newsfirstkannada.com

6 ಕೋಟಿ ಮೌಲ್ಯದ ಚಿನ್ನಾಭರಣ, ₹26 ಲಕ್ಷ ನಗದು ಅಕ್ರಮ ಸಾಗಾಟ; ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮರು!

Share :

28-10-2023

    ಆಗಸ್ಟ್​ ಕ್ರಾಂತಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್ ರೈಲ್ವೆಯಲ್ಲಿ ಕಳ್ಳ ಸಾಗಣೆ

    ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಮೊತ್ತದ ಚಿನ್ನಾಭರಣ, ಹಣ ವಶಕ್ಕೆ

    ಕೋಟಾ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿಗಳು

ಜೈಪುರ: ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 26 ಲಕ್ಷ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯು ರಾಜಸ್ತಾನದ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮುಂಬೈ ಮೂಲದ ದಿಲೀಪ್ ಭಾಯ್, ಜಿತೇಂದ್ರ ಭನ್ವಾರ್ ಹಾಗೂ ರಾಜಸ್ತಾನದ ಪ್ರಿತೇಶ್ ಕುಮಾರ್ ಎನ್ನುವ ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಸೇರಿ ನಿಜಾಮುದ್ದೀನ್-ಮುಂಬೈ ಆಗಸ್ಟ್​ ಕ್ರಾಂತಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​ ರೈಲ್ವೆಯಲ್ಲಿ ಚಿನ್ನಾಭರಣ ಹಾಗೂ ಬಿಸ್ಕೆಟ್ ಬಂಗಾರದ ಜೊತೆಗೆ 500 ರೂ. ನೋಟಿನ ಮುಖ ಬೆಲೆಯ ಸುಮಾರು 26 ಲಕ್ಷ ರೂಪಾಯಿ ನಗದು ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ರೈಲ್ವೆ ಸಿಬ್ಬಂದಿಗೆ ಬರೋಬ್ಬರಿ 6 ಕೋಟಿ ಮೊತ್ತದ ಚಿನ್ನ, 26 ಲಕ್ಷ ನಗದು ಆರೋಪಿಗಳ ಬ್ಯಾಗ್​ನಲ್ಲಿ ಸಿಕ್ಕಿದೆ. ಮೂವರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹಣ, ಬಂಗಾರ ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇನ್ನು ಹಣ ಹಾಗೂ ಚಿನ್ನಾಭರಣಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದ್ದು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ಕೋಟಿ ಮೌಲ್ಯದ ಚಿನ್ನಾಭರಣ, ₹26 ಲಕ್ಷ ನಗದು ಅಕ್ರಮ ಸಾಗಾಟ; ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮರು!

https://newsfirstlive.com/wp-content/uploads/2023/10/Rajasthan_RPF_Seizes_Gold.jpg

    ಆಗಸ್ಟ್​ ಕ್ರಾಂತಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್ ರೈಲ್ವೆಯಲ್ಲಿ ಕಳ್ಳ ಸಾಗಣೆ

    ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಮೊತ್ತದ ಚಿನ್ನಾಭರಣ, ಹಣ ವಶಕ್ಕೆ

    ಕೋಟಾ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿಗಳು

ಜೈಪುರ: ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 26 ಲಕ್ಷ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯು ರಾಜಸ್ತಾನದ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮುಂಬೈ ಮೂಲದ ದಿಲೀಪ್ ಭಾಯ್, ಜಿತೇಂದ್ರ ಭನ್ವಾರ್ ಹಾಗೂ ರಾಜಸ್ತಾನದ ಪ್ರಿತೇಶ್ ಕುಮಾರ್ ಎನ್ನುವ ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಸೇರಿ ನಿಜಾಮುದ್ದೀನ್-ಮುಂಬೈ ಆಗಸ್ಟ್​ ಕ್ರಾಂತಿ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​ ರೈಲ್ವೆಯಲ್ಲಿ ಚಿನ್ನಾಭರಣ ಹಾಗೂ ಬಿಸ್ಕೆಟ್ ಬಂಗಾರದ ಜೊತೆಗೆ 500 ರೂ. ನೋಟಿನ ಮುಖ ಬೆಲೆಯ ಸುಮಾರು 26 ಲಕ್ಷ ರೂಪಾಯಿ ನಗದು ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ರೈಲ್ವೆ ಸಿಬ್ಬಂದಿಗೆ ಬರೋಬ್ಬರಿ 6 ಕೋಟಿ ಮೊತ್ತದ ಚಿನ್ನ, 26 ಲಕ್ಷ ನಗದು ಆರೋಪಿಗಳ ಬ್ಯಾಗ್​ನಲ್ಲಿ ಸಿಕ್ಕಿದೆ. ಮೂವರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹಣ, ಬಂಗಾರ ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇನ್ನು ಹಣ ಹಾಗೂ ಚಿನ್ನಾಭರಣಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದ್ದು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More