Advertisment

‘ಕರ್ನಾಟಕದ ರತ್ನ’ ಅಪ್ಪುಗೆ ಮೂರನೇ ವರ್ಷದ ಪುಣ್ಯ ಸ್ಮರಣೆ; ತಮ್ಮನನ್ನ ನೆನೆದು ಕಣ್ಣೀರಿಟ್ಟ ಹಿರಿಯ ಅಕ್ಕ.. ಹೇಳಿದ್ದೇನು?

author-image
Veena Gangani
Updated On
‘ಕರ್ನಾಟಕದ ರತ್ನ’ ಅಪ್ಪುಗೆ ಮೂರನೇ ವರ್ಷದ ಪುಣ್ಯ ಸ್ಮರಣೆ; ತಮ್ಮನನ್ನ ನೆನೆದು ಕಣ್ಣೀರಿಟ್ಟ ಹಿರಿಯ ಅಕ್ಕ.. ಹೇಳಿದ್ದೇನು?
Advertisment
  • ಇಂದು ಪ್ರೀತಿಯ ಅಪ್ಪುಗೆ ಮೂರನೇ ವರ್ಷದ ಪುಣ್ಯ ಸ್ಮರಣೆ
  • ಅಕ್ಟೋಬರ್ 29ರಂದು 2021ರಲ್ಲಿ ನಿಧನರಾಗಿದ್ದ ಸ್ಟಾರ್​ ನಟ
  • ಕಂಠೀರವ ಸ್ಟುಡಿಯೋದಲ್ಲಿ ಸೇರಿರೋ ಅಪಾರ ಅಭಿಮಾನಿಗಳು

ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿ ಇಂದಿಗೆ ಮೂರು ವರ್ಷ. ಅಪ್ಪು ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದಾರೆ.

Advertisment

ಇದನ್ನೂ ಓದಿ: ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ

publive-image

ಇನ್ನೂ, 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್​ ರಾಜ್​ಕುಮಾರ್​​ ಸಮಾಧಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ರಾಜ್ ಕುಟುಂಬಸ್ಥರು ಆಗಮಿಸಿ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.

ಪುಣ್ಯಸ್ಮರಣೆ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುನೀತ್ ರಾಜ್‍ಕುಮಾರ್ ಅವರ ಅಕ್ಕ ಲಕ್ಷ್ಮೀ ಈ ಬಗ್ಗೆ  ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಒಂದು ವಾರದ ಮುಂಚಿತವಾಗಿಯೇ ನಮ್ಮಗೆ ಒಂಥರ ನೋವಾಗುತ್ತೆ. ಅಯ್ಯೋ ಪೂಜೆ ಮಾಡಬೇಕು ಅಲ್ವಾ ಅಂತ ಬೇಸರ ಆಗುತ್ತೆ. ಇಲ್ಲಿ ಬಂದು ಅಭಿಮಾನಿಗಳನ್ನು ನೋಡಿದಾಗ ಖುಷಿ ಆಗುತ್ತೆ. ಆದರೆ ನಮ್ಮ ಅಪ್ಪು ಎಲ್ಲೂ ಹೋಗಿಲ್ಲ ನಿಮ್ಮಲ್ಲೇ ಇದ್ದಾನೆ. ನಾವು ಅವನ ಕೈಯಿಂದ ಪೂಜೆ ಮಾಡಿಸಿಕೊಳ್ಳಬೇಕಾಗಿತ್ತು ಆದರೆ, ಅವನಗೆ ನಾವು ಪೂಜೆ ಮಾಡುವಂತ ಸ್ಥಿತಿ ಬಂದಿದೆ ಅಂತ ಕಣ್ಣೀರು ಹಾಕಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment