newsfirstkannada.com

ಬೆಂಗಳೂರಲ್ಲಿ ಮಿತಿಮೀರಿದ ರೌಡಿಗಳ ಹಾವಳಿ.. ಸೆಕ್ಯೂರಿಟಿ ಗಾರ್ಡ್​​ ಮುಖದ ಮೇಲೆ ಚಾಕುವಿನಿಂದ ಹಲ್ಲೆ!

Share :

20-06-2023

    ಬೆಂಗಳೂರಲ್ಲಿ ಮಿತಿಮೀರಿದ ಪುಡಿರೌಡಿಗಳ ಹಾವಳಿ

    ಎಂಎಲ್​​ಎ ಲೇಔಟ್​​ನಲ್ಲೇ ಯಾರಿಗೂ ಇಲ್ಲ ಸೇಫ್ಟಿ

    ಸೆಕ್ಯೂರಿಟಿ ಗಾರ್ಡ್​​ಗೆ ಚಾಕುವಿನಿಂದ ತೀವ್ರ ಹಲ್ಲೆ..!

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಪುಡಿರೌಡಿಗಳ ಹಾವಳಿ ಮಿತಿಮೀರಿದೆ. ಕಳ್ಳರ ಹಾವಳಿ ತಡೆಗೆ ಸೆಕ್ಯೂರಿಟಿಗಳನ್ನ ನೇಮಕ ಮಾಡಿದರೆ, ಅವರ ಜೀವಕ್ಕೂ ಯಾವುದೇ ಸೇಫ್ಟಿ ಇಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಕೂತಿದ್ದರೂ ಪುಡಿರೌಡಿಗಳು ಬಂದು ಹಲ್ಲೆ ನಡೆಸುತ್ತಾರೆ. ಈ ರೀತಿಯ ಎಷ್ಟೋ ಕೇಸುಗಳು ಬೆಳಕಿಗೆ ಬಂದಿವೆ.

ಈಗ ಇಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಪುಡಿರೌಡಿಯೋರ್ವ ಬಂದವನೇ ಏಕಾಏಕಿ ಸೆಕ್ಯೂರಿಟಿ ಗಾರ್ಡ್​ ಆಲ್ಬರ್ಟ್​​ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಮುಖದ ಮೇಲೆ ಮಾರ್ಕ್​ ಹಾಕಿ ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಮನೆ ಸಮೀಪವೇ.

ಯೆಸ್​​, ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಅವರ ಆರ್​ಟಿ ನಗರದ MLA ಲೇಔಟ್​​​​​ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್​ ಮುಖಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಸಂಬಂಧ ಆರ್​ಟಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಬೆಂಗಳೂರಲ್ಲಿ ಮಿತಿಮೀರಿದ ರೌಡಿಗಳ ಹಾವಳಿ.. ಸೆಕ್ಯೂರಿಟಿ ಗಾರ್ಡ್​​ ಮುಖದ ಮೇಲೆ ಚಾಕುವಿನಿಂದ ಹಲ್ಲೆ!

https://newsfirstlive.com/wp-content/uploads/2023/06/Attack.jpg

    ಬೆಂಗಳೂರಲ್ಲಿ ಮಿತಿಮೀರಿದ ಪುಡಿರೌಡಿಗಳ ಹಾವಳಿ

    ಎಂಎಲ್​​ಎ ಲೇಔಟ್​​ನಲ್ಲೇ ಯಾರಿಗೂ ಇಲ್ಲ ಸೇಫ್ಟಿ

    ಸೆಕ್ಯೂರಿಟಿ ಗಾರ್ಡ್​​ಗೆ ಚಾಕುವಿನಿಂದ ತೀವ್ರ ಹಲ್ಲೆ..!

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಪುಡಿರೌಡಿಗಳ ಹಾವಳಿ ಮಿತಿಮೀರಿದೆ. ಕಳ್ಳರ ಹಾವಳಿ ತಡೆಗೆ ಸೆಕ್ಯೂರಿಟಿಗಳನ್ನ ನೇಮಕ ಮಾಡಿದರೆ, ಅವರ ಜೀವಕ್ಕೂ ಯಾವುದೇ ಸೇಫ್ಟಿ ಇಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಕೂತಿದ್ದರೂ ಪುಡಿರೌಡಿಗಳು ಬಂದು ಹಲ್ಲೆ ನಡೆಸುತ್ತಾರೆ. ಈ ರೀತಿಯ ಎಷ್ಟೋ ಕೇಸುಗಳು ಬೆಳಕಿಗೆ ಬಂದಿವೆ.

ಈಗ ಇಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಪುಡಿರೌಡಿಯೋರ್ವ ಬಂದವನೇ ಏಕಾಏಕಿ ಸೆಕ್ಯೂರಿಟಿ ಗಾರ್ಡ್​ ಆಲ್ಬರ್ಟ್​​ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಮುಖದ ಮೇಲೆ ಮಾರ್ಕ್​ ಹಾಕಿ ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಮನೆ ಸಮೀಪವೇ.

ಯೆಸ್​​, ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಅವರ ಆರ್​ಟಿ ನಗರದ MLA ಲೇಔಟ್​​​​​ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್​ ಮುಖಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಸಂಬಂಧ ಆರ್​ಟಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

Load More