ತೆಲಂಗಾಣದಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ- ರಾಹುಲ್
ಕರ್ನಾಟಕದ ಎಲೆಕ್ಷನ್ ರಿಸಲ್ಟ್ ತೆಲಂಗಾಣದಲ್ಲಿ ಮರುಕಳಿಸಲಿದೆ
ರಾಹುಲ್ ಗಾಂಧಿ ತೆಲಂಗಾಣದಲ್ಲಿ ಘೋಷಿಸಿದ ಗ್ಯಾರಂಟಿ ಯಾವುವು?
ಹೈದರಾಬಾದ್: ಪ್ರಧಾನಿ ಮೋದಿಯವರ ರಿಮೋಟ್ ಕಂಟ್ರೋಲ್ನಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಕೆಲಸ ಮಾಡುತ್ತಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವು ಬಿಜೆಪಿಯ ಬಿ-ಟೀಮ್ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಬಳಿಕ ಸಮಾವೇಶದಲ್ಲಿ ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ನ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.
ತೆಲಂಗಾಣದ ಕಮ್ಮಮ್ ನಗರದಲ್ಲಿ ನಡೆದ ಕಾಂಗ್ರೆಸ್ನ ಜನ ಘರ್ಜನದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಮಾತಿನುದ್ದಕ್ಕೂ ಸಿಎಂ ಕೆಸಿಆರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ವಿಧಾನಸಭೆ ಎಲೆಕ್ಷನ್ ಫಲಿತಾಂಶವು ತೆಲಂಗಾಣದಲ್ಲಿ ಮರುಕಳಿಸಲಿದೆ. ಇಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ. ನೆರೆಯ ರಾಜ್ಯದಲ್ಲಿ ಆಗಿರುವುದೇ ಇಲ್ಲಿ ಆಗಲಿದೆ. ಸಿಎಂ ಕೆಸಿಆರ್ ಭ್ರಷ್ಟಾಚಾರ ಮಾಡುವಂತಹ ಯಾವ ಅವಕಾಶ ಬಿಟ್ಟಿಲ್ಲ. ಸಂಪೂರ್ಣವಾಗಿ ರಾಜ್ಯ ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಜರಿದರು.
ಬಿಆರ್ಎಸ್ ಪಕ್ಷ ಅಂದರೇ ಬಿಜೆಪಿಯ ‘ರಿಸ್ತೇದಾರ್ ಸಮಿತಿ’. ಮೋದಿಯವರ ರಿಮೋಟ್ ಕಂಟ್ರೋಲ್ನಲ್ಲಿ ಸಿಎಂ ಕೆಸಿಆರ್ ಇದ್ದಾರೆ. ಇವರು ಬಿಜೆಪಿಯ ಬಿ.ಟೀಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಬಿ- ಟೀಮ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಿದಂತೆ ತೆಲಂಗಾಣದಲ್ಲೂ ಬಿಜೆಪಿಯ ಬಿ- ಟೀಮ್ ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ಸಿಎಂ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ರಾಹುಲ್ ಹೇಳಿದರು.
ಇನ್ನು ಇದೇ ವೇಳೆ ತೆಲಂಗಾಣದ ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಸೇರಿ ಹಿರಿಯ ನಾಗರಿಕರು, ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ, ಪೋಟು ಜಮೀನು ಅನ್ನು ಆದಿವಾಸಿಗಳಿಗೆ ನೀಡುವ ಗ್ಯಾರಂಟಿಗಳನ್ನು ಘೋಷಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತೆಲಂಗಾಣದಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ- ರಾಹುಲ್
ಕರ್ನಾಟಕದ ಎಲೆಕ್ಷನ್ ರಿಸಲ್ಟ್ ತೆಲಂಗಾಣದಲ್ಲಿ ಮರುಕಳಿಸಲಿದೆ
ರಾಹುಲ್ ಗಾಂಧಿ ತೆಲಂಗಾಣದಲ್ಲಿ ಘೋಷಿಸಿದ ಗ್ಯಾರಂಟಿ ಯಾವುವು?
ಹೈದರಾಬಾದ್: ಪ್ರಧಾನಿ ಮೋದಿಯವರ ರಿಮೋಟ್ ಕಂಟ್ರೋಲ್ನಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಕೆಲಸ ಮಾಡುತ್ತಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷವು ಬಿಜೆಪಿಯ ಬಿ-ಟೀಮ್ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಬಳಿಕ ಸಮಾವೇಶದಲ್ಲಿ ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ನ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.
ತೆಲಂಗಾಣದ ಕಮ್ಮಮ್ ನಗರದಲ್ಲಿ ನಡೆದ ಕಾಂಗ್ರೆಸ್ನ ಜನ ಘರ್ಜನದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಮಾತಿನುದ್ದಕ್ಕೂ ಸಿಎಂ ಕೆಸಿಆರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ವಿಧಾನಸಭೆ ಎಲೆಕ್ಷನ್ ಫಲಿತಾಂಶವು ತೆಲಂಗಾಣದಲ್ಲಿ ಮರುಕಳಿಸಲಿದೆ. ಇಲ್ಲಿ ಬಿಜೆಪಿಯ 4 ಟೈರ್ ಪಂಕ್ಚರ್ ಆಗಿವೆ. ನೆರೆಯ ರಾಜ್ಯದಲ್ಲಿ ಆಗಿರುವುದೇ ಇಲ್ಲಿ ಆಗಲಿದೆ. ಸಿಎಂ ಕೆಸಿಆರ್ ಭ್ರಷ್ಟಾಚಾರ ಮಾಡುವಂತಹ ಯಾವ ಅವಕಾಶ ಬಿಟ್ಟಿಲ್ಲ. ಸಂಪೂರ್ಣವಾಗಿ ರಾಜ್ಯ ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಜರಿದರು.
ಬಿಆರ್ಎಸ್ ಪಕ್ಷ ಅಂದರೇ ಬಿಜೆಪಿಯ ‘ರಿಸ್ತೇದಾರ್ ಸಮಿತಿ’. ಮೋದಿಯವರ ರಿಮೋಟ್ ಕಂಟ್ರೋಲ್ನಲ್ಲಿ ಸಿಎಂ ಕೆಸಿಆರ್ ಇದ್ದಾರೆ. ಇವರು ಬಿಜೆಪಿಯ ಬಿ.ಟೀಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಬಿ- ಟೀಮ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಿದಂತೆ ತೆಲಂಗಾಣದಲ್ಲೂ ಬಿಜೆಪಿಯ ಬಿ- ಟೀಮ್ ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ಸಿಎಂ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ರಾಹುಲ್ ಹೇಳಿದರು.
ಇನ್ನು ಇದೇ ವೇಳೆ ತೆಲಂಗಾಣದ ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಸೇರಿ ಹಿರಿಯ ನಾಗರಿಕರು, ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ, ಪೋಟು ಜಮೀನು ಅನ್ನು ಆದಿವಾಸಿಗಳಿಗೆ ನೀಡುವ ಗ್ಯಾರಂಟಿಗಳನ್ನು ಘೋಷಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ