ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಲೆ ಕೇಸ್
ಕೇಸ್ ಸಂಬಂಧ 14 ಮಂದಿ ಆರೋಪಿಗಳು ಅರೆಸ್ಟ್
ಕೊಲೆಗೆ ಸ್ಕೆಚ್ ಹಾಕಿದ್ದು ಹೇಗೆ? ಎಂದು ಬಿಚ್ಚಿಟ್ರು..!
ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿದ್ದಾಪುರ ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಕೊಲೆ ಮಾಡಿ ಎರಡು ದಿನದಿಂದ ತಲೆಮರಿಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತರಾದ ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ ಸೇರಿ ಹದಿನಾಲ್ಕು ಆರೋಪಿಗಳನ್ನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿದೆ.
ಕೊಲೆ ಮಾಡಿದ್ದು ಯಾಕೆ?
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ನಿಂದ ಕೃತ್ಯ ನಡೆದಿದ್ದು, ಗ್ಯಾಂಗ್ ವಾರ್ ಮತ್ತು ರಿವೇಂಜ್ಗಾಗಿ ಕೊಲೆ ನಡೆದಿದೆ ಎನ್ನಲಾಗ್ತಿದೆ. ವಿಲ್ಸನ್ ಗಾರ್ಡನ್ ನಾಗನ ಕೊಲೆಗೆ ಮಹೇಶ್ ಸ್ಕೆಚ್ ಹಾಕಿದ್ದ. ಹೀಗಾಗಿ ನಾಗನ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದ. ಸುಮಾರು 30 ರೌಡಿಗಳ ಗ್ಯಾಂಗ್ ಮಾಡ್ಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದನಂತೆ. ಈ ಪ್ಲಾನ್ ಬಗ್ಗೆ ಮಾಹಿತಿ ಗೊತ್ತಾಗ್ತಿದ್ದಂತೆ ಮಹೇಶನ ಮುಗಿಸಿರೋದಾಗಿ ಪೊಲೀಸರ ಮುಂದೆ ಕೊಲೆಗೆ ಕಾರಣ ಹೇಳಿದ್ದಾರೆ ಆರೋಪಿಗಳು ಎನ್ನಲಾಗ್ತಿದೆ.
ಇನ್ನು ಈ ಗ್ಯಾಂಗ್ನ ಮತ್ತೊಬ್ಬ ಸದಸ್ಯ ಡಬಲ್ ಮೀಟರ್ ಮೋಹನ ತಲೆಮರಿಸಿಕೊಂಡಿದ್ದು, ಆತನ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಹೇಗಿತ್ತು ಆರೋಪಿಗಳ ಸ್ಕೆಚ್
ಮಹೇಶ್ ಜೈಲಿನಿಂದ ಹೊರ ಬರುವ ಮಾಹಿತಿ ಪಡೆದಿದ್ದ ಹಂತಕರು, ಆತ ಕಾರು ಹತ್ತಿ ಮೈನ್ ರೋಡಿಗೆ ಬರೋದನ್ನೇ ಕಾಯುತ್ತಿದ್ರು. ಕಾರು ರಸ್ತೆಗೆ ಬರ್ತಿದ್ದಂತೆ ಬೈಕ್ ಮತ್ತು ಕಾರಿನಲ್ಲಿ ಫಾಲೋ ಮಾಡಿದ್ದ ನಾಗನ ಹುಡುಗರು, ಲಾಂಗು ಮಚ್ಚು ಝಳಪಿಸಿದ್ರು. ಮಹೇಶನ ಜೊತೆಗೆ ಹುಡುಗರು ಇದ್ರೂ ಬಿಡದೇ ಕೊಲೆ ಮಾಡಿದ್ರು. ನಾಗನ ಟೀಮ್ ಸೆಕೆಂಡ್ ಗ್ಯಾಪ್ ಕೂಡಾ ಕೊಡದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.
ರಿವೇಂಜ್ಗಾಗಿ ಆರೋಪಿಗಳು ಈ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಕೊಲೆಗೆ ಸ್ಕೆಚ್ ರೂಪಿಸಿದ್ದು ನಾವೇ ಅಂತಾನೂ ಹೇಳಿದ್ದಾರೆ. ನಮ್ಮಿಂದೆ ಯಾರೂ ಇಲ್ಲ. ಮದನ್ ಮತ್ತು ಕಪಿಲ್ ಕೊಲೆ ಮಾಡಿದ್ದ ಇವನನ್ನ ಮುಗಿಸಬೇಕು ಅಂತ ಹೀಗೆ ಮಾಡಿರೋದಾಗಿ ತಿಳಿಸಿದ್ದಾರೆ. ಅದೇನೇ ಇರ್ಲಿ ಈ ಕೊಲೆಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದ್ರೆ ರಾತ್ರೋ ರಾತ್ರಿ ನಡೆದ ಬೆಳವಣಿಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿರೋದಂತೂ ಸತ್ಯ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ವೀಕ್ಷಿಸಿ
ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಲೆ ಕೇಸ್
ಕೇಸ್ ಸಂಬಂಧ 14 ಮಂದಿ ಆರೋಪಿಗಳು ಅರೆಸ್ಟ್
ಕೊಲೆಗೆ ಸ್ಕೆಚ್ ಹಾಕಿದ್ದು ಹೇಗೆ? ಎಂದು ಬಿಚ್ಚಿಟ್ರು..!
ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿದ್ದಾಪುರ ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಕೊಲೆ ಮಾಡಿ ಎರಡು ದಿನದಿಂದ ತಲೆಮರಿಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತರಾದ ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ ಸೇರಿ ಹದಿನಾಲ್ಕು ಆರೋಪಿಗಳನ್ನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿದೆ.
ಕೊಲೆ ಮಾಡಿದ್ದು ಯಾಕೆ?
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ನಿಂದ ಕೃತ್ಯ ನಡೆದಿದ್ದು, ಗ್ಯಾಂಗ್ ವಾರ್ ಮತ್ತು ರಿವೇಂಜ್ಗಾಗಿ ಕೊಲೆ ನಡೆದಿದೆ ಎನ್ನಲಾಗ್ತಿದೆ. ವಿಲ್ಸನ್ ಗಾರ್ಡನ್ ನಾಗನ ಕೊಲೆಗೆ ಮಹೇಶ್ ಸ್ಕೆಚ್ ಹಾಕಿದ್ದ. ಹೀಗಾಗಿ ನಾಗನ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದ. ಸುಮಾರು 30 ರೌಡಿಗಳ ಗ್ಯಾಂಗ್ ಮಾಡ್ಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದನಂತೆ. ಈ ಪ್ಲಾನ್ ಬಗ್ಗೆ ಮಾಹಿತಿ ಗೊತ್ತಾಗ್ತಿದ್ದಂತೆ ಮಹೇಶನ ಮುಗಿಸಿರೋದಾಗಿ ಪೊಲೀಸರ ಮುಂದೆ ಕೊಲೆಗೆ ಕಾರಣ ಹೇಳಿದ್ದಾರೆ ಆರೋಪಿಗಳು ಎನ್ನಲಾಗ್ತಿದೆ.
ಇನ್ನು ಈ ಗ್ಯಾಂಗ್ನ ಮತ್ತೊಬ್ಬ ಸದಸ್ಯ ಡಬಲ್ ಮೀಟರ್ ಮೋಹನ ತಲೆಮರಿಸಿಕೊಂಡಿದ್ದು, ಆತನ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಹೇಗಿತ್ತು ಆರೋಪಿಗಳ ಸ್ಕೆಚ್
ಮಹೇಶ್ ಜೈಲಿನಿಂದ ಹೊರ ಬರುವ ಮಾಹಿತಿ ಪಡೆದಿದ್ದ ಹಂತಕರು, ಆತ ಕಾರು ಹತ್ತಿ ಮೈನ್ ರೋಡಿಗೆ ಬರೋದನ್ನೇ ಕಾಯುತ್ತಿದ್ರು. ಕಾರು ರಸ್ತೆಗೆ ಬರ್ತಿದ್ದಂತೆ ಬೈಕ್ ಮತ್ತು ಕಾರಿನಲ್ಲಿ ಫಾಲೋ ಮಾಡಿದ್ದ ನಾಗನ ಹುಡುಗರು, ಲಾಂಗು ಮಚ್ಚು ಝಳಪಿಸಿದ್ರು. ಮಹೇಶನ ಜೊತೆಗೆ ಹುಡುಗರು ಇದ್ರೂ ಬಿಡದೇ ಕೊಲೆ ಮಾಡಿದ್ರು. ನಾಗನ ಟೀಮ್ ಸೆಕೆಂಡ್ ಗ್ಯಾಪ್ ಕೂಡಾ ಕೊಡದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.
ರಿವೇಂಜ್ಗಾಗಿ ಆರೋಪಿಗಳು ಈ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಕೊಲೆಗೆ ಸ್ಕೆಚ್ ರೂಪಿಸಿದ್ದು ನಾವೇ ಅಂತಾನೂ ಹೇಳಿದ್ದಾರೆ. ನಮ್ಮಿಂದೆ ಯಾರೂ ಇಲ್ಲ. ಮದನ್ ಮತ್ತು ಕಪಿಲ್ ಕೊಲೆ ಮಾಡಿದ್ದ ಇವನನ್ನ ಮುಗಿಸಬೇಕು ಅಂತ ಹೀಗೆ ಮಾಡಿರೋದಾಗಿ ತಿಳಿಸಿದ್ದಾರೆ. ಅದೇನೇ ಇರ್ಲಿ ಈ ಕೊಲೆಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದ್ರೆ ರಾತ್ರೋ ರಾತ್ರಿ ನಡೆದ ಬೆಳವಣಿಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿರೋದಂತೂ ಸತ್ಯ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ವೀಕ್ಷಿಸಿ