ರಾಜ್ಯದಲ್ಲಿ ಮತ್ತೆ ಎಡಬಿಡದೆ ಸುರಿಯುತ್ತಿರೋ ಮಳೆ
ಜೋರು ಮಳೆಯಿಂದ ಸಾರ್ವಜನಿಕರು ಹೈರಾಣು..!
ಸಿಲಿಕಾನ್ ಸಿಟಿಯಲ್ಲಿ ಕರೆಂಟ್ ಸ್ಥಗಿತ, ಎಲ್ಲೆಲ್ಲಿ ಗೊತ್ತಾ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಳೆ ಬೀಳುತ್ತಿದೆ. ಕಳೆದೊಂದು ಗಂಟೆಯಿಂದ ಸತತವಾಗಿ ಸುರಿಯುತ್ತಿರೋ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಕಾರ್ಪೋರೇಷನ್ ಸರ್ಕಲ್, ಮಲ್ಲೇಶ್ವರಂ, ಬನಶಂಕರಿ, ಕೆ.ಆರ್ ಮಾರ್ಕೆಟ್, ವಿಜಯನಗರ, ಯಶವಂತಪುರ, ಆರ್.ಆರ್ ನಗರ, ಜಯನಗರ, ಸಂಜಯ್ ನಗರ, ಕೆ.ಆರ್ ಸರ್ಕಲ್ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಹೀಗಾಗಿ ಕೆ.ಆರ್ ಸರ್ಕಲ್ ಸೇರಿದಂತೆ ನಗರ ಪ್ರಮುಖ ಅಂಡರ್ ಪಾಸ್ಗಳನ್ನು ಕ್ಲೋಸ್ ಮಾಡಲಾಗಿದೆ.
ಯಾವುದೇ ಅನಾಹುತ ಸಂಭವಿಸದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿದೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹಳೇ ಮೈಸೂರು, ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲೂ ಮಳೆ ಸುರಿಯುತ್ತಿದೆ. ಹೀಗಾಗಿ ಹಲವೆಡೆ ಮಳೆ ನಿಲ್ಲುವವರೆಗೂ ಕರೆಂಟ್ ತೆಗೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯದಲ್ಲಿ ಮತ್ತೆ ಎಡಬಿಡದೆ ಸುರಿಯುತ್ತಿರೋ ಮಳೆ
ಜೋರು ಮಳೆಯಿಂದ ಸಾರ್ವಜನಿಕರು ಹೈರಾಣು..!
ಸಿಲಿಕಾನ್ ಸಿಟಿಯಲ್ಲಿ ಕರೆಂಟ್ ಸ್ಥಗಿತ, ಎಲ್ಲೆಲ್ಲಿ ಗೊತ್ತಾ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಳೆ ಬೀಳುತ್ತಿದೆ. ಕಳೆದೊಂದು ಗಂಟೆಯಿಂದ ಸತತವಾಗಿ ಸುರಿಯುತ್ತಿರೋ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಕಾರ್ಪೋರೇಷನ್ ಸರ್ಕಲ್, ಮಲ್ಲೇಶ್ವರಂ, ಬನಶಂಕರಿ, ಕೆ.ಆರ್ ಮಾರ್ಕೆಟ್, ವಿಜಯನಗರ, ಯಶವಂತಪುರ, ಆರ್.ಆರ್ ನಗರ, ಜಯನಗರ, ಸಂಜಯ್ ನಗರ, ಕೆ.ಆರ್ ಸರ್ಕಲ್ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಹೀಗಾಗಿ ಕೆ.ಆರ್ ಸರ್ಕಲ್ ಸೇರಿದಂತೆ ನಗರ ಪ್ರಮುಖ ಅಂಡರ್ ಪಾಸ್ಗಳನ್ನು ಕ್ಲೋಸ್ ಮಾಡಲಾಗಿದೆ.
ಯಾವುದೇ ಅನಾಹುತ ಸಂಭವಿಸದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಿದೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹಳೇ ಮೈಸೂರು, ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲೂ ಮಳೆ ಸುರಿಯುತ್ತಿದೆ. ಹೀಗಾಗಿ ಹಲವೆಡೆ ಮಳೆ ನಿಲ್ಲುವವರೆಗೂ ಕರೆಂಟ್ ತೆಗೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ