newsfirstkannada.com

ಸಿದ್ದರಾಮಯ್ಯ-ಹೆಬ್ಬಾರ್​​​ ರಹಸ್ಯ ಭೇಟಿ; ಕಾಂಗ್ರೆಸ್​ ಸೇರಲು ಸಿದ್ಧತೆ ನಡೆಸಿದ್ರಾ ಎಂ.ಪಿ.ರೇಣುಕಾಚಾರ್ಯ..?

Share :

26-08-2023

    ರಾಜ್ಯದಲ್ಲಿ ಮತ್ತಷ್ಟು ದಟ್ಟವಾಯ್ತು ಆಪರೇಷನ್​​ ಹಸ್ತ

    ST.ಸೋಮಶೇಖರ್ ಬಳಿಕ ಸಿಎಂ ಭೇಟಿಯಾದ ಹೆಬ್ಬಾರ್​

    ಅಚ್ಚರಿ ಮೂಡಿಸಿದ ಮಾಜಿ ಶಾಸಕ ರೇಣುಕಾಚಾರ್ಯ ನಡೆ

ರಾಜ್ಯ ರಾಜಕೀಯದಲ್ಲಿ ಆಪರೇಷನ್​ ಹಸ್ತದ ಚರ್ಚೆ ಸುನಾಮಿ ಅಲೆಗಳ ಅಬ್ಬರದಂತೆ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್​ ಇಟ್ಟುಕೊಂಡಿರುವ ಕಾಂಗ್ರೆಸ್​, ನಾನಾ ಕರಸತ್ತು ಮಾಡ್ತಿದೆ.

ಈ ಹಿಂದೆ ಪಕ್ಷ ತೊರೆದು ಬಿಜೆಪಿಗೆ ವಲಸೆ ಹೋದವರನ್ನು ಘರ್​ವಾಪಸಿ ಮಾಡಿಕೊಳ್ಳಲು ಕಸರತ್ತು ಮಾಡ್ತಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ. ಆದ್ರೂ ಕೂಡ ವಲಸೆಗರು ಕದ್ದು ಮುಚ್ಚಿ ಸಿಎಂರನ್ನು ಭೇಟಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಯಶವಂತಪುರ ಶಾಸಕ ಎಸ್​.ಟಿ ಸೋಮಶೇಖರ್​ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಇದೀಗ ಮತ್ತೊಬ್ಬ ವಲಸೆ ಶಾಸಕ ಶಿವರಾಮ್​ ಹೆಬ್ಬಾರ್​ ಕೂಡ ಮುಖ್ಯಮಂತ್ರಿಗಳ ಭೇಟಿಯಾಗಿರುವುದು ಕುತೂಹಲ ಮೂಡಿದೆ.

ಪುತ್ರ ವಿವೇಕ್ ಜೊತೆ ಶಿವರಾಂ ಹೆಬ್ಬಾರ್
ಪುತ್ರ ವಿವೇಕ್ ಜೊತೆ ಶಿವರಾಂ ಹೆಬ್ಬಾರ್

ಕುತೂಹಲ ಮೂಡಿಸಿದ ಸಿದ್ದು-ಹೆಬ್ಬಾರ್​​​ ರಹಸ್ಯ ಭೇಟಿ

ಮೈತ್ರಿ ಸರ್ಕಾರ ಕೆಡವಿ, ಬಿಜೆಪಿಗೆ ವಲಸೆ ಹೋದವರಲ್ಲಿ ಹಲವರು ಮರಳಿ ಕೈ ಹಿಡಿಯಲು ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಕಾಂಗ್ರೆಸ್​ ನಾಯಕರ ಹೇಳಿಕೆಗಳೂ ಕೂಡ ಇದಕ್ಕೆ ಪುಷ್ಠಿ ನೀಡುವಂತಿದ್ವು. ಅದರಲ್ಲೂ ಎಸ್​.ಟಿ.ಸೋಮಶೇಖರ್​, ಭೈರತಿ ಬಸವರಾಜ್​, ಶಿವರಾಮ್​ ಹೆಬ್ಬಾರ್​ ಹೆಸರಗಳು, ಜೋರಾಗಿ ಕೇಳಿ ಬರುತ್ತಿದ್ವು. ಎಸ್​.ಟಿ.ಸೋಮಶೇಖರ್​ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್​ ಕೂಡ ಸಿದ್ದರಾಮಯ್ಯರನ್ನು ರಹಸ್ತವಾಗಿ ಭೇಟಿಯಾಗಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಸಿಎಂ ಜೊತೆ ಚರ್ಚೆ ನಡೆಸಲಾಗಿದ್ದು, ಈ ವೇಳೆ ಕಾಂಗ್ರೆಸ್​ಗೆ ವಾಪಸ್ಸಾಗುವ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯರನ್ನು ಭೇಟಿಯಾಗಿರುವ ಎಸ್​ಟಿ ಸೋಮಶೇಖರ್
ಸಿದ್ದರಾಮಯ್ಯರನ್ನು ಭೇಟಿಯಾಗಿರುವ ಎಸ್​ಟಿ ಸೋಮಶೇಖರ್

ಅಚ್ಚರಿ ಮೂಡಿಸಿದ ಮಾಜಿ ಶಾಸಕ ರೇಣುಕಾಚಾರ್ಯ ನಡೆ

ಬಿಜೆಪಿಗೆ ವಲಸೆ ಹೋಗಿದ್ದ ಶಾಸಕರು ಮಾತ್ರವಲ್ಲ.. ಕೆಲ ಬಿಜೆಪಿಯ ನಾಯಕರೇ ಖದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರನ್ನು ಭೇಟಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಎಂ.ಪಿ.ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯರನ್ನ ಹಾಗೂ ಡಿಸಿಎಂ ಡಿಕೆಶಿಯವರನ್ನ ಭೇಟಿಯಾಗಿ ಸುಮಾರು 20 ನಿಮಿಷಗಳ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ಭೇಟಿ ಭಾರೀ ಸಂಚಲನ ಮೂಡಿಸಿದ್ದು, ರೇಣುಕಾಚಾರ್ಯ ಕಾಂಗ್ರೆಸ್​ ಸೇರ್ತಾರಾ ಎಂಬ ಪ್ರಶ್ನೆ ಮೂಡಿದೆ. ಆದ್ರೆ ನನಗೆ ಕಾಂಗ್ರೆಸ್​ನಿಂದ ಯಾವುದೇ ಆಹ್ವಾನ ಬಂದಿಲ್ಲ. ಎಂಪಿ ಟಿಕೆಟ್​ಗಾಗಿ ಕಾಯುತ್ತಿದ್ದು, ಮುಂದೆ ಕಾದುನೋಡೋಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಒಟ್ಟಾರೆ.. ವಲಸೆ ನಾಯಕರು, ಮತ್ತು ಬಿಜೆಪಿಯಲ್ಲೇ ಅಸಮಧಾನಗೊಂಡಿರುವವರು, ಕಾಂಗ್ರೆಸ್​ನತ್ತ ಮುಖ ಮಾಡ್ತಿದ್ದಾರೆ. ಇದು ರಾಜ್ಯದಲ್ಲಿ ಆಪರೇಷನ್​ ಹಸ್ತದ ಊಹಾಪೋಹಗಳಿಗೆ ಪುಷ್ಟಿ ನೀಡುತ್ತಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ-ಹೆಬ್ಬಾರ್​​​ ರಹಸ್ಯ ಭೇಟಿ; ಕಾಂಗ್ರೆಸ್​ ಸೇರಲು ಸಿದ್ಧತೆ ನಡೆಸಿದ್ರಾ ಎಂ.ಪಿ.ರೇಣುಕಾಚಾರ್ಯ..?

https://newsfirstlive.com/wp-content/uploads/2023/08/RENUKACHARYA.jpg

    ರಾಜ್ಯದಲ್ಲಿ ಮತ್ತಷ್ಟು ದಟ್ಟವಾಯ್ತು ಆಪರೇಷನ್​​ ಹಸ್ತ

    ST.ಸೋಮಶೇಖರ್ ಬಳಿಕ ಸಿಎಂ ಭೇಟಿಯಾದ ಹೆಬ್ಬಾರ್​

    ಅಚ್ಚರಿ ಮೂಡಿಸಿದ ಮಾಜಿ ಶಾಸಕ ರೇಣುಕಾಚಾರ್ಯ ನಡೆ

ರಾಜ್ಯ ರಾಜಕೀಯದಲ್ಲಿ ಆಪರೇಷನ್​ ಹಸ್ತದ ಚರ್ಚೆ ಸುನಾಮಿ ಅಲೆಗಳ ಅಬ್ಬರದಂತೆ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್​ ಇಟ್ಟುಕೊಂಡಿರುವ ಕಾಂಗ್ರೆಸ್​, ನಾನಾ ಕರಸತ್ತು ಮಾಡ್ತಿದೆ.

ಈ ಹಿಂದೆ ಪಕ್ಷ ತೊರೆದು ಬಿಜೆಪಿಗೆ ವಲಸೆ ಹೋದವರನ್ನು ಘರ್​ವಾಪಸಿ ಮಾಡಿಕೊಳ್ಳಲು ಕಸರತ್ತು ಮಾಡ್ತಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ. ಆದ್ರೂ ಕೂಡ ವಲಸೆಗರು ಕದ್ದು ಮುಚ್ಚಿ ಸಿಎಂರನ್ನು ಭೇಟಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಯಶವಂತಪುರ ಶಾಸಕ ಎಸ್​.ಟಿ ಸೋಮಶೇಖರ್​ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಇದೀಗ ಮತ್ತೊಬ್ಬ ವಲಸೆ ಶಾಸಕ ಶಿವರಾಮ್​ ಹೆಬ್ಬಾರ್​ ಕೂಡ ಮುಖ್ಯಮಂತ್ರಿಗಳ ಭೇಟಿಯಾಗಿರುವುದು ಕುತೂಹಲ ಮೂಡಿದೆ.

ಪುತ್ರ ವಿವೇಕ್ ಜೊತೆ ಶಿವರಾಂ ಹೆಬ್ಬಾರ್
ಪುತ್ರ ವಿವೇಕ್ ಜೊತೆ ಶಿವರಾಂ ಹೆಬ್ಬಾರ್

ಕುತೂಹಲ ಮೂಡಿಸಿದ ಸಿದ್ದು-ಹೆಬ್ಬಾರ್​​​ ರಹಸ್ಯ ಭೇಟಿ

ಮೈತ್ರಿ ಸರ್ಕಾರ ಕೆಡವಿ, ಬಿಜೆಪಿಗೆ ವಲಸೆ ಹೋದವರಲ್ಲಿ ಹಲವರು ಮರಳಿ ಕೈ ಹಿಡಿಯಲು ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಕಾಂಗ್ರೆಸ್​ ನಾಯಕರ ಹೇಳಿಕೆಗಳೂ ಕೂಡ ಇದಕ್ಕೆ ಪುಷ್ಠಿ ನೀಡುವಂತಿದ್ವು. ಅದರಲ್ಲೂ ಎಸ್​.ಟಿ.ಸೋಮಶೇಖರ್​, ಭೈರತಿ ಬಸವರಾಜ್​, ಶಿವರಾಮ್​ ಹೆಬ್ಬಾರ್​ ಹೆಸರಗಳು, ಜೋರಾಗಿ ಕೇಳಿ ಬರುತ್ತಿದ್ವು. ಎಸ್​.ಟಿ.ಸೋಮಶೇಖರ್​ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್​ ಕೂಡ ಸಿದ್ದರಾಮಯ್ಯರನ್ನು ರಹಸ್ತವಾಗಿ ಭೇಟಿಯಾಗಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಸಿಎಂ ಜೊತೆ ಚರ್ಚೆ ನಡೆಸಲಾಗಿದ್ದು, ಈ ವೇಳೆ ಕಾಂಗ್ರೆಸ್​ಗೆ ವಾಪಸ್ಸಾಗುವ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯರನ್ನು ಭೇಟಿಯಾಗಿರುವ ಎಸ್​ಟಿ ಸೋಮಶೇಖರ್
ಸಿದ್ದರಾಮಯ್ಯರನ್ನು ಭೇಟಿಯಾಗಿರುವ ಎಸ್​ಟಿ ಸೋಮಶೇಖರ್

ಅಚ್ಚರಿ ಮೂಡಿಸಿದ ಮಾಜಿ ಶಾಸಕ ರೇಣುಕಾಚಾರ್ಯ ನಡೆ

ಬಿಜೆಪಿಗೆ ವಲಸೆ ಹೋಗಿದ್ದ ಶಾಸಕರು ಮಾತ್ರವಲ್ಲ.. ಕೆಲ ಬಿಜೆಪಿಯ ನಾಯಕರೇ ಖದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರನ್ನು ಭೇಟಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಎಂ.ಪಿ.ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯರನ್ನ ಹಾಗೂ ಡಿಸಿಎಂ ಡಿಕೆಶಿಯವರನ್ನ ಭೇಟಿಯಾಗಿ ಸುಮಾರು 20 ನಿಮಿಷಗಳ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ಭೇಟಿ ಭಾರೀ ಸಂಚಲನ ಮೂಡಿಸಿದ್ದು, ರೇಣುಕಾಚಾರ್ಯ ಕಾಂಗ್ರೆಸ್​ ಸೇರ್ತಾರಾ ಎಂಬ ಪ್ರಶ್ನೆ ಮೂಡಿದೆ. ಆದ್ರೆ ನನಗೆ ಕಾಂಗ್ರೆಸ್​ನಿಂದ ಯಾವುದೇ ಆಹ್ವಾನ ಬಂದಿಲ್ಲ. ಎಂಪಿ ಟಿಕೆಟ್​ಗಾಗಿ ಕಾಯುತ್ತಿದ್ದು, ಮುಂದೆ ಕಾದುನೋಡೋಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಒಟ್ಟಾರೆ.. ವಲಸೆ ನಾಯಕರು, ಮತ್ತು ಬಿಜೆಪಿಯಲ್ಲೇ ಅಸಮಧಾನಗೊಂಡಿರುವವರು, ಕಾಂಗ್ರೆಸ್​ನತ್ತ ಮುಖ ಮಾಡ್ತಿದ್ದಾರೆ. ಇದು ರಾಜ್ಯದಲ್ಲಿ ಆಪರೇಷನ್​ ಹಸ್ತದ ಊಹಾಪೋಹಗಳಿಗೆ ಪುಷ್ಟಿ ನೀಡುತ್ತಿರೋದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More