ಸಪೋರ್ಟ್ ಸ್ಟಾಫ್ಗೂ ರಾಹುಲ್ ದ್ರಾವಿಡ್ ಅಭಯ
ಟೀಕೆಗೆ ಗುರಿಯಾಗಿದ್ದ ಬ್ಯಾಟಿಂಗ್, ಬೌಲಿಂಗ್ ಕೋಚ್
ಫೀಲ್ಡಿಂಗ್ ಕೋಚ್ ದಿಲೀಪ್ ಕಾರ್ಯ ವೈಖರಿಗೂ ಟೀಕೆ
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಯಶಸ್ಸಿಗೆ ಹಗಲಿರುಳು ದುಡಿದ ದ್ರೋಣಾಚಾರ್ಯ. ಟೀಮ್ ಇಂಡಿಯಾ ಸಕ್ಸಸ್ ಕ್ರೆಡಿಟ್ ದ್ರಾವಿಡ್ ಸಲ್ಲಲೇಬೇಕು ಅನ್ನೋದ್ರಲ್ಲಿ ಡೌಟೇ ಬೇಡ. ಇದರ ಜೊತೆಗೆ ದ್ರೋಣಚಾರ್ಯನಿಗೆ ಬಲವಾಗಿ ನಿಂತವರೂ ಇದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೇರಿದ ಮೇಲೆ ಕಾಂಟ್ರವರ್ಸಿಗಳಿಗೆ ಫುಲ್ ಸ್ಟಾಫ್ ಇಟ್ರು. ಇಬ್ಭಾಗವಾಗಿದ್ದ ತಂಡವನ್ನ ಒಂದು ಮಾಡಿದ್ರು. ಸಾಲು ಸಾಲು ಪ್ರಯೋಗ ಮಾಡಿ ಟೀಕೆ ಅನುಭವಿಸಿದ್ರು. ಅಂತಿಮವಾಗಿ ಇದೀಗ ವಿಶ್ವಕಪ್ನಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ. ಅಸಂಖ್ಯ ಭಾರತೀಯರ ಮನದಲ್ಲಿ ವಿಶ್ವಕಪ್ ಗೆಲುವಿನ ನನಸು ಮಾಡಲು ಸಜ್ಜಾಗಿದ್ದಾರೆ. ದ್ರಾವಿಡ್ ಹೀಗೆ ವೈಫಲ್ಯ ಸಕ್ಸಸ್ ಶಿಖರವೇರಿದ್ರ ಹಿಂದೆ ಈ ತ್ರಿಮೂರ್ತಿಗಳ ಶ್ರಮ ಅಪಾರ. ಇನ್ಫ್ಯಾಕ್ಟ್ ದ್ರೋಣಾಚಾರ್ಯನಿಗೆ ಬಲ ತುಂಬಿದ್ದೆ ಈ ತ್ರಿಮೂರ್ತಿಗಳು.
ದ್ರಾವಿಡ್ ಜೊತೆ ಕಲ್ಲು ಮುಳ್ಳಿನ ಹಾದಿ ತುಳಿದ ವಿಕ್ರಂ ರಾಥೋರ್
ಕಳೆದ 2 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ಗಳು ಕಳಪೆ ಫಾರ್ಮ್ ಸುಳಿಗೆ ಸಿಲುಕಿದ್ರು. ವಿರಾಟ್ ಕೊಹ್ಲಿ ಹೀನಾಯ ಪ್ರದರ್ಶನ ನೀಡ್ತಿದ್ರೆ, ರೋಹಿತ್ ಶರ್ಮಾರನ್ನ ಇನ್ಕನ್ಸಿಸ್ಟೆನ್ಸಿ ಫಾರ್ಮ್ ಕಾಡ್ತಿತ್ತು. ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಸಿಕ್ಕಾಪಟ್ಟೆ ದುರ್ಬಲವಾಗಿ ಕಾಣ್ತಿತ್ತು. ಆದ್ರೆ, ಈಗ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಡರ್ ಸ್ಪಷ್ಟವಾಗಿದೆ. ಬಲಿಷ್ಟವೂ ಆಗಿದೆ. ಇದ್ರ ಹಿಂದಿನ ಸೂತ್ರದಾರ ವಿಕ್ರಂ ರಾಥೋರ್!
ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ವಿಕ್ರಂ ರಾಥೋರ್ ಪ್ರತಿಯೊಬ್ಬರ ಬ್ಯಾಟಿಂಗ್ ಟೆಕ್ನಿಕ್ ಮೇಲೆ ವರ್ಕೌಟ್ ಮಾಡಿದ್ರು. ನೆಟ್ಸ್ನಲ್ಲಿ ಗಂಟೆಗಟ್ಟಲೇ ನಿಂತು ಪ್ರತಿಯೊಬ್ಬರ ಆಟವನ್ನ ತಿದ್ದಿ ತೀಡಿದ್ರು. ಇದ್ರ ಪ್ರತಿಫಲವೇ ಇಂದು ಬ್ಯಾಟ್ಸ್ಮನ್ಗಳಿಂದ ಭರ್ಜರಿ ಆಟ ಬರ್ತಿರೋದು.
ದ್ರಾವಿಡ್ ನಿರೀಕ್ಷೆ ಹುಸಿಗೊಳಿಸದ ಪರಾಸ್ ಮಾಂಬ್ರೆ
ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನಿಮಗೆ ನೆನಪಿರುತ್ತೆ. ಆಂಗ್ಲರು ರಣಾರ್ಭಟ ನಡೆಸುತ್ತಿದ್ರೆ ಟೀಮ್ ಇಂಡಿಯಾ ಬೌಲರ್ಗಳು ದಿಕ್ಕೇ ತೋಚದೆ ನಿಂತಿದ್ರು. ಒಂದೇ ಒಂದು ವಿಕೆಟ್ ಕಬಳಿಸೋಕೆ ಭಾರತೀಯ ಬೌಲರ್ಗಳ ಕೈಯಲ್ಲಿ ಆಗಿರಲಿಲ್ಲ. ಈ ವಿಶ್ವಕಪ್ ಭಾರತದ ಬೌಲರ್ಗಳನ್ನ ಮುಟ್ಟೋಕೆ ಸಾಧ್ಯಾನಾ?
ಟೀಮ್ ಇಂಡಿಯಾ ಬೌಲರ್ಗಳ ಈ ಬೆಂಕಿ-ಬಿರುಗಾಳಿ ಪ್ರದರ್ಶನದ ಹಿಂದಿರೋದು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ. ಪ್ರತಿಯೊಬ್ಬ ಬೌಲರ್ಗಳ ವೀಕ್ನೆಸ್ಗಳನ್ನ ಫೈಂಡ್ಔಟ್ ಮಾಡಿ, ಅವುಗಳ ಮೇಲೆ ವರ್ಕೌಟ್ ಮಾಡಿದ್ದೆ. ಇದೇ ಪರಾಸ್ ಮಾಂಬ್ರೆ. ಮಾಂಬ್ರೆಯ ಈ ಪರಿಶ್ರಮ ವಿಶ್ವಕಪ್ ಅಖಾಡದಲ್ಲಿ ಯಶಸ್ಸಿನ ಗುಟ್ಟಾಗಿದೆ.
ದ್ರಾವಿಡ್ ಇಟ್ಟ ಭರವಸೆಯನ್ನ ಉಳಿಸಿಕೊಂಡ ದಿಲೀಪ್.!
2019ರ ಬಳಿಕ ಟೀಮ್ ಇಂಡಿಯಾ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿತ್ತು. ವಿಶ್ವಕಪ್ಗೂ ಮುನ್ನ ನಡೆದ ಏಷ್ಯಾಕಪ್ನಲ್ಲೂ ಫೀಲ್ಡಿಂಗ್ ಯಡವಟ್ಟು ಮರುಕಳಿಸಿದ್ವು. ಈ ವಿಶ್ವಕಪ್ನಲ್ಲಿ ಎಲ್ಲವೂ ಬದಲಾಗಿದೆ. ಟೀಮ್ ಇಂಡಿಯಾ ನಂಬರ್ ಫೀಲ್ಡಿಂಗ್ ಸೈಡ್ ಆಗಿ ಹೊರ ಹೊಮ್ಮಿದೆ. ಇದರ ಹಿಂದಿರೋದು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಶ್ರಮ. ಅದ್ರಲ್ಲೂ ದಿಲೀಪ್ ಹೊಸದಾಗಿ ತಂದಿರೋ ಫೀಲ್ಡಿಂಗ್ ಮೆಡಲ್ ಪಡೆಯಲು ಆಟಗಾರರು ಪೈಪೋಟಿಗೆ ಬಿದ್ದವರಂತೆ ಫೀಲ್ಡ್ ಮಾಡ್ತಿದ್ದಾರೆ.
ಇವರಿಷ್ಟೇ ಅಲ್ಲ.. ಥ್ರೋ ಡೌನ್ ಸ್ಪೆಷಲಿಸ್ಟ್ಗಳಾದ ಕನ್ನಡಿಗ ರಾಘವೇಂದ್ರನ ಶ್ರಮವೂ ಟೀಮ್ ಇಂಡಿಯಾ ಸಕ್ಸಸ್ಗೆ ಕಾರಣವಾಗಿದೆ. ಫಿಟ್ನೆಸ್ ಟ್ರೈನರ್ಸ್, ವಿಡಿಯೋ ಅನಾಲಿಸ್ಟ್ಗಳು, ಅಭ್ಯಾಸದಲ್ಲಿ ನೆರವಾದ ನೆಟ್ ಬೌಲರ್ಸ್ ಎಲ್ಲರ ಶ್ರಮ ಟೀಮ್ ಇಂಡಿಯಾದ ಸಕ್ಸಸ್ಗೆ ಕಾರಣವಾಗಿದೆ. ಇವರೆಲ್ಲರನ್ನ ಒಗ್ಗೂಡಿಸಿದ ಕೀರ್ತಿ ಒನ್ಸ್ ಅಗೇನ್ ದ್ರಾವಿಡ್ಗೆ ಸಲ್ಲಬೇಕು. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಕೋಚ್ಗಳು ವೈಫಲ್ಯ ಕಂಡಾಗ, ಟೀಕೆಗಳನ್ನ ಎದುರಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ದ್ರಾವಿಡ್.ದಿ ವಾಲ್ ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ಇಂತಾ ಅದ್ಭುತವಾದ ರಿಸಲ್ಟ್ ಸಿಕ್ಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸಪೋರ್ಟ್ ಸ್ಟಾಫ್ಗೂ ರಾಹುಲ್ ದ್ರಾವಿಡ್ ಅಭಯ
ಟೀಕೆಗೆ ಗುರಿಯಾಗಿದ್ದ ಬ್ಯಾಟಿಂಗ್, ಬೌಲಿಂಗ್ ಕೋಚ್
ಫೀಲ್ಡಿಂಗ್ ಕೋಚ್ ದಿಲೀಪ್ ಕಾರ್ಯ ವೈಖರಿಗೂ ಟೀಕೆ
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಯಶಸ್ಸಿಗೆ ಹಗಲಿರುಳು ದುಡಿದ ದ್ರೋಣಾಚಾರ್ಯ. ಟೀಮ್ ಇಂಡಿಯಾ ಸಕ್ಸಸ್ ಕ್ರೆಡಿಟ್ ದ್ರಾವಿಡ್ ಸಲ್ಲಲೇಬೇಕು ಅನ್ನೋದ್ರಲ್ಲಿ ಡೌಟೇ ಬೇಡ. ಇದರ ಜೊತೆಗೆ ದ್ರೋಣಚಾರ್ಯನಿಗೆ ಬಲವಾಗಿ ನಿಂತವರೂ ಇದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೇರಿದ ಮೇಲೆ ಕಾಂಟ್ರವರ್ಸಿಗಳಿಗೆ ಫುಲ್ ಸ್ಟಾಫ್ ಇಟ್ರು. ಇಬ್ಭಾಗವಾಗಿದ್ದ ತಂಡವನ್ನ ಒಂದು ಮಾಡಿದ್ರು. ಸಾಲು ಸಾಲು ಪ್ರಯೋಗ ಮಾಡಿ ಟೀಕೆ ಅನುಭವಿಸಿದ್ರು. ಅಂತಿಮವಾಗಿ ಇದೀಗ ವಿಶ್ವಕಪ್ನಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ. ಅಸಂಖ್ಯ ಭಾರತೀಯರ ಮನದಲ್ಲಿ ವಿಶ್ವಕಪ್ ಗೆಲುವಿನ ನನಸು ಮಾಡಲು ಸಜ್ಜಾಗಿದ್ದಾರೆ. ದ್ರಾವಿಡ್ ಹೀಗೆ ವೈಫಲ್ಯ ಸಕ್ಸಸ್ ಶಿಖರವೇರಿದ್ರ ಹಿಂದೆ ಈ ತ್ರಿಮೂರ್ತಿಗಳ ಶ್ರಮ ಅಪಾರ. ಇನ್ಫ್ಯಾಕ್ಟ್ ದ್ರೋಣಾಚಾರ್ಯನಿಗೆ ಬಲ ತುಂಬಿದ್ದೆ ಈ ತ್ರಿಮೂರ್ತಿಗಳು.
ದ್ರಾವಿಡ್ ಜೊತೆ ಕಲ್ಲು ಮುಳ್ಳಿನ ಹಾದಿ ತುಳಿದ ವಿಕ್ರಂ ರಾಥೋರ್
ಕಳೆದ 2 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ಗಳು ಕಳಪೆ ಫಾರ್ಮ್ ಸುಳಿಗೆ ಸಿಲುಕಿದ್ರು. ವಿರಾಟ್ ಕೊಹ್ಲಿ ಹೀನಾಯ ಪ್ರದರ್ಶನ ನೀಡ್ತಿದ್ರೆ, ರೋಹಿತ್ ಶರ್ಮಾರನ್ನ ಇನ್ಕನ್ಸಿಸ್ಟೆನ್ಸಿ ಫಾರ್ಮ್ ಕಾಡ್ತಿತ್ತು. ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಸಿಕ್ಕಾಪಟ್ಟೆ ದುರ್ಬಲವಾಗಿ ಕಾಣ್ತಿತ್ತು. ಆದ್ರೆ, ಈಗ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಡರ್ ಸ್ಪಷ್ಟವಾಗಿದೆ. ಬಲಿಷ್ಟವೂ ಆಗಿದೆ. ಇದ್ರ ಹಿಂದಿನ ಸೂತ್ರದಾರ ವಿಕ್ರಂ ರಾಥೋರ್!
ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ವಿಕ್ರಂ ರಾಥೋರ್ ಪ್ರತಿಯೊಬ್ಬರ ಬ್ಯಾಟಿಂಗ್ ಟೆಕ್ನಿಕ್ ಮೇಲೆ ವರ್ಕೌಟ್ ಮಾಡಿದ್ರು. ನೆಟ್ಸ್ನಲ್ಲಿ ಗಂಟೆಗಟ್ಟಲೇ ನಿಂತು ಪ್ರತಿಯೊಬ್ಬರ ಆಟವನ್ನ ತಿದ್ದಿ ತೀಡಿದ್ರು. ಇದ್ರ ಪ್ರತಿಫಲವೇ ಇಂದು ಬ್ಯಾಟ್ಸ್ಮನ್ಗಳಿಂದ ಭರ್ಜರಿ ಆಟ ಬರ್ತಿರೋದು.
ದ್ರಾವಿಡ್ ನಿರೀಕ್ಷೆ ಹುಸಿಗೊಳಿಸದ ಪರಾಸ್ ಮಾಂಬ್ರೆ
ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನಿಮಗೆ ನೆನಪಿರುತ್ತೆ. ಆಂಗ್ಲರು ರಣಾರ್ಭಟ ನಡೆಸುತ್ತಿದ್ರೆ ಟೀಮ್ ಇಂಡಿಯಾ ಬೌಲರ್ಗಳು ದಿಕ್ಕೇ ತೋಚದೆ ನಿಂತಿದ್ರು. ಒಂದೇ ಒಂದು ವಿಕೆಟ್ ಕಬಳಿಸೋಕೆ ಭಾರತೀಯ ಬೌಲರ್ಗಳ ಕೈಯಲ್ಲಿ ಆಗಿರಲಿಲ್ಲ. ಈ ವಿಶ್ವಕಪ್ ಭಾರತದ ಬೌಲರ್ಗಳನ್ನ ಮುಟ್ಟೋಕೆ ಸಾಧ್ಯಾನಾ?
ಟೀಮ್ ಇಂಡಿಯಾ ಬೌಲರ್ಗಳ ಈ ಬೆಂಕಿ-ಬಿರುಗಾಳಿ ಪ್ರದರ್ಶನದ ಹಿಂದಿರೋದು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ. ಪ್ರತಿಯೊಬ್ಬ ಬೌಲರ್ಗಳ ವೀಕ್ನೆಸ್ಗಳನ್ನ ಫೈಂಡ್ಔಟ್ ಮಾಡಿ, ಅವುಗಳ ಮೇಲೆ ವರ್ಕೌಟ್ ಮಾಡಿದ್ದೆ. ಇದೇ ಪರಾಸ್ ಮಾಂಬ್ರೆ. ಮಾಂಬ್ರೆಯ ಈ ಪರಿಶ್ರಮ ವಿಶ್ವಕಪ್ ಅಖಾಡದಲ್ಲಿ ಯಶಸ್ಸಿನ ಗುಟ್ಟಾಗಿದೆ.
ದ್ರಾವಿಡ್ ಇಟ್ಟ ಭರವಸೆಯನ್ನ ಉಳಿಸಿಕೊಂಡ ದಿಲೀಪ್.!
2019ರ ಬಳಿಕ ಟೀಮ್ ಇಂಡಿಯಾ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿತ್ತು. ವಿಶ್ವಕಪ್ಗೂ ಮುನ್ನ ನಡೆದ ಏಷ್ಯಾಕಪ್ನಲ್ಲೂ ಫೀಲ್ಡಿಂಗ್ ಯಡವಟ್ಟು ಮರುಕಳಿಸಿದ್ವು. ಈ ವಿಶ್ವಕಪ್ನಲ್ಲಿ ಎಲ್ಲವೂ ಬದಲಾಗಿದೆ. ಟೀಮ್ ಇಂಡಿಯಾ ನಂಬರ್ ಫೀಲ್ಡಿಂಗ್ ಸೈಡ್ ಆಗಿ ಹೊರ ಹೊಮ್ಮಿದೆ. ಇದರ ಹಿಂದಿರೋದು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಶ್ರಮ. ಅದ್ರಲ್ಲೂ ದಿಲೀಪ್ ಹೊಸದಾಗಿ ತಂದಿರೋ ಫೀಲ್ಡಿಂಗ್ ಮೆಡಲ್ ಪಡೆಯಲು ಆಟಗಾರರು ಪೈಪೋಟಿಗೆ ಬಿದ್ದವರಂತೆ ಫೀಲ್ಡ್ ಮಾಡ್ತಿದ್ದಾರೆ.
ಇವರಿಷ್ಟೇ ಅಲ್ಲ.. ಥ್ರೋ ಡೌನ್ ಸ್ಪೆಷಲಿಸ್ಟ್ಗಳಾದ ಕನ್ನಡಿಗ ರಾಘವೇಂದ್ರನ ಶ್ರಮವೂ ಟೀಮ್ ಇಂಡಿಯಾ ಸಕ್ಸಸ್ಗೆ ಕಾರಣವಾಗಿದೆ. ಫಿಟ್ನೆಸ್ ಟ್ರೈನರ್ಸ್, ವಿಡಿಯೋ ಅನಾಲಿಸ್ಟ್ಗಳು, ಅಭ್ಯಾಸದಲ್ಲಿ ನೆರವಾದ ನೆಟ್ ಬೌಲರ್ಸ್ ಎಲ್ಲರ ಶ್ರಮ ಟೀಮ್ ಇಂಡಿಯಾದ ಸಕ್ಸಸ್ಗೆ ಕಾರಣವಾಗಿದೆ. ಇವರೆಲ್ಲರನ್ನ ಒಗ್ಗೂಡಿಸಿದ ಕೀರ್ತಿ ಒನ್ಸ್ ಅಗೇನ್ ದ್ರಾವಿಡ್ಗೆ ಸಲ್ಲಬೇಕು. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಕೋಚ್ಗಳು ವೈಫಲ್ಯ ಕಂಡಾಗ, ಟೀಕೆಗಳನ್ನ ಎದುರಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ದ್ರಾವಿಡ್.ದಿ ವಾಲ್ ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ಇಂತಾ ಅದ್ಭುತವಾದ ರಿಸಲ್ಟ್ ಸಿಕ್ಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್