newsfirstkannada.com

ಪೆಪ್ಪರ್​ ಸ್ಪ್ರೇ ಮಾಡಿ ಕೊಚ್ಚಿ ಕೊಂದ ಹಂತಕರು; ಕಾಂಗ್ರೆಸ್​​ ಮುಖಂಡನ ಕೊಲೆ ಬಗ್ಗೆ ಕೋಲಾರ SP ಹೇಳಿದ್ದೇನು..?

Share :

23-10-2023

    ಇತ್ತೀಚೆಗೆ ಮಾಲೂರಿನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಆಗಿತ್ತು

    ಈ ಘಟನೆ ಮಾಸುವ ಮುನ್ನವೇ ಕೋಲಾರದಲ್ಲಿ ಮತ್ತೊಂದು ಕೊಲೆ!

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತನನ್ನು ಕೊಚ್ಚಿ ಕೊಂದೇಬಿಟ್ರು

ಕೋಲಾರ: ಇತ್ತೀಚೆಗೆ ಮಾಲೂರಿನಲ್ಲಿ ಅನಿಲ್‌ ಕುಮಾರ್ ಅನ್ನೋ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ. ಶ್ರೀನಿವಾಸ್ ಎಂಬುವರನ್ನು ಕೊಂದು ಹಾಕಲಾಗಿದೆ.

ಇನ್ನು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತಾಡಿದ ಕೋಲಾರದ ಎಸ್​​ಪಿ ನಾರಾಯಣ್​​ ಅವರು, ಶ್ರೀನಿವಾಸಪುರ ಪಟ್ಟಣದ ಹೊರವಲಯ ಹೊಗಳಗೆರೆ ಬಳಿ ಆರು ಜನ ದುಷ್ಕರ್ಮಿಗಳು ಶ್ರೀನಿವಾಸ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಮೊದಲು ಪೆಪ್ಪರ್​ ಸ್ಪ್ರೇ ಮಾಡಿ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾರೆ ಎಂದರು.

ಕೊಲೆಗಾರರನ್ನು ಬಂಧಿಸಲು ಮೂರು ಪೊಲೀಸ್​ ತಂಡಗಳನ್ನು ರಚನೆ ಮಾಡಲಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಅವರು ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಶ್ರೀನಿವಾಸ್​ ಅವರ ಅಂತ್ಯಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಹಂತಕರು ಹೊರ ರಾಜ್ಯದಿಂದ ಬಂದಿರೋ ಶಂಕೆ ಇದ್ದು, ಯಾರನ್ನು ಬಿಡಲ್ಲ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೆಪ್ಪರ್​ ಸ್ಪ್ರೇ ಮಾಡಿ ಕೊಚ್ಚಿ ಕೊಂದ ಹಂತಕರು; ಕಾಂಗ್ರೆಸ್​​ ಮುಖಂಡನ ಕೊಲೆ ಬಗ್ಗೆ ಕೋಲಾರ SP ಹೇಳಿದ್ದೇನು..?

https://newsfirstlive.com/wp-content/uploads/2023/10/Kolar-SP.jpg

    ಇತ್ತೀಚೆಗೆ ಮಾಲೂರಿನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಆಗಿತ್ತು

    ಈ ಘಟನೆ ಮಾಸುವ ಮುನ್ನವೇ ಕೋಲಾರದಲ್ಲಿ ಮತ್ತೊಂದು ಕೊಲೆ!

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತನನ್ನು ಕೊಚ್ಚಿ ಕೊಂದೇಬಿಟ್ರು

ಕೋಲಾರ: ಇತ್ತೀಚೆಗೆ ಮಾಲೂರಿನಲ್ಲಿ ಅನಿಲ್‌ ಕುಮಾರ್ ಅನ್ನೋ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ. ಶ್ರೀನಿವಾಸ್ ಎಂಬುವರನ್ನು ಕೊಂದು ಹಾಕಲಾಗಿದೆ.

ಇನ್ನು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತಾಡಿದ ಕೋಲಾರದ ಎಸ್​​ಪಿ ನಾರಾಯಣ್​​ ಅವರು, ಶ್ರೀನಿವಾಸಪುರ ಪಟ್ಟಣದ ಹೊರವಲಯ ಹೊಗಳಗೆರೆ ಬಳಿ ಆರು ಜನ ದುಷ್ಕರ್ಮಿಗಳು ಶ್ರೀನಿವಾಸ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಮೊದಲು ಪೆಪ್ಪರ್​ ಸ್ಪ್ರೇ ಮಾಡಿ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾರೆ ಎಂದರು.

ಕೊಲೆಗಾರರನ್ನು ಬಂಧಿಸಲು ಮೂರು ಪೊಲೀಸ್​ ತಂಡಗಳನ್ನು ರಚನೆ ಮಾಡಲಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಅವರು ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಶ್ರೀನಿವಾಸ್​ ಅವರ ಅಂತ್ಯಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಹಂತಕರು ಹೊರ ರಾಜ್ಯದಿಂದ ಬಂದಿರೋ ಶಂಕೆ ಇದ್ದು, ಯಾರನ್ನು ಬಿಡಲ್ಲ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More