newsfirstkannada.com

ಏಷ್ಯಾಕಪ್​​ ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್​​​ ಶರ್ಮಾ ಭಾವುಕ.. ಏನಂದ್ರು..?

Share :

17-09-2023

    2023 ಏಷ್ಯಾಕಪ್​​​ ಟೂರ್ನಿಯ ಫೈನಲ್​​ ಮ್ಯಾಚ್​

    ಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ!

    ಏಷ್ಯಾಕಪ್​​ ಗೆದ್ದ ಬಗ್ಗೆ ರೋಹಿತ್​ ಶರ್ಮಾ ಏನಂದ್ರು?

ಇಂದು ಕೊಲಂಬೋ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ 2023 ಏಷ್ಯಾಕಪ್​ ಟೂರ್ನಿಯ ಫೈನಲ್​​​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 8ನೇ ಬಾರಿಗೆ ಏಷ್ಯಾಕಪ್​ ಮಡಿಗೇರಿಸಿಕೊಂಡಿದೆ.

ಇನ್ನು, ಏಷ್ಯಾಕಪ್​ ಗೆದ್ದ ಬಳಿಕ ಮಾತಾಡಿದ ಟೀಂ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಫುಲ್​ ಭಾವುಕರಾಗಿದ್ದಾರೆ. ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದೆ. ಫೈನಲ್​ ಪಂದ್ಯದಲ್ಲಿ ಆಡಿ ಗೆಲ್ಲುವುದು ಎಂದರೆ ನಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್​ ಆಗಿತ್ತು ಎಂಬುದನ್ನು ತೋರಿಸುತ್ತದೆ. ಗ್ರೇಟ್​​​ ಸ್ಟಾರ್ಟ್​ ವಿತ್​​ ಬಾಲ್​​, ಕ್ಲಿನಿಕಲ್​ ಫಿನಿಶ್​ ವಿತ್​ ಬ್ಯಾಟ್​​​ (ಚೆಂಡಿನೊಂದಿಗೆ ಉತ್ತಮ ಆರಂಭ, ಬ್ಯಾಟ್​ನೊಂದಿಗೆ ಅದ್ಭುತ ಅಂತ್ಯ) ಎಂದರು.

ನಮ್ಮ ಬೌಲರ್ಸ್​​ ಬಹಳ ತಯಾರಿ ಮಾಡಿಕೊಂಡಿದ್ದರು. ಅದಕ್ಕೆ ಉದಾಹರಣೆಯೇ ಪಂದ್ಯದ ಫಲಿತಾಂಶ. ಗೆಲುವು ತುಂಬಾ ಸುಲಭ ಮಾಡಿದ್ದು ಬೌಲರ್ಸ್​. ಅದರಲ್ಲೂ ಸಿರಾಜ್​​ ಇಂದಿನ ಬೌಲಿಂಗ್​ ಅದ್ಭುತ ಆಗಿತ್ತು ಎಂದರು.
ಇನ್ನೂ ಬ್ಯಾಟಿಂಗ್​ ವಿಭಾಗದಲ್ಲಿ ಹಾರ್ದಿಕ್​, ಇಶಾನ್​ ಕಿಶನ್​ ಬ್ಯಾಟಿಂಗ್​ ಮಾಡಿದ್ದು. ಪಾಕಿಸ್ತಾನದ ವಿರುದ್ಧ ಒತ್ತಡದ ಮಧ್ಯೆಯೂ

ಅದ್ಭುತ ಇನ್ನಿಂಗ್ಸ್​ ಕಟ್ಟಿದ್ದು ಎಲ್ಲವೂ ತಂಡದ ಸಕ್ಸಸ್​ಗೆ ಕಾರಣ. ವಿರಾಟ್​​, ಕೆ.ಎಲ್​​ ರಾಹುಲ್​​, ಗಿಲ್​​ ಯಾವಾಗಲೂ ತಂಡದ ಪಿಲ್ಲರ್ಸ್​ ಆಗಿದ್ದರು. ಇಡೀ ತಂಡ ಇಂದಿನ ಗೆಲುವಿಗೆ ಕಾರಣ. ಮುಂದಿನ ಏಕದಿನ ವಿಶ್ವಕಪ್​ ಗೆಲ್ಲೋದೇ ನಮ್ಮ ಗುರಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಷ್ಯಾಕಪ್​​ ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್​​​ ಶರ್ಮಾ ಭಾವುಕ.. ಏನಂದ್ರು..?

https://newsfirstlive.com/wp-content/uploads/2023/09/Rohit-Sharma-IND.jpg

    2023 ಏಷ್ಯಾಕಪ್​​​ ಟೂರ್ನಿಯ ಫೈನಲ್​​ ಮ್ಯಾಚ್​

    ಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ!

    ಏಷ್ಯಾಕಪ್​​ ಗೆದ್ದ ಬಗ್ಗೆ ರೋಹಿತ್​ ಶರ್ಮಾ ಏನಂದ್ರು?

ಇಂದು ಕೊಲಂಬೋ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ 2023 ಏಷ್ಯಾಕಪ್​ ಟೂರ್ನಿಯ ಫೈನಲ್​​​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 8ನೇ ಬಾರಿಗೆ ಏಷ್ಯಾಕಪ್​ ಮಡಿಗೇರಿಸಿಕೊಂಡಿದೆ.

ಇನ್ನು, ಏಷ್ಯಾಕಪ್​ ಗೆದ್ದ ಬಳಿಕ ಮಾತಾಡಿದ ಟೀಂ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಫುಲ್​ ಭಾವುಕರಾಗಿದ್ದಾರೆ. ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದೆ. ಫೈನಲ್​ ಪಂದ್ಯದಲ್ಲಿ ಆಡಿ ಗೆಲ್ಲುವುದು ಎಂದರೆ ನಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್​ ಆಗಿತ್ತು ಎಂಬುದನ್ನು ತೋರಿಸುತ್ತದೆ. ಗ್ರೇಟ್​​​ ಸ್ಟಾರ್ಟ್​ ವಿತ್​​ ಬಾಲ್​​, ಕ್ಲಿನಿಕಲ್​ ಫಿನಿಶ್​ ವಿತ್​ ಬ್ಯಾಟ್​​​ (ಚೆಂಡಿನೊಂದಿಗೆ ಉತ್ತಮ ಆರಂಭ, ಬ್ಯಾಟ್​ನೊಂದಿಗೆ ಅದ್ಭುತ ಅಂತ್ಯ) ಎಂದರು.

ನಮ್ಮ ಬೌಲರ್ಸ್​​ ಬಹಳ ತಯಾರಿ ಮಾಡಿಕೊಂಡಿದ್ದರು. ಅದಕ್ಕೆ ಉದಾಹರಣೆಯೇ ಪಂದ್ಯದ ಫಲಿತಾಂಶ. ಗೆಲುವು ತುಂಬಾ ಸುಲಭ ಮಾಡಿದ್ದು ಬೌಲರ್ಸ್​. ಅದರಲ್ಲೂ ಸಿರಾಜ್​​ ಇಂದಿನ ಬೌಲಿಂಗ್​ ಅದ್ಭುತ ಆಗಿತ್ತು ಎಂದರು.
ಇನ್ನೂ ಬ್ಯಾಟಿಂಗ್​ ವಿಭಾಗದಲ್ಲಿ ಹಾರ್ದಿಕ್​, ಇಶಾನ್​ ಕಿಶನ್​ ಬ್ಯಾಟಿಂಗ್​ ಮಾಡಿದ್ದು. ಪಾಕಿಸ್ತಾನದ ವಿರುದ್ಧ ಒತ್ತಡದ ಮಧ್ಯೆಯೂ

ಅದ್ಭುತ ಇನ್ನಿಂಗ್ಸ್​ ಕಟ್ಟಿದ್ದು ಎಲ್ಲವೂ ತಂಡದ ಸಕ್ಸಸ್​ಗೆ ಕಾರಣ. ವಿರಾಟ್​​, ಕೆ.ಎಲ್​​ ರಾಹುಲ್​​, ಗಿಲ್​​ ಯಾವಾಗಲೂ ತಂಡದ ಪಿಲ್ಲರ್ಸ್​ ಆಗಿದ್ದರು. ಇಡೀ ತಂಡ ಇಂದಿನ ಗೆಲುವಿಗೆ ಕಾರಣ. ಮುಂದಿನ ಏಕದಿನ ವಿಶ್ವಕಪ್​ ಗೆಲ್ಲೋದೇ ನಮ್ಮ ಗುರಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More