆ..?

https://newsfirstlive.com/wp-content/uploads/2023/07/VIRAT_KOHLI_ASHWIN.jpg

    ಕೊನೆ ಬಾಲ್​ನಲ್ಲಿ ಗೆಲ್ಲಲು ವಿರಾಟ್​ ಮಾಡಿದ ಪ್ಲಾನ್ ಏನು?

    2 ಬಾಲ್​ಗೆ 2 ರನ್​ ಬೇಕಿದ್ದಾಗ ಕಾರ್ತಿಕ್ ಔಟ್​ ಆಗಿದ್ದರು

    ಧೈರ್ಯ ತುಂಬಲು ಕ್ರೀಸ್​ನಲ್ಲಿ ಕೊಹ್ಲಿ ಇದ್ರೆ ಸಾಕು ಪಂದ್ಯ ನಮ್ದೆ

ವಿರಾಟ್​ ಕೊಹ್ಲಿ ಒಬ್ಬ ಸೂಪರ್​ ಸ್ಟಾರ್​​ ಬ್ಯಾಟ್ಸ್​​ಮನ್​ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಎಂತಹ ಸ್ಮಾರ್ಟ್​​​ ಕ್ರಿಕೆಟರ್​​ ಅನ್ನೋದು ನಿಮಗೆ ಗೊತ್ತಾ?. ಇವತ್ತಿನ ಸಖತ್​ ಸ್ಟೋರಿಯಲ್ಲಿ ಸ್ಮಾರ್ಟ್​ ಕೊಹ್ಲಿಯ ಕಥೆ ಏನಿದೆ?

2022 ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಯಾರಾದ್ರೂ ಅನ್ನೋದು ಬಹುತೇಕರಿಗೆ ಮರೆತು ಹೋಗಿರಬಹುದು. ಆದ್ರೆ ಭಾರತ -ಪಾಕಿಸ್ತಾನ ನಡುವಿನ ಪಂದ್ಯ ಯಾವೊಬ್ಬ ಕ್ರಿಕೆಟಿಗ ಮರೆತಿರಲ್ಲ. ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯ ಅಭಿಮಾನಿಗಳ ಮೈನಿವಿರೇಳಿಸಿತ್ತು. ಅದ್ರಲ್ಲೂ ಕೊನೆಯ 2 ಎಸೆತದಲ್ಲಾದ ಡ್ರಾಮಾ ಇತ್ತಲ್ಲ, ಅದಂತೂ ಅಲ್ಟಿಮೇಟ್​​.

ಕೊನೆಯ 2 ಎಸೆತದಲ್ಲಿ ಟೀಮ್​ ಇಂಡಿಯಾ ಗೆಲುವಿಗೆ 2 ರನ್​ ಬೇಕಿತ್ತು. 5ನೇ ಎಸೆತದಲ್ಲಿ ಕಾರ್ತಿಕ್​ ಸ್ಟಂಪ್​ ಔಟ್​ ಆದ್ರು. ಆ ಬಳಿಕ ವೈಡ್​ನಲ್ಲಿ ಒಂದು ರನ್​ ಬಂದ್ರೆ, ಕೊನೆಯ ಎಸೆತದಲ್ಲಿ ಅಶ್ವಿನ್​, ಸಿಂಗಲ್​ ತೆಗೆದು ವಿನ್ನಿಂಗ್​​ ಶಾಟ್​ ಬಾರಿಸಿದರು. ಇದು ಎಲ್ಲರಿಗೂ ಗೊತ್ತಿರುವ ಕಥೆ. ಆದರೆ ಅದಕ್ಕೂ ಮುನ್ನ ನಡೆದಿದ್ದೇನು?.

ಇದನ್ನು ಓದಿ: BREAKING: ಪ್ರಧಾನಿ ಮೋದಿ ನಿವಾಸದ ಮೇಲೆ ನಿಗೂಢ ಡ್ರೋನ್ ಹಾರಾಟ.. ಹಲವು ಅನುಮಾನ

ಕೊನೆಯ ಒಂದು ಎಸೆತದಲ್ಲಿ 2 ರನ್​ ಬೇಕಿದ್ದಾಗ ಕಣಕ್ಕಿಳಿದ ಅಶ್ವಿನ್​ ಬ್ಯಾಟಿಂಗ್​ಗೆ ಬಂದಾಗ ಕೊಹ್ಲಿ ಒಂದು ಸಲಹೆ ನೀಡಿದ್ದರಂತೆ. 1 ಎಸೆತವನ್ನು ಎದುರಿಸೋಕೆ 7 ಆಪ್ಷನ್​ ನೀಡಿದ್ದರಂತೆ. ಇದನ್ನ ಸ್ವತಃ ಅಶ್ವಿನ್​ ಇದೀಗ ಹೇಳಿಕೊಂಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಎಂಥ ಕ್ರಿಕೆಟರ್​ ಆದರೂ ಒಂದು ಕ್ಷಣ ಏಕಾಗ್ರತೆ ಕಳೆದುಕೊಂಡು ದಿಕ್ಕೇ ತೋಚದಂತಾಗ್ತಾರೆ. 1 ಎಸೆತ ಎದುರಿಸೋಕೆ 7 ಶಾಟ್​​ ಪ್ಲೇ ಮಾಡಬಹುದೆಂದು ಯೋಚಿಸೋದು ಸಾಧ್ಯಾನಾ?. ಇದು ಅಸಾಧ್ಯವನ್ನ ಸಾಧ್ಯವಾಗಿಸಿದ್ದು ಮಾತ್ರ ಕೊಹ್ಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More