newsfirstkannada.com

ಯಶ್​​ ಇಂದಿನ ಸಕ್ಸಸ್​​ಗೆ ಕಾರಣವೇನು..? ಅಂದು ರಾಕಿಭಾಯ್​​​ಗೆ ಆಗಿತ್ತು ಭಾರೀ ಅವಮಾನ!

Share :

25-06-2023

    ಯಶ್​ ನಂ.1 ಆಗಬೇಕು ಅಂತ ಅಂದುಕೊಂಡಿದ್ದು ಯಾವಾಗ..?

    ನಟ ರಾಕಿಂಗ್​ ಸ್ಟಾರ್ ಯಶ್​​ಗೆ ಕಿಚ್ಚು ಹಚ್ಚಿದ ಆ ಘಟನೆ ಇದೇ!

    'ಡ್ರಾಮಾ' ಶೂಟಿಂಗ್ ವೇಳೆ ಯಶ್​ಗೆ ಆಗಿತ್ತು ಬಹಳ ಬೇಸರ..!

ರಾಕಿಂಗ್ ಸ್ಟಾರ್​ ಸದ್ಯ ಈ ಹೆಸರು ಪ್ಯಾನ್ ಇಂಡಿಯಾದ ಪವರ್​ ಸ್ಟೇಷನ್​ ​ಅಂತಾನೇ ಹೇಳಬಹುದು. ಇಡೀ ಭಾರತೀಯ ಸಿನಿಮಾರಂಗ ಇವತ್ತು ರಾಕಿಂಗ್ ಸ್ಟಾರ್​ ಕಡೆ ನೋಡುತ್ತಿದೆ. ಯಶ್​ ಹೋದಲ್ಲಿ ಬಂದಲ್ಲೆಲ್ಲಾ ಸಲಾಂ ರಾಕಿ ಭಾಯ್ ಅಂತ ಸಲಾಮ್ ಹೊಡೆಯೋ ಥರಾ ಆಗಿದೆ. ಯಶ್​ ಅನ್ನೋದೀಗ ಒಂದು ಟ್ರೆಂಡ್​​ ಕೂಡ ಹೌದು ಹೊಸ ಬ್ರ್ಯಾಂಡು ಹೌದು. ಇಂದಿನ ಮಕ್ಕಳು ನಿಮ್ಮ ಫೆವರೇಟ್ ಹೀರೋ ಯಾರು ಅಂತ ಕೇಳಿದ್ರೆ ಸಾಕು ಥಟ್​ ಅಂತ ಎರಡನೇ ಆಪ್ಷನ್ ಇಲ್ಲದೇ ರಾಕಿ ಭಾಯ್ ಅಂತಾರೆ. ಆ ಮಟ್ಟಕ್ಕೆ ಯಶ್​ ಇಂಪ್ಯಾಕ್ಟ್​ ಮಾಡಿದ್ದಾರೆ.

ಹೌದು ಯಶ್​ ಇವತ್ತು ಇಡೀ ಸಿನಿಮಾ ಪ್ರಪಂಚ ಎದುರು ನೋಡ್ತಿರುವ ನಟ. ಕೆಜಿಎಫ್ ಸಿರೀಸ್ ಆದ್ಮೇಲಂತೂ ಯಶ್​ ಹವಾ ಮತ್ತು ಹಾವಳಿ ಬೇರೆನೆ ಲೆವಲ್​​ನಲ್ಲಿದೆ. ಇದರ ಅರಿವು ಸ್ವತಃ ಯಶ್​ ಅವರಿಗೂ ಇದ್ದು, ಹಾಗಾಗಿಯೇ​ ಹೊಸ ಸಿನಿಮಾ ಅನೌನ್ಸ್​ ಮಾಡೋಕೆ ಇಷ್ಟೊಂದು ಸಮಯ ತೆಗೆದುಕೊಳ್ತಿದ್ದಾರೆ. ಯಶ್​ ಏಕಾಏಕಿ ಸೂಪರ್​ಸ್ಟಾರ್​ ಆದವರಲ್ಲ. ಯಶ್​ ಪಕ್ಕಾ ಮಿಡಲ್ ಕ್ಲಾಸ್​ ಫ್ಯಾಮಿಲಿಯ ಹಳ್ಳಿ ಹುಡುಗ. ತಂದೆ ಸಾಮಾನ್ಯ ಬಸ್​ ಡ್ರೈವರ್. ಇಂಥಾ ಸಾಮಾನ್ಯ ಕುಟುಂಬದಿಂದ ಬಂದ ನಟ ಇವತ್ತು ಇಡೀ ವಿಶ್ವವೇ ಬೆರಗುಗುಳಿಸೋ ಥರಾ ಬೆಳೆದು ನಿಂತಿದ್ದಾರೆ ಅಂದ್ರೆ ಇದು ನಿಜಕ್ಕೂ ಸಾಧನೆಯೇ ಸರಿ.

ಒಂದು ಟೈಮ್​ಲ್ಲಿ ಪಾತ್ರಕ್ಕಾಗಿ ನಿರ್ಮಾಪಕರ ಮನೆ ಬಾಗಿಲು ಅಲೆದಿದ್ದ ಯಶ್,​ ಇವತ್ತು ಅಂಥಹ ದೊಡ್ಡ ದೊಡ್ಡ ನಿರ್ಮಾಪಕ, ನಿರ್ದೇಶಕರನ್ನೇ ತನ್ನ ಮನೆ ವಿಳಾಸ ಹುಡುಕಿಕೊಂಡು ಬರೋ ಥರಾ ಮಾಡ್ಕೊಂಡಿದ್ದಾರೆ. ‘ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಸಿನಿಮಾ ಮಾಡಿಕೊಡಿ’ ಅಂತ ಕೇಳ್ತಿದ್ರು ‘ನೋಡೋಣ ಇರಿ’ ಅಂತ ಕಾಯಿಸ್ತಿದ್ದಾರೆ. ಅಂದ್ಹಾಗೆ, ಯಶ್​ ಇಷ್ಟು ದೊಡ್ಡ ಸ್ಟಾರ್​ಡಂ ಮೇಯ್ಟಂನ್ ಮಾಡೋಕೆ ಕಾರಣ ಅವತ್ತು ತಾನು ಎದುರಿಸಿದ ಅವಮಾನಗಳು, ಟೀಕೆಗಳು ಎನ್ನಲಾಗ್ತಿದೆ. ರಾಕಿಂಗ್ ಸ್ಟಾರ್​ ಸಿನಿಮಾ ಜರ್ನಿ ನಿಮಗೆಲ್ಲಾ ಗೊತ್ತೇ ಇರುತ್ತೆ. ಅವತ್ತು ‘ಮೊಗ್ಗಿನ ಮನಸು’ ಚಿತ್ರದಲ್ಲಿ ಹೀರೋ ಆದಾಗಿಂತ ಒಂದೊಂದೇ ಮೆಟ್ಟಿಲು ಹತ್ತಿ ಇಲ್ಲಿವರೆಗೂ ಬಂದಿದ್ದಾರೆ. ಸೋಲು ಗೆಲುವುಗಳನ್ನ ಕಂಡಿದ್ದಾರೆ. ಆದ್ರೆ ಯಶ್​ ಎದುರಿಸಿದ ಅವಮಾನ, ಯಶ್​ ಅವರಲ್ಲಿ ಹೊತ್ತಿದ ಆ ಕಿಚ್ಚಿನ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.

ಯಶ್​ ಸಿನಿಮಾರಂಗಕ್ಕೆ ಬಂದಾಗ ನಾನು ನಂಬರ್​ 1 ಹೀರೋ ಆಗಬೇಕು ಅನ್ನೋ ಹಠ ಇರಲಿಲ್ಲ. ನಾನೊಬ್ಬ ಹೀರೋ ಆದ್ರೆ ಸಾಕು ಅಂದ್ಕೊಂಡು ಬಂದವರು ಯಶ್​. ಆರಂಭದ ದಿನಗಳಲ್ಲಿ ಪ್ರತಿಯೊಬ್ಬರ ತುಡಿತ, ಭಾವನೆ ಹಿಂಗೆ ಇರುತ್ತೆ. ಆದ್ರೆ ಸಿನಿಮಾ ಜಗತ್ತಿನಲ್ಲಿ ಸಿಗುವ ಅನುಭವಗಳು, ಆಗುವ ಅವಮಾನಗಳು ಆ ಭಾವನೆಯನ್ನ ಬಡಿದೆಬ್ಬಿಸುತ್ತೆ. ಕನಸೆಂಬ ಕುದುರೆಯನ್ನೇರಲು ಹುಚ್ಚೆಬ್ಬಿಸುತ್ತೆ. ನಾನೇನಾದ್ರು ಸಾಧಿಸಲೇಬೇಕು ಅನ್ನೋ ಕಿಡಿ ಹೊತ್ತಿಸುತ್ತದೆ. ಇಂಥದ್ದೇ ಕಿಡಿವೊಂದು ಅವತ್ತು ಯಶ್​ಗೆ ಹೊತ್ತಿದ್ದಕ್ಕೆ ಇವತ್ತು ನಂಬರ್ 1 ಸ್ಟಾರ್​ ಆಗಿದ್ದಾರೆ ಎನ್ನುವ ಘಟನೆಯೊಂದನ್ನ ನೀವು ತಿಳಿಯಲೇಬೇಕು. ಯಶ್​ ಪಕ್ಕಾ ಕ್ಲಿಯರ್ ಮೈಂಡ್​ಸೈಟ್​ ಹೊಂದಿರುವ ವ್ಯಕ್ತಿತ್ವ. ಏನ್ ಹೇಳ್ತಾರೋ ಅದನ್ನೇ ಮಾಡ್ತಾರೆ. ಏನ್ ಮಾಡಬೇಕು ಅಂದ್ಕೊಂಡು ಇರ್ತಾರೋ ಅದನ್ನೇ ಹೇಳ್ತಾರೆ. ಅವತ್ತು ಕೆಜಿಎಫ್​ ಮಾಡೋ ಮುಂಚೆ ‘ನೋಡ್ತಾ ಇರಿ ಕನ್ನಡ ಇಂಡಸ್ಟ್ರಿನ ಎಲ್ಲರೂ ತಿರುಗಿನೋಡೋಥಾರ ಸಿನಿಮಾ ಮಾಡ್ತೀನಿ’ ಅಂತ ಮಾತುಕೊಟ್ರು. ಕೆಜಿಎಫ್​ ವಿಷ್ಯದಲ್ಲಿ ಆ ಮಾತು ನಿಜ ಆಯ್ತು. ‘ಕೆಜಿಎಫ್ ಚಾಪ್ಟರ್ 2 ಅದಕ್ಕಿಂತ ಇನ್ನೊಂದು ಲೆವೆಲ್​ ಜಾಸ್ತಿ ಇರುತ್ತೆ’ ಅಂದ್ರು. ಚಾಪ್ಟರ್ 2 ಬಂದ್ಮೇಲೆ ಅದು ನಿಜ ಆಯ್ತು.. ಈಗ ‘ಇಡೀ ವಿಶ್ವವೇ ಸ್ಯಾಂಡಲ್​ವುಡ್​ ಕಡೆ ನೋಡ್ತಿದೆ, ಅಂಥದ್ದೇ ಸಿನಿಮಾ ಮಾಡ್ತೀನಿ’ ಅಂತಿದ್ದಾರೆ. ಯಶ್​ ಹೇಳಿದ್ರೆ ಅದನ್ನ ಸಿಲ್ಲಿಯಾಗಿ ತಗೊಳ್ಳೋಂಗೆ ಇಲ್ಲ. ಪಕ್ಕಾ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ಈಗ ಗಟ್ಟಿಯಾಗಿದೆ. ಹೀಗೆ ಯಶ್​ ಏನಾದರೂ ಅಂದ್ಕೊಂಡ್ರೆ ಅದನ್ನ ಸಾಧಿಸೋವರೆಗೂ ಸುಮ್ಮನೆ ಕೂರೂ ಆಸಾಮಿ ಅಂತೂ ಅಲ್ಲವೇ ಅಲ್ಲ.. ಅವತ್ತು ಅಷ್ಟೇ ನಾನು ನಂಬರ್ 1 ಆಗ್ಬೇಕು ಅಂತ ಶಪಥ ಮಾಡ್ಕೊಂಡ್ರು. ಇವತ್ತು ನಂಬರ್ 1 ಎನಿಸಿಕೊಳ್ತಿದ್ದಾರೆ.

ಯಶ್​ಗೆ ನಂ 1 ಆಗ್ಬೇಕು ಅನ್ನೋ ಕಿಡಿ ಹೊತ್ತಿದ್ಯಾವಾಗ?

‘ಡ್ರಾಮ್’ ಶೂಟಿಂಗ್ ವೇಳೆ ನಡೆದ ಆ ಕಹಿ ಘಟನೆ ಏನು?

ಸೀರಿಯಲ್​ ಮಾಡ್ತಿದ್ದ ಯಶ್​ ‘ಜಂಬದ ಹುಡುಗಿ’ ಚಿತ್ರದೊಂದಿಗೆ ಸ್ಯಾಂಡಲ್​ವುಡ್​ ಪ್ರವೇಶಿಸಿದ್ರು. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಗಮನ ಸೆಳೆದು ಆಮೇಲೆ ಒಂದಿಷ್ಟು ಸಿನಿಮಾಗಳನ್ನ ಮಾಡಿದ್ರು. ‘ಕಿರಾತಕ’ ಯಶ್​ಗೆ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಯಶ್​ ಸಿನಿಮಾ ಲೈಫೇ ಬದಲಾಯ್ತು. ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಮಾಸ್​ ಮಹಾರಾಜನಾಗಿ ನಿಂತ್ಕೊಂಡ್ರು. ಈ ನಡುವೆ ಯೋಗರಾಜ್ ಭಟ್​ ನಿರ್ದೇಶನದಲ್ಲಿ ‘ಡ್ರಾಮಾ’ ಎನ್ನುವ ಸಿನಿಮಾ ಮಾಡಿದ ಯಶ್​ಗೆ ಇದು ಬಹುದೊಡ್ಡ ಟರ್ನಿಂಗ್ ಪಾಯಿಂಟ್​ ಅಂದ್ರೆ ನಂಬಲೇಬೇಕು. ‘ಡ್ರಾಮಾ’ ಕಮರ್ಷಿಯಲ್ ಸೂಪರ್​ಹಿಟ್​ ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಸಿನಿಮಾ ಮಾಡ್ಬೇಕಾದ್ರೆ ಯಶ್​ ಒಡಲೊಳಗೆ ಹೊತ್ತಿದ ಕಿಡಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವತ್ತು ‘ಡ್ರಾಮಾ’ ಸೆಟ್​ನಲ್ಲಿ ನಡೆದ ಆ ಘಟನೆ ರಾಕಿಂಗ್ ಸ್ಟಾರ್​​ ಮನಸ್ಥಿತಿಯನ್ನೇ ಬದಲಿಸಿಬಿಡ್ತು. ಸೂಪರ್​ಸ್ಟಾರ್​ ಆಗ್ಬೇಕು ಅನ್ನೋ ಹಠ ಹತ್ಕೊಳ್ತು. ನಂಬರ್ ಒನ್​​ ಆಗಬೇಕು ಅನ್ನೋ ಛಲ ಹುಟ್ಕೊಳ್ತು. ‘ಕಿರಾತಕ’ ಸಿನಿಮಾ ಮಾಡಬೇಕಾದರೆ ಯಶ್​ ಸಖತ್ ಸ್ಲಿಮ್ ಆಗಿದ್ರು. ಆದ್ರೆ ‘ಡ್ರಾಮಾ’ ಆರಂಭಿಸುವಷ್ಟರಲ್ಲಿ ಯಶ್​ ಸ್ವಲ್ಪ ದಪ್ಪ ಆಗಿಬಿಟ್ಟರು. ಬಹುಶಃ ಆ ಪಾತ್ರಕ್ಕೆ ಹಾಗೇ ಬೇಕಿತ್ತೋ ಏನು. ಎಲ್ಲವೂ ಚೆನ್ನಾಗಿ ನಡೀತಿರಬೇಕಾದ್ರೆ ‘ಡ್ರಾಮಾ’ ಚಿತ್ರದಲ್ಲಿ ಒಂದು ಫೈಟ್​ ಸೀನ್ ಬರುತ್ತೆ. ಈ ಫೈಟ್​ನಲ್ಲಿ ಯಶ್ ಓಡಿ ಬಂದು​ ಬಾಗಿದ ತೆಂಗಿನಮರದ ಮೇಲೆ ಹತ್ತಿ ರಿವರ್ಸ್ ಜಂಪ್ ಮಾಡಬೇಕಿತ್ತು. ಎಷ್ಟೇ ಟೇಕ್ ತಗೊಂಡ್ರು ಈ ಸೀನ್​ ಓಕೆ ಆಗ್ತಿರಲಿಲ್ಲ. ಇದರಿಂದ ಅಪ್​ಸೆಟ್​ ಆದ ಫೈಟ್​ ಮಾಸ್ಟರ್​, ಯಶ್​ಗೆ ಬಾಯಿಗೆ ಬಂದಂಗೆ ಬೈದ್ರಂತೆ. ‘ಯಾರೀ ಇವನನ್ನ ಎಲ್ಲಿಂದಾ ಕರ್ಕೊಂಡು ಬರ್ತೀರಾ, ಒಂದು ಫೈಟ್ ಮಾಡೋಕೆ ಆಗ್ಲಿಲ್ಲ ಅಂದ್ರೆ ಇನ್ಯಾವ ಥರಾ ಹೀರೋ ಆಗ್ತಾರೆ’ ಅಂತ ರೇಗಾಡಿದ್ರಂತೆ. ಇದನ್ನ ದೂರದಿಂದ ಕೇಳಿದ ಯಶ್​ ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡ್ರಂತೆ.

ಶೂಟಿಂಗ್ ಅರ್ಧಕ್ಕೆ ಬಿಟ್ಟು ರೂಂಗೆ ಹೋಗಿ ಕಣ್ಣೀರು ಕೂಡ ಹಾಕಿದ್ರಂತೆ. ಆದ್ರೆ ಇದನ್ನ ಸವಾಲಾಗಿ ಸ್ವೀಕರಿಸಿದ ಯಶ್​, ಅವತ್ತೇ ಶಪಥ ಮಾಡಿದ್ರಂತೆ. ‘ನನ್ನ ಟೈಮ್ ಬರುತ್ತೆ, ಆಮೇಲೆ ಒಂದೇ ಒಂದು ಟೇಕ್​ನಲ್ಲಿ ಫೈಟ್ ಮಾಡೋಥರಾ ಆಗ್ತೀನಿ ನೋಡು’ ಅಂತ ಅವತ್ತಿನ ಸೆಟ್​ನಲ್ಲಿ ಕ್ಲಾಪ್ ಬಾಯ್​ ಆಗಿದ್ದವನ ಹತ್ರಾ ಆಕ್ರೋಶ ತೋಡಿಕೊಂಡಿದ್ರಂತೆ ಯಶ್​.. ಅವತ್ತು ಆ ಫೈಟ್​ ಮಾಸ್ಟರ್​​ ಅವಮಾನಿಸಿದ ಕಿಚ್ಚು ಯಶ್​ ಅವರಲ್ಲಿ ಕೊತ ಕೊತ ಅಂತ ಉರಿದಿತ್ತು. ನಾನು ಸೂಪರ್​ಸ್ಟಾರ್​ ಆಗ್ಬೇಕು, ನಾನು ನಂಬರ್ 1 ನಟ ಆಗ್ಬೇಕು ಅನ್ನೋ ಕಿಡಿ ಹೊತ್ತಿತ್ತು. ಇದೇ ಕೋಪ, ಇದೇ ಆಕ್ರೋಶದಲ್ಲಿ ಅರ್ಧಕ್ಕೆ ಬಿಟ್ಟಿದ ಸೀನ್​ನ ಮತ್ತೆ ಹೋಗಿ ಪೂರ್ಣಗೊಳಿಸಿದ್ರಂತೆ. ಆದ್ರೆ ಈ ಸಲ ಒಂದೇ ಟೇಕ್​ನಲ್ಲಿ ಆ ಸೀನ್​ನ ಮುಗಿಸಿದ್ರಂತೆ ರಾಕಿಂಗ್ ಸ್ಟಾರ್.

ಪ್ರತಿಯೊಬ್ಬರಲ್ಲೂ ಇಂಥದ್ದೇ ಒಂದು ಕಿಚ್ಚಿರುತ್ತೆ. ಅದಕ್ಕೆ ಕಿಡಿ ಹಚ್ಚುವ ಘಟನೆಗಳು ಆದಾಗ ಮಾತ್ರ ಇಂಥಹ ಹಠ ಹುಟ್ಟೋಕೆ ಸಾಧ್ಯ. ಇದು ಸಿನಿಮಾ ಆಗಿರಬಹುದು ಅಥವಾ ಇನ್ಯಾವುದೇ ಕೆಲಸ ಆಗಿರಬಹುದು. ಅವತ್ತು ಡ್ರಾಮಾ ಸೆಟ್​ನಲ್ಲಿ ನಡೆದ ಆ ಘಟನೆ ಯಶ್​ ಮನಸ್ಸಿನಲ್ಲಿ ಬೆಂಕಿಯಂಥ ಹಠ ಸೃಷ್ಟಿಸಿತು. ಆ ಹಠದ ಪ್ರತಿಫಲವೇ ಇವತ್ತು ರಾಕಿ ಭಾಯ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಹತ್ತಾರು ಕಾರು, ಬಂಗಲೆ, ಸುತ್ತಮುತ್ತ ಅಸಿಸ್ಟಂಟ್​ಗಳು, ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಯಶ್​ ಜೀವನದಲ್ಲಿ ನಡೆದ ಒಂದು ಕಿಚ್ಚಿನ ಘಟನೆ. ಇಂಥದ್ದೇ ಹತ್ತು ಹಲವು ಘಟನೆಗಳು ಅವರ ಲೈಫ್​ಲ್ಲಿ ನಡೆದಿರಬಹುದು. ಅದೇನೇ ಇರಲಿ, ಯಶ್​ ಇವತ್ತು ನಂಬರ್ 1 ನಟ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಯಶ್​​ ಇಂದಿನ ಸಕ್ಸಸ್​​ಗೆ ಕಾರಣವೇನು..? ಅಂದು ರಾಕಿಭಾಯ್​​​ಗೆ ಆಗಿತ್ತು ಭಾರೀ ಅವಮಾನ!

https://newsfirstlive.com/wp-content/uploads/2023/06/yash-13.jpg

    ಯಶ್​ ನಂ.1 ಆಗಬೇಕು ಅಂತ ಅಂದುಕೊಂಡಿದ್ದು ಯಾವಾಗ..?

    ನಟ ರಾಕಿಂಗ್​ ಸ್ಟಾರ್ ಯಶ್​​ಗೆ ಕಿಚ್ಚು ಹಚ್ಚಿದ ಆ ಘಟನೆ ಇದೇ!

    'ಡ್ರಾಮಾ' ಶೂಟಿಂಗ್ ವೇಳೆ ಯಶ್​ಗೆ ಆಗಿತ್ತು ಬಹಳ ಬೇಸರ..!

ರಾಕಿಂಗ್ ಸ್ಟಾರ್​ ಸದ್ಯ ಈ ಹೆಸರು ಪ್ಯಾನ್ ಇಂಡಿಯಾದ ಪವರ್​ ಸ್ಟೇಷನ್​ ​ಅಂತಾನೇ ಹೇಳಬಹುದು. ಇಡೀ ಭಾರತೀಯ ಸಿನಿಮಾರಂಗ ಇವತ್ತು ರಾಕಿಂಗ್ ಸ್ಟಾರ್​ ಕಡೆ ನೋಡುತ್ತಿದೆ. ಯಶ್​ ಹೋದಲ್ಲಿ ಬಂದಲ್ಲೆಲ್ಲಾ ಸಲಾಂ ರಾಕಿ ಭಾಯ್ ಅಂತ ಸಲಾಮ್ ಹೊಡೆಯೋ ಥರಾ ಆಗಿದೆ. ಯಶ್​ ಅನ್ನೋದೀಗ ಒಂದು ಟ್ರೆಂಡ್​​ ಕೂಡ ಹೌದು ಹೊಸ ಬ್ರ್ಯಾಂಡು ಹೌದು. ಇಂದಿನ ಮಕ್ಕಳು ನಿಮ್ಮ ಫೆವರೇಟ್ ಹೀರೋ ಯಾರು ಅಂತ ಕೇಳಿದ್ರೆ ಸಾಕು ಥಟ್​ ಅಂತ ಎರಡನೇ ಆಪ್ಷನ್ ಇಲ್ಲದೇ ರಾಕಿ ಭಾಯ್ ಅಂತಾರೆ. ಆ ಮಟ್ಟಕ್ಕೆ ಯಶ್​ ಇಂಪ್ಯಾಕ್ಟ್​ ಮಾಡಿದ್ದಾರೆ.

ಹೌದು ಯಶ್​ ಇವತ್ತು ಇಡೀ ಸಿನಿಮಾ ಪ್ರಪಂಚ ಎದುರು ನೋಡ್ತಿರುವ ನಟ. ಕೆಜಿಎಫ್ ಸಿರೀಸ್ ಆದ್ಮೇಲಂತೂ ಯಶ್​ ಹವಾ ಮತ್ತು ಹಾವಳಿ ಬೇರೆನೆ ಲೆವಲ್​​ನಲ್ಲಿದೆ. ಇದರ ಅರಿವು ಸ್ವತಃ ಯಶ್​ ಅವರಿಗೂ ಇದ್ದು, ಹಾಗಾಗಿಯೇ​ ಹೊಸ ಸಿನಿಮಾ ಅನೌನ್ಸ್​ ಮಾಡೋಕೆ ಇಷ್ಟೊಂದು ಸಮಯ ತೆಗೆದುಕೊಳ್ತಿದ್ದಾರೆ. ಯಶ್​ ಏಕಾಏಕಿ ಸೂಪರ್​ಸ್ಟಾರ್​ ಆದವರಲ್ಲ. ಯಶ್​ ಪಕ್ಕಾ ಮಿಡಲ್ ಕ್ಲಾಸ್​ ಫ್ಯಾಮಿಲಿಯ ಹಳ್ಳಿ ಹುಡುಗ. ತಂದೆ ಸಾಮಾನ್ಯ ಬಸ್​ ಡ್ರೈವರ್. ಇಂಥಾ ಸಾಮಾನ್ಯ ಕುಟುಂಬದಿಂದ ಬಂದ ನಟ ಇವತ್ತು ಇಡೀ ವಿಶ್ವವೇ ಬೆರಗುಗುಳಿಸೋ ಥರಾ ಬೆಳೆದು ನಿಂತಿದ್ದಾರೆ ಅಂದ್ರೆ ಇದು ನಿಜಕ್ಕೂ ಸಾಧನೆಯೇ ಸರಿ.

ಒಂದು ಟೈಮ್​ಲ್ಲಿ ಪಾತ್ರಕ್ಕಾಗಿ ನಿರ್ಮಾಪಕರ ಮನೆ ಬಾಗಿಲು ಅಲೆದಿದ್ದ ಯಶ್,​ ಇವತ್ತು ಅಂಥಹ ದೊಡ್ಡ ದೊಡ್ಡ ನಿರ್ಮಾಪಕ, ನಿರ್ದೇಶಕರನ್ನೇ ತನ್ನ ಮನೆ ವಿಳಾಸ ಹುಡುಕಿಕೊಂಡು ಬರೋ ಥರಾ ಮಾಡ್ಕೊಂಡಿದ್ದಾರೆ. ‘ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಸಿನಿಮಾ ಮಾಡಿಕೊಡಿ’ ಅಂತ ಕೇಳ್ತಿದ್ರು ‘ನೋಡೋಣ ಇರಿ’ ಅಂತ ಕಾಯಿಸ್ತಿದ್ದಾರೆ. ಅಂದ್ಹಾಗೆ, ಯಶ್​ ಇಷ್ಟು ದೊಡ್ಡ ಸ್ಟಾರ್​ಡಂ ಮೇಯ್ಟಂನ್ ಮಾಡೋಕೆ ಕಾರಣ ಅವತ್ತು ತಾನು ಎದುರಿಸಿದ ಅವಮಾನಗಳು, ಟೀಕೆಗಳು ಎನ್ನಲಾಗ್ತಿದೆ. ರಾಕಿಂಗ್ ಸ್ಟಾರ್​ ಸಿನಿಮಾ ಜರ್ನಿ ನಿಮಗೆಲ್ಲಾ ಗೊತ್ತೇ ಇರುತ್ತೆ. ಅವತ್ತು ‘ಮೊಗ್ಗಿನ ಮನಸು’ ಚಿತ್ರದಲ್ಲಿ ಹೀರೋ ಆದಾಗಿಂತ ಒಂದೊಂದೇ ಮೆಟ್ಟಿಲು ಹತ್ತಿ ಇಲ್ಲಿವರೆಗೂ ಬಂದಿದ್ದಾರೆ. ಸೋಲು ಗೆಲುವುಗಳನ್ನ ಕಂಡಿದ್ದಾರೆ. ಆದ್ರೆ ಯಶ್​ ಎದುರಿಸಿದ ಅವಮಾನ, ಯಶ್​ ಅವರಲ್ಲಿ ಹೊತ್ತಿದ ಆ ಕಿಚ್ಚಿನ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.

ಯಶ್​ ಸಿನಿಮಾರಂಗಕ್ಕೆ ಬಂದಾಗ ನಾನು ನಂಬರ್​ 1 ಹೀರೋ ಆಗಬೇಕು ಅನ್ನೋ ಹಠ ಇರಲಿಲ್ಲ. ನಾನೊಬ್ಬ ಹೀರೋ ಆದ್ರೆ ಸಾಕು ಅಂದ್ಕೊಂಡು ಬಂದವರು ಯಶ್​. ಆರಂಭದ ದಿನಗಳಲ್ಲಿ ಪ್ರತಿಯೊಬ್ಬರ ತುಡಿತ, ಭಾವನೆ ಹಿಂಗೆ ಇರುತ್ತೆ. ಆದ್ರೆ ಸಿನಿಮಾ ಜಗತ್ತಿನಲ್ಲಿ ಸಿಗುವ ಅನುಭವಗಳು, ಆಗುವ ಅವಮಾನಗಳು ಆ ಭಾವನೆಯನ್ನ ಬಡಿದೆಬ್ಬಿಸುತ್ತೆ. ಕನಸೆಂಬ ಕುದುರೆಯನ್ನೇರಲು ಹುಚ್ಚೆಬ್ಬಿಸುತ್ತೆ. ನಾನೇನಾದ್ರು ಸಾಧಿಸಲೇಬೇಕು ಅನ್ನೋ ಕಿಡಿ ಹೊತ್ತಿಸುತ್ತದೆ. ಇಂಥದ್ದೇ ಕಿಡಿವೊಂದು ಅವತ್ತು ಯಶ್​ಗೆ ಹೊತ್ತಿದ್ದಕ್ಕೆ ಇವತ್ತು ನಂಬರ್ 1 ಸ್ಟಾರ್​ ಆಗಿದ್ದಾರೆ ಎನ್ನುವ ಘಟನೆಯೊಂದನ್ನ ನೀವು ತಿಳಿಯಲೇಬೇಕು. ಯಶ್​ ಪಕ್ಕಾ ಕ್ಲಿಯರ್ ಮೈಂಡ್​ಸೈಟ್​ ಹೊಂದಿರುವ ವ್ಯಕ್ತಿತ್ವ. ಏನ್ ಹೇಳ್ತಾರೋ ಅದನ್ನೇ ಮಾಡ್ತಾರೆ. ಏನ್ ಮಾಡಬೇಕು ಅಂದ್ಕೊಂಡು ಇರ್ತಾರೋ ಅದನ್ನೇ ಹೇಳ್ತಾರೆ. ಅವತ್ತು ಕೆಜಿಎಫ್​ ಮಾಡೋ ಮುಂಚೆ ‘ನೋಡ್ತಾ ಇರಿ ಕನ್ನಡ ಇಂಡಸ್ಟ್ರಿನ ಎಲ್ಲರೂ ತಿರುಗಿನೋಡೋಥಾರ ಸಿನಿಮಾ ಮಾಡ್ತೀನಿ’ ಅಂತ ಮಾತುಕೊಟ್ರು. ಕೆಜಿಎಫ್​ ವಿಷ್ಯದಲ್ಲಿ ಆ ಮಾತು ನಿಜ ಆಯ್ತು. ‘ಕೆಜಿಎಫ್ ಚಾಪ್ಟರ್ 2 ಅದಕ್ಕಿಂತ ಇನ್ನೊಂದು ಲೆವೆಲ್​ ಜಾಸ್ತಿ ಇರುತ್ತೆ’ ಅಂದ್ರು. ಚಾಪ್ಟರ್ 2 ಬಂದ್ಮೇಲೆ ಅದು ನಿಜ ಆಯ್ತು.. ಈಗ ‘ಇಡೀ ವಿಶ್ವವೇ ಸ್ಯಾಂಡಲ್​ವುಡ್​ ಕಡೆ ನೋಡ್ತಿದೆ, ಅಂಥದ್ದೇ ಸಿನಿಮಾ ಮಾಡ್ತೀನಿ’ ಅಂತಿದ್ದಾರೆ. ಯಶ್​ ಹೇಳಿದ್ರೆ ಅದನ್ನ ಸಿಲ್ಲಿಯಾಗಿ ತಗೊಳ್ಳೋಂಗೆ ಇಲ್ಲ. ಪಕ್ಕಾ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ಈಗ ಗಟ್ಟಿಯಾಗಿದೆ. ಹೀಗೆ ಯಶ್​ ಏನಾದರೂ ಅಂದ್ಕೊಂಡ್ರೆ ಅದನ್ನ ಸಾಧಿಸೋವರೆಗೂ ಸುಮ್ಮನೆ ಕೂರೂ ಆಸಾಮಿ ಅಂತೂ ಅಲ್ಲವೇ ಅಲ್ಲ.. ಅವತ್ತು ಅಷ್ಟೇ ನಾನು ನಂಬರ್ 1 ಆಗ್ಬೇಕು ಅಂತ ಶಪಥ ಮಾಡ್ಕೊಂಡ್ರು. ಇವತ್ತು ನಂಬರ್ 1 ಎನಿಸಿಕೊಳ್ತಿದ್ದಾರೆ.

ಯಶ್​ಗೆ ನಂ 1 ಆಗ್ಬೇಕು ಅನ್ನೋ ಕಿಡಿ ಹೊತ್ತಿದ್ಯಾವಾಗ?

‘ಡ್ರಾಮ್’ ಶೂಟಿಂಗ್ ವೇಳೆ ನಡೆದ ಆ ಕಹಿ ಘಟನೆ ಏನು?

ಸೀರಿಯಲ್​ ಮಾಡ್ತಿದ್ದ ಯಶ್​ ‘ಜಂಬದ ಹುಡುಗಿ’ ಚಿತ್ರದೊಂದಿಗೆ ಸ್ಯಾಂಡಲ್​ವುಡ್​ ಪ್ರವೇಶಿಸಿದ್ರು. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಗಮನ ಸೆಳೆದು ಆಮೇಲೆ ಒಂದಿಷ್ಟು ಸಿನಿಮಾಗಳನ್ನ ಮಾಡಿದ್ರು. ‘ಕಿರಾತಕ’ ಯಶ್​ಗೆ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಯಶ್​ ಸಿನಿಮಾ ಲೈಫೇ ಬದಲಾಯ್ತು. ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಮಾಸ್​ ಮಹಾರಾಜನಾಗಿ ನಿಂತ್ಕೊಂಡ್ರು. ಈ ನಡುವೆ ಯೋಗರಾಜ್ ಭಟ್​ ನಿರ್ದೇಶನದಲ್ಲಿ ‘ಡ್ರಾಮಾ’ ಎನ್ನುವ ಸಿನಿಮಾ ಮಾಡಿದ ಯಶ್​ಗೆ ಇದು ಬಹುದೊಡ್ಡ ಟರ್ನಿಂಗ್ ಪಾಯಿಂಟ್​ ಅಂದ್ರೆ ನಂಬಲೇಬೇಕು. ‘ಡ್ರಾಮಾ’ ಕಮರ್ಷಿಯಲ್ ಸೂಪರ್​ಹಿಟ್​ ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಸಿನಿಮಾ ಮಾಡ್ಬೇಕಾದ್ರೆ ಯಶ್​ ಒಡಲೊಳಗೆ ಹೊತ್ತಿದ ಕಿಡಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವತ್ತು ‘ಡ್ರಾಮಾ’ ಸೆಟ್​ನಲ್ಲಿ ನಡೆದ ಆ ಘಟನೆ ರಾಕಿಂಗ್ ಸ್ಟಾರ್​​ ಮನಸ್ಥಿತಿಯನ್ನೇ ಬದಲಿಸಿಬಿಡ್ತು. ಸೂಪರ್​ಸ್ಟಾರ್​ ಆಗ್ಬೇಕು ಅನ್ನೋ ಹಠ ಹತ್ಕೊಳ್ತು. ನಂಬರ್ ಒನ್​​ ಆಗಬೇಕು ಅನ್ನೋ ಛಲ ಹುಟ್ಕೊಳ್ತು. ‘ಕಿರಾತಕ’ ಸಿನಿಮಾ ಮಾಡಬೇಕಾದರೆ ಯಶ್​ ಸಖತ್ ಸ್ಲಿಮ್ ಆಗಿದ್ರು. ಆದ್ರೆ ‘ಡ್ರಾಮಾ’ ಆರಂಭಿಸುವಷ್ಟರಲ್ಲಿ ಯಶ್​ ಸ್ವಲ್ಪ ದಪ್ಪ ಆಗಿಬಿಟ್ಟರು. ಬಹುಶಃ ಆ ಪಾತ್ರಕ್ಕೆ ಹಾಗೇ ಬೇಕಿತ್ತೋ ಏನು. ಎಲ್ಲವೂ ಚೆನ್ನಾಗಿ ನಡೀತಿರಬೇಕಾದ್ರೆ ‘ಡ್ರಾಮಾ’ ಚಿತ್ರದಲ್ಲಿ ಒಂದು ಫೈಟ್​ ಸೀನ್ ಬರುತ್ತೆ. ಈ ಫೈಟ್​ನಲ್ಲಿ ಯಶ್ ಓಡಿ ಬಂದು​ ಬಾಗಿದ ತೆಂಗಿನಮರದ ಮೇಲೆ ಹತ್ತಿ ರಿವರ್ಸ್ ಜಂಪ್ ಮಾಡಬೇಕಿತ್ತು. ಎಷ್ಟೇ ಟೇಕ್ ತಗೊಂಡ್ರು ಈ ಸೀನ್​ ಓಕೆ ಆಗ್ತಿರಲಿಲ್ಲ. ಇದರಿಂದ ಅಪ್​ಸೆಟ್​ ಆದ ಫೈಟ್​ ಮಾಸ್ಟರ್​, ಯಶ್​ಗೆ ಬಾಯಿಗೆ ಬಂದಂಗೆ ಬೈದ್ರಂತೆ. ‘ಯಾರೀ ಇವನನ್ನ ಎಲ್ಲಿಂದಾ ಕರ್ಕೊಂಡು ಬರ್ತೀರಾ, ಒಂದು ಫೈಟ್ ಮಾಡೋಕೆ ಆಗ್ಲಿಲ್ಲ ಅಂದ್ರೆ ಇನ್ಯಾವ ಥರಾ ಹೀರೋ ಆಗ್ತಾರೆ’ ಅಂತ ರೇಗಾಡಿದ್ರಂತೆ. ಇದನ್ನ ದೂರದಿಂದ ಕೇಳಿದ ಯಶ್​ ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡ್ರಂತೆ.

ಶೂಟಿಂಗ್ ಅರ್ಧಕ್ಕೆ ಬಿಟ್ಟು ರೂಂಗೆ ಹೋಗಿ ಕಣ್ಣೀರು ಕೂಡ ಹಾಕಿದ್ರಂತೆ. ಆದ್ರೆ ಇದನ್ನ ಸವಾಲಾಗಿ ಸ್ವೀಕರಿಸಿದ ಯಶ್​, ಅವತ್ತೇ ಶಪಥ ಮಾಡಿದ್ರಂತೆ. ‘ನನ್ನ ಟೈಮ್ ಬರುತ್ತೆ, ಆಮೇಲೆ ಒಂದೇ ಒಂದು ಟೇಕ್​ನಲ್ಲಿ ಫೈಟ್ ಮಾಡೋಥರಾ ಆಗ್ತೀನಿ ನೋಡು’ ಅಂತ ಅವತ್ತಿನ ಸೆಟ್​ನಲ್ಲಿ ಕ್ಲಾಪ್ ಬಾಯ್​ ಆಗಿದ್ದವನ ಹತ್ರಾ ಆಕ್ರೋಶ ತೋಡಿಕೊಂಡಿದ್ರಂತೆ ಯಶ್​.. ಅವತ್ತು ಆ ಫೈಟ್​ ಮಾಸ್ಟರ್​​ ಅವಮಾನಿಸಿದ ಕಿಚ್ಚು ಯಶ್​ ಅವರಲ್ಲಿ ಕೊತ ಕೊತ ಅಂತ ಉರಿದಿತ್ತು. ನಾನು ಸೂಪರ್​ಸ್ಟಾರ್​ ಆಗ್ಬೇಕು, ನಾನು ನಂಬರ್ 1 ನಟ ಆಗ್ಬೇಕು ಅನ್ನೋ ಕಿಡಿ ಹೊತ್ತಿತ್ತು. ಇದೇ ಕೋಪ, ಇದೇ ಆಕ್ರೋಶದಲ್ಲಿ ಅರ್ಧಕ್ಕೆ ಬಿಟ್ಟಿದ ಸೀನ್​ನ ಮತ್ತೆ ಹೋಗಿ ಪೂರ್ಣಗೊಳಿಸಿದ್ರಂತೆ. ಆದ್ರೆ ಈ ಸಲ ಒಂದೇ ಟೇಕ್​ನಲ್ಲಿ ಆ ಸೀನ್​ನ ಮುಗಿಸಿದ್ರಂತೆ ರಾಕಿಂಗ್ ಸ್ಟಾರ್.

ಪ್ರತಿಯೊಬ್ಬರಲ್ಲೂ ಇಂಥದ್ದೇ ಒಂದು ಕಿಚ್ಚಿರುತ್ತೆ. ಅದಕ್ಕೆ ಕಿಡಿ ಹಚ್ಚುವ ಘಟನೆಗಳು ಆದಾಗ ಮಾತ್ರ ಇಂಥಹ ಹಠ ಹುಟ್ಟೋಕೆ ಸಾಧ್ಯ. ಇದು ಸಿನಿಮಾ ಆಗಿರಬಹುದು ಅಥವಾ ಇನ್ಯಾವುದೇ ಕೆಲಸ ಆಗಿರಬಹುದು. ಅವತ್ತು ಡ್ರಾಮಾ ಸೆಟ್​ನಲ್ಲಿ ನಡೆದ ಆ ಘಟನೆ ಯಶ್​ ಮನಸ್ಸಿನಲ್ಲಿ ಬೆಂಕಿಯಂಥ ಹಠ ಸೃಷ್ಟಿಸಿತು. ಆ ಹಠದ ಪ್ರತಿಫಲವೇ ಇವತ್ತು ರಾಕಿ ಭಾಯ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಹತ್ತಾರು ಕಾರು, ಬಂಗಲೆ, ಸುತ್ತಮುತ್ತ ಅಸಿಸ್ಟಂಟ್​ಗಳು, ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಯಶ್​ ಜೀವನದಲ್ಲಿ ನಡೆದ ಒಂದು ಕಿಚ್ಚಿನ ಘಟನೆ. ಇಂಥದ್ದೇ ಹತ್ತು ಹಲವು ಘಟನೆಗಳು ಅವರ ಲೈಫ್​ಲ್ಲಿ ನಡೆದಿರಬಹುದು. ಅದೇನೇ ಇರಲಿ, ಯಶ್​ ಇವತ್ತು ನಂಬರ್ 1 ನಟ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More