/newsfirstlive-kannada/media/post_attachments/wp-content/uploads/2024/03/Bangalore-Rowdy-Sheeter-Murder.jpg)
ಬೆಂಗಳೂರಲ್ಲಿ ರೌಡಿಶೀಟರ್ ಕಂ ಸುಪಾರಿ ಕಿಲ್ಲರ್ ದಿನೇಶ್ ಅನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬ್ಯಾಗ್ನಲ್ಲಿ ಮಚ್ಚು ತಂದ 5 ಜನರ ಗ್ಯಾಂಗ್ ಕೊಚ್ಚಿ, ಕೊಚ್ಚಿ ಕೊಲೆ ಮಾಡಿದೆ. ರಾಮಯ್ಯ ಲೇಔಟ್ನ ಮೂರನೇ ಮುಖ್ಯರಸ್ತೆಯ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿ ರಿಸೆಪ್ಶನಿಸ್ಟ್ ರೌಡಿಶೀಟರ್ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊದಲು 7 ಜನ ರೂಮ್ ಕೇಳಿಕೊಂಡು ಬಂದಿದ್ದಾರೆ. ಏನೋ ಮಾತನಾಡಬೇಕು ಅಂತ ರೂಮ್ ಕೇಳಿದ್ದಾರೆ. ಅದಾದ ಬಳಿಕ ಅಮೌಂಟ್ ಕೇಳಿದಾಗ ಫೋನ್ ಪೇ ಮಾಡುವುದಾಗಿ ಹೇಳಿದ್ದಾರೆ. ಆಮೇಲೆ ಫೋನ್ ಪೇ ಇಲ್ಲ ಕ್ಯಾಶ್ ಕೊಡಿ ಅಂತ ಹೇಳಿದ್ದು, ಹಣ ತರೋದಕ್ಕೆ ಇಬ್ಬರು ಆಚೆ ಹೋಗಿದ್ದಾರೆ. ನಂತರ ಮತ್ತೆ ಐದು ಜನ ಬಂದು ರೌಡಿಶೀಟರ್ ದಿನೇಶ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬ್ಯಾಗ್ನಲ್ಲಿದ್ದ ಮಚ್ಚನ್ನ ತೆಗೆದುಕೊಂಡು ಅಟ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:BREAKING: ಬೆಂಗಳೂರಲ್ಲಿ ಹರಿದ ನೆತ್ತರು.. ರೌಡಿ ಶೀಟರ್, ಸುಪಾರಿ ಕಿಲ್ಲರ್ ಬರ್ಬರ ಹತ್ಯೆ
ಕೊಲೆಯಾಗಿರೋ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ಡಿಸಿಪಿ ಕುಲದೀಪ್ ಜೈನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us