ಟೆಸ್ಟ್ನಲ್ಲಿ ಸೋಲು, ಟ್ಯಾಲೆಂಟೆಡ್ ಆಟಗಾರರಿಗೆ ಸಿಗುತ್ತಿದೆಯಾ ತರಬೇತಿ?
ಸ್ಟಾರ್ಗಳಿಗೆಲ್ಲ ವಯಸ್ಸಾಯಿತು, ಭವಿಷ್ಯದ ಪ್ಲೇಯರ್ಸ್ಗಾಗಿ ಹುಡುಕಾಟ
ಭವಿಷ್ಯದ ತಂಡ ರೂಪಿಸಲು ಬಿಸಿಸಿಐ ಪ್ಲಾನ್, ತಂಡದಲ್ಲಿ ಬದಲಾವಣೆ ಸಾಧ್ಯತೆ
ಟೀಮ್ ಇಂಡಿಯಾದಲ್ಲಿ ಬದಲಾವಣೆ. ದಿನವೂ ಇದೇ ಸುದ್ದಿ ಸದ್ದು ಮಾಡ್ತಿದೆ. ಆದ್ರೆ, ಒಂದು ವೇಳೆ ಬದಲಾವಣೆಗೆ ಮುಂದಾದ್ರೆ, ಸೀನಿಯರ್ಗಳನ್ನ ರಿಪ್ಲೇಸ್ ಮಾಡೋ ಆಟಗಾರರು ಇದ್ದಾರಾ?. ಭವಿಷ್ಯದ ತಂಡ ರೂಪಿಸೋಕೆ ಬಿಸಿಸಿಐ ಪ್ಲಾನ್ ಏನಿದೆ.? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಯಾಕಂದ್ರೆ, ಬಿಸಿಸಿಐ ಬಾಸ್ಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡೇ ಇಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲು ಟೀಮ್ ಇಂಡಿಯಾವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಕೋಚ್ ರಾಹುಲ್ ದ್ರಾವಿಡ್ -ಕ್ಯಾಪ್ಟನ್ ರೋಹಿತ್ ಶರ್ಮಾರ ಸಾಮರ್ಥ್ಯದಿಂದ ಹಿಡಿದು, ಹಿರಿಯ ಆಟಗಾರರ ಅಗತ್ಯತೆ ತಂಡಕ್ಕೆ ಇದ್ಯಾ ಎಂಬ ಡಿಬೆಟ್ಗಳು ನಡೀತಾ ಇವೆ. ಈಗಾಗಲೇ 10 ವರ್ಷದಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋ ಕಳಪೆ ಸಾಧನೆಯಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ, ಕ್ರಿಕೆಟ್ ಲೋಕದಲ್ಲಿ ತಲೆತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೂ ಬಿಸಿಸಿಐ ಎಚ್ಚೆತ್ತುಕೊಂಡಂತೆ ಕಾಣ್ತಿಲ್ಲ..
ಸ್ಟಾರ್ಗಳಿಗೆಲ್ಲ ವಯಸ್ಸಾಯ್ತು.., ಭವಿಷ್ಯ ಮುಂದೇನು.?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಹಲ ಸ್ಟಾರ್ಗಳ ವಯಸ್ಸು 32ರ ಗಡಿ ದಾಟಿದೆ. ಇನ್ನೂ, ಎಷ್ಟು ವರ್ಷ ಸ್ಟಾರ್ ಗಿರಿಯನ್ನೇ ನಂಬಿಕೊಂಡು ಇರೋಕಾಗುತ್ತೆ. ತಂಡದಲ್ಲಿರೋ ಈ ಸೀನಿಯರ್ಗಳಿಗೆಲ್ಲ ಎಲ್ಲೆಡೆ ಆಡಿದ ಅನುಭವವಿದೆ. ಸರಾಗವಾಗಿ ರನ್ಗಳಿಸಿದ್ದಾರೆ. ವಿಕೆಟ್ ಬೇಟೆಯಾಡಿದ್ದಾರೆ. ಹೋರಾಡಿ ಹಲ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಎಲ್ಲ ಸರಿ.. ಹಾಗಂತ ಭವಿಷ್ಯದ ಬಗ್ಗೆ ಯೋಚಿಸದೇ ಸುಮ್ಮನೇ ಕೂರೋಕಾಗುತ್ತಾ?. ಇವರೆಲ್ಲರನ್ನ ರಿಪ್ಲೇಸ್ ಮಾಡಬಹುದಾದದ ಯುವ ಆಟಗಾರರನ್ನ ಹುಡುಕಬೇಕಲ್ವಾ?.
ಟೀಮ್ ಇಂಡಿಯಾದಲ್ಲಿ ಬದಲಾವಣೆಗೆ ಇದೇ ಬೆಸ್ಟ್ ಟೈಂ.!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತ ಬಳಿಕ ಬದಲಾವಣೆಯ ಬಗ್ಗೆ ಮಾತುಗಳು ಕೇಳಿ ಬರ್ತಿವೆ. ಮುಂಬರೋ ವೆಸ್ಟ್ ಇಂಡೀಸ್ ಸರಣಿಯಲ್ಲೇ ತಂಡದಲ್ಲಿ ಭಾರಿ ಬದಲಾವಣೆ ಆಗುತ್ತೆ ಎಂಬ ಉಹಾಪೋಹ ಹರಿದಾಡ್ತಿದೆ. ಹಾಗಾದ್ರೆ, ಸೀನಿಯರ್ಗಳನ್ನ ರಿಪ್ಲೇಸ್ ಮಾಡೋ ಸಮರ್ಥ ಆಟಗಾರರು ಯಾರಪ್ಪ ಇದ್ದಾರೆ ಎಂದು ಹುಡುಕಿದ್ರೆ, ಉತ್ತರವೇ ಸಿಗಲ್ಲ. ಹಾಗಿದೆ ಸದ್ಯದ ಪರಿಸ್ಥಿತಿ. ಐಪಿಎಲ್ ಟೂರ್ನಿ, ರಣಜಿ ಟೂರ್ನಿ ಸೇರಿದಂತೆ ಹಲವು ಕಡೆ ಸಾಲಿಡ್ ಪರ್ಫಾಮೆನ್ಸ್ ನೀಡಿರೋ ಯುವ ಆಟಗಾರರ ಲಿಸ್ಟೇ ಇದೆ. ಆದ್ರೆ, ಇವರೆಲ್ಲ ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಪರ್ಫಾಮ್ ಮಾಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ.
ಭವಿಷ್ಯದ ಭಾರತ ತಂಡದ ನಿರ್ಮಾಣಕ್ಕೆ ಪ್ಲಾನ್ ಏನು.?
ಡೊಮೆಸ್ಟಿಕ್ ಸರ್ಕ್ಯೂಟ್ನಲ್ಲಿ ಟ್ಯಾಲೆಂಟೆಡ್ ಪ್ಲೇಯರ್ಸ್ಗಳ ದಂಡೇ ಇದೆ. ಆದ್ರೆ, ಏಕಾಏಕಿ ಇಂಟರ್ನ್ಯಾಷನಲ್ ಲೆವೆಲ್ಗೆ ಕರೆದುಕೊಂಡು ಬಂದರೆ ಅವರ ಕರಿಯರ್ಗೆ ಫುಲ್ ಸ್ಟಾಫ್ ಬೀಳೋ ಸಾಧ್ಯತೆಯೇ ಜಾಸ್ತಿ. ಐಪಿಎಲ್ನಿಂದ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟ ವೆಂಕಟೇಶ್ ಅಯ್ಯರ್, ಪರ್ಫಾಮ್ ಮಾಡೋಕಾಗದೇ ಒದ್ದಾಡಿದ್ರು. ವೇಗಿ ಟಿ.ನಟರಾಜನ್ ಇಂಜುರಿ ಮ್ಯಾನೇಜ್ ಮಾಡೋಕಾಗದೇ ಹಿನ್ನಡೆ ಅನುಭವಿಸಿದ್ರು. ವರುಣ್ ಚಕ್ರವರ್ತಿ ತಂಡದಿಂದ ಹೊರಬಿದ್ದಿದ್ದು ಇಂದಿಗೂ ಮಿಸ್ಟ್ರಿಯಾಗಿದೆ. ಹುಡುಕ್ತಾ ಹೋದ್ರೆ ಇನ್ನೂ ಹಲ ಉದಾಹರಣೆಗಳಿವೆ. ಹೀಗಾಗಿ ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಎಚ್ಚೆತ್ತುಕೊಳ್ಳಬೇಕಿದೆ.
ಇಂಜುರಿ ಫ್ರಿಯಾಗಿರಿಸಿಕೊಳ್ಳಲು ಸ್ಪಷ್ಟವಾದ ಯೋಜನೆ
ಭವಿಷ್ಯದ ತಂಡ ಕಟ್ಟಲು ಬಿಸಿಸಿಐ ಈಗಲಾದ್ರೂ ಮಹತ್ವದ ಪ್ಲಾನ್ ರೂಪಿಸಬೇಕಿದೆ. ಐಪಿಎಲ್, ಡೊಮೆಸ್ಟಿಕ್ ಕ್ರಿಕೆಟ್ ಎಲ್ಲಾದ್ರೂ ಸರಿ. ಟೀಮ್ ಇಂಡಿಯಾ ಪರ ಆಡಬಲ್ಲ ಸಮರ್ಥ ಆಟಗಾರರನ್ನು ಗುರುತಿಸಬೇಕಿದೆ. ಆ ಆಟಗಾರರನ್ನು ಹೆಚ್ಚು ಹೆಚ್ಚು ಟೂರ್ ಗೇಮ್ಗಳಿಗೆ ಕಳಿಸಿ, ಫಾರಿನ್ ಕಂಡೀಷನ್ಸ್ಗಳಲ್ಲಿ ಆಡಿಸಬೇಕು. ಮೆಂಟಲ್ ಫಿಟ್ನೆಸ್, ಫಿಸಿಕಲ್ ಫಿಟ್ನೆಸ್ಗೆ ನಿರ್ದಿಷ್ಟ ಮಾನದಂಡಗಳನ್ನ ರೂಪಿಸಿ ಆಟಗಾರರನ್ನ ಇಂಜುರಿ ಪ್ರೀ ಮಾಡಿಕೊಳ್ಳಲು ಸ್ಪಷ್ಟ ಪ್ಲ್ಯಾನ್ ರೂಪಿಸಬೇಕಿದೆ.
ಟೀಮ್ ಇಂಡಿಯಾದಲ್ಲೂ ಡೈರೆಕ್ಟರ್ ಹುದ್ದೆ ಸೃಷ್ಟಿಯಾದ್ರೆ ಬೆಸ್ಟ್.!
ಪ್ರಮುಖ ವಿದೇಶಿ ತಂಡಗಳಲ್ಲಿ ಡೈರೆಕ್ಟರ್ ಎಂಬ ಹುದ್ದೆಯಿದೆ. ಫ್ಯೂಚರ್ ತಂಡವನ್ನ ರೂಪಿಸುವಲ್ಲಿ ಈ ಹುದ್ದೆಯಲ್ಲಿರೋವ್ರು ಪ್ರಮುಖ ಪಾತ್ರ ನಿರ್ವಹಿಸ್ತಾರೆ. ಟೀಮ್ ಇಂಡಿಯಾದಲ್ಲೂ ಇಂತಾ ಹುದ್ದೆಯ ಸೃಷ್ಟಿ ಮಾಡುವ ಅಗತ್ಯತೆಯಿದೆ. ಸಮರ್ಥರನ್ನ ಈ ಹುದ್ದೆಗೆ ತಂದು ಕೂರಿಸಿ ಭವಿಷ್ಯದ ತಂಡವನ್ನ ಕಟ್ಟಲು ಸ್ಪಷ್ಟ ಬ್ಲ್ಯೂ ಪ್ರಿಂಟ್ ರೂಪಿಸಿ, ಅಂದುಕೊಂಡ ಪ್ಲ್ಯಾನ್ಗಳನ್ನ ಕಾರ್ಯ ರೂಪಕ್ಕೆ ಇಳಿಸಬೇಕು. ಹಾಗಾದ್ರೆ, ಪ್ಯೂಚರ್ ತಂಡವನ್ನ ಕಟ್ಟೋದು ಕಷ್ಟದ ಕೆಲಸ ಅಲ್ಲವೇ ಅಲ್ಲ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು 4 ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತಂಡದಲ್ಲಿ ಭಾರೀ ಬದಲಾವಣೆ ಮಾಡೋದು ಅನುಮಾನ. ಆದ್ರೆ, ಆ ಬಳಿಕ ಬದಲಾವಣೆ ಆಗೋದಂತೂ ಪಕ್ಕಾ. ಅಷ್ಟರೊಳಗೆ ಬಿಸಿಸಿಐ, ಯಂಗ್ ಟ್ಯಾಲೆಂಟ್ ಹಂಟ್ ಮಾಡೋಕೆ ಎಲ್ಲ ಕ್ರಮಗಳನ್ನ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೆಸ್ಟ್ನಲ್ಲಿ ಸೋಲು, ಟ್ಯಾಲೆಂಟೆಡ್ ಆಟಗಾರರಿಗೆ ಸಿಗುತ್ತಿದೆಯಾ ತರಬೇತಿ?
ಸ್ಟಾರ್ಗಳಿಗೆಲ್ಲ ವಯಸ್ಸಾಯಿತು, ಭವಿಷ್ಯದ ಪ್ಲೇಯರ್ಸ್ಗಾಗಿ ಹುಡುಕಾಟ
ಭವಿಷ್ಯದ ತಂಡ ರೂಪಿಸಲು ಬಿಸಿಸಿಐ ಪ್ಲಾನ್, ತಂಡದಲ್ಲಿ ಬದಲಾವಣೆ ಸಾಧ್ಯತೆ
ಟೀಮ್ ಇಂಡಿಯಾದಲ್ಲಿ ಬದಲಾವಣೆ. ದಿನವೂ ಇದೇ ಸುದ್ದಿ ಸದ್ದು ಮಾಡ್ತಿದೆ. ಆದ್ರೆ, ಒಂದು ವೇಳೆ ಬದಲಾವಣೆಗೆ ಮುಂದಾದ್ರೆ, ಸೀನಿಯರ್ಗಳನ್ನ ರಿಪ್ಲೇಸ್ ಮಾಡೋ ಆಟಗಾರರು ಇದ್ದಾರಾ?. ಭವಿಷ್ಯದ ತಂಡ ರೂಪಿಸೋಕೆ ಬಿಸಿಸಿಐ ಪ್ಲಾನ್ ಏನಿದೆ.? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಯಾಕಂದ್ರೆ, ಬಿಸಿಸಿಐ ಬಾಸ್ಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡೇ ಇಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲು ಟೀಮ್ ಇಂಡಿಯಾವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಕೋಚ್ ರಾಹುಲ್ ದ್ರಾವಿಡ್ -ಕ್ಯಾಪ್ಟನ್ ರೋಹಿತ್ ಶರ್ಮಾರ ಸಾಮರ್ಥ್ಯದಿಂದ ಹಿಡಿದು, ಹಿರಿಯ ಆಟಗಾರರ ಅಗತ್ಯತೆ ತಂಡಕ್ಕೆ ಇದ್ಯಾ ಎಂಬ ಡಿಬೆಟ್ಗಳು ನಡೀತಾ ಇವೆ. ಈಗಾಗಲೇ 10 ವರ್ಷದಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋ ಕಳಪೆ ಸಾಧನೆಯಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ, ಕ್ರಿಕೆಟ್ ಲೋಕದಲ್ಲಿ ತಲೆತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೂ ಬಿಸಿಸಿಐ ಎಚ್ಚೆತ್ತುಕೊಂಡಂತೆ ಕಾಣ್ತಿಲ್ಲ..
ಸ್ಟಾರ್ಗಳಿಗೆಲ್ಲ ವಯಸ್ಸಾಯ್ತು.., ಭವಿಷ್ಯ ಮುಂದೇನು.?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಹಲ ಸ್ಟಾರ್ಗಳ ವಯಸ್ಸು 32ರ ಗಡಿ ದಾಟಿದೆ. ಇನ್ನೂ, ಎಷ್ಟು ವರ್ಷ ಸ್ಟಾರ್ ಗಿರಿಯನ್ನೇ ನಂಬಿಕೊಂಡು ಇರೋಕಾಗುತ್ತೆ. ತಂಡದಲ್ಲಿರೋ ಈ ಸೀನಿಯರ್ಗಳಿಗೆಲ್ಲ ಎಲ್ಲೆಡೆ ಆಡಿದ ಅನುಭವವಿದೆ. ಸರಾಗವಾಗಿ ರನ್ಗಳಿಸಿದ್ದಾರೆ. ವಿಕೆಟ್ ಬೇಟೆಯಾಡಿದ್ದಾರೆ. ಹೋರಾಡಿ ಹಲ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಎಲ್ಲ ಸರಿ.. ಹಾಗಂತ ಭವಿಷ್ಯದ ಬಗ್ಗೆ ಯೋಚಿಸದೇ ಸುಮ್ಮನೇ ಕೂರೋಕಾಗುತ್ತಾ?. ಇವರೆಲ್ಲರನ್ನ ರಿಪ್ಲೇಸ್ ಮಾಡಬಹುದಾದದ ಯುವ ಆಟಗಾರರನ್ನ ಹುಡುಕಬೇಕಲ್ವಾ?.
ಟೀಮ್ ಇಂಡಿಯಾದಲ್ಲಿ ಬದಲಾವಣೆಗೆ ಇದೇ ಬೆಸ್ಟ್ ಟೈಂ.!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತ ಬಳಿಕ ಬದಲಾವಣೆಯ ಬಗ್ಗೆ ಮಾತುಗಳು ಕೇಳಿ ಬರ್ತಿವೆ. ಮುಂಬರೋ ವೆಸ್ಟ್ ಇಂಡೀಸ್ ಸರಣಿಯಲ್ಲೇ ತಂಡದಲ್ಲಿ ಭಾರಿ ಬದಲಾವಣೆ ಆಗುತ್ತೆ ಎಂಬ ಉಹಾಪೋಹ ಹರಿದಾಡ್ತಿದೆ. ಹಾಗಾದ್ರೆ, ಸೀನಿಯರ್ಗಳನ್ನ ರಿಪ್ಲೇಸ್ ಮಾಡೋ ಸಮರ್ಥ ಆಟಗಾರರು ಯಾರಪ್ಪ ಇದ್ದಾರೆ ಎಂದು ಹುಡುಕಿದ್ರೆ, ಉತ್ತರವೇ ಸಿಗಲ್ಲ. ಹಾಗಿದೆ ಸದ್ಯದ ಪರಿಸ್ಥಿತಿ. ಐಪಿಎಲ್ ಟೂರ್ನಿ, ರಣಜಿ ಟೂರ್ನಿ ಸೇರಿದಂತೆ ಹಲವು ಕಡೆ ಸಾಲಿಡ್ ಪರ್ಫಾಮೆನ್ಸ್ ನೀಡಿರೋ ಯುವ ಆಟಗಾರರ ಲಿಸ್ಟೇ ಇದೆ. ಆದ್ರೆ, ಇವರೆಲ್ಲ ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಪರ್ಫಾಮ್ ಮಾಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ.
ಭವಿಷ್ಯದ ಭಾರತ ತಂಡದ ನಿರ್ಮಾಣಕ್ಕೆ ಪ್ಲಾನ್ ಏನು.?
ಡೊಮೆಸ್ಟಿಕ್ ಸರ್ಕ್ಯೂಟ್ನಲ್ಲಿ ಟ್ಯಾಲೆಂಟೆಡ್ ಪ್ಲೇಯರ್ಸ್ಗಳ ದಂಡೇ ಇದೆ. ಆದ್ರೆ, ಏಕಾಏಕಿ ಇಂಟರ್ನ್ಯಾಷನಲ್ ಲೆವೆಲ್ಗೆ ಕರೆದುಕೊಂಡು ಬಂದರೆ ಅವರ ಕರಿಯರ್ಗೆ ಫುಲ್ ಸ್ಟಾಫ್ ಬೀಳೋ ಸಾಧ್ಯತೆಯೇ ಜಾಸ್ತಿ. ಐಪಿಎಲ್ನಿಂದ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟ ವೆಂಕಟೇಶ್ ಅಯ್ಯರ್, ಪರ್ಫಾಮ್ ಮಾಡೋಕಾಗದೇ ಒದ್ದಾಡಿದ್ರು. ವೇಗಿ ಟಿ.ನಟರಾಜನ್ ಇಂಜುರಿ ಮ್ಯಾನೇಜ್ ಮಾಡೋಕಾಗದೇ ಹಿನ್ನಡೆ ಅನುಭವಿಸಿದ್ರು. ವರುಣ್ ಚಕ್ರವರ್ತಿ ತಂಡದಿಂದ ಹೊರಬಿದ್ದಿದ್ದು ಇಂದಿಗೂ ಮಿಸ್ಟ್ರಿಯಾಗಿದೆ. ಹುಡುಕ್ತಾ ಹೋದ್ರೆ ಇನ್ನೂ ಹಲ ಉದಾಹರಣೆಗಳಿವೆ. ಹೀಗಾಗಿ ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಎಚ್ಚೆತ್ತುಕೊಳ್ಳಬೇಕಿದೆ.
ಇಂಜುರಿ ಫ್ರಿಯಾಗಿರಿಸಿಕೊಳ್ಳಲು ಸ್ಪಷ್ಟವಾದ ಯೋಜನೆ
ಭವಿಷ್ಯದ ತಂಡ ಕಟ್ಟಲು ಬಿಸಿಸಿಐ ಈಗಲಾದ್ರೂ ಮಹತ್ವದ ಪ್ಲಾನ್ ರೂಪಿಸಬೇಕಿದೆ. ಐಪಿಎಲ್, ಡೊಮೆಸ್ಟಿಕ್ ಕ್ರಿಕೆಟ್ ಎಲ್ಲಾದ್ರೂ ಸರಿ. ಟೀಮ್ ಇಂಡಿಯಾ ಪರ ಆಡಬಲ್ಲ ಸಮರ್ಥ ಆಟಗಾರರನ್ನು ಗುರುತಿಸಬೇಕಿದೆ. ಆ ಆಟಗಾರರನ್ನು ಹೆಚ್ಚು ಹೆಚ್ಚು ಟೂರ್ ಗೇಮ್ಗಳಿಗೆ ಕಳಿಸಿ, ಫಾರಿನ್ ಕಂಡೀಷನ್ಸ್ಗಳಲ್ಲಿ ಆಡಿಸಬೇಕು. ಮೆಂಟಲ್ ಫಿಟ್ನೆಸ್, ಫಿಸಿಕಲ್ ಫಿಟ್ನೆಸ್ಗೆ ನಿರ್ದಿಷ್ಟ ಮಾನದಂಡಗಳನ್ನ ರೂಪಿಸಿ ಆಟಗಾರರನ್ನ ಇಂಜುರಿ ಪ್ರೀ ಮಾಡಿಕೊಳ್ಳಲು ಸ್ಪಷ್ಟ ಪ್ಲ್ಯಾನ್ ರೂಪಿಸಬೇಕಿದೆ.
ಟೀಮ್ ಇಂಡಿಯಾದಲ್ಲೂ ಡೈರೆಕ್ಟರ್ ಹುದ್ದೆ ಸೃಷ್ಟಿಯಾದ್ರೆ ಬೆಸ್ಟ್.!
ಪ್ರಮುಖ ವಿದೇಶಿ ತಂಡಗಳಲ್ಲಿ ಡೈರೆಕ್ಟರ್ ಎಂಬ ಹುದ್ದೆಯಿದೆ. ಫ್ಯೂಚರ್ ತಂಡವನ್ನ ರೂಪಿಸುವಲ್ಲಿ ಈ ಹುದ್ದೆಯಲ್ಲಿರೋವ್ರು ಪ್ರಮುಖ ಪಾತ್ರ ನಿರ್ವಹಿಸ್ತಾರೆ. ಟೀಮ್ ಇಂಡಿಯಾದಲ್ಲೂ ಇಂತಾ ಹುದ್ದೆಯ ಸೃಷ್ಟಿ ಮಾಡುವ ಅಗತ್ಯತೆಯಿದೆ. ಸಮರ್ಥರನ್ನ ಈ ಹುದ್ದೆಗೆ ತಂದು ಕೂರಿಸಿ ಭವಿಷ್ಯದ ತಂಡವನ್ನ ಕಟ್ಟಲು ಸ್ಪಷ್ಟ ಬ್ಲ್ಯೂ ಪ್ರಿಂಟ್ ರೂಪಿಸಿ, ಅಂದುಕೊಂಡ ಪ್ಲ್ಯಾನ್ಗಳನ್ನ ಕಾರ್ಯ ರೂಪಕ್ಕೆ ಇಳಿಸಬೇಕು. ಹಾಗಾದ್ರೆ, ಪ್ಯೂಚರ್ ತಂಡವನ್ನ ಕಟ್ಟೋದು ಕಷ್ಟದ ಕೆಲಸ ಅಲ್ಲವೇ ಅಲ್ಲ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು 4 ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತಂಡದಲ್ಲಿ ಭಾರೀ ಬದಲಾವಣೆ ಮಾಡೋದು ಅನುಮಾನ. ಆದ್ರೆ, ಆ ಬಳಿಕ ಬದಲಾವಣೆ ಆಗೋದಂತೂ ಪಕ್ಕಾ. ಅಷ್ಟರೊಳಗೆ ಬಿಸಿಸಿಐ, ಯಂಗ್ ಟ್ಯಾಲೆಂಟ್ ಹಂಟ್ ಮಾಡೋಕೆ ಎಲ್ಲ ಕ್ರಮಗಳನ್ನ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ