newsfirstkannada.com

ಮೋದಿಗೆ ನಿಂದಿಸಿದ್ದ ಕೇಸ್​​; ಸುಪ್ರೀಂಕೋರ್ಟ್​​ನಿಂದ ಬಿಗ್​ ರಿಲೀಫ್​​; ಈ ಬಗ್ಗೆ ರಾಹುಲ್​​ ಹೇಳಿದ್ದೇನು?

Share :

04-08-2023

    ಪ್ರಧಾನಿ ಮೋದಿಗೆ ನಿಂದಿಸಿದ್ದ ಕೇಸ್​​..!

    ಸುಪ್ರೀಂಕೋರ್ಟ್​​ನಿಂದ ಬಿಗ್​ ರಿಲೀಫ್​​

    ಈ ಬಗ್ಗೆ ರಾಹುಲ್​​ ಗಾಂಧಿ ಹೇಳಿದ್ದೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ನಿಂದಿಸಿದ್ದರು ಎನ್ನಲಾದ ಕೇಸ್​ನಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಗೆ ಬಿಗ್​ ರಿಲೀಫ್​​ ಸಿಕ್ಕಿದೆ. ಇಂದು ಸುಪ್ರೀಂಕೋರ್ಟ್​​ ರಾಹುಲ್​​ ಗಾಂಧಿಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಇನ್ನು, ಈ ಬೆನ್ನಲ್ಲೇ ಸುಪ್ರೀಂಕೋರ್ಟ್​ ಹೊರಡಿಸಿದ ಸಂಬಂಧ ಟ್ವೀಟ್​ ಮಾಡಿದ ಕಾಂಗ್ರೆಸ್​​ ವರಿಷ್ಠ ರಾಹುಲ್​ ಗಾಂಧಿ, ಏನಾದರೂ ಆಗಲಿ. ನನ್ನ ಕರ್ತವ್ಯಕ್ಕೆ ನಾನು ಬದ್ಧ. ಭಾರತ ಎಂಬ ಕಲ್ಪನೆಯನ್ನು ಕಾಪಾಡುವುದೇ ನನ್ನ ಉದ್ದೇಶ ಎಂದಿದ್ದಾರೆ.

ಏನಿದು ಕೇಸ್​​?

ಹಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್​​ನಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದ ರಾಹುಲ್​​ ಗಾಂಧಿ, ಭಾರತದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ಓಡಿ ಹೋಗಿರೋ ಕಳ್ಳರ ಹೆಸರಿನಲ್ಲಿ ಮೋದಿ ಎಂಬ ಸರ್​ನೇಮ್​​ ಇದೆ. ಮೋದಿ ಸರ್​ನೇಮ್​ ಹೊಂದಿರೋ ಎಲ್ಲರೂ ಕಳ್ಳರೇ ಎಂದಿದ್ದರು.

ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕೇಸ್​ನಲ್ಲಿ ರಾಹುಲ್​ ಗಾಂಧಿಗೆ ಎರಡು ವರ್ಷಗಳ ಕಾಲ ಶಿಕ್ಷೆ ಘೋಷಿಸಲಾಗಿತ್ತು. ಈಗ ಸುಪ್ರೀಂಕೋರ್ಟ್​​ ಇದಕ್ಕೆ ತಡೆಯಾಜ್ಞೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದ ಗುಜರಾತ್​ ಹೈಕೋರ್ಟ್​​​ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್​​, ರಾಹುಲ್​ ಗಾಂಧಿ ಸಂಸದ ಸ್ಥಾನಕ್ಕೆ ಅರ್ಹರು ಎಂದಿದೆ. ಈ ಮೂಲಕ ರಾಹುಲ್‌ ಗಾಂಧಿ ಸಂಸತ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪಿಸಿದೆ. ಮುಂದಿನ ವರ್ಷ ನಡೆಯಲಿರೋ ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದು ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿಗೆ ನಿಂದಿಸಿದ್ದ ಕೇಸ್​​; ಸುಪ್ರೀಂಕೋರ್ಟ್​​ನಿಂದ ಬಿಗ್​ ರಿಲೀಫ್​​; ಈ ಬಗ್ಗೆ ರಾಹುಲ್​​ ಹೇಳಿದ್ದೇನು?

https://newsfirstlive.com/wp-content/uploads/2023/08/Rahul-Gandhi.jpg

    ಪ್ರಧಾನಿ ಮೋದಿಗೆ ನಿಂದಿಸಿದ್ದ ಕೇಸ್​​..!

    ಸುಪ್ರೀಂಕೋರ್ಟ್​​ನಿಂದ ಬಿಗ್​ ರಿಲೀಫ್​​

    ಈ ಬಗ್ಗೆ ರಾಹುಲ್​​ ಗಾಂಧಿ ಹೇಳಿದ್ದೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ನಿಂದಿಸಿದ್ದರು ಎನ್ನಲಾದ ಕೇಸ್​ನಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಗೆ ಬಿಗ್​ ರಿಲೀಫ್​​ ಸಿಕ್ಕಿದೆ. ಇಂದು ಸುಪ್ರೀಂಕೋರ್ಟ್​​ ರಾಹುಲ್​​ ಗಾಂಧಿಗೆ ವಿಧಿಸಲಾಗಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಇನ್ನು, ಈ ಬೆನ್ನಲ್ಲೇ ಸುಪ್ರೀಂಕೋರ್ಟ್​ ಹೊರಡಿಸಿದ ಸಂಬಂಧ ಟ್ವೀಟ್​ ಮಾಡಿದ ಕಾಂಗ್ರೆಸ್​​ ವರಿಷ್ಠ ರಾಹುಲ್​ ಗಾಂಧಿ, ಏನಾದರೂ ಆಗಲಿ. ನನ್ನ ಕರ್ತವ್ಯಕ್ಕೆ ನಾನು ಬದ್ಧ. ಭಾರತ ಎಂಬ ಕಲ್ಪನೆಯನ್ನು ಕಾಪಾಡುವುದೇ ನನ್ನ ಉದ್ದೇಶ ಎಂದಿದ್ದಾರೆ.

ಏನಿದು ಕೇಸ್​​?

ಹಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್​​ನಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದ ರಾಹುಲ್​​ ಗಾಂಧಿ, ಭಾರತದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ಓಡಿ ಹೋಗಿರೋ ಕಳ್ಳರ ಹೆಸರಿನಲ್ಲಿ ಮೋದಿ ಎಂಬ ಸರ್​ನೇಮ್​​ ಇದೆ. ಮೋದಿ ಸರ್​ನೇಮ್​ ಹೊಂದಿರೋ ಎಲ್ಲರೂ ಕಳ್ಳರೇ ಎಂದಿದ್ದರು.

ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕೇಸ್​ನಲ್ಲಿ ರಾಹುಲ್​ ಗಾಂಧಿಗೆ ಎರಡು ವರ್ಷಗಳ ಕಾಲ ಶಿಕ್ಷೆ ಘೋಷಿಸಲಾಗಿತ್ತು. ಈಗ ಸುಪ್ರೀಂಕೋರ್ಟ್​​ ಇದಕ್ಕೆ ತಡೆಯಾಜ್ಞೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.

ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದ ಗುಜರಾತ್​ ಹೈಕೋರ್ಟ್​​​ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್​​, ರಾಹುಲ್​ ಗಾಂಧಿ ಸಂಸದ ಸ್ಥಾನಕ್ಕೆ ಅರ್ಹರು ಎಂದಿದೆ. ಈ ಮೂಲಕ ರಾಹುಲ್‌ ಗಾಂಧಿ ಸಂಸತ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪಿಸಿದೆ. ಮುಂದಿನ ವರ್ಷ ನಡೆಯಲಿರೋ ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದು ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More