ದುಬೆ ಬಡಿದೆಬ್ಬಿಸಿತು ಆ ಒಂದು ಮಾತು
40 ತಿಂಗಳ ಬಳಿಕ ಶಿವಂ ದುಬೆ ಕಮ್ಬ್ಯಾಕ್
2 ವರ್ಷದಲ್ಲೇ ಶಿವಂ ಜಾತಕ ಬದಲಿಸಿದ ವ್ಯಕ್ತಿ ಯಾರು?
2 ತಿಂಗಳ ಹಿಂದೆ ರಹಾನೆ.. ಈಗ ಶಿವಂ ದುಬೆ.. ಇವರಿಬ್ಬರ ಕಮ್ಬ್ಯಾಕ್ ಹಿಂದಿನ ಸೂತ್ರದಾರ ಮಾಹಿ.. ಮಾಹಿಯ ನೀಡಿದ್ದ ಒಂದೇ ಒಂದು ಮಂತ್ರ ಪಠಿಸಿದ ಶಿವಂ ದುಬೆ, ಈಗ ಮತ್ತೆ ಪ್ರಕರಿಸುತ್ತಿದ್ದಾರೆ. ಅಷ್ಟೇ ಅಲ್ಲ. ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಂತೂ ಜಸ್ಪ್ರೀತ್ ಬೂಮ್ರಾ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮ್ಬ್ಯಾಕ್ ಮಾಡಿದ್ರು. ಇವರಿಬ್ಬರ ಜೊತೆಗೆ ವೇಗಿ ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಕೂಡ ತಂಡ ಸೇರಿಕೊಂಡಿದ್ದಾಯ್ತು. ಅಷ್ಟೇ ಅಲ್ಲ.. ಯುವ ಮುಖಗಳಿಗೂ ತಂಡದಲ್ಲಿ ಚಾನ್ಸ್ ನೀಡಲಾಗಿದೆ. ಆದ್ರೆ, ಇದೆಲ್ಲಕ್ಕಿಂತ ಮಿಗಿಲಾಗಿ ಕಳೆದು ಹೋಗಿದ್ದ ಆಟಗಾರನೊಬ್ಬ, ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾನೆ. ಅಂದ್ಹಾಗೆ ಆ ಆಟಗಾರ ಬೇಱರೂ ಅಲ್ಲ. ಆಲ್ರೌಂಡರ್ ಶಿವಂ ದುಬೆ.
2020 ಫೆಬ್ರವರಿ 02.. ಶಿವಂ ದುಬೆ ಟೀಮ್ ಇಂಡಿಯಾ ಪರ ಆಡಿದ್ದ ಕೊನೆ ಪಂದ್ಯ. ಈ ಬಳಿಕ ಕಿಕ್ಔಟ್ ಆಗಿದ್ದ ಶಿವಂ ದುಬೆ ಹೆಸರು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕೇಳಿಸಿ ಬರೋಬ್ಬರಿ 40 ತಿಂಗಳೇ ಕಳೆದಿತ್ತು. ಇನ್ಫ್ಯಾಕ್ಟ್ ಶಿವಂ Shout down ಆಗಿದ್ದಾನೆ ಅಂತಾನೇ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಅದೇ ಶಿವಂ ದುಬೆ, ಐರ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆಯುವುದರೊಂದಿಗೆ 3 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ್ದಾನೆ. ಈ ಕಮ್ಬ್ಯಾಕ್ ಹಿಂದೆ ಮಹಾನ್ ಪುರುಷನಿದ್ದಾನೆ. ಅವರೇ ದಿ ಗ್ರೇಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ..
ಕಳೆದು ಹೋಗಿದ್ದ ದುಬೆಗೆ ಜೀವ ತುಂಬಿದ್ದೇ ಮಾಹಿ..!
ಟೀಮ್ ಇಂಡಿಯಾದಿಂದ ಕಿಕ್ಔಟ್ ಆಗಿದ್ದ ಶಿವಂ, ನಿಜಕ್ಕೂ ಕಳೆದುಹೋಗಿದ್ರು. ಒಂದು ಮಾತಲ್ಲಿ ಹೇಳೋದಾದ್ರೆ, ಶಿವಂ ಕರಿಯರ್ ಖತಂ ಆಗಿತ್ತು. ಆದ್ರೆ, ಬರಡಾಗಿದ್ದ ಶಿವಂ ವೃತ್ತಿ ಜೀವನಕ್ಕೆ ನೀರೆರೆದು ಮತ್ತೆ ಜೀವ ತಂಬಿದ್ದು ಮಿಸ್ಟರ್ ಕೂಲ್ ಮಾಹಿ…
ಧೋನಿ ಹೇಳಿದ್ದ ಒಂದೇ ಒಂದು ಮಾತನ್ನು. ಮಂತ್ರದಂತೆ ಪಠಣೆ ಮಾಡಿ ಪಾಲಿಸಿದ್ದ ಶಿವಂ, ಫಿನಿಕ್ಸ್ನಂತೆ ಮೇಲೆದಿದ್ರು. ಅಷ್ಟಕ್ಕೂ ಶಿವಂ ಬ್ಯಾಟಿಂಗ್ ಅಪ್ಗ್ರೇಡ್ಗೆ ಮಾಹಿ ನೀಡಿದ್ದ ಟಿಪ್ಸ್ ಏನು ಅನ್ನೋದನ್ನ ದುಬೆ ಮಾತಲ್ಲೇ ಕೇಳಿ.
ಹಲವು ವಿಷಯಗಳು ಇವೆ. ಬಟ್ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಖಂಡಿತ ಅಮೂಲ್ಯ ಟಿಪ್ಸ್ ಪಡೆದಿದ್ದೇನೆ. ಅದರಲ್ಲಿ ಕೊನೆಯವರೆಗೂ ಆಟವಾಡಿ, ಗೇಮ್ ಮುಗಿಸಲು ಪ್ರಯತ್ನಿಸಿ. ನಿಮ್ಮ ಬ್ಯಾಟಿಂಗ್ನಿಂದ ಅನೇಕ ಪಂದ್ಯಗಳನ್ನ ಗೆಲ್ಲಬಹುದು, ಆದ್ದರಿಂದ ನಿಮ್ಮ ಮೇಲೆ ನಂಬಿಕೆ ಇಡಿ-ಶಿವಂ ದುಬೆ, ಆಲ್ರೌಂಡರ್
ಇದೇ ಶಿವಂ ದುಬೆ ಜೀವನವನ್ನ ಬದಲಿಸಿ ಆ ಮಂತ್ರ. ಈ ಒಂದು ಮಂತ್ರ ಫಾಲೋ ಮಾಡಿದ ಬಳಿಕವೇ ಶಿವಂ ವೃತ್ತಿ ಜೀವನವೇ ಸಂಪೂರ್ಣ ಬದಲಾಯ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ಸಕ್ಸಸ್ ಸಿಕ್ರೇಟ್ ಕೂಡ ಇದೇ ಸ್ಟ್ರಾಟರ್ಜಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸ್ಲೋ ಆಗಿ ಸ್ಟಾರ್ಟ್ ಮಾಡೋ ಧೋನಿ, ನಂತರ ಮ್ಯಾಚ್ ಫಿನಿಷ್ ಮಾಡೋದು. ಇದೇ ಪಾಲಿಸಿ ಫಾಲೋ ಮಾಡ್ತಿರೋ ದುಬೆ ಈಗ ಶೈನ್ ಆಗ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಐಪಿಎಲ್ ಸೀಸನ್-16.
ಚೆನ್ನೈ ಕ್ಯಾಂಪ್ ಸೇರಿದ 2 ವರ್ಷದಲ್ಲಿ ಬದಲಾಯ್ತು ಚಿತ್ರಣ
ಒಂದೆಡೆ ಟೀಮ್ ಇಂಡಿಯಾದಿಂದ ಕಿಕ್ಔಟ್ ಆಗಿದ್ದ ಶಿವಂ ದುಬೆ, ಅದೇ ವರ್ಷ ಆರ್ಸಿಬಿ ಪಾಳಯದಿಂದ ಗೇಟ್ಪಾಸ್ ಪಡೆದಿದ್ರು. ಈ ಬೆನ್ನಲ್ಲೇ 2021ರಲ್ಲಿ ಆರ್ಆರ್ ಕ್ಯಾಂಪ್ ಸೇರಿದ್ದ ಶಿವಂಗೆ ಸಕ್ಸಸ್ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿತ್ತು. ಈ ಬೆನ್ನಲ್ಲೇ ಶಿವಂ ದುಬೆ ಸೇರಿದ್ದು ಮಾಸ್ಟರ್ ಮಾಹಿ ಕ್ಯಾಂಪ್ಗೆ.. ಸೀಸನ್-15ರಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ದುಬೆ, 2023ರಲ್ಲಿ ರೌದ್ರವತಾರವನ್ನೇ ಪ್ರದರ್ಶಿಸಿದ್ದರು.
ಐಪಿಎಲ್ ಸೀಸನ್-16ರಲ್ಲಿ ಶಿವಂ
ಸೀಸನ್-16ರಲ್ಲಿ ಆಡಿದ 16 ಪಂದ್ಯಗಳಿಂದ 418 ರನ್ ಕೊಳ್ಳೆ ಹೊಡೆದ ಶಿವಂ ದುಬೆ, 38ರ ಸರಾಸರಿಯಲ್ಲಿ ರನ್ ಗಳಿಸಿದ್ರು. ಅಷ್ಟೇ ಅಲ್ಲ.! 158.33ರ ಸ್ಟ್ರೇಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ದುಬೆ, ಚೆನ್ನೈ ಸೂಪರ್ ಕಿಂಗ್ಸ್ನ ಮ್ಯಾಚ್ ವಿನ್ನರ್ ಎನಿಸಿದ್ರು. ಬರೋಬ್ಬರಿ 35 ಸಿಕ್ಸರ್ ಸಿಡಿಸಿದ ಶಿವಂ ದುಬೆ, ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಅಷ್ಟೇ ಅಲ್ಲ.! ನಂಬಿಕಸ್ಥ ಬ್ಯಾಟ್ಸ್ಮನ್ ಆಗಿ ಚೆನ್ನೈನ ಮ್ಯಾಚ್ ವಿನ್ನರ್ ಆಗಿ ಮಾರ್ಪಟ್ಟಿದ್ದ ಶಿವಂ, ದೇಶಿ ಕ್ರಿಕೆಟ್ನಲ್ಲೂ ಘರ್ಜಿಸುತ್ತಿದ್ದಾರೆ.
ಸದ್ಯ ನಡೀತಿರೋ ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ಪರವೂ ಅದೇ ಟೆಂಪಮೆಂಟ್ ಮುಂದುವರಿಸಿರೋ ದುಬೆ, ಆಡಿದ 3 ಇನ್ನಿಂಗ್ಸ್ಗಳಿಂದ 119 ರನ್ ಕಲೆಹಾಕಿರೋ ದುಬೆ, ಡಿಫರೆಂಟ್ ಬ್ಯಾಟಿಂಗ್ ಪೊಸಿಷನ್ನಲ್ಲಿ ಬ್ಯಾಟ್ ಬೀಸುವ ತಾಕತ್ತಿದೆ. ಸ್ಪಿನ್, ಫಾಸ್ಟ್ ಎನ್ನದೇ ಕೆಚ್ಚೆದೆಯ ಬ್ಯಾಟಿಂಗ್ ನಡೆಸೋ ಸಾಮರ್ಥ್ಯ ಇದೆ. ಇದೇ ಈಗ ಕಗ್ಗತ್ತಿಲಿನಲ್ಲಿದ್ದ ಶಿವಂ ದುಬೆಯನ್ನ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವಂತೆ ಮಾಡಿದ್ದು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದುಬೆ ಬಡಿದೆಬ್ಬಿಸಿತು ಆ ಒಂದು ಮಾತು
40 ತಿಂಗಳ ಬಳಿಕ ಶಿವಂ ದುಬೆ ಕಮ್ಬ್ಯಾಕ್
2 ವರ್ಷದಲ್ಲೇ ಶಿವಂ ಜಾತಕ ಬದಲಿಸಿದ ವ್ಯಕ್ತಿ ಯಾರು?
2 ತಿಂಗಳ ಹಿಂದೆ ರಹಾನೆ.. ಈಗ ಶಿವಂ ದುಬೆ.. ಇವರಿಬ್ಬರ ಕಮ್ಬ್ಯಾಕ್ ಹಿಂದಿನ ಸೂತ್ರದಾರ ಮಾಹಿ.. ಮಾಹಿಯ ನೀಡಿದ್ದ ಒಂದೇ ಒಂದು ಮಂತ್ರ ಪಠಿಸಿದ ಶಿವಂ ದುಬೆ, ಈಗ ಮತ್ತೆ ಪ್ರಕರಿಸುತ್ತಿದ್ದಾರೆ. ಅಷ್ಟೇ ಅಲ್ಲ. ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಂತೂ ಜಸ್ಪ್ರೀತ್ ಬೂಮ್ರಾ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮ್ಬ್ಯಾಕ್ ಮಾಡಿದ್ರು. ಇವರಿಬ್ಬರ ಜೊತೆಗೆ ವೇಗಿ ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಕೂಡ ತಂಡ ಸೇರಿಕೊಂಡಿದ್ದಾಯ್ತು. ಅಷ್ಟೇ ಅಲ್ಲ.. ಯುವ ಮುಖಗಳಿಗೂ ತಂಡದಲ್ಲಿ ಚಾನ್ಸ್ ನೀಡಲಾಗಿದೆ. ಆದ್ರೆ, ಇದೆಲ್ಲಕ್ಕಿಂತ ಮಿಗಿಲಾಗಿ ಕಳೆದು ಹೋಗಿದ್ದ ಆಟಗಾರನೊಬ್ಬ, ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾನೆ. ಅಂದ್ಹಾಗೆ ಆ ಆಟಗಾರ ಬೇಱರೂ ಅಲ್ಲ. ಆಲ್ರೌಂಡರ್ ಶಿವಂ ದುಬೆ.
2020 ಫೆಬ್ರವರಿ 02.. ಶಿವಂ ದುಬೆ ಟೀಮ್ ಇಂಡಿಯಾ ಪರ ಆಡಿದ್ದ ಕೊನೆ ಪಂದ್ಯ. ಈ ಬಳಿಕ ಕಿಕ್ಔಟ್ ಆಗಿದ್ದ ಶಿವಂ ದುಬೆ ಹೆಸರು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕೇಳಿಸಿ ಬರೋಬ್ಬರಿ 40 ತಿಂಗಳೇ ಕಳೆದಿತ್ತು. ಇನ್ಫ್ಯಾಕ್ಟ್ ಶಿವಂ Shout down ಆಗಿದ್ದಾನೆ ಅಂತಾನೇ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಅದೇ ಶಿವಂ ದುಬೆ, ಐರ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆಯುವುದರೊಂದಿಗೆ 3 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ್ದಾನೆ. ಈ ಕಮ್ಬ್ಯಾಕ್ ಹಿಂದೆ ಮಹಾನ್ ಪುರುಷನಿದ್ದಾನೆ. ಅವರೇ ದಿ ಗ್ರೇಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ..
ಕಳೆದು ಹೋಗಿದ್ದ ದುಬೆಗೆ ಜೀವ ತುಂಬಿದ್ದೇ ಮಾಹಿ..!
ಟೀಮ್ ಇಂಡಿಯಾದಿಂದ ಕಿಕ್ಔಟ್ ಆಗಿದ್ದ ಶಿವಂ, ನಿಜಕ್ಕೂ ಕಳೆದುಹೋಗಿದ್ರು. ಒಂದು ಮಾತಲ್ಲಿ ಹೇಳೋದಾದ್ರೆ, ಶಿವಂ ಕರಿಯರ್ ಖತಂ ಆಗಿತ್ತು. ಆದ್ರೆ, ಬರಡಾಗಿದ್ದ ಶಿವಂ ವೃತ್ತಿ ಜೀವನಕ್ಕೆ ನೀರೆರೆದು ಮತ್ತೆ ಜೀವ ತಂಬಿದ್ದು ಮಿಸ್ಟರ್ ಕೂಲ್ ಮಾಹಿ…
ಧೋನಿ ಹೇಳಿದ್ದ ಒಂದೇ ಒಂದು ಮಾತನ್ನು. ಮಂತ್ರದಂತೆ ಪಠಣೆ ಮಾಡಿ ಪಾಲಿಸಿದ್ದ ಶಿವಂ, ಫಿನಿಕ್ಸ್ನಂತೆ ಮೇಲೆದಿದ್ರು. ಅಷ್ಟಕ್ಕೂ ಶಿವಂ ಬ್ಯಾಟಿಂಗ್ ಅಪ್ಗ್ರೇಡ್ಗೆ ಮಾಹಿ ನೀಡಿದ್ದ ಟಿಪ್ಸ್ ಏನು ಅನ್ನೋದನ್ನ ದುಬೆ ಮಾತಲ್ಲೇ ಕೇಳಿ.
ಹಲವು ವಿಷಯಗಳು ಇವೆ. ಬಟ್ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಖಂಡಿತ ಅಮೂಲ್ಯ ಟಿಪ್ಸ್ ಪಡೆದಿದ್ದೇನೆ. ಅದರಲ್ಲಿ ಕೊನೆಯವರೆಗೂ ಆಟವಾಡಿ, ಗೇಮ್ ಮುಗಿಸಲು ಪ್ರಯತ್ನಿಸಿ. ನಿಮ್ಮ ಬ್ಯಾಟಿಂಗ್ನಿಂದ ಅನೇಕ ಪಂದ್ಯಗಳನ್ನ ಗೆಲ್ಲಬಹುದು, ಆದ್ದರಿಂದ ನಿಮ್ಮ ಮೇಲೆ ನಂಬಿಕೆ ಇಡಿ-ಶಿವಂ ದುಬೆ, ಆಲ್ರೌಂಡರ್
ಇದೇ ಶಿವಂ ದುಬೆ ಜೀವನವನ್ನ ಬದಲಿಸಿ ಆ ಮಂತ್ರ. ಈ ಒಂದು ಮಂತ್ರ ಫಾಲೋ ಮಾಡಿದ ಬಳಿಕವೇ ಶಿವಂ ವೃತ್ತಿ ಜೀವನವೇ ಸಂಪೂರ್ಣ ಬದಲಾಯ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ಸಕ್ಸಸ್ ಸಿಕ್ರೇಟ್ ಕೂಡ ಇದೇ ಸ್ಟ್ರಾಟರ್ಜಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸ್ಲೋ ಆಗಿ ಸ್ಟಾರ್ಟ್ ಮಾಡೋ ಧೋನಿ, ನಂತರ ಮ್ಯಾಚ್ ಫಿನಿಷ್ ಮಾಡೋದು. ಇದೇ ಪಾಲಿಸಿ ಫಾಲೋ ಮಾಡ್ತಿರೋ ದುಬೆ ಈಗ ಶೈನ್ ಆಗ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಐಪಿಎಲ್ ಸೀಸನ್-16.
ಚೆನ್ನೈ ಕ್ಯಾಂಪ್ ಸೇರಿದ 2 ವರ್ಷದಲ್ಲಿ ಬದಲಾಯ್ತು ಚಿತ್ರಣ
ಒಂದೆಡೆ ಟೀಮ್ ಇಂಡಿಯಾದಿಂದ ಕಿಕ್ಔಟ್ ಆಗಿದ್ದ ಶಿವಂ ದುಬೆ, ಅದೇ ವರ್ಷ ಆರ್ಸಿಬಿ ಪಾಳಯದಿಂದ ಗೇಟ್ಪಾಸ್ ಪಡೆದಿದ್ರು. ಈ ಬೆನ್ನಲ್ಲೇ 2021ರಲ್ಲಿ ಆರ್ಆರ್ ಕ್ಯಾಂಪ್ ಸೇರಿದ್ದ ಶಿವಂಗೆ ಸಕ್ಸಸ್ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿತ್ತು. ಈ ಬೆನ್ನಲ್ಲೇ ಶಿವಂ ದುಬೆ ಸೇರಿದ್ದು ಮಾಸ್ಟರ್ ಮಾಹಿ ಕ್ಯಾಂಪ್ಗೆ.. ಸೀಸನ್-15ರಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ದುಬೆ, 2023ರಲ್ಲಿ ರೌದ್ರವತಾರವನ್ನೇ ಪ್ರದರ್ಶಿಸಿದ್ದರು.
ಐಪಿಎಲ್ ಸೀಸನ್-16ರಲ್ಲಿ ಶಿವಂ
ಸೀಸನ್-16ರಲ್ಲಿ ಆಡಿದ 16 ಪಂದ್ಯಗಳಿಂದ 418 ರನ್ ಕೊಳ್ಳೆ ಹೊಡೆದ ಶಿವಂ ದುಬೆ, 38ರ ಸರಾಸರಿಯಲ್ಲಿ ರನ್ ಗಳಿಸಿದ್ರು. ಅಷ್ಟೇ ಅಲ್ಲ.! 158.33ರ ಸ್ಟ್ರೇಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ದುಬೆ, ಚೆನ್ನೈ ಸೂಪರ್ ಕಿಂಗ್ಸ್ನ ಮ್ಯಾಚ್ ವಿನ್ನರ್ ಎನಿಸಿದ್ರು. ಬರೋಬ್ಬರಿ 35 ಸಿಕ್ಸರ್ ಸಿಡಿಸಿದ ಶಿವಂ ದುಬೆ, ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಅಷ್ಟೇ ಅಲ್ಲ.! ನಂಬಿಕಸ್ಥ ಬ್ಯಾಟ್ಸ್ಮನ್ ಆಗಿ ಚೆನ್ನೈನ ಮ್ಯಾಚ್ ವಿನ್ನರ್ ಆಗಿ ಮಾರ್ಪಟ್ಟಿದ್ದ ಶಿವಂ, ದೇಶಿ ಕ್ರಿಕೆಟ್ನಲ್ಲೂ ಘರ್ಜಿಸುತ್ತಿದ್ದಾರೆ.
ಸದ್ಯ ನಡೀತಿರೋ ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ಪರವೂ ಅದೇ ಟೆಂಪಮೆಂಟ್ ಮುಂದುವರಿಸಿರೋ ದುಬೆ, ಆಡಿದ 3 ಇನ್ನಿಂಗ್ಸ್ಗಳಿಂದ 119 ರನ್ ಕಲೆಹಾಕಿರೋ ದುಬೆ, ಡಿಫರೆಂಟ್ ಬ್ಯಾಟಿಂಗ್ ಪೊಸಿಷನ್ನಲ್ಲಿ ಬ್ಯಾಟ್ ಬೀಸುವ ತಾಕತ್ತಿದೆ. ಸ್ಪಿನ್, ಫಾಸ್ಟ್ ಎನ್ನದೇ ಕೆಚ್ಚೆದೆಯ ಬ್ಯಾಟಿಂಗ್ ನಡೆಸೋ ಸಾಮರ್ಥ್ಯ ಇದೆ. ಇದೇ ಈಗ ಕಗ್ಗತ್ತಿಲಿನಲ್ಲಿದ್ದ ಶಿವಂ ದುಬೆಯನ್ನ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವಂತೆ ಮಾಡಿದ್ದು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ