ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ
ಇದು ಪ್ರಿಯಾ ಮತ್ತು ಮನುವಿನ ಮುದ್ದಾದ ಲವ್ ಸ್ಟೋರಿ
ಹೇಮಂತ್ ರಾವ್ ನಿರ್ದೇಶಿಸಿರುವ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ
‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ. ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ನಿನ್ನೆ ರಿಲೀಸ್ ಮಾಡಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್, ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್ ರಾವ್ ಕೆಲಸ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ.
ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯೊಂದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ
ಇದು ಪ್ರಿಯಾ ಮತ್ತು ಮನುವಿನ ಮುದ್ದಾದ ಲವ್ ಸ್ಟೋರಿ
ಹೇಮಂತ್ ರಾವ್ ನಿರ್ದೇಶಿಸಿರುವ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ
‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ. ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ನಿನ್ನೆ ರಿಲೀಸ್ ಮಾಡಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್, ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್ ರಾವ್ ಕೆಲಸ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ.
ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯೊಂದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ