newsfirstkannada.com

Trailer: ‘ಮನು ನನ್​ ಸಮುದ್ರ ನೀನು..’ ಸಪ್ತ ಸಾಗರದಾಚೆಗೆ ತನ್ನ ಪ್ರೀತಿನ ಹೇಳಲು ಹೊರಟ ರಕ್ಷಿತ್​ ಶೆಟ್ಟಿ..!

Share :

18-08-2023

    ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ

    ಇದು ಪ್ರಿಯಾ ಮತ್ತು ಮನುವಿನ ಮುದ್ದಾದ ಲವ್​ ಸ್ಟೋರಿ

    ಹೇಮಂತ್​ ರಾವ್ ನಿರ್ದೇಶಿಸಿರುವ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ

‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್​​ ಸ್ಟಾರ್​ ರಕ್ಷಿತ್​​ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ. ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು  ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್​ ಅನ್ನು ಚಿತ್ರತಂಡ ನಿನ್ನೆ ರಿಲೀಸ್​​ ಮಾಡಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್​ ರಾವ್​ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್,​ ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್​ ರಾವ್ ಕೆಲಸ​ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್​​ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್​ 1 ರಂದು ರಿಲೀಸ್​ ಆಗಲಿದೆ.

ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್​​ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್​​ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ​ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್​ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್​ ರಾಜ್​ ಸಂಗೀತ ಸಂಯೋಜನೆಯೊಂದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Trailer: ‘ಮನು ನನ್​ ಸಮುದ್ರ ನೀನು..’ ಸಪ್ತ ಸಾಗರದಾಚೆಗೆ ತನ್ನ ಪ್ರೀತಿನ ಹೇಳಲು ಹೊರಟ ರಕ್ಷಿತ್​ ಶೆಟ್ಟಿ..!

https://newsfirstlive.com/wp-content/uploads/2023/08/Sapta-Sagara-dache-yello.jpg

    ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ

    ಇದು ಪ್ರಿಯಾ ಮತ್ತು ಮನುವಿನ ಮುದ್ದಾದ ಲವ್​ ಸ್ಟೋರಿ

    ಹೇಮಂತ್​ ರಾವ್ ನಿರ್ದೇಶಿಸಿರುವ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ

‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್​​ ಸ್ಟಾರ್​ ರಕ್ಷಿತ್​​ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ. ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು  ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್​ ಅನ್ನು ಚಿತ್ರತಂಡ ನಿನ್ನೆ ರಿಲೀಸ್​​ ಮಾಡಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್​ ರಾವ್​ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್,​ ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್​ ರಾವ್ ಕೆಲಸ​ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್​​ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್​ 1 ರಂದು ರಿಲೀಸ್​ ಆಗಲಿದೆ.

ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್​​ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್​​ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ​ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್​ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್​ ರಾಜ್​ ಸಂಗೀತ ಸಂಯೋಜನೆಯೊಂದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More