/newsfirstlive-kannada/media/post_attachments/wp-content/uploads/2024/10/KL_RAHUL-10.jpg)
ಐಪಿಎಲ್​ ರಿಟೈನ್​​ ಡೆಡ್​​ಲೈನ್ ಹತ್ತಿರವಾದಂತೆ​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಯಾರನ್ನ ರಿಲೀಸ್​ ಮಾಡಬೇಕು, ಯಾರನ್ನ ರಿಟೈನ್​ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರ ಜೋರಾಗಿ ನಡೀತಿದೆ. ದಿನಕ್ಕೊಂದು ದೊಡ್ಡ ದೊಡ್ಡ ಸುದ್ದಿಗಳು ಹೊರ ಬೀಳುತ್ತಿವೆ. ಇದೀಗ ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳಿಗೆ RCB ಮೆಂಟರ್​ ದಿನೇಶ್​ ಕಾರ್ತಿಕ್​ ಗುಡ್ ನ್ಯೂಸ್​ ಕೊಟ್ಟಿದ್ದಾರೆ. ಕನ್ನಡಿಗ ಕೆ.ಎಲ್​ ರಾಹುಲ್ ವಿಚಾರದಲ್ಲಿ​ ಆರ್​ಸಿಬಿ ಪ್ಲಾನ್​ ಏನು ಅನ್ನೋದನ್ನ ಹೇಳಿದ್ದಾರೆ.
ಐಪಿಎಲ್​ ರಿಟೈನ್ಶನ್​​ ಡೆಡ್​​ಲೈನ್​ ಹತ್ತಿರವಾದಂತೆ, ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಹೊಸದಾಗಿ ತಂಡ ಕಟ್ಟೋ ಸಿದ್ಧತೆ ಜೋರಾಗಿ ನಡೀತಿದೆ. ರಿಟೈನ್ಶನ್​​​ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಇದೀಗ ಆಕ್ಷನ್​ನಲ್ಲಿ ಯಾವೆಲ್ಲಾ ಆಟಗಾರರಿಗೆ ಗಾಳ ಹಾಕಬೇಕು ಅನ್ನೋ ಬ್ಲೂಪ್ರಿಂಟ್​ ರೆಡಿಯಾಗುತ್ತಿದೆ. ಟ್ಯಾಲೆಂಟೆಡ್​​ ಸ್ಟಾರ್​​ ಆಟಗಾರರನ್ನೇ ಟಾರ್ಗೆಟ್​ ಮಾಡಿರುವ ಆರ್​​ಸಿಬಿ, ಬಲಿಷ್ಠ ತಂಡ ಕಟ್ಟುವ ಯೋಜನೆ ರೂಪಿಸಿದೆ. ಇದ್ರ ನಡುವೆ ಆರ್​​ಸಿಬಿಯ ಮೆಂಟರ್​ ದಿನೇಶ್​ ಕಾರ್ತಿಕ್​, ಕರ್ನಾಟಕದ ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.
ಇದನ್ನೂ ಓದಿ: ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!
/newsfirstlive-kannada/media/post_attachments/wp-content/uploads/2024/10/KL_RAHUL_RCB.jpg)
ಕನ್ನಡಿಗ ಕೆ.ಎಲ್​​​ ರಾಹುಲ್​ ಮೇಲೆ ಆರ್​​ಸಿಬಿ ಕಣ್ಣು.!
ಕಳೆದ ಕೆಲ ತಿಂಗಳಿಂದ ಇದ್ದ ರೂಮರ್ಸ್​ ನಿಜವಾಗುವ ದಿನ ಹತ್ತಿರ ಬಂದಿದೆ. ಕರ್ನಾಟಕ ಕ್ರಿಕೆಟ್​ ಪ್ರೇಮಿಗಳು ಬಯಸಿದಂತೆ ಮುಂದಿನ ಸೀಸನ್​ನಲ್ಲಿ ಆರ್​​ಸಿಬಿ ಪರ ಕೆ.ಎಲ್​ ರಾಹುಲ್​ ಬ್ಯಾಟ್​ ಬೀಸೋ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದ ಕ್ಲಾಸಿಕ್​ ಬ್ಯಾಟ್ಸ್​ಮನ್​ ಮೇಲೆ ಆರ್​​ಸಿಬಿ ಫ್ರಾಂಚೈಸಿ ಹದ್ದಿನ ಕಣ್ಣಿಟ್ಟಿರೋದು ಇದೀಗ ಬಹಿರಂಗವಾಗಿದೆ. ಸ್ವತಃ ತಂಡದ ಮೆಂಟರ್​ ದಿನೇಶ್​ ಕಾರ್ತಿಕ್​ ಈ ಬಗ್ಗೆ ಸುಳಿವು ನೀಡಿದ್ದಾರೆ.
ಯಾರು ಮೊದಲ ಬಾರಿ IPL ಟ್ರೋಫಿ ಗೆಲ್ತಾರೆ.? ವಿರಾಟ್ ಕೊಹ್ಲಿ ಅಥವಾ ಕೆ.ಎಲ್ ರಾಹುಲ್. ನಾನು ಆರ್ಸಿಬಿ ಕೋಚ್. ವಿರಾಟ್ ಕೊಹ್ಲಿ ತಂಡದ ಭಾಗ. RCB ಮೆಂಟರ್ ಆಗಿ ಬೇರೆಯವರ ಹೆಸರನ್ನ ಹೇಳೋಕಾಗುತ್ತಾ?. ಕೊಹ್ಲಿ ಮೊದಲು IPL ಟ್ರೋಫಿ ಗೆಲ್ಲಬೇಕು ಎಂದು ಪ್ರಾರ್ಥಿಸುತ್ತೇನೆ. ಅದೇ ತಂಡದಲ್ಲಿ ಕೆ.ಎಲ್ ರಾಹುಲ್ ಇದ್ರೆ ಇನ್ನೂ ಚೆನ್ನಾಗಿರುತ್ತೆ. ಇಬ್ಬರೂ ಖುಷಿಯಾಗ್ತಾರೆ. ನಾನೂ ಖುಷಿಯಾಗ್ತಿನಿ.
ದಿನೇಶ್ ಕಾರ್ತಿಕ್, RCB ಮೆಂಟರ್
ಆರ್​​ಸಿಬಿಯ ಮೆಂಟರ್​ ಬಾಯಲ್ಲಿ ಬಂದ ಮಾತುಗಳಿವು. ಈ ಮಾತುಗಳು ಕೆ.ಎಲ್​ ರಾಹುಲ್​ ಖರೀದಿಗೆ ಆರ್​​ಸಿಬಿ ರೆಡಿಯಾಗಿದೆ ಅನ್ನೋ ರೂಮರ್ಸ್​ ನಿಜ ಅನ್ನೋ ಸುಳಿವು ನೀಡುತ್ತಿವೆ. ಲಕ್ನೋ ಫ್ರಾಂಚೈಸಿಯಿಂದ ರಾಹುಲ್​ ರಿಲೀಸ್​ ಆಗೋದು ಕನ್​ಫರ್ಮ್​ ಆಗಿದೆ. ಇದೇ ಬೆಸ್ಟ್​ ಚಾನ್ಸ್​ ಅಂದುಕೊಂಡಿರೋ ಆರ್​​ಸಿಬಿ ಬಿಗ್​ಫಿಶ್​ಗೆ ಗಾಳ ಹಾಕೋ ಯತ್ನದಲ್ಲಿದೆ. ರಾಹುಲ್​ ಖರೀದಿಸಿದ್ರೆ, ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದಂತಾಗಲಿದೆ.
‘ಫ್ಲಾಪ್’​ ಡುಪ್ಲೆಸಿಗೆ ಗೇಟ್​ಪಾಸ್​​.. ರಾಹುಲ್​ಗೆ ನಾಯಕತ್ವ.!
17 ಸೀಸನ್​​ಗಳಿಂದ ದಿಗ್ಗಜ ಆಟಗಾರರು ಬಂದು ಹೋಗಿದ್ರೂ ಆರ್​​ಸಿಬಿ ಈವರೆಗೆ ಕಪ್​ ಗೆದ್ದಿಲ್ಲ. ಕಳೆದ 3 ವರ್ಷದಿಂದ ತಂಡದ ನಾಯಕನಾಗಿರೋ ಫಾಫ್​ ಡುಪ್ಲೆಸಿ ಕೂಡ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಫೇಲ್​ ಆಗಿದ್ದಾರೆ. ಹೀಗಾಗಿ ಫ್ಲಾಪ್​ ಆಗಿರುವ ಫಾಫ್ ಡುಪ್ಲೆಸಿಯನ್ನ ಕೈ ಬಿಡಲು ಸಜ್ಜಾಗಿದ್ದು, ಹೊಸ ನಾಯಕನ ಹುಡುಕಾಟ ನಡೆಸ್ತಿದೆ. ರಾಹುಲ್​ನ ಹರಾಜಿನಲ್ಲಿ ಖರೀದಿಸಿದ್ರೆ, ತಂಡಕ್ಕೆ ಸಮರ್ಥ ನಾಯಕ ಸಿಕ್ಕಂತಾಗಲಿದೆ.
ಇದನ್ನೂ ಓದಿ: ‘ಒಳಗೆ ಕುಳಿತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು’-ಡಿ.ಕೆ ಶಿವಕುಮಾರ್
/newsfirstlive-kannada/media/post_attachments/wp-content/uploads/2024/05/Dinesh-Karthik_Retire.jpg)
ಕನ್ನಡಿಗನ ಖರೀದಿ ಹಿಂದೆ ಕಮರ್ಷಿಯಲ್​ ಲೆಕ್ಕಾಚಾರ.!
ಕಪ್​ ಗೆಲ್ಲೋ ಸ್ಟಾರ್ಟಜಿಯಲ್ಲಿ ಎಡವಿದ್ರೂ, ಕಮರ್ಷಿಯಲ್​ ಲೆಕ್ಕಾಚಾರದಲ್ಲಿ ಆರ್​​ಸಿಬಿ ಎಡವಿದ್ದೇ ಇಲ್ಲ. ಇದೀಗ ರಾಹುಲ್​ ಖರೀದಿಗೆ ಮುಂದಾಗಿರೋದ್ರ ಹಿಂದೆ ಈ ಲೆಕ್ಕಾಚಾರ ಇದೆ. ಚಿನ್ನಸ್ವಾಮಿಯಲ್ಲಿ ಆಡಿದ ಬೆಳೆದ ರಾಹುಲ್​, ಹೋಮ್​ ಟೀಮ್​ನ ಆರ್​​ಸಿಬಿ ಕ್ಯಾಪ್ಟನ್ ಫ್ಯಾನ್ಸ್​ ಫುಲ್​ ಖುಷ್​ ಆಗ್ತಾರೆ. ತಂಡದ ಕ್ರೇಜ್​​ ನೆಕ್ಸ್ಟ್​​ ಲೆವೆಲ್​ಗೆ ಹೋಗುತ್ತೆ. ಜೊತೆಗೆ ಹಲವು ವರ್ಷಗಳಿಂದ ತಂಡಕ್ಕೆ ಅಂಟಿರುವ ಕನ್ನಡಿಗರ ಕಡೆಗಣನೆಯ ಅಪವಾದವೂ ತಪ್ಪಲಿದೆ.
ಕಳೆದ ಕೆಲ ತಿಂಗಳಿಂದ ಹಬ್ಬಿರುವ ಆರ್​​ಸಿಬಿಗೆ ರಾಹುಲ್​ ಎಂಟ್ರಿಯ ರೂಮರ್ಸ್​ ನಿಜವಾಗೋ ಸಾಧ್ಯತೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಆರ್​​ಸಿಬಿ ಫ್ರಾಂಚೈಸಿ ಕೂಡ ಕನ್ನಡಿಗನ ಖರೀದಿಗೆ ಹದ್ದಿನ ಕಣ್ಣಿಟ್ಟಿರೋದು ಬಹಿರಂಗವಾಗಿದೆ. ಆದ್ರೆ, ಆಕ್ಷನ್ ವೇಳೆ ಎಲ್ಲಾ ಅಂದುಕೊಂಡಂತೆ ಆಗುತ್ತಾ.? ಅನ್ನೋದೆ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us