newsfirstkannada.com

2003ರಲ್ಲಿ ಗಂಗೂಲಿ, 2023ರಲ್ಲಿ ರೋಹಿತ್; ಇಬ್ಬರೂ ಗ್ರೇಟ್​ ಕ್ಯಾಪ್ಟನ್ಸ್​.. ಮಾಡಿದ್ದು ಒಂದೇ ತಪ್ಪು..!

Share :

21-11-2023

    ಭಾರತ 2003, 2023ರಲ್ಲಿ ವಿಶ್ವಕಪ್​ ಫೈನಲ್ ಪ್ರವೇಶ

    ಅಂದು ಗಂಗೂಲಿ ಮಾಡಿದ್ದ ತಪ್ಪು ಏನು ಗೊತ್ತಾ?

    ಆ ಒಂದು ನಿರ್ಧಾರ ವಿಶ್ವಕಪ್ ಸೋಲಿಗೆ ಕಾರಣವಾಯ್ತಾ?

ಏಕದಿನ ವಿಶ್ವಕಪ್​ ಗೆದ್ದೇ ಗೆಲ್ಲುವ ಭರವಸೆ ಟೀಮ್ ಇಂಡಿಯಾ ಮೇಲಿತ್ತು. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟರ್ಸ್​ ಕೂಡ ಭಾರತವನ್ನೇ ವಿಶ್ವಕಪ್​​ ಗೆಲ್ಲೋ ಫೇವರಿಟ್ಸ್​ ಎಂದು ಭವಿಷ್ಯ ನುಡಿದಿದ್ದರು. ಒನ್ ಬ್ಯಾಡ್​ ಗೇಮ್ ಹಾಗೂ ಒನ್​ ಬ್ಯಾಡ್​ ಡಿಸಿಶನ್​​ ಎಲ್ಲಾ ಕನಸನ್ನ ಛಿದ್ರಗೊಳಿಸಿತು. 2003ರಲ್ಲಿ ಗಂಗೂಲಿ ಈ ಬಾರಿ ರೋಹಿತ್​ ಶರ್ಮಾ.. ಇಷ್ಟೇ ವ್ಯತ್ಯಾಸ..!

ಕ್ರಿಕೆಟ್ ಅಂದ್ರೆನೇ ಹೀಗೆ ಒಂದೇ ಒಂದು ನಡೆ.. ಒಂದೇ ಒಂದು ಕ್ಯಾಚ್.. ಒಂದೇ ಒಂದು ಅಚಾತುರ್ಯ ಇಡೀ ಫಲಿತಾಂಶವನ್ನೇ ಬದಲಿಸುತ್ತೆ. ಗೆಲ್ಲೋ ತಂಡ ಸೋಲಿನ ಸುಳಿಗೆ ಸಿಲುಕಿದ್ರೆ ಸೋಲಿನ ಹಾದಿಯಲ್ಲಿದ್ದ ತಂಡ ಗೆಲುವಿನ ಹಳಿಗೆ ಮರಳುತ್ತೆ. ವಿಶ್ವಕಪ್​ ಫೈನಲ್​ ಪಂದ್ಯದಲ್ಲೂ ಟೀಮ್​ ಇಂಡಿಯಾ ಗೆಲ್ಲುತ್ತೆ ಅನ್ನೋದು ಎಲ್ಲರ ಮನದಾಳವಾಗಿತ್ತು. ಒಂದು ತಪ್ಪು ನಿರ್ಧಾರ ಎಲ್ಲವನ್ನ ಬದಲಿಸಿಬಿಡ್ತು.
ಅದೇ ತಪ್ಪುನಿಂದ ಕೈ ತಪ್ಪಿತಾ ವಿಶ್ವಕಪ್​.?

​ಸೌರವ್ ಗಂಗೂಲಿ ಆ್ಯಂಡ್ ರೋಹಿತ್ ಶರ್ಮಾ.. ಭಾರತೀಯ ಕ್ರಿಕೆಟ್ ಕಂಡ ಗ್ರೇಟ್​ ಕ್ಯಾಪ್ಟನ್ಸ್​. 2003ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದ ಸೌರವ್ ಗಂಗೂಲಿ, ಫೈನಲ್​​ಗೆ ತಂಡವನ್ನ ಕೊಡೊಯ್ದಿದ್ರು. ಫೈನಲ್​ ಕದನದಲ್ಲಿ ಆಸ್ಟ್ರೇಲಿಯಾದ ಎದುರು ಭಾರತ ಸೋಲುಂಡಿತ್ತು. 20 ವರ್ಷಗಳ ಬಳಿಕ ಇದೇ ಆಸ್ಟ್ರೇಲಿಯನ್ಸ್​ ಎದುರು ರೋಹಿತ್, ವಿಶ್ವಕಪ್​ ಗೆಲ್ಲೋ ನಿರೀಕ್ಷೆ ಹುಟ್ಟು ಹಾಕಿದ್ದರು. ನಿರೀಕ್ಷೆ ಹುಸಿಯಾಯ್ತು. 2003 ಫೈನಲ್ಸ್​ ಸೋಲಿಗೆ ಗಂಗೂಲಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಕಾರಣ ಅನ್ನೋದು ಇಂದಿಗೂ ಹಲವರ ಅಭಿಪ್ರಾಯ. ಇದೀಗ ಈ ಬಾರಿಯೂ ಅಂತದ್ದೇ ಒಂದು ನಿರ್ಧಾರವನ್ನ ರೋಹಿತ್​ ತೆಗೆದುಕೊಂಡರು. ಅದೇ ಇದೀಗ ಸೋಲಿಗೆ ಕಾರಣ ಅನ್ನೋದು ಹಲವರ ವಿಶ್ಲೇಷಣೆ. ಸ್ಪಿನ್ನರ್​ ಅಶ್ವಿನ್​ಗೆ ಚಾನ್ಸ್​ ನೀಡಬೇಕಿತ್ತು ಅನ್ನೋದು ಹಲವರ ವಾದ.

ಅಶ್ವಿನ್​ಗೆ ಚಾನ್ಸ್ ನೀಡದಿರೋದೇ ಮಿಸ್ಟೇಕ್

ಆಸ್ಟ್ರೇಲಿಯಾ ಎದುರಿನ ಫೈನಲ್ಸ್​ನಲ್ಲಿ ಅಶ್ವಿನ್​ ಎಂಬ ಸ್ಪಿನ್ ಮಾಂತ್ರಿಕ ಬೇಕಾಗಿತ್ತು. ಟ್ರಿಕಿ ಟ್ರ್ಯಾಕ್​ನಲ್ಲಿ ಅಶ್ವಿನ್​​ರನ್ನ ಎದುರಿಸೋದು ಆಸಿಸ್​​ ಪಾಲಿಗೆ ಕಬ್ಬಿಣದ ಕಡಲೆಯಾಗ್ತಿತ್ತು. ಮುಖ್ಯವಾಗಿ​ 340 ಬಾರಿ ಎಡಗೈ ಬ್ಯಾಟ್ಸ್​ಮನ್​ಗಳನ್ನ ಬೇಟೆಯಾಡಿದ ದಾಖಲೆ ಹೊಂದಿರುವ ಅಶ್ವಿನ್ ಇದ್ದಿದ್ರೆ, ಟ್ರಾವಿಸ್ ಹೆಡ್ ಆಟಕ್ಕೆ ಬ್ರೇಕ್​ ಹಾಕಬಹುದಾಗಿತ್ತು. ಸ್ಪಿನ್​ಗೆ ನೆರವಾಗ್ತಿದ್ದ ಪಿಚ್​​ನಲ್ಲಿ ಅನುಭವಿ ಅಶ್ವಿನ್​ ಇಂಪ್ಯಾಕ್ಟ್​ ಮಾಡ್ತಿದ್ರು. ಪ್ರೆಶರ್​ ಹ್ಯಾಂಡಲ್​ ಮಾಡಬಲ್ಲ ತಾಕತ್ತು ಅಶ್ವಿನ್​ಗಿತ್ತು. ಆದ್ರೆ, ರೋಹಿತ್ ಆ್ಯಂಡ್ ಟೀಮ್ ಮ್ಯಾನೇಜ್​​​​​ಮೆಂಟ್ ಆಯ್ಕೆಯಲ್ಲೇ ಎಡವಿತು.

2003ರ ವಿಶ್ವಕಪ್​​ ಫೈನಲ್​ನಲ್ಲೂ ಆಗಿತ್ತು ಇಂಥದ್ದೇ ಮಿಸ್ಟೇಕ್..!

2003ರ ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ, ಕಪ್ ಗೆಲ್ಲೋ ಮಹತ್ತರ ಅವಕಾಶ ಹೊಂದಿತ್ತು. ಲೆಗ್ ಸ್ಪಿನ್ನರ್ ಅನಿಲ್​ ಕುಂಬ್ಳೆ ಬೆಂಚ್ ಕಾಯಿಸಿದ ಗಂಗೂಲಿ, ದೊಡ್ಡ ಮಿಸ್ಟೇಕ್ ಮಾಡಿದ್ರು. ಪರಿಣಾಮ ರೈಟ್ ಹ್ಯಾಂಡ್ ಬ್ಯಾಟರ್​ಗಳಾದ ರಿಕಿ ಪಾಂಟಿಂಗ್, ಡೇಮಿಯನ್​ ಮಾರ್ಟಿನ್ ಇಂಡಿಯನ್ ಬೌಲರ್​​ಗಳ ಮೇಲೆ ದಂಡೆಯಾತ್ರೆಯೇ ನಡೆಸಿದ್ರು. ಅಂದು ದಿನೇಶ್ ಮೊಂಗಿಯಾ ಬದಲಾಗಿ ಅನಿಲ್​ ಕುಂಬ್ಳೆಯೇ ಹನ್ನೊಂದರ ಬಳಗದಲ್ಲೇ ಕಾಣಿಸಿಕೊಂಡಿದ್ರೆ, ಲೆಕ್ಕ ಬೇರೇಯದ್ದೇ ಇರುತ್ತಿತ್ತು.

ಆಸಿಸ್​ ವಿರುದ್ಧದ ಮೊನ್ನೆ ನಡೆದ ಪಂದ್ಯದಲ್ಲಿ ಪ್ಲೇಯಿಂಗ್​ ಇಲೆವೆನ್​ನಲ್ಲಿದ್ದ ಕುಲ್​ದೀಪ್ ಯಾದವ್, ರವೀಂದ್ರ ಜಡೇಜಾ ಎಡಗೈ ಬ್ಯಾಟರ್​​ಗಳ ಪಾಲಿಗೆ ಡೇಂಜರಸ್​ ಆಗಲೇ ಇಲ್ಲ. ಹೀಗಾಗುತ್ತೆ ಅನ್ನೋ ಸುಳಿಹು ಮ್ಯಾನೇಜ್​ಮೆಂಟ್​ಗೂ ಇತ್ತು. ಹೀಗಾಗಿಯೇ ಲೀಗ್​ ಹಂತದಲ್ಲಿ ಆಸಿಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ ಅಶ್ವಿನ್​ಗೆ ಚಾನ್ಸ್​ ನೀಡಿತ್ತು. ಆದ್ರೆ, ಫೈನಲ್​ ಫೈಟ್​ನಲ್ಲಿ ವಿನ್ನಿಂಗ್​ ಕಾಂಬಿನೇಷನ್​ ಡಿಸ್ಟರ್ಬ್​ ಮಾಡದಿರೋ ಸೂತ್ರಕ್ಕೆ ಮ್ಯಾನೇಜ್​ಮೆಂಟ್​ ಕಟ್ಟುಬಿತ್ತು. ಅಂತಿಮವಾಗಿ ಇದು ತಂಡಕ್ಕೆ ಹಿನ್ನಡೆಯಾಯ್ತು.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2003ರಲ್ಲಿ ಗಂಗೂಲಿ, 2023ರಲ್ಲಿ ರೋಹಿತ್; ಇಬ್ಬರೂ ಗ್ರೇಟ್​ ಕ್ಯಾಪ್ಟನ್ಸ್​.. ಮಾಡಿದ್ದು ಒಂದೇ ತಪ್ಪು..!

https://newsfirstlive.com/wp-content/uploads/2023/11/ROHIT-13.jpg

    ಭಾರತ 2003, 2023ರಲ್ಲಿ ವಿಶ್ವಕಪ್​ ಫೈನಲ್ ಪ್ರವೇಶ

    ಅಂದು ಗಂಗೂಲಿ ಮಾಡಿದ್ದ ತಪ್ಪು ಏನು ಗೊತ್ತಾ?

    ಆ ಒಂದು ನಿರ್ಧಾರ ವಿಶ್ವಕಪ್ ಸೋಲಿಗೆ ಕಾರಣವಾಯ್ತಾ?

ಏಕದಿನ ವಿಶ್ವಕಪ್​ ಗೆದ್ದೇ ಗೆಲ್ಲುವ ಭರವಸೆ ಟೀಮ್ ಇಂಡಿಯಾ ಮೇಲಿತ್ತು. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟರ್ಸ್​ ಕೂಡ ಭಾರತವನ್ನೇ ವಿಶ್ವಕಪ್​​ ಗೆಲ್ಲೋ ಫೇವರಿಟ್ಸ್​ ಎಂದು ಭವಿಷ್ಯ ನುಡಿದಿದ್ದರು. ಒನ್ ಬ್ಯಾಡ್​ ಗೇಮ್ ಹಾಗೂ ಒನ್​ ಬ್ಯಾಡ್​ ಡಿಸಿಶನ್​​ ಎಲ್ಲಾ ಕನಸನ್ನ ಛಿದ್ರಗೊಳಿಸಿತು. 2003ರಲ್ಲಿ ಗಂಗೂಲಿ ಈ ಬಾರಿ ರೋಹಿತ್​ ಶರ್ಮಾ.. ಇಷ್ಟೇ ವ್ಯತ್ಯಾಸ..!

ಕ್ರಿಕೆಟ್ ಅಂದ್ರೆನೇ ಹೀಗೆ ಒಂದೇ ಒಂದು ನಡೆ.. ಒಂದೇ ಒಂದು ಕ್ಯಾಚ್.. ಒಂದೇ ಒಂದು ಅಚಾತುರ್ಯ ಇಡೀ ಫಲಿತಾಂಶವನ್ನೇ ಬದಲಿಸುತ್ತೆ. ಗೆಲ್ಲೋ ತಂಡ ಸೋಲಿನ ಸುಳಿಗೆ ಸಿಲುಕಿದ್ರೆ ಸೋಲಿನ ಹಾದಿಯಲ್ಲಿದ್ದ ತಂಡ ಗೆಲುವಿನ ಹಳಿಗೆ ಮರಳುತ್ತೆ. ವಿಶ್ವಕಪ್​ ಫೈನಲ್​ ಪಂದ್ಯದಲ್ಲೂ ಟೀಮ್​ ಇಂಡಿಯಾ ಗೆಲ್ಲುತ್ತೆ ಅನ್ನೋದು ಎಲ್ಲರ ಮನದಾಳವಾಗಿತ್ತು. ಒಂದು ತಪ್ಪು ನಿರ್ಧಾರ ಎಲ್ಲವನ್ನ ಬದಲಿಸಿಬಿಡ್ತು.
ಅದೇ ತಪ್ಪುನಿಂದ ಕೈ ತಪ್ಪಿತಾ ವಿಶ್ವಕಪ್​.?

​ಸೌರವ್ ಗಂಗೂಲಿ ಆ್ಯಂಡ್ ರೋಹಿತ್ ಶರ್ಮಾ.. ಭಾರತೀಯ ಕ್ರಿಕೆಟ್ ಕಂಡ ಗ್ರೇಟ್​ ಕ್ಯಾಪ್ಟನ್ಸ್​. 2003ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದ ಸೌರವ್ ಗಂಗೂಲಿ, ಫೈನಲ್​​ಗೆ ತಂಡವನ್ನ ಕೊಡೊಯ್ದಿದ್ರು. ಫೈನಲ್​ ಕದನದಲ್ಲಿ ಆಸ್ಟ್ರೇಲಿಯಾದ ಎದುರು ಭಾರತ ಸೋಲುಂಡಿತ್ತು. 20 ವರ್ಷಗಳ ಬಳಿಕ ಇದೇ ಆಸ್ಟ್ರೇಲಿಯನ್ಸ್​ ಎದುರು ರೋಹಿತ್, ವಿಶ್ವಕಪ್​ ಗೆಲ್ಲೋ ನಿರೀಕ್ಷೆ ಹುಟ್ಟು ಹಾಕಿದ್ದರು. ನಿರೀಕ್ಷೆ ಹುಸಿಯಾಯ್ತು. 2003 ಫೈನಲ್ಸ್​ ಸೋಲಿಗೆ ಗಂಗೂಲಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಕಾರಣ ಅನ್ನೋದು ಇಂದಿಗೂ ಹಲವರ ಅಭಿಪ್ರಾಯ. ಇದೀಗ ಈ ಬಾರಿಯೂ ಅಂತದ್ದೇ ಒಂದು ನಿರ್ಧಾರವನ್ನ ರೋಹಿತ್​ ತೆಗೆದುಕೊಂಡರು. ಅದೇ ಇದೀಗ ಸೋಲಿಗೆ ಕಾರಣ ಅನ್ನೋದು ಹಲವರ ವಿಶ್ಲೇಷಣೆ. ಸ್ಪಿನ್ನರ್​ ಅಶ್ವಿನ್​ಗೆ ಚಾನ್ಸ್​ ನೀಡಬೇಕಿತ್ತು ಅನ್ನೋದು ಹಲವರ ವಾದ.

ಅಶ್ವಿನ್​ಗೆ ಚಾನ್ಸ್ ನೀಡದಿರೋದೇ ಮಿಸ್ಟೇಕ್

ಆಸ್ಟ್ರೇಲಿಯಾ ಎದುರಿನ ಫೈನಲ್ಸ್​ನಲ್ಲಿ ಅಶ್ವಿನ್​ ಎಂಬ ಸ್ಪಿನ್ ಮಾಂತ್ರಿಕ ಬೇಕಾಗಿತ್ತು. ಟ್ರಿಕಿ ಟ್ರ್ಯಾಕ್​ನಲ್ಲಿ ಅಶ್ವಿನ್​​ರನ್ನ ಎದುರಿಸೋದು ಆಸಿಸ್​​ ಪಾಲಿಗೆ ಕಬ್ಬಿಣದ ಕಡಲೆಯಾಗ್ತಿತ್ತು. ಮುಖ್ಯವಾಗಿ​ 340 ಬಾರಿ ಎಡಗೈ ಬ್ಯಾಟ್ಸ್​ಮನ್​ಗಳನ್ನ ಬೇಟೆಯಾಡಿದ ದಾಖಲೆ ಹೊಂದಿರುವ ಅಶ್ವಿನ್ ಇದ್ದಿದ್ರೆ, ಟ್ರಾವಿಸ್ ಹೆಡ್ ಆಟಕ್ಕೆ ಬ್ರೇಕ್​ ಹಾಕಬಹುದಾಗಿತ್ತು. ಸ್ಪಿನ್​ಗೆ ನೆರವಾಗ್ತಿದ್ದ ಪಿಚ್​​ನಲ್ಲಿ ಅನುಭವಿ ಅಶ್ವಿನ್​ ಇಂಪ್ಯಾಕ್ಟ್​ ಮಾಡ್ತಿದ್ರು. ಪ್ರೆಶರ್​ ಹ್ಯಾಂಡಲ್​ ಮಾಡಬಲ್ಲ ತಾಕತ್ತು ಅಶ್ವಿನ್​ಗಿತ್ತು. ಆದ್ರೆ, ರೋಹಿತ್ ಆ್ಯಂಡ್ ಟೀಮ್ ಮ್ಯಾನೇಜ್​​​​​ಮೆಂಟ್ ಆಯ್ಕೆಯಲ್ಲೇ ಎಡವಿತು.

2003ರ ವಿಶ್ವಕಪ್​​ ಫೈನಲ್​ನಲ್ಲೂ ಆಗಿತ್ತು ಇಂಥದ್ದೇ ಮಿಸ್ಟೇಕ್..!

2003ರ ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ, ಕಪ್ ಗೆಲ್ಲೋ ಮಹತ್ತರ ಅವಕಾಶ ಹೊಂದಿತ್ತು. ಲೆಗ್ ಸ್ಪಿನ್ನರ್ ಅನಿಲ್​ ಕುಂಬ್ಳೆ ಬೆಂಚ್ ಕಾಯಿಸಿದ ಗಂಗೂಲಿ, ದೊಡ್ಡ ಮಿಸ್ಟೇಕ್ ಮಾಡಿದ್ರು. ಪರಿಣಾಮ ರೈಟ್ ಹ್ಯಾಂಡ್ ಬ್ಯಾಟರ್​ಗಳಾದ ರಿಕಿ ಪಾಂಟಿಂಗ್, ಡೇಮಿಯನ್​ ಮಾರ್ಟಿನ್ ಇಂಡಿಯನ್ ಬೌಲರ್​​ಗಳ ಮೇಲೆ ದಂಡೆಯಾತ್ರೆಯೇ ನಡೆಸಿದ್ರು. ಅಂದು ದಿನೇಶ್ ಮೊಂಗಿಯಾ ಬದಲಾಗಿ ಅನಿಲ್​ ಕುಂಬ್ಳೆಯೇ ಹನ್ನೊಂದರ ಬಳಗದಲ್ಲೇ ಕಾಣಿಸಿಕೊಂಡಿದ್ರೆ, ಲೆಕ್ಕ ಬೇರೇಯದ್ದೇ ಇರುತ್ತಿತ್ತು.

ಆಸಿಸ್​ ವಿರುದ್ಧದ ಮೊನ್ನೆ ನಡೆದ ಪಂದ್ಯದಲ್ಲಿ ಪ್ಲೇಯಿಂಗ್​ ಇಲೆವೆನ್​ನಲ್ಲಿದ್ದ ಕುಲ್​ದೀಪ್ ಯಾದವ್, ರವೀಂದ್ರ ಜಡೇಜಾ ಎಡಗೈ ಬ್ಯಾಟರ್​​ಗಳ ಪಾಲಿಗೆ ಡೇಂಜರಸ್​ ಆಗಲೇ ಇಲ್ಲ. ಹೀಗಾಗುತ್ತೆ ಅನ್ನೋ ಸುಳಿಹು ಮ್ಯಾನೇಜ್​ಮೆಂಟ್​ಗೂ ಇತ್ತು. ಹೀಗಾಗಿಯೇ ಲೀಗ್​ ಹಂತದಲ್ಲಿ ಆಸಿಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ ಅಶ್ವಿನ್​ಗೆ ಚಾನ್ಸ್​ ನೀಡಿತ್ತು. ಆದ್ರೆ, ಫೈನಲ್​ ಫೈಟ್​ನಲ್ಲಿ ವಿನ್ನಿಂಗ್​ ಕಾಂಬಿನೇಷನ್​ ಡಿಸ್ಟರ್ಬ್​ ಮಾಡದಿರೋ ಸೂತ್ರಕ್ಕೆ ಮ್ಯಾನೇಜ್​ಮೆಂಟ್​ ಕಟ್ಟುಬಿತ್ತು. ಅಂತಿಮವಾಗಿ ಇದು ತಂಡಕ್ಕೆ ಹಿನ್ನಡೆಯಾಯ್ತು.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More