‘ಖರ್ಗೆ ಮೈಬಣ್ಣದ ಬಗ್ಗೆ ಮಾಡಿದ ಅವಹೇಳನ’ ಎಂದ ಕಾಂಗ್ರೆಸ್
ದಲಿತರ ಕ್ಷಮೆ ಕೇಳುವಂತೆ ಕಾಂಗ್ರೆಸ್ ಪಟ್ಟು!
ಖಂಡ್ರೆಗೆ ಮರ-ಗಿಡ ಏನಂತ ಗೊತ್ತಿಲ್ಲ, ಸುಟ್ಟು ಕರಕಲಾಗಿರ್ತಾರೆ -ಜ್ಞಾನೇಂದ್ರ
ಶಿವಮೊಗ್ಗ: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಲೆನಾಡಿನ ಬಗ್ಗೆ ಗೊತ್ತಿರದ ಆ ಕಡೆಯ ಮಿನಿಸ್ಟರ್ ಸಾಹೇಬ್ರು ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿಕೊಂಡಿರುವುದೇ ಅವರಿಗೆ ಅದೇ ನೆರಳಂತೆ ತಿಳಿದಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಸರ್ಕಾರ ಕಸ್ತೂರಿ ರಂಗನ್ ವರದಿ ಈ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದರು.
ನಮ್ಮ ದುರಾದೃಷ್ಟ ಏನೆಂದರೆ ಫಾರೆಸ್ಟ್ ಮಿನಿಸ್ಟರ್ ಸಾಹೇಬ್ರು ಆ ಕಡೆಯವರು. ಅವರಿಗೆ ಮರ-ಗಿಡ, ನೆರಳು ಏನಂಥ ಗೊತ್ತಿಲ್ಲ. ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆರವರನ್ನು ನೋಡಿದ್ರೆ ಗೊತ್ತಾಗುತ್ತದೆ. ಪಾಪ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳಿದುಕೊಂಡಿವೆ. ಅದೇ ನೆರಳು ಅವರಿಗೆ. ಮಲೆನಾಡಿನ ಬಗ್ಗೆ ಬದುಕು ಗೊತ್ತಿಲ್ಲ ಎಂದು ಭಾಷಣದ ವೇಳೆ ಹರಿಹಾಯ್ದಿದ್ದರು.
ಈ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಖರ್ಗೆಯವರ ಕುರಿತು ನೀಡಿರುವ ಹೇಳಿಕೆ ಇಡೀ ಮೂಲ ನಿವಾಸಿ ದಲಿತರಿಗೆ ಮಾಡಿದ ಅವಮಾನ. ಹೀಗಾಗಿ ಆರಗ ಜ್ಞಾನೇಂದ್ರರವರು ಮಲ್ಲಿಕಾರ್ಜುನ್ ಖರ್ಗೆ ಹಾಗೂ ದಲಿತರ ಬಗ್ಗೆ ಕ್ಷಮೆ ಕೇಳಬೇಕು ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಜ್ಞಾನೇಂದ್ರ ಅವಹೇಳನಾಕಾರಿ ಹೇಳಿಕೆ..
ಅರಣ್ಯ ಸಚಿವರಾದವರೆಲ್ಲ ಆ ಕಡೆಯವರು. ಅವರಿಗೆ ಮರ, ಗಿಡ.. ಅದರ ನೆರಳು ಬಗ್ಗೆ ಗೊತ್ತಿಲ್ಲ. ಅವರೆಲ್ಲಾ ಕಪ್ಪಾಗಿರ್ತಾರೆ.. ಸುಟ್ಟು ಕರಕಲಾಗಿರ್ತಾರೆ. ನಮ್ಮ ಖರ್ಗೆ ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿದ್ರಿಂದ ಉಳಿದುಕೊಂಡಿದ್ದಾರೆ ಎಂದು… pic.twitter.com/HOAYIfkhhq
— NewsFirst Kannada (@NewsFirstKan) August 2, 2023
ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ @JnanendraAraga ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ.
ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ.ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ…
— Karnataka Congress (@INCKarnataka) August 2, 2023
‘ಖರ್ಗೆ ಮೈಬಣ್ಣದ ಬಗ್ಗೆ ಮಾಡಿದ ಅವಹೇಳನ’ ಎಂದ ಕಾಂಗ್ರೆಸ್
ದಲಿತರ ಕ್ಷಮೆ ಕೇಳುವಂತೆ ಕಾಂಗ್ರೆಸ್ ಪಟ್ಟು!
ಖಂಡ್ರೆಗೆ ಮರ-ಗಿಡ ಏನಂತ ಗೊತ್ತಿಲ್ಲ, ಸುಟ್ಟು ಕರಕಲಾಗಿರ್ತಾರೆ -ಜ್ಞಾನೇಂದ್ರ
ಶಿವಮೊಗ್ಗ: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಲೆನಾಡಿನ ಬಗ್ಗೆ ಗೊತ್ತಿರದ ಆ ಕಡೆಯ ಮಿನಿಸ್ಟರ್ ಸಾಹೇಬ್ರು ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿಕೊಂಡಿರುವುದೇ ಅವರಿಗೆ ಅದೇ ನೆರಳಂತೆ ತಿಳಿದಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಸರ್ಕಾರ ಕಸ್ತೂರಿ ರಂಗನ್ ವರದಿ ಈ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದರು.
ನಮ್ಮ ದುರಾದೃಷ್ಟ ಏನೆಂದರೆ ಫಾರೆಸ್ಟ್ ಮಿನಿಸ್ಟರ್ ಸಾಹೇಬ್ರು ಆ ಕಡೆಯವರು. ಅವರಿಗೆ ಮರ-ಗಿಡ, ನೆರಳು ಏನಂಥ ಗೊತ್ತಿಲ್ಲ. ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆರವರನ್ನು ನೋಡಿದ್ರೆ ಗೊತ್ತಾಗುತ್ತದೆ. ಪಾಪ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳಿದುಕೊಂಡಿವೆ. ಅದೇ ನೆರಳು ಅವರಿಗೆ. ಮಲೆನಾಡಿನ ಬಗ್ಗೆ ಬದುಕು ಗೊತ್ತಿಲ್ಲ ಎಂದು ಭಾಷಣದ ವೇಳೆ ಹರಿಹಾಯ್ದಿದ್ದರು.
ಈ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಖರ್ಗೆಯವರ ಕುರಿತು ನೀಡಿರುವ ಹೇಳಿಕೆ ಇಡೀ ಮೂಲ ನಿವಾಸಿ ದಲಿತರಿಗೆ ಮಾಡಿದ ಅವಮಾನ. ಹೀಗಾಗಿ ಆರಗ ಜ್ಞಾನೇಂದ್ರರವರು ಮಲ್ಲಿಕಾರ್ಜುನ್ ಖರ್ಗೆ ಹಾಗೂ ದಲಿತರ ಬಗ್ಗೆ ಕ್ಷಮೆ ಕೇಳಬೇಕು ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಜ್ಞಾನೇಂದ್ರ ಅವಹೇಳನಾಕಾರಿ ಹೇಳಿಕೆ..
ಅರಣ್ಯ ಸಚಿವರಾದವರೆಲ್ಲ ಆ ಕಡೆಯವರು. ಅವರಿಗೆ ಮರ, ಗಿಡ.. ಅದರ ನೆರಳು ಬಗ್ಗೆ ಗೊತ್ತಿಲ್ಲ. ಅವರೆಲ್ಲಾ ಕಪ್ಪಾಗಿರ್ತಾರೆ.. ಸುಟ್ಟು ಕರಕಲಾಗಿರ್ತಾರೆ. ನಮ್ಮ ಖರ್ಗೆ ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿದ್ರಿಂದ ಉಳಿದುಕೊಂಡಿದ್ದಾರೆ ಎಂದು… pic.twitter.com/HOAYIfkhhq
— NewsFirst Kannada (@NewsFirstKan) August 2, 2023
ಶ್ರೀ ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ @JnanendraAraga ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ.
ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ.ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ…
— Karnataka Congress (@INCKarnataka) August 2, 2023