newsfirstkannada.com

ರಿಷಬ್​ ಪಂತ್​ ಎಂಟ್ರಿ ಕೊಟ್ರೆ ಟೀಮ್​ಗೆ ನೂರಾನೆ ಬಲ.. ಯಾರ್ಕರ್​ ಕಿಂಗ್​ ಬುಮ್ರಾ ಬಂದ್ರೆ ಯುವ ವೇಗಿಗಳಿಗೆ ಸಂಕಷ್ಟ.!

Share :

23-06-2023

    ಸ್ಟಾರ್​ ಪ್ಲೇಯರ್ಸ್​ ತಂಡಕ್ಕೆ ಆಗಮನದಿಂದ ಯಾಱರ ಸ್ಥಾನಕ್ಕೆ ಕುತ್ತು?

    ವಿಶ್ವಕಪ್​​​ಗೆ ಪಂತ್ ರೆಡಿ, ಇಶನ್​ ಕಿಶನ್​​​​​- ಕೆಎಸ್​ ಭರತ್​​​​​​​ ಕಥೆ ಕ್ಲೋಸ್!

    ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್

ಸ್ಟಾರ್​​​​ ಪ್ಲೇಯರ್ಸ್​ ಇಂಜುರಿ ಟೀಮ್ ಇಂಡಿಯಾಗೆ ದೊಡ್ಡ ಸೆಟ್​​ಬ್ಯಾಕ್ ಆಗಿತ್ತು. ಇವರ ಅಲಭ್ಯತೆಯಿಂದ ಪ್ರಮುಖ ಟ್ರೋಫಿಗಳನ್ನ ಕೈ ಚೆಲ್ಲಿದೆ. ಆದರೆ ಇನ್ನು ಮೇಲೆ ಹಾಗಾಗಲ್ಲ. ಯಾಕಂದ್ರೆ ಮಿಸ್ಸಿಂಗ್​ ಪ್ಲೇಯರ್ಸ್​ ಕಮ್​​ಬ್ಯಾಕ್​​​​ಗೆ ಸಜ್ಜಾಗಿದ್ದಾರೆ. ಇನ್ನೊಂದೆಡೆ ಇವರ ಮರುಳುವಿಕೆಯಿಂದ ಹಲವರ ಎದೆಯಲ್ಲಿ ನಡುಕ ಶುರುವಾಗಿದೆ.

ಒನ್​ ಡೇ ವರ್ಲ್ಡ್ ​ಕಪ್ ಈ ಮಹಾಸಂಗ್ರಾಮಕ್ಕೆ ಹೆಚ್ಚೇನು ತಿಂಗಳು ಉಳಿದಿಲ್ಲ. ವರ್ಷಾಂತ್ಯದಲ್ಲಿ ​​​​​ಫಿಫ್ಟಿ ಓವರ್​​​ ವಿಶ್ವಕಪ್​​​​​​​​​​ ನಡೆಯಲಿದೆ. ಈ ಕದನಕ್ಕೆ ಭಾರತವೇ ಆತಿಥ್ಯ ವಹಿಸಿದೆ. ಹೀಗಾಗಿ ಮೆನ್​ ಇನ್​ ಪಡೆಗೆ ಇದು ಪ್ರತಿಷ್ಠೆಯ ಪಣ. ತವರಿನಲ್ಲೇ ವಿಶ್ವಕಪ್​ ಗೆದ್ದು ದಶಕದ ಐಸಿಸಿ ಟ್ರೋಫಿ ಬರಕ್ಕೆ ಪುಲ್​ಸ್ಟಾಪ್​ ಹಾಕುವ ಲೆಕ್ಕಚಾರದಲ್ಲಿದೆ. ಇದೇ ಹೊತ್ತಲ್ಲಿ ಒಂದು ಗುಡ್​ನ್ಯೂಸ್ ಕೇಳಿ ಬಂದಿದೆ.

ವಿಶ್ವಕಪ್​ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಇಂಜುರಿ ಪ್ಲೇಯರ್ಸ್..! ​

ಜಸ್​ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್​​​, ಕೆಎಲ್ ರಾಹುಲ್​​​ ಹಾಗೂ ರಿಷಬ್​ ಪಂತ್​​​ ಈ ನಾಲ್ವರು ಸ್ಟಾರ್​ ಆಟಗಾರರನ್ನ ಟೀಮ್ ಇಂಡಿಯಾ ತುಂಬಾನೇ ಮಿಸ್ ಮಾಡಿಕೊಳ್ತಿದೆ. ಇವರ ಇಂಜುರಿ ಭಾರತಕ್ಕೆ ದೊಡ್ಡ ಸೆಟ್​​ಬ್ಯಾಕ್​​​ ಆಗಿದೆ. ಈಗ ಈ ಚತುರ್ಥ ಮ್ಯಾಚ್ ವಿನ್ನರ್​ಗಳ ಕಮ್​​ಬ್ಯಾಕ್​ಗೆ ಕೌಂಟ್​ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಇವರ ಎಂಟ್ರಿಯಿಂದ ತಂಡದಲ್ಲಿನ ಅನೇಕರಿಗೆ ನಡುಕ ಶುರುವಾಗಿದೆ.

ವಿಶ್ವಕಪ್​​​ಗೆ ಪಂತ್ ರೆಡಿ, ಇಶನ್​ ಕಿಶನ್​​​​​-ಭರತ್​​​​​​​ ಕಥೆ ಕ್ಲೋಸ್​​​​

ರಿಷಬ್​ ಪಂತ್ ಈ ಸಿಡಿಗುಂಡಿಲ್ಲದ ಭಾರತವನ್ನ ಊಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಅಷ್ಟರ ಮಟ್ಟಿಗೆ ಟೆರರ್ ಬ್ಯಾಟ್ಸ್​ಮನ್​​ ಗೈರು ಕಾಡ್ತಿದೆ. ಕಳೆದ ಡಿಸೆಂಬರ್​​​ನಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ಪಂತ್​​​, ಮತ್ತೆ ಫ್ಯಾನ್ಸ್ ರಂಜಿಸಲು ಸಜ್ಜಾಗಿದ್ದಾರೆ. ಎನ್​ಸಿಎ ಪುನಶ್ಚೇತನ ಶಿಬಿರದಲ್ಲಿರೋ ಲೆಫ್ಟಿ ದಾಂಡಿಗ ವಿಶ್ವಕಪ್​​​​ ವೇಳೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.

ಪಂತ್​​​ ಆಗಮನದಿಂದ ಭಾರತಕ್ಕೆ ನೂರಾನೆಬಲ ಬರೋದೇನೋ ನಿಜ. ಆದರೆ ಇಶನ್​​ ಕಿಶನ್​​ ಹಾಗೂ ಕೆಎಸ್ ಭರತ್ ಪಾಲಿಗೆ ಇದು ಕಷ್ಟಕರವಾಗಿರಲಿದೆ. ಯಾಕಂದ್ರೆ ಪಂತ್ ಕಮ್​ಬ್ಯಾಕ್​​ ಮಾಡಿದ್ರೆ ಇಬ್ಬರಿಗೆ ಗೇಟ್​ಪಾಸ್​​​ ಗ್ಯಾರಂಟಿ. ಇಶನ್ ಕಿಶನ್​​ ಶಾರ್ಟ್​​​ ಫಾಮ್ಯಾಟ್​ನಲ್ಲಿ ಸ್ಥಾನ ಕಳೆದುಕೊಂಡ್ರೆ ಭರತ್​​​​​​ರ ರೆಡ್​​​ಬಾಲ್​ ಕ್ರಿಕೆಟ್ ಕ್ಲೋಸ್ ಆಗಲಿದೆ.

ಬುಮ್ರಾ ಆಗಮನದಿಂದ ಯುವವೇಗಿಗಳ ಸ್ಥಾನಕ್ಕೆ ಕುತ್ತು..!

ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಬಿದ್ದು 9 ತಿಂಗಳು ಕಳೆದಿದೆ. 2022ರ ಟಿ20 ವಿಶ್ವಕಪ್​​, ಏಷ್ಯಾಕಪ್​ ಹಾಗೂ WTC ಯನ್ನ ಮಿಸ್ ಮಾಡಿಕೊಂಡಿದ್ರು. ಸದ್ಯ ಕೀ ಬೌಲರ್​​​​​ ಇಂಜುರಿಯಿಂದ ರಿಕವರಿ ಆಗ್ತಿದ್ದು, ಏಷ್ಯಾಕಪ್​​ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಡೆತ್ ಸ್ಪೆಶಲಿಸ್ಟ್​​​​ ಮರಳಿದ್ರೆ ಯುವ ವೇಗಿಗಳ ಸ್ಥಾನಕ್ಕೆ ಕುತ್ತು ಬರಲಿದೆ. ಉಮ್ರಾನ್ ಮಲ್ಲಿಕ್​​​​, ಉಮೇಶ್ ಯಾದವ್​​​ ಹಾಗೂ ಜಯ್​ದೇವ್​ ಉನಾಡ್ಕಟ್​​​ ಅವಕಾಶ ವಂಚಿತರಾಗಲಿದ್ದಾರೆ.

ಏಷ್ಯಾಕಪ್​​​​ನಲ್ಲಿ ಆರ್ಭಟಿಸಲು ಕನ್ನಡಿಗ ರಾಹುಲ್​ ಸಿದ್ಧ..!

2023ರ ಐಪಿಎಲ್​​​ ವೇಳೆ ಇಂಜುರಿಗೆ ತುತ್ತಾಗಿದ್ದ ಕೆಎಲ್ ರಾಹುಲ್​​​​​ ಕಮ್​​ಬ್ಯಾಕ್​​​ ಮಾಡಲು ಸಜ್ಜಾಗಿದ್ದಾರೆ. ಲಂಡನ್​​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಎನ್​ಸಿಎಯ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಡೇ ಬೈ ಡೇ ಚೇತರಿಸಿಕೊಳ್ತಿದ್ದು, ಏಷ್ಯಾಕಪ್​​​​​​​ನಲ್ಲಿ ಆಡುವುದು ಬಹುತೇಕ ಖಚಿತ. ರಾಹುಲ್ ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಟೆಸ್ಟ್​​​ ತಂಡದಿಂದ ಶುಭ್​​ಮನ್ ಗಿಲ್​​​​, ಕಲರ್​​​ ಜೆರ್ಸಿಯಲ್ಲಿ ಸೂರ್ಯಕುಮಾರ್​ ಯಾದವ್​​​ ಬೆಂಚ್​ ಕಾಯಬೇಕಾಗುತ್ತೆ..

ಶ್ರೇಯಸ್​​​​​​ ಕಮ್​​ಬ್ಯಾಕ್​​​.. ರಹಾನೆಗೆ ಬೆಂಚೇ ಗತಿ..

ಇನ್ನು ಸ್ಟಾರ್​​ ಪ್ಲೇಯರ್​​ ಶ್ರೇಯಸ್​ ಅಯ್ಯರ್ ಕೂಡ ಗಾಯದಿಂದ ತಂಡಕ್ಕೆ ಮರಳಲು ಎದುರು ನೋಡ್ತಿದ್ದಾರೆ. ಅಂದುಕೊಂಡಂತೆ ನಡೆದ್ರೆ ಮುಂಬೈಕರ್​​​ ವಿಶ್ವಕಪ್​ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಯಂಗ್​​​​​ಪ್ಲೇಯರ್ ಎಂಟ್ರಿಯಿಂದ ಅಜಿಂಕ್ಯಾ ರಹಾನೆಗೆ ಬೆಂಚ್​​​​​​​​ ಗತಿಯಾಗಲಿದೆ. ಇನ್ನು ಶಾರ್ಟ್​​ ಫಾಮ್ಯಾಟ್​​​ನಲ್ಲಿ ಸೂರ್ಯ-ಶ್ರೇಯಸ್ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ.

ಒಂದನ್ನ ಪಡೆದು​​ಕೊಂಡ್ರೆ, ಒಂದನ್ನ ಕಳೆದುಕೊಳ್ಳಬೇಕಾದ ಸ್ಥಿತಿ ಟೀಮ್ ಇಂಡಿಯಾಗೆ ಬರಲಿದೆ. ಆದರೆ ಯಾರೇ ಹೋಗಿ ಬರಲಿ. ಮೆನ್​​​ ಇನ್ ಬ್ಲೂ ಪಡೆ ಮಾತ್ರ ಗೆಲುವಿನ ಝೆಂಡಾ ಹಾರಿಸಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಿಷಬ್​ ಪಂತ್​ ಎಂಟ್ರಿ ಕೊಟ್ರೆ ಟೀಮ್​ಗೆ ನೂರಾನೆ ಬಲ.. ಯಾರ್ಕರ್​ ಕಿಂಗ್​ ಬುಮ್ರಾ ಬಂದ್ರೆ ಯುವ ವೇಗಿಗಳಿಗೆ ಸಂಕಷ್ಟ.!

https://newsfirstlive.com/wp-content/uploads/2023/06/RISHAB_PANT_2.jpg

    ಸ್ಟಾರ್​ ಪ್ಲೇಯರ್ಸ್​ ತಂಡಕ್ಕೆ ಆಗಮನದಿಂದ ಯಾಱರ ಸ್ಥಾನಕ್ಕೆ ಕುತ್ತು?

    ವಿಶ್ವಕಪ್​​​ಗೆ ಪಂತ್ ರೆಡಿ, ಇಶನ್​ ಕಿಶನ್​​​​​- ಕೆಎಸ್​ ಭರತ್​​​​​​​ ಕಥೆ ಕ್ಲೋಸ್!

    ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್

ಸ್ಟಾರ್​​​​ ಪ್ಲೇಯರ್ಸ್​ ಇಂಜುರಿ ಟೀಮ್ ಇಂಡಿಯಾಗೆ ದೊಡ್ಡ ಸೆಟ್​​ಬ್ಯಾಕ್ ಆಗಿತ್ತು. ಇವರ ಅಲಭ್ಯತೆಯಿಂದ ಪ್ರಮುಖ ಟ್ರೋಫಿಗಳನ್ನ ಕೈ ಚೆಲ್ಲಿದೆ. ಆದರೆ ಇನ್ನು ಮೇಲೆ ಹಾಗಾಗಲ್ಲ. ಯಾಕಂದ್ರೆ ಮಿಸ್ಸಿಂಗ್​ ಪ್ಲೇಯರ್ಸ್​ ಕಮ್​​ಬ್ಯಾಕ್​​​​ಗೆ ಸಜ್ಜಾಗಿದ್ದಾರೆ. ಇನ್ನೊಂದೆಡೆ ಇವರ ಮರುಳುವಿಕೆಯಿಂದ ಹಲವರ ಎದೆಯಲ್ಲಿ ನಡುಕ ಶುರುವಾಗಿದೆ.

ಒನ್​ ಡೇ ವರ್ಲ್ಡ್ ​ಕಪ್ ಈ ಮಹಾಸಂಗ್ರಾಮಕ್ಕೆ ಹೆಚ್ಚೇನು ತಿಂಗಳು ಉಳಿದಿಲ್ಲ. ವರ್ಷಾಂತ್ಯದಲ್ಲಿ ​​​​​ಫಿಫ್ಟಿ ಓವರ್​​​ ವಿಶ್ವಕಪ್​​​​​​​​​​ ನಡೆಯಲಿದೆ. ಈ ಕದನಕ್ಕೆ ಭಾರತವೇ ಆತಿಥ್ಯ ವಹಿಸಿದೆ. ಹೀಗಾಗಿ ಮೆನ್​ ಇನ್​ ಪಡೆಗೆ ಇದು ಪ್ರತಿಷ್ಠೆಯ ಪಣ. ತವರಿನಲ್ಲೇ ವಿಶ್ವಕಪ್​ ಗೆದ್ದು ದಶಕದ ಐಸಿಸಿ ಟ್ರೋಫಿ ಬರಕ್ಕೆ ಪುಲ್​ಸ್ಟಾಪ್​ ಹಾಕುವ ಲೆಕ್ಕಚಾರದಲ್ಲಿದೆ. ಇದೇ ಹೊತ್ತಲ್ಲಿ ಒಂದು ಗುಡ್​ನ್ಯೂಸ್ ಕೇಳಿ ಬಂದಿದೆ.

ವಿಶ್ವಕಪ್​ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಇಂಜುರಿ ಪ್ಲೇಯರ್ಸ್..! ​

ಜಸ್​ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್​​​, ಕೆಎಲ್ ರಾಹುಲ್​​​ ಹಾಗೂ ರಿಷಬ್​ ಪಂತ್​​​ ಈ ನಾಲ್ವರು ಸ್ಟಾರ್​ ಆಟಗಾರರನ್ನ ಟೀಮ್ ಇಂಡಿಯಾ ತುಂಬಾನೇ ಮಿಸ್ ಮಾಡಿಕೊಳ್ತಿದೆ. ಇವರ ಇಂಜುರಿ ಭಾರತಕ್ಕೆ ದೊಡ್ಡ ಸೆಟ್​​ಬ್ಯಾಕ್​​​ ಆಗಿದೆ. ಈಗ ಈ ಚತುರ್ಥ ಮ್ಯಾಚ್ ವಿನ್ನರ್​ಗಳ ಕಮ್​​ಬ್ಯಾಕ್​ಗೆ ಕೌಂಟ್​ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಇವರ ಎಂಟ್ರಿಯಿಂದ ತಂಡದಲ್ಲಿನ ಅನೇಕರಿಗೆ ನಡುಕ ಶುರುವಾಗಿದೆ.

ವಿಶ್ವಕಪ್​​​ಗೆ ಪಂತ್ ರೆಡಿ, ಇಶನ್​ ಕಿಶನ್​​​​​-ಭರತ್​​​​​​​ ಕಥೆ ಕ್ಲೋಸ್​​​​

ರಿಷಬ್​ ಪಂತ್ ಈ ಸಿಡಿಗುಂಡಿಲ್ಲದ ಭಾರತವನ್ನ ಊಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಅಷ್ಟರ ಮಟ್ಟಿಗೆ ಟೆರರ್ ಬ್ಯಾಟ್ಸ್​ಮನ್​​ ಗೈರು ಕಾಡ್ತಿದೆ. ಕಳೆದ ಡಿಸೆಂಬರ್​​​ನಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ಪಂತ್​​​, ಮತ್ತೆ ಫ್ಯಾನ್ಸ್ ರಂಜಿಸಲು ಸಜ್ಜಾಗಿದ್ದಾರೆ. ಎನ್​ಸಿಎ ಪುನಶ್ಚೇತನ ಶಿಬಿರದಲ್ಲಿರೋ ಲೆಫ್ಟಿ ದಾಂಡಿಗ ವಿಶ್ವಕಪ್​​​​ ವೇಳೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.

ಪಂತ್​​​ ಆಗಮನದಿಂದ ಭಾರತಕ್ಕೆ ನೂರಾನೆಬಲ ಬರೋದೇನೋ ನಿಜ. ಆದರೆ ಇಶನ್​​ ಕಿಶನ್​​ ಹಾಗೂ ಕೆಎಸ್ ಭರತ್ ಪಾಲಿಗೆ ಇದು ಕಷ್ಟಕರವಾಗಿರಲಿದೆ. ಯಾಕಂದ್ರೆ ಪಂತ್ ಕಮ್​ಬ್ಯಾಕ್​​ ಮಾಡಿದ್ರೆ ಇಬ್ಬರಿಗೆ ಗೇಟ್​ಪಾಸ್​​​ ಗ್ಯಾರಂಟಿ. ಇಶನ್ ಕಿಶನ್​​ ಶಾರ್ಟ್​​​ ಫಾಮ್ಯಾಟ್​ನಲ್ಲಿ ಸ್ಥಾನ ಕಳೆದುಕೊಂಡ್ರೆ ಭರತ್​​​​​​ರ ರೆಡ್​​​ಬಾಲ್​ ಕ್ರಿಕೆಟ್ ಕ್ಲೋಸ್ ಆಗಲಿದೆ.

ಬುಮ್ರಾ ಆಗಮನದಿಂದ ಯುವವೇಗಿಗಳ ಸ್ಥಾನಕ್ಕೆ ಕುತ್ತು..!

ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಬಿದ್ದು 9 ತಿಂಗಳು ಕಳೆದಿದೆ. 2022ರ ಟಿ20 ವಿಶ್ವಕಪ್​​, ಏಷ್ಯಾಕಪ್​ ಹಾಗೂ WTC ಯನ್ನ ಮಿಸ್ ಮಾಡಿಕೊಂಡಿದ್ರು. ಸದ್ಯ ಕೀ ಬೌಲರ್​​​​​ ಇಂಜುರಿಯಿಂದ ರಿಕವರಿ ಆಗ್ತಿದ್ದು, ಏಷ್ಯಾಕಪ್​​ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಡೆತ್ ಸ್ಪೆಶಲಿಸ್ಟ್​​​​ ಮರಳಿದ್ರೆ ಯುವ ವೇಗಿಗಳ ಸ್ಥಾನಕ್ಕೆ ಕುತ್ತು ಬರಲಿದೆ. ಉಮ್ರಾನ್ ಮಲ್ಲಿಕ್​​​​, ಉಮೇಶ್ ಯಾದವ್​​​ ಹಾಗೂ ಜಯ್​ದೇವ್​ ಉನಾಡ್ಕಟ್​​​ ಅವಕಾಶ ವಂಚಿತರಾಗಲಿದ್ದಾರೆ.

ಏಷ್ಯಾಕಪ್​​​​ನಲ್ಲಿ ಆರ್ಭಟಿಸಲು ಕನ್ನಡಿಗ ರಾಹುಲ್​ ಸಿದ್ಧ..!

2023ರ ಐಪಿಎಲ್​​​ ವೇಳೆ ಇಂಜುರಿಗೆ ತುತ್ತಾಗಿದ್ದ ಕೆಎಲ್ ರಾಹುಲ್​​​​​ ಕಮ್​​ಬ್ಯಾಕ್​​​ ಮಾಡಲು ಸಜ್ಜಾಗಿದ್ದಾರೆ. ಲಂಡನ್​​ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಎನ್​ಸಿಎಯ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಡೇ ಬೈ ಡೇ ಚೇತರಿಸಿಕೊಳ್ತಿದ್ದು, ಏಷ್ಯಾಕಪ್​​​​​​​ನಲ್ಲಿ ಆಡುವುದು ಬಹುತೇಕ ಖಚಿತ. ರಾಹುಲ್ ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಟೆಸ್ಟ್​​​ ತಂಡದಿಂದ ಶುಭ್​​ಮನ್ ಗಿಲ್​​​​, ಕಲರ್​​​ ಜೆರ್ಸಿಯಲ್ಲಿ ಸೂರ್ಯಕುಮಾರ್​ ಯಾದವ್​​​ ಬೆಂಚ್​ ಕಾಯಬೇಕಾಗುತ್ತೆ..

ಶ್ರೇಯಸ್​​​​​​ ಕಮ್​​ಬ್ಯಾಕ್​​​.. ರಹಾನೆಗೆ ಬೆಂಚೇ ಗತಿ..

ಇನ್ನು ಸ್ಟಾರ್​​ ಪ್ಲೇಯರ್​​ ಶ್ರೇಯಸ್​ ಅಯ್ಯರ್ ಕೂಡ ಗಾಯದಿಂದ ತಂಡಕ್ಕೆ ಮರಳಲು ಎದುರು ನೋಡ್ತಿದ್ದಾರೆ. ಅಂದುಕೊಂಡಂತೆ ನಡೆದ್ರೆ ಮುಂಬೈಕರ್​​​ ವಿಶ್ವಕಪ್​ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಯಂಗ್​​​​​ಪ್ಲೇಯರ್ ಎಂಟ್ರಿಯಿಂದ ಅಜಿಂಕ್ಯಾ ರಹಾನೆಗೆ ಬೆಂಚ್​​​​​​​​ ಗತಿಯಾಗಲಿದೆ. ಇನ್ನು ಶಾರ್ಟ್​​ ಫಾಮ್ಯಾಟ್​​​ನಲ್ಲಿ ಸೂರ್ಯ-ಶ್ರೇಯಸ್ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ.

ಒಂದನ್ನ ಪಡೆದು​​ಕೊಂಡ್ರೆ, ಒಂದನ್ನ ಕಳೆದುಕೊಳ್ಳಬೇಕಾದ ಸ್ಥಿತಿ ಟೀಮ್ ಇಂಡಿಯಾಗೆ ಬರಲಿದೆ. ಆದರೆ ಯಾರೇ ಹೋಗಿ ಬರಲಿ. ಮೆನ್​​​ ಇನ್ ಬ್ಲೂ ಪಡೆ ಮಾತ್ರ ಗೆಲುವಿನ ಝೆಂಡಾ ಹಾರಿಸಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More