Advertisment

BBK11: ಬಿಗ್​ಬಾಸ್ ಮನೆಯಲ್ಲಿ ಮತ್ತೆ ಶುರುವಾಯ್ತು ಜಗಳ; ಉಗ್ರಂ, ಶಿಶರ್​ ಮಧ್ಯೆ ಆಗಿದ್ದೇನು?

author-image
Veena Gangani
Updated On
BBK11: ಬಿಗ್​ಬಾಸ್ ಮನೆಯಲ್ಲಿ ಮತ್ತೆ ಶುರುವಾಯ್ತು ಜಗಳ; ಉಗ್ರಂ, ಶಿಶರ್​ ಮಧ್ಯೆ ಆಗಿದ್ದೇನು?
Advertisment
  • ಉಗ್ರಂ ಮಂಜುಗೆ ದಿಬ್ಬಿನಿಂದ ಹೊಡೆದು ಬೀಳಿಸಿದ ಶಿಶಿರ್​
  • ಬಿಗ್​ಬಾಸ್​ ಮನೆಯಲ್ಲಿ ಸ್ನೇಹಿತರ ನಡುವೆ ಶುರುವಾಯ್ತು ಫೈಟ್​
  • ಈ ವಾರದ ​ಕ್ಯಾಪ್ಟನ್ ಪಟ್ಟ ಸಿಗೋದು ಯಾವ ಸ್ಪರ್ಧಿಗೆ ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 14 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರ ಪೈಕಿ ಮೊನ್ನೆಯಷ್ಟೇ ಬಿಗ್​ಬಾಸ್​ ಮನೆಯಿಂದ ಲಾಯರ್​ ಜಗದೀಶ್​ ಹಾಗೂ ರಂಜಿತ್​ ಔಟ್​ ಆಗಿದ್ದರು.

Advertisment

ಇದನ್ನೂ ಓದಿ: ಬಿಗ್​ ಬಾಸ್​ ವೇದಿಕೆ ಮೇಲೆ ಅಮ್ಮನನ್ನು ನೆನೆದಿದ್ದ ಕಿಚ್ಚ​.. ಶೂಟಿಂಗ್​ ಮುಗಿಸಿ ಆಸ್ಪತ್ರೆ ಓಡಿ ಹೋಗಿದ್ರು

publive-image

ಇದಾದ ಬೆನ್ನಲ್ಲೇ ಬಿಗ್​​ಬಾಸ್​ ಮನೆಗೆ ವೈಲ್ಡ್ ಕಾರ್ಡ್​ನಲ್ಲಿ ಓರ್ವ ಹೊಸ ಸ್ಪರ್ಧಿ ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರೆ ಯಾರು ಅಲ್ಲ. ಕನ್ನಡದ ಫೇಮಸ್​ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿದೆ. ಮೂರನೇ ವಾರ ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಯನ್ನೇ ಬಿಗ್​ಬಾಸ್​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದರು. ಈ ಘೋಷಣೆಯಿಂದ ಮನೆಯಲ್ಲಿನ ಎಲ್ಲಾ ಸದಸ್ಯರು ಒಂದು ಕ್ಷಣ ಶಾಕ್ ಆಗಿದ್ದರು.

publive-image

ಇದೀಗ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳ ಮಧ್ಯೆ ಬೆಂಕಿ ಹೊತ್ತಿಕೊಂಡದೆ. ಬಿಗ್​ಬಾಸ್​ ಮನೆ ಮಂದಿಗೆ ಕ್ಯಾಪ್ಟನ್ಸಿ ಟಾಸ್ಕ್​ ಕೊಟ್ಟಿದ್ದಾರೆ. ಜೋಡಿಗಳು ಸುತ್ತುತ್ತಾ, 17 ನಿಮಿಷಗಳನ್ನು ಎಣಿಸುತ್ತಾ ತಿರುಗಬೇಕು ಅಂತ ಹೇಳಿದ್ದರು. ಈ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಗ್ರಂ ಮಂಜು ಹಾಗೂ ಶಿಶಿರ್​ ನಡುವೆ ಗಲಾಟೆಯಾಗಿದೆ.

Advertisment

ಕ್ಯಾಪ್ಟನ್ಸಿ ಪಟ್ಟ ಸಿಗಬಾರದೆಂದು ಉಗ್ರಂ ಮಂಜು, ಶಿಶರ್​ಗೆ ಡಿಸ್ಟ್ರಾಕ್ಟ್ ಮಾಡಿದ್ದಾರೆ. ಆಗ ಅದೇ ಕೋಪದಲ್ಲಿ ಮಂಜು, ಶಿಶಿರ್​ಗೆ ಹಾಗೂ ಸುರೇಶ್​ಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯೆ ಮಧ್ಯೆ ಕೋಲನ್ನು ಅಡ್ಡ ತಂದಿದ್ದಾರೆ. ಜೋರಾಗಿ ಕೋಲು ತಳ್ಳಿದ್ದರಿಂದ ಶಿಶಿರ್​ ಕೈಗೆ ಗಾಯವಾಗಿದೆ.

ಇದೇ ಕೋಪದಲ್ಲಿ ಶಿಶಿರ್, ಉಗ್ರಂ ಮಂಜುಗೆ​ ದಿಬ್ಬಿನಿಂದ ಹೊಡೆದಿದ್ದಾರೆ. ಇದನ್ನೂ ನೋಡಿದ ಮನೆಮಂದಿ ಶಾಕ್​ ಆಗಿ ಅವರನ್ನು ತಡೆದಿದ್ದಾರೆ. ಇನ್ನು, ಈ ವಾರದ ​ಕ್ಯಾಪ್ಟನ್ ಪಟ್ಟ ಸಿಗೋದು ಯಾವ ಸ್ಪರ್ಧಿಗೆ ಅಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment