newsfirstkannada.com

ದುಡ್ಡಿಗಾಗಿ ಕಳ್ಳತನಕ್ಕಿಳಿದ ಫ್ಯಾಮಿಲಿ; ಈ ಖತರ್ನಾಕ್​ ಗ್ಯಾಂಗ್​ ಕಥೆ ಕೇಳಿದ್ರೆ ಶಾಕ್​ ಆಗ್ತೀರಾ!

Share :

25-07-2023

    ಪೊಲೀಸರಿಂದ ಬರೋಬ್ಬರಿ 150 ಸಿಸಿಟಿವಿ ಪರಿಶೀಲನೆ

    ಕೊನೆಗೂ ಪೊಲೀಸ್​ಗೆ ಸಿಕ್ಕಿಬಿದ್ದ ಖತರ್ನಾಕ್​​​ ಫ್ಯಾಮಿಲಿ

    ಈ ಖತರ್ನಾಕ್​ ಫ್ಯಾಮಿಲಿ ಕಾಯಕವೇ ಹಗಲು ದರೋಡೆ

ಬೆಂಗಳೂರು: ಪೊಲೀಸರು ಕೈ ಇಟ್ಟರೆ ಯಾವುದು ಅಸಾಧ್ಯವಲ್ಲ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಈ ಪ್ರಕರಣವನ್ನ ಭೇದಿಸುವುದಕ್ಕೆ ಪೊಲೀಸರು ಬರೋಬ್ಬರಿ 150 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕೊನೆಗೂ ಖತರ್ನಾಕ್​ ಕಳ್ಳರ ಗ್ಯಾಂಗ್ ಅನ್ನು ಅರೆಸ್ಟ್​ ಮಾಡಿದೆ.

ಇನ್ನು, ಪೊಲೀಸರಿಂದ ಬಂಧನಕ್ಕೆ ಒಳಗಾದ ಆರೋಪಿಗಳು ಕನ್ಯಾಕುಮಾರ್, ಮಹೇಶ್, ಕದ್ರಿ ವೇಲು, ಸುಂದರ್​​​ ರಾಜ್​ ಎಂಬುವರು. ಇವರು ದೊಡ್ಡಪ್ಪ ,ಚಿಕ್ಕಪ್ಪ, ಮಾವನ ಸೋದರಳಿಯ ಹೀಗೆ ಸಂಬಂಧಿಕರು. ಈ ಗ್ಯಾಂಗ್​​ ಕಸುಬು ಪಿಕ್​ ಪಾಕೆಟ್, ಸರಗಳ್ಳತನ.

ಖತರ್ನಾಕ್​ ಗ್ಯಾಂಗ್​​ ಹಿನ್ನೆಲೆಯೇನು?

ಖತರ್ನಾಕ್​ ಗ್ಯಾಂಗ್ ಮೊದಲೇ ಪ್ಲಾನ್​ ಮಾಡಿಕೊಂಡು ಬೆಳ್ಳಗ್ಗೆಯಿಂದಲೇ ತಮ್ಮ ಕಾಯಕ ಶುರು ಮಾಡುತ್ತಾರೆ. ಬಲಗಾಲಿಟ್ಟು ಕಲಾಸಿಪಾಳ್ಯಕ್ಕೆ ಬರೋ ಈ ಆರೋಪಿಗಳು ನಾಲ್ಕು ವಿಭಾಗಗಳಾಗಿ ವಿಂಗಡಣೆಗೊಂಡು ತಮ್ಮ ಕೈಚಳಕ ತೋರಿಸ್ತಾರೆ. ಪ್ರಯಾಣಿಕರ ಸೋಗಿನಲ್ಲೇ ಬಂದು ಬಸ್ ಹತ್ತುತ್ತಾರೆ. ಹೇಗಾದರೂ ಮಾಡಿ ಬಹಳ ಸಲೀಸಾಗಿ ಪಿಕ್​ ಪಾಕ್ಯೇಟ್​ ಮಾಡೇ ಬಿಡುತ್ತಾರೆ. ಇದಿಷ್ಟು ಮಾತ್ರವಲ್ಲದೆ ಈ ಕಳ್ಳರ ಕುಟುಂಬ ಸೆಂಟಿಮೆಂಟ್​​ ಇಟ್ಟುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕದ್ದ ಚೈನ್​ ಮಾತ್ರ ತಮ್ಮ ಬಳಿ ಇರಿಸಿಕೊಂಡು ಬಳಿ ತಾಳಿಯನ್ನ ಹುಂಡಿಯಲ್ಲಿ ಹಾಕಿದ್ರಂತೆ. ಕೇವಲ ಕಲಾಸಿಪಾಳ್ಯ ಮಾತ್ರವಲ್ಲದೆ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ವಿಲ್ಸನ್ ಗಾರ್ಡನ್, ಶಾಂತಿನಗರದಲ್ಲೂ ಜನರನ್ನ ಬಹಳ ಸಲೀಸಾಗಿ ಯಾಮಾರಿಸುತ್ತಿದ್ದರು. ಬನಶಂಕರಿ, ಶ್ರೀರಾಮಪುರದಲ್ಲಿ ಮನೆ ಮಾಡಿಕೊಂಡಿದ್ದ ಈ ಗ್ಯಾಂಗ್​, ಬಳಿಕ ಕದ್ದ ವಸ್ತುಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದರು.

ಅದೇ ರೀತಿ ಕಳೆದ ವಾರ BMTC ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವೆಂಕಟರೆಡ್ಡಿ ಎಂಬುವವರಿಂದ 70 ಸಾವಿರ ಹಣ ಹಾಗೂ ತಾಳಿ ಚೈನ್​ ಕದ್ದು ಎಸ್ಕೇಪ್​ ಆಗಿದ್ರು. ಸದ್ಯ ಎಸ್​​​.ಆರ್​​ ನಗರ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಿರಿಯ ಅಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಕಳ್ಳತನ ಹಾದಿಯಲ್ಲೇ ಎಲ್ಲರೂ ನಡೆಯುತ್ತಿದ್ದಾರೆ ಎಂಬುದು ಮಾತ್ರ ವಿಪರ್ಯಾಸ.

ದುಡ್ಡಿಗಾಗಿ ಕಳ್ಳತನಕ್ಕಿಳಿದ ಫ್ಯಾಮಿಲಿ; ಈ ಖತರ್ನಾಕ್​ ಗ್ಯಾಂಗ್​ ಕಥೆ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/07/Gang_Arrest.jpg

    ಪೊಲೀಸರಿಂದ ಬರೋಬ್ಬರಿ 150 ಸಿಸಿಟಿವಿ ಪರಿಶೀಲನೆ

    ಕೊನೆಗೂ ಪೊಲೀಸ್​ಗೆ ಸಿಕ್ಕಿಬಿದ್ದ ಖತರ್ನಾಕ್​​​ ಫ್ಯಾಮಿಲಿ

    ಈ ಖತರ್ನಾಕ್​ ಫ್ಯಾಮಿಲಿ ಕಾಯಕವೇ ಹಗಲು ದರೋಡೆ

ಬೆಂಗಳೂರು: ಪೊಲೀಸರು ಕೈ ಇಟ್ಟರೆ ಯಾವುದು ಅಸಾಧ್ಯವಲ್ಲ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಈ ಪ್ರಕರಣವನ್ನ ಭೇದಿಸುವುದಕ್ಕೆ ಪೊಲೀಸರು ಬರೋಬ್ಬರಿ 150 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕೊನೆಗೂ ಖತರ್ನಾಕ್​ ಕಳ್ಳರ ಗ್ಯಾಂಗ್ ಅನ್ನು ಅರೆಸ್ಟ್​ ಮಾಡಿದೆ.

ಇನ್ನು, ಪೊಲೀಸರಿಂದ ಬಂಧನಕ್ಕೆ ಒಳಗಾದ ಆರೋಪಿಗಳು ಕನ್ಯಾಕುಮಾರ್, ಮಹೇಶ್, ಕದ್ರಿ ವೇಲು, ಸುಂದರ್​​​ ರಾಜ್​ ಎಂಬುವರು. ಇವರು ದೊಡ್ಡಪ್ಪ ,ಚಿಕ್ಕಪ್ಪ, ಮಾವನ ಸೋದರಳಿಯ ಹೀಗೆ ಸಂಬಂಧಿಕರು. ಈ ಗ್ಯಾಂಗ್​​ ಕಸುಬು ಪಿಕ್​ ಪಾಕೆಟ್, ಸರಗಳ್ಳತನ.

ಖತರ್ನಾಕ್​ ಗ್ಯಾಂಗ್​​ ಹಿನ್ನೆಲೆಯೇನು?

ಖತರ್ನಾಕ್​ ಗ್ಯಾಂಗ್ ಮೊದಲೇ ಪ್ಲಾನ್​ ಮಾಡಿಕೊಂಡು ಬೆಳ್ಳಗ್ಗೆಯಿಂದಲೇ ತಮ್ಮ ಕಾಯಕ ಶುರು ಮಾಡುತ್ತಾರೆ. ಬಲಗಾಲಿಟ್ಟು ಕಲಾಸಿಪಾಳ್ಯಕ್ಕೆ ಬರೋ ಈ ಆರೋಪಿಗಳು ನಾಲ್ಕು ವಿಭಾಗಗಳಾಗಿ ವಿಂಗಡಣೆಗೊಂಡು ತಮ್ಮ ಕೈಚಳಕ ತೋರಿಸ್ತಾರೆ. ಪ್ರಯಾಣಿಕರ ಸೋಗಿನಲ್ಲೇ ಬಂದು ಬಸ್ ಹತ್ತುತ್ತಾರೆ. ಹೇಗಾದರೂ ಮಾಡಿ ಬಹಳ ಸಲೀಸಾಗಿ ಪಿಕ್​ ಪಾಕ್ಯೇಟ್​ ಮಾಡೇ ಬಿಡುತ್ತಾರೆ. ಇದಿಷ್ಟು ಮಾತ್ರವಲ್ಲದೆ ಈ ಕಳ್ಳರ ಕುಟುಂಬ ಸೆಂಟಿಮೆಂಟ್​​ ಇಟ್ಟುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕದ್ದ ಚೈನ್​ ಮಾತ್ರ ತಮ್ಮ ಬಳಿ ಇರಿಸಿಕೊಂಡು ಬಳಿ ತಾಳಿಯನ್ನ ಹುಂಡಿಯಲ್ಲಿ ಹಾಕಿದ್ರಂತೆ. ಕೇವಲ ಕಲಾಸಿಪಾಳ್ಯ ಮಾತ್ರವಲ್ಲದೆ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ವಿಲ್ಸನ್ ಗಾರ್ಡನ್, ಶಾಂತಿನಗರದಲ್ಲೂ ಜನರನ್ನ ಬಹಳ ಸಲೀಸಾಗಿ ಯಾಮಾರಿಸುತ್ತಿದ್ದರು. ಬನಶಂಕರಿ, ಶ್ರೀರಾಮಪುರದಲ್ಲಿ ಮನೆ ಮಾಡಿಕೊಂಡಿದ್ದ ಈ ಗ್ಯಾಂಗ್​, ಬಳಿಕ ಕದ್ದ ವಸ್ತುಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದರು.

ಅದೇ ರೀತಿ ಕಳೆದ ವಾರ BMTC ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವೆಂಕಟರೆಡ್ಡಿ ಎಂಬುವವರಿಂದ 70 ಸಾವಿರ ಹಣ ಹಾಗೂ ತಾಳಿ ಚೈನ್​ ಕದ್ದು ಎಸ್ಕೇಪ್​ ಆಗಿದ್ರು. ಸದ್ಯ ಎಸ್​​​.ಆರ್​​ ನಗರ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಿರಿಯ ಅಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಕಳ್ಳತನ ಹಾದಿಯಲ್ಲೇ ಎಲ್ಲರೂ ನಡೆಯುತ್ತಿದ್ದಾರೆ ಎಂಬುದು ಮಾತ್ರ ವಿಪರ್ಯಾಸ.

Load More