ಆರ್ಸಿಬಿ ಕ್ಯಾಂಪ್ನಲ್ಲಿ ಬದಲಾವಣೆಯ ಗುಲ್
ಕಪ್ ಗೆಲ್ಲಲು ಆಗದಿರೋದಕ್ಕೆ ಇಬ್ಬರು ಕಾರಣ
ಶುರುವಾಗುತ್ತಾ ಶಾಸ್ತ್ರಿ-ಎಬಿಡಿ ಜುಗಲ್ಬಂಧಿ..?
ಐಪಿಎಲ್ ಮಗೀದು 2 ತಿಂಗಳಾಗಿಲ್ಲ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು ಮೇಜರ್ ಸರ್ಜರಿಗೆ ಇಳಿದಿವೆ. ಲಕ್ನೋ ಸೂಪರ್ ಜೈಂಟ್ಸ್ ಹೊಸ ಕೋಚ್ ನೇಮಿಸಿದ ಬೆನ್ನಲ್ಲೇ ಆರ್ಸಿಬಿಯೂ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಷ್ಟೇ ಅಲ್ಲ, ಈ ರೇಸ್ನಲ್ಲಿ ದಿಗ್ಗಜರ ಹೆಸರುಗಳೇ ಕೇಳಿ ಬರುತ್ತಿವೆ.
ಐಪಿಎಲ್ ಸೀಸನ್-17ರ ಆರಂಭಕ್ಕೆ ಇನ್ನೂ ಹಲವು ತಿಂಗಳು ಬಾಕಿಯಿದೆ. ಆದ್ರೆ, ನೆಕ್ಸ್ಟ್ ಸೀಸನ್ನಲ್ಲಿ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲೋಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸ್ತಿವೆ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ಹೆಡ್ ಕೋಚ್ ಹುದ್ದೆಯಲ್ಲಿದ್ದ ಆ್ಯಂಡಿ ಫ್ಲವರ್ಗೆ ಕಿಕ್ ಔಟ್ ನೀಡಿ ದಿಗ್ಗಜ ಜಸ್ಟಿನ್ ಲ್ಯಾಂಗರ್ಗೆ ನೂತನ ಕೋಚ್ ಆಗಿ ನೇಮಿಸಿದೆ. ಇದೇ ಹಾದಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಗಿದೆ.
ಆರ್ಸಿಬಿ ಡೈರೆಕ್ಟರ್ & ಕೋಚ್ಗೆ ಗೇಟ್ಪಾಸ್..?
ಸೀಸನ್-16ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದ ಆರ್ಸಿಬಿ, ಪ್ಲೈ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಭಾರೀ ಅಸಮಾಧಾನಗೊಂಡಿರೋ ಆರ್ಸಿಬಿ ಫ್ರಾಂಚೈಸಿ, ಸೀಸನ್-17ರ ಆರಂಭಕ್ಕೂ ಮುನ್ನವೇ ಮೇಜರ್ ಸರ್ಜರಿಗೆ ಕೈ ಹಾಕಿದೆ. ಮೊದಲ ಹೆಜ್ಜೆಯಾಗಿ ಡೈರೆಕ್ಟರ್ ಮೈಕ್ ಹೆಸನ್ ಹಾಗೂ ಹೆಡ್ ಕೋಚ್ ಸಂಜಯ್ ಬಂಗಾರ್ಗೆ ಗೇಟ್ಪಾಸ್ ನೀಡಲು ನಿರ್ಧರಿಸಿದೆ.
2020ರಿಂದ ಆರ್ಸಿಬಿ ತಂಡದ ಭಾಗವಾಗಿರೋ ಮೈಕ್ ಹೆಸನ್, 2022ರಿಂದ ಕೋಚ್ ಆಗಿರೋ ಸಂಜಯ್ ಬಂಗಾರ್ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರೋ ಆರ್ಸಿಬಿ ಫ್ರಾಂಚೈಸಿ ಕೊಕ್ ನೀಡೋ ಮನಸ್ಸು ಮಾಡಿದೆ. ಹೀಗಾಗಿಯೇ ಇವರಿಬ್ಬರ ಒಪ್ಪಂದ ನವೀಕರಿಸಲು ಹಿಂದೇಟು ಹಾಕಿದೆ.
ಬೌಲಿಂಗ್ ಕೋಚ್ & ಸ್ಟಾರ್ ಆಟಗಾರರಿಗೆ ಬೀಳುತ್ತೆ ಗುನ್ನಾ
ನಿರ್ದೇಶಕ ಮೈಕ್ ಹೆಸನ್, ಹೆಡ್ ಕೋಚ್ ಸಂಜಯ್ ಬಂಗಾರ್ಗೆ ಮಾತ್ರವೇ ಅಲ್ಲ. ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಡಮ್ ಗ್ರಿಫಿತ್ಗೂ ಗೇಟ್ಪಾಸ್ ನೀಡೋದು ಫಿಕ್ಸ್. ಅಷ್ಟೇ ಅಲ್ಲ.! ಇತರೆ ಸಿಬ್ಬಂದಿಗಳ ಬದಲಾವಣೆಗೂ ಮುಂದಾಗಿರುವ ಆರ್ಸಿಬಿ ಫ್ರಾಂಚೈಸಿ, ಕಿಕ್ಔಟ್ ಪಟ್ಟಿಯಲ್ಲಿ ಸ್ಟಾರ್ ಆಟಗಾರರನ್ನು ಸೇರಿಸಿರುವ ಮಾಹಿತಿ ಇದೆ.
ಮೈಕ್ ಹೆಸನ್ ಕಾರ್ಯವಧಿಯಲ್ಲಿ ಅಟ್ಟರ್ ಫ್ಲಾಫ್
ಕಳೆದ ಮೂರು ಸೀಸನ್ಗಳಿಂದ RCBಯ ಫೇಲ್ಯೂರ್ಗೆ ಇವರಿಬ್ಬರ ತಲೆಬುಡವಿಲ್ಲದ ಆಯ್ಕೆಗಳೇ ಕಾರಣ. ಹೆಡ್ ಕೋಚ್ ಸಂಜಯ್ ಬಂಗಾರ್, ಡೈರೆಕ್ಟರ್ ಆಗಿ ಮೈಕ್ ಹೆಸನ್ ತಂಡದ ಗೆಲುವಿಗೆ ಬೇಕಾದ ಪರ್ಫೆಕ್ಟ್ ಗೇಮ್ಪ್ಲಾನ್, ಸ್ಟಾಟರ್ಜಿ ಮಾಡ್ಲೇ ಇಲ್ಲ. ಮುಖ್ಯವಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಪದೇ ಪದೇ ಎಡವಿದ್ದ ಇವರಿಬ್ಬರು, ಫೇಲ್ಯೂರ್ ಆಟಗಾರರನ್ನೇ ಫೀಲ್ಡ್ಗಿಳಿಸಿದ್ರು. ಇದಿಷ್ಟೇ ಅಲ್ಲ.! ಆ್ಯಕ್ಷನ್ನಲ್ಲೂ ಇವರ ಸ್ಟ್ರಾಟರ್ಜಿ ಅಟ್ಟರ್ ಫ್ಲಾಫ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
2016ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಆ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೆ ತಲುಪಿರಲಿಲ್ಲ. 2020, 2021 ಹಾಗೂ 2022ರಲ್ಲಿ ಪ್ಲೇಆಫ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿ ಲೀಗ್ನಿಂಲೇ ಹೊರಬಿದ್ದಿತ್ತು. ಹೀಗಾಗಿಯೇ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ.
ಹೊಸ ಕೋಚ್ ಹುಡುಕಾಟದಲ್ಲಿ ಆರ್ಸಿಬಿ ಫ್ರಾಂಚೈಸಿ
ನಿರ್ದೇಶಕ ಮೈಕ್ ಹೆಸನ್, ಕೋಚ್ ಸಂಜಯ್ ಬಂಗಾರ್ಗೆ ಕೊಕ್ ನೀಡಲು ನಿರ್ಧರಿಸಿರುವ ಆರ್ಸಿಬಿ ಫ್ರಾಂಚೈಸಿ, ಈಗಾಗಲೇ ಕೆಲ ಕೋಚ್ಗಳ ಜೊತೆ ಮಾತುಕತೆ ಕೂಡ ಮಾಡಿದೆ. RCB ವಿದೇಶಿ ಮುಖ್ಯ ಕೋಚ್ಗಾಗಿ ಹುಡುಕಾಟ ನಡೆಸ್ತಿದೆಯೋ ಅಥವಾ ಭಾರತೀಯ ಕೋಚ್ಗಳ ನೇಮಕಕ್ಕೆ ಒಲುವು ತೋರಿದೆಯೋ ಅನ್ನೋದು ಅಸ್ಪಷ್ಟ. ಈ ರೇಸ್ನಲ್ಲಿ ಮಾತ್ರ ದಿಗ್ಗಜರುಗಳ ಹೆಸರುಗಳೇ ಕೇಳಿ ಬರ್ತಿವೆ.
ಡೈರೆಕ್ಟರ್ ರೇಸ್ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್ ಹೆಸರು
ಇವರಿಗೆ ಕಿಕ್ ನೀಡೋ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಡೈರೆಕ್ಟರ್ ರೇಸ್ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್, ಕೋಚ್ ಹುದ್ದೆಗೆ ಎಬಿ ಡಿವಿಲಿಯರ್ಸ್ ಹೆಸರು ಮುಂಚೂಣಿಯಲ್ಲಿವೆ. ಈ ಇಬ್ಬರ ಹೆಸರುಗಳ ನಡುವೆ ರವಿ ಶಾಸ್ತ್ರಿ ಹೆಸರು ಕೂಡ ಕೇಳಿ ಬರುತ್ತಿವೆ. ಬಹುತೇಕ ಕೊಹ್ಲಿ ಮಾತನ್ನೇ ಕೇಳೋ ಆರ್ಸಿಬಿ ಫ್ರಾಂಚೈಸಿ, ಈಗ ರವಿ ಶಾಸ್ತ್ರಿಯನ್ನ ಮಾಸ್ಟರ್ ಮೈಂಡ್ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ.! ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ನಿಂದ ಹೊರ ಬಂದಿರೋ ಶೇನ್ ವಾಟ್ಸನ್ ಹೆಸರೂ ಕೂಡ ಚಾಲ್ತಿಯಲ್ಲಿದೆ.
ಒಟ್ನಲ್ಲಿ.. RCB ಫ್ರಾಂಚೈಸಿ ಕೊನೆಗೂ ನಿದ್ದೆಯಿಂದ ಎದ್ದು ಬುದ್ಧೀ ಕಲಿತಿದೆ. ಮುಂದಿನ IPL ಸೀಸನ್ನೊಳಗಾಗಿ ತಂಡದಲ್ಲಿ ಭಾರಿ ಬದಲಾವಣೆ ಮಾಡಲು ರೆಡಿಯಾಗಿದೆ. ಮುಖ್ಯವಾಗಿ ತಂಡದ ಕೋಚ್ ಮತ್ತು ಡೈರೆಕ್ಟರ್ನ ಬದಲಾಯಿಸುವ ಮನಸ್ಸು ಮಾಡಿದೆ. ಆದ್ರೆ, ಎಂಥಹ ಪ್ರತಿಭಾವಂತ ಕೋಚ್ಗೆ ಮಣೆ ಹಾಕಿ ಕಪ್ ಗೆಲ್ಲೋ ಕನಸು ನನಸು ಮಾಡುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಆರ್ಸಿಬಿ ಕ್ಯಾಂಪ್ನಲ್ಲಿ ಬದಲಾವಣೆಯ ಗುಲ್
ಕಪ್ ಗೆಲ್ಲಲು ಆಗದಿರೋದಕ್ಕೆ ಇಬ್ಬರು ಕಾರಣ
ಶುರುವಾಗುತ್ತಾ ಶಾಸ್ತ್ರಿ-ಎಬಿಡಿ ಜುಗಲ್ಬಂಧಿ..?
ಐಪಿಎಲ್ ಮಗೀದು 2 ತಿಂಗಳಾಗಿಲ್ಲ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು ಮೇಜರ್ ಸರ್ಜರಿಗೆ ಇಳಿದಿವೆ. ಲಕ್ನೋ ಸೂಪರ್ ಜೈಂಟ್ಸ್ ಹೊಸ ಕೋಚ್ ನೇಮಿಸಿದ ಬೆನ್ನಲ್ಲೇ ಆರ್ಸಿಬಿಯೂ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಷ್ಟೇ ಅಲ್ಲ, ಈ ರೇಸ್ನಲ್ಲಿ ದಿಗ್ಗಜರ ಹೆಸರುಗಳೇ ಕೇಳಿ ಬರುತ್ತಿವೆ.
ಐಪಿಎಲ್ ಸೀಸನ್-17ರ ಆರಂಭಕ್ಕೆ ಇನ್ನೂ ಹಲವು ತಿಂಗಳು ಬಾಕಿಯಿದೆ. ಆದ್ರೆ, ನೆಕ್ಸ್ಟ್ ಸೀಸನ್ನಲ್ಲಿ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲೋಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸ್ತಿವೆ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ಹೆಡ್ ಕೋಚ್ ಹುದ್ದೆಯಲ್ಲಿದ್ದ ಆ್ಯಂಡಿ ಫ್ಲವರ್ಗೆ ಕಿಕ್ ಔಟ್ ನೀಡಿ ದಿಗ್ಗಜ ಜಸ್ಟಿನ್ ಲ್ಯಾಂಗರ್ಗೆ ನೂತನ ಕೋಚ್ ಆಗಿ ನೇಮಿಸಿದೆ. ಇದೇ ಹಾದಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಗಿದೆ.
ಆರ್ಸಿಬಿ ಡೈರೆಕ್ಟರ್ & ಕೋಚ್ಗೆ ಗೇಟ್ಪಾಸ್..?
ಸೀಸನ್-16ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದ ಆರ್ಸಿಬಿ, ಪ್ಲೈ ಆಫ್ ತಲುಪುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಭಾರೀ ಅಸಮಾಧಾನಗೊಂಡಿರೋ ಆರ್ಸಿಬಿ ಫ್ರಾಂಚೈಸಿ, ಸೀಸನ್-17ರ ಆರಂಭಕ್ಕೂ ಮುನ್ನವೇ ಮೇಜರ್ ಸರ್ಜರಿಗೆ ಕೈ ಹಾಕಿದೆ. ಮೊದಲ ಹೆಜ್ಜೆಯಾಗಿ ಡೈರೆಕ್ಟರ್ ಮೈಕ್ ಹೆಸನ್ ಹಾಗೂ ಹೆಡ್ ಕೋಚ್ ಸಂಜಯ್ ಬಂಗಾರ್ಗೆ ಗೇಟ್ಪಾಸ್ ನೀಡಲು ನಿರ್ಧರಿಸಿದೆ.
2020ರಿಂದ ಆರ್ಸಿಬಿ ತಂಡದ ಭಾಗವಾಗಿರೋ ಮೈಕ್ ಹೆಸನ್, 2022ರಿಂದ ಕೋಚ್ ಆಗಿರೋ ಸಂಜಯ್ ಬಂಗಾರ್ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರೋ ಆರ್ಸಿಬಿ ಫ್ರಾಂಚೈಸಿ ಕೊಕ್ ನೀಡೋ ಮನಸ್ಸು ಮಾಡಿದೆ. ಹೀಗಾಗಿಯೇ ಇವರಿಬ್ಬರ ಒಪ್ಪಂದ ನವೀಕರಿಸಲು ಹಿಂದೇಟು ಹಾಕಿದೆ.
ಬೌಲಿಂಗ್ ಕೋಚ್ & ಸ್ಟಾರ್ ಆಟಗಾರರಿಗೆ ಬೀಳುತ್ತೆ ಗುನ್ನಾ
ನಿರ್ದೇಶಕ ಮೈಕ್ ಹೆಸನ್, ಹೆಡ್ ಕೋಚ್ ಸಂಜಯ್ ಬಂಗಾರ್ಗೆ ಮಾತ್ರವೇ ಅಲ್ಲ. ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಡಮ್ ಗ್ರಿಫಿತ್ಗೂ ಗೇಟ್ಪಾಸ್ ನೀಡೋದು ಫಿಕ್ಸ್. ಅಷ್ಟೇ ಅಲ್ಲ.! ಇತರೆ ಸಿಬ್ಬಂದಿಗಳ ಬದಲಾವಣೆಗೂ ಮುಂದಾಗಿರುವ ಆರ್ಸಿಬಿ ಫ್ರಾಂಚೈಸಿ, ಕಿಕ್ಔಟ್ ಪಟ್ಟಿಯಲ್ಲಿ ಸ್ಟಾರ್ ಆಟಗಾರರನ್ನು ಸೇರಿಸಿರುವ ಮಾಹಿತಿ ಇದೆ.
ಮೈಕ್ ಹೆಸನ್ ಕಾರ್ಯವಧಿಯಲ್ಲಿ ಅಟ್ಟರ್ ಫ್ಲಾಫ್
ಕಳೆದ ಮೂರು ಸೀಸನ್ಗಳಿಂದ RCBಯ ಫೇಲ್ಯೂರ್ಗೆ ಇವರಿಬ್ಬರ ತಲೆಬುಡವಿಲ್ಲದ ಆಯ್ಕೆಗಳೇ ಕಾರಣ. ಹೆಡ್ ಕೋಚ್ ಸಂಜಯ್ ಬಂಗಾರ್, ಡೈರೆಕ್ಟರ್ ಆಗಿ ಮೈಕ್ ಹೆಸನ್ ತಂಡದ ಗೆಲುವಿಗೆ ಬೇಕಾದ ಪರ್ಫೆಕ್ಟ್ ಗೇಮ್ಪ್ಲಾನ್, ಸ್ಟಾಟರ್ಜಿ ಮಾಡ್ಲೇ ಇಲ್ಲ. ಮುಖ್ಯವಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಪದೇ ಪದೇ ಎಡವಿದ್ದ ಇವರಿಬ್ಬರು, ಫೇಲ್ಯೂರ್ ಆಟಗಾರರನ್ನೇ ಫೀಲ್ಡ್ಗಿಳಿಸಿದ್ರು. ಇದಿಷ್ಟೇ ಅಲ್ಲ.! ಆ್ಯಕ್ಷನ್ನಲ್ಲೂ ಇವರ ಸ್ಟ್ರಾಟರ್ಜಿ ಅಟ್ಟರ್ ಫ್ಲಾಫ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
2016ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಆ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೆ ತಲುಪಿರಲಿಲ್ಲ. 2020, 2021 ಹಾಗೂ 2022ರಲ್ಲಿ ಪ್ಲೇಆಫ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿ ಲೀಗ್ನಿಂಲೇ ಹೊರಬಿದ್ದಿತ್ತು. ಹೀಗಾಗಿಯೇ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ.
ಹೊಸ ಕೋಚ್ ಹುಡುಕಾಟದಲ್ಲಿ ಆರ್ಸಿಬಿ ಫ್ರಾಂಚೈಸಿ
ನಿರ್ದೇಶಕ ಮೈಕ್ ಹೆಸನ್, ಕೋಚ್ ಸಂಜಯ್ ಬಂಗಾರ್ಗೆ ಕೊಕ್ ನೀಡಲು ನಿರ್ಧರಿಸಿರುವ ಆರ್ಸಿಬಿ ಫ್ರಾಂಚೈಸಿ, ಈಗಾಗಲೇ ಕೆಲ ಕೋಚ್ಗಳ ಜೊತೆ ಮಾತುಕತೆ ಕೂಡ ಮಾಡಿದೆ. RCB ವಿದೇಶಿ ಮುಖ್ಯ ಕೋಚ್ಗಾಗಿ ಹುಡುಕಾಟ ನಡೆಸ್ತಿದೆಯೋ ಅಥವಾ ಭಾರತೀಯ ಕೋಚ್ಗಳ ನೇಮಕಕ್ಕೆ ಒಲುವು ತೋರಿದೆಯೋ ಅನ್ನೋದು ಅಸ್ಪಷ್ಟ. ಈ ರೇಸ್ನಲ್ಲಿ ಮಾತ್ರ ದಿಗ್ಗಜರುಗಳ ಹೆಸರುಗಳೇ ಕೇಳಿ ಬರ್ತಿವೆ.
ಡೈರೆಕ್ಟರ್ ರೇಸ್ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್ ಹೆಸರು
ಇವರಿಗೆ ಕಿಕ್ ನೀಡೋ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಡೈರೆಕ್ಟರ್ ರೇಸ್ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್, ಕೋಚ್ ಹುದ್ದೆಗೆ ಎಬಿ ಡಿವಿಲಿಯರ್ಸ್ ಹೆಸರು ಮುಂಚೂಣಿಯಲ್ಲಿವೆ. ಈ ಇಬ್ಬರ ಹೆಸರುಗಳ ನಡುವೆ ರವಿ ಶಾಸ್ತ್ರಿ ಹೆಸರು ಕೂಡ ಕೇಳಿ ಬರುತ್ತಿವೆ. ಬಹುತೇಕ ಕೊಹ್ಲಿ ಮಾತನ್ನೇ ಕೇಳೋ ಆರ್ಸಿಬಿ ಫ್ರಾಂಚೈಸಿ, ಈಗ ರವಿ ಶಾಸ್ತ್ರಿಯನ್ನ ಮಾಸ್ಟರ್ ಮೈಂಡ್ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ.! ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ನಿಂದ ಹೊರ ಬಂದಿರೋ ಶೇನ್ ವಾಟ್ಸನ್ ಹೆಸರೂ ಕೂಡ ಚಾಲ್ತಿಯಲ್ಲಿದೆ.
ಒಟ್ನಲ್ಲಿ.. RCB ಫ್ರಾಂಚೈಸಿ ಕೊನೆಗೂ ನಿದ್ದೆಯಿಂದ ಎದ್ದು ಬುದ್ಧೀ ಕಲಿತಿದೆ. ಮುಂದಿನ IPL ಸೀಸನ್ನೊಳಗಾಗಿ ತಂಡದಲ್ಲಿ ಭಾರಿ ಬದಲಾವಣೆ ಮಾಡಲು ರೆಡಿಯಾಗಿದೆ. ಮುಖ್ಯವಾಗಿ ತಂಡದ ಕೋಚ್ ಮತ್ತು ಡೈರೆಕ್ಟರ್ನ ಬದಲಾಯಿಸುವ ಮನಸ್ಸು ಮಾಡಿದೆ. ಆದ್ರೆ, ಎಂಥಹ ಪ್ರತಿಭಾವಂತ ಕೋಚ್ಗೆ ಮಣೆ ಹಾಕಿ ಕಪ್ ಗೆಲ್ಲೋ ಕನಸು ನನಸು ಮಾಡುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್