newsfirstkannada.com

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ಸಂಕಷ್ಟ.. ಠಾಣೆಗೆ ಕರೆಸಲು ಬೆಂಗಳೂರು ಪೊಲೀಸರು ಸಿದ್ಧತೆ..!

Share :

06-11-2023

    ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣದಲ್ಲಿ ಸಂಕಷ್ಟ

    ನೋಟಿಸ್ ನೀಡಲು ಸಿದ್ಧತೆ ನಡೆಸಿರುವ ಪೊಲೀಸರು

    ಏನಿದು ನಾಯಿ ಕಚ್ಚಿದ ಪ್ರಕರಣ? ಆರೋಪ ಏನು?

ಬೆಂಗಳೂರು: ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣ ಸಂಬಂಧ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎ-2 ಆರೋಪಿಯಾಗಿದ್ದಾರೆ. ಈಗಾಗಲೇ ದೂರುದಾರೇ ಅಮಿತ ಜಿಂದಾಲ್ ಆರ್​ಆರ್ ನಗರ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್ ಮನೆಯ ಶ್ವಾನ ನೋಡಿಕೊಳ್ತಿದ್ದ ಸಿಬ್ಬಂದಿ ಹೇಮಂತ್ ಕೂಡ ಹೇಳಿಕೆ ನೀಡಿದ್ದಾರೆ.

ಪೊಲೀಸರು ನಟ ದರ್ಶನ್ ಹೇಳಿಕೆಯಷ್ಟೇ ದಾಖಲಿಸಬೇಕಾಗಿದೆ. ಹೀಗಾಗಿ ನಟ ದರ್ಶನ್​ಗೆ ನೋಟಿಸ್ ನೀಡಿ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉದ್ದೇಶ ಪೂರ್ವಕವಾಗಿ ಶ್ವಾನ ಬಿಟ್ಟಿಲ್ಲ. ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಶ್ವಾನದ ಕೇರ್ ಟೇಕರ್ ಹೇಮಂತ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಆ ಶ್ವಾನ ದರ್ಶನ್ ಅವರದ್ದಲ್ಲ ಗಿಫ್ಟ್ ಆಗಿ ಬಂದಿರೋದು. ಗಿಫ್ಟ್ ಕೊಟ್ಟು ಶ್ವಾನವನ್ನು ತಾನೇ ನೋಡಿಕೊಳ್ಳುತ್ತಿದ್ದಾಗಿ ಹೇಮಂತ್ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ದರ್ಶನ್ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ದೊಡ್ಡ ವ್ಯಕ್ತಿ, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಅವರ ಮನೆಯವರನ್ನು ವಿಚಾರಣೆ ಮಾಡಿಲ್ಲ. ಶ್ವಾನವನ್ನ ಬೇಕು ಅಂತಾನೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಪ್ರಕರಣದಲ್ಲಿ 307 ಸೆಕ್ಷನ್ ನನ್ನು ಪೊಲೀಸರು ಸೇರಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ದರ್ಶನ್ ಹೇಳಿಕೆ ದಾಖಲಿಸಿ ಆರೋಪಗಳಿಗೆ ತೆರೆ ಎಳೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಏನಿದು ಪ್ರಕರಣ..?

ಅಕ್ಟೋಬರ್​​ ಕೊನೆಯಲ್ಲಿ ದರ್ಶನ್​ ಮನೆ ಮುಂದೆ ಅಮಿತ್ ಜಿಂದಾಲ್ ಎಂಬ ಮಹಿಳೆ ತನ್ನ ಕಾರ್​ ಪಾರ್ಕ್​ ಮಾಡಿದ್ದರು. ತಮ್ಮ ಕಾರ್​​ ತೆಗೆಯುವ ವೇಳೆ ಮಹಿಳೆ, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯೆ ಜಗಳ ಆಗಿದೆ. ಇದರ ಪರಿಣಾಮ ದರ್ಶನ್​ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಆರೋಪ ಏನು..?

ಅಂದು ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಕಾರನ್ನು ದರ್ಶನ್ ಮನೆ ಬಳಿ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದೆ. ಕಾರ್​ ತೆಗೆದುಕೊಳ್ಳಲು ಬಂದಾಗ ಅದೇ ಜಾಗದಲ್ಲಿ ನಾಯಿ ಇತ್ತು. ಆಗ ಆ ನಾಯಿಯನ್ನು ಕಟ್ಟಿ ಎಂದು ಕೇಳಿದೆ. ಅದಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಲಕ್ಷ್ಯ ತೋರಿದ. ಆಗ ಮಾತಿಗೆ ಮಾತು ಬೆಳೆದಾಗ ನಾಯಿ ನನ್ನ ಮೈಮೇಲೆ ಎಗರಿ ಕಚ್ಚಿದ್ದು, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ಸಂಕಷ್ಟ.. ಠಾಣೆಗೆ ಕರೆಸಲು ಬೆಂಗಳೂರು ಪೊಲೀಸರು ಸಿದ್ಧತೆ..!

https://newsfirstlive.com/wp-content/uploads/2023/11/DARSHAN_DOG_WOMAN.jpg

    ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣದಲ್ಲಿ ಸಂಕಷ್ಟ

    ನೋಟಿಸ್ ನೀಡಲು ಸಿದ್ಧತೆ ನಡೆಸಿರುವ ಪೊಲೀಸರು

    ಏನಿದು ನಾಯಿ ಕಚ್ಚಿದ ಪ್ರಕರಣ? ಆರೋಪ ಏನು?

ಬೆಂಗಳೂರು: ಮಹಿಳೆಗೆ ಶ್ವಾನ ಕಚ್ಚಿದ ಪ್ರಕರಣ ಸಂಬಂಧ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎ-2 ಆರೋಪಿಯಾಗಿದ್ದಾರೆ. ಈಗಾಗಲೇ ದೂರುದಾರೇ ಅಮಿತ ಜಿಂದಾಲ್ ಆರ್​ಆರ್ ನಗರ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್ ಮನೆಯ ಶ್ವಾನ ನೋಡಿಕೊಳ್ತಿದ್ದ ಸಿಬ್ಬಂದಿ ಹೇಮಂತ್ ಕೂಡ ಹೇಳಿಕೆ ನೀಡಿದ್ದಾರೆ.

ಪೊಲೀಸರು ನಟ ದರ್ಶನ್ ಹೇಳಿಕೆಯಷ್ಟೇ ದಾಖಲಿಸಬೇಕಾಗಿದೆ. ಹೀಗಾಗಿ ನಟ ದರ್ಶನ್​ಗೆ ನೋಟಿಸ್ ನೀಡಿ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉದ್ದೇಶ ಪೂರ್ವಕವಾಗಿ ಶ್ವಾನ ಬಿಟ್ಟಿಲ್ಲ. ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಶ್ವಾನದ ಕೇರ್ ಟೇಕರ್ ಹೇಮಂತ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಆ ಶ್ವಾನ ದರ್ಶನ್ ಅವರದ್ದಲ್ಲ ಗಿಫ್ಟ್ ಆಗಿ ಬಂದಿರೋದು. ಗಿಫ್ಟ್ ಕೊಟ್ಟು ಶ್ವಾನವನ್ನು ತಾನೇ ನೋಡಿಕೊಳ್ಳುತ್ತಿದ್ದಾಗಿ ಹೇಮಂತ್ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ದರ್ಶನ್ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ದರ್ಶನ್ ದೊಡ್ಡ ವ್ಯಕ್ತಿ, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಅವರ ಮನೆಯವರನ್ನು ವಿಚಾರಣೆ ಮಾಡಿಲ್ಲ. ಶ್ವಾನವನ್ನ ಬೇಕು ಅಂತಾನೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಪ್ರಕರಣದಲ್ಲಿ 307 ಸೆಕ್ಷನ್ ನನ್ನು ಪೊಲೀಸರು ಸೇರಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಸದ್ಯ ದರ್ಶನ್ ಹೇಳಿಕೆ ದಾಖಲಿಸಿ ಆರೋಪಗಳಿಗೆ ತೆರೆ ಎಳೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಏನಿದು ಪ್ರಕರಣ..?

ಅಕ್ಟೋಬರ್​​ ಕೊನೆಯಲ್ಲಿ ದರ್ಶನ್​ ಮನೆ ಮುಂದೆ ಅಮಿತ್ ಜಿಂದಾಲ್ ಎಂಬ ಮಹಿಳೆ ತನ್ನ ಕಾರ್​ ಪಾರ್ಕ್​ ಮಾಡಿದ್ದರು. ತಮ್ಮ ಕಾರ್​​ ತೆಗೆಯುವ ವೇಳೆ ಮಹಿಳೆ, ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಧ್ಯೆ ಜಗಳ ಆಗಿದೆ. ಇದರ ಪರಿಣಾಮ ದರ್ಶನ್​ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಆರೋಪ ಏನು..?

ಅಂದು ನಾನು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಕಾರನ್ನು ದರ್ಶನ್ ಮನೆ ಬಳಿ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದೆ. ಕಾರ್​ ತೆಗೆದುಕೊಳ್ಳಲು ಬಂದಾಗ ಅದೇ ಜಾಗದಲ್ಲಿ ನಾಯಿ ಇತ್ತು. ಆಗ ಆ ನಾಯಿಯನ್ನು ಕಟ್ಟಿ ಎಂದು ಕೇಳಿದೆ. ಅದಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಲಕ್ಷ್ಯ ತೋರಿದ. ಆಗ ಮಾತಿಗೆ ಮಾತು ಬೆಳೆದಾಗ ನಾಯಿ ನನ್ನ ಮೈಮೇಲೆ ಎಗರಿ ಕಚ್ಚಿದ್ದು, ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More