newsfirstkannada.com

ವಿಶ್ವಕಪ್ ತಂಡದಲ್ಲಿ ಬದಲಾವಣೆ ಗಾಸಿಪ್; ಶ್ರೇಯಸ್ ಅಯ್ಯರ್ ಹೊರಹೋದ್ರೆ ಜಾಕ್​ಪಾಟ್ ಯಾರಿಗೆ?

Share :

17-09-2023

    ಶ್ರೇಯಸ್ ಔಟ್ ಆದರೆ ತಂಡಕ್ಕೆ ಸೇರಲು ಈ ಇಬ್ಬರಲ್ಲಿ ಭಾರೀ ಫೈಟ್​

    ಸೆಪ್ಟೆಂಬರ್​ 28 ರವರೆಗೆ ವಿಶ್ವಕಪ್​​​​​ ತಂಡದಲ್ಲಿ ಬದಲಾವಣೆಗೆ ಅವಕಾಶ

    ಭಾರತದಲ್ಲಿ ನಡೆಯೋ ಏಕದಿನ ವಿಶ್ವಕಪ್ ಟೂರ್ನಿಗೆ 3 ವಾರ ಬಾಕಿ

ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುತ್ತಾ? ಶ್ರೇಯಸ್ ಅಯ್ಯರ್​ ಇಂಜುರಿ ಬಳಿಕ ಇಂತಹದೊಂದು ಪ್ರಶ್ನೆ ಎದ್ದಿದೆ. ಹಾಗೊಂದು ವೇಳೆ ಶ್ರೇಯಸ್​​​ ವಿಶ್ವಕಪ್​​ ಮಹಾಸಮರದಿಂದ ಕಿಕೌಟಾದ್ರೆ ಹಲವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆ ಲಕ್ಕಿಮ್ಯಾನ್ಸ್​​​ ಯಾರು?

ಒನ್ಡೇ ವರ್ಲ್ಡ್ ಕಪ್​​​ ಕ್ರಿಕೆಟ್ ಫೆಸ್ಟಿವಲ್ ಅಂತ ಕರೆಸಿಕೊಳ್ಳುವ ಈ ಮಹಾಸಮರಕ್ಕೆ ಆಲ್​ರೆಡಿ ವೇದಿಕೆ ಸಜ್ಜಾಗಿದೆ. ಅಕ್ಟೋಬರ್​​ 5 ರಿಂದ ಟೂರ್ನಿಗೆ ಗ್ರ್ಯಾಂಡ್​​​ ಕಿಕ್​ಸ್ಟಾರ್ಟ್​ ಸಿಗಲಿದೆ. ಈ ಪ್ರತಿಷ್ಠಿತ ಟೂರ್ನಿ ಗೆಲ್ಲಲು ಬಿಸಿಸಿಐ 15 ಸದಸ್ಯರ ಪರ್ಫೆಕ್ಟ್​​ ತಂಡವನ್ನ ಸಜ್ಜುಗೊಳಿಸಿದೆ. ಇನ್ನೇನು ಅಖಾಡಕ್ಕೆ ಧುಮುಕೋದಷ್ಟೆ ಬಾಕಿ. ಇಂತಹ ಹೊತ್ತಲ್ಲಿ ಟೀಮ್ ಇಂಡಿಯಾದ ವಿಶ್ವಕಪ್​​ ತಂಡದಲ್ಲಿ ಮತ್ತೆ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಸಂಜು ಸ್ಯಾಮ್ಸನ್​

ಶ್ರೇಯಸ್​​ ಅಯ್ಯರ್​​ ವಿಶ್ವಕಪ್ ಆಡೋದು ಅನುಮಾನ..!

ಇಂಜುರಿಯಿಂದ ಸಂಪೂರ್ಣ ಚೇತರಿಕೆ ಕಂಡು ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್​ ಕಥೆ ಅದೇ ರಾಗ ಅದೇ ಹಾಡು ಅನ್ನುವಂತಾಗಿದೆ. ಏಷ್ಯಾಕಪ್​​ನಲ್ಲಿ ಶ್ರೇಯಸ್​ ಆಟ ಜಸ್ಟ್​ ಎರಡೇ ಗೇಮ್​​​​​​​ಗೆ ಮುಗಿದಿದೆ. ಪಾಕಿಸ್ತಾನ ವಿರುದ್ಧ ಸೂಪರ್​​​-4 ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿ ಮುಂಬೈಕರ್​​ ಇನ್ನೂ ಫುಲ್​ ಫಿಟ್ ಆಗಿಲ್ಲ. ನಾಳೆ ಫೈನಲ್​​​​ ಪಂದ್ಯ ಆಡುವುದು ಕೂಡ ಅನುಮಾನ ಎನ್ನಲಾಗ್ತಿದೆ. ಇಂಜುರಿ ಗಂಭೀರವಾದ ಹಿನ್ನೆಲೆ ಬಿಸಿಸಿಐ ಮೆಡಿಕಲ್ ಟೀಮ್​ ತೀವ್ರ ನಿಗಾವಹಿಸಿದೆ.

ಸರ್ಜರಿಗೆ ಒಳಗಾದ ಶ್ರೇಯಸ್​​​ ರಿಕವರಿ ಆಗೋದು ಕಷ್ಟ ?

ಸದ್ಯ ಬೆನ್ನುನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ರಿಕವರಿ ಸುಲಭವಿಲ್ಲ. ಯಾಕಂದ್ರೆ ಈಗಾಗ್ಲೇ ಮುಂಬೈಕರ್​​​ ಬೆನ್ನುನೋವಿನ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿದ್ರು. ಇದೀಗ ಮತ್ತೆ ಇಂಜುರಿ ಪೆಡಂಭೂತ ವಕ್ಕರಿಸಿದೆ. ಚೇತರಿಕೆಗೆ ಸುದೀರ್ಘ ಸಮಯ ಹಿಡಿಯಲಿದೆ ಎಂದು ಹೇಳಲಾಗ್ತಿದೆ. ಇದು ನಿಜ ಆಗಿದ್ದೇ ಆದ್ದಲ್ಲಿ ಶ್ರೇಯಸ್​ ಅಯ್ಯರ್ ಉಳಿದ ಏಷ್ಯಾಕಪ್​ ಪಂದ್ಯಗಳು ಸೇರಿದಂತೆ ಮುಂಬರೋ ಒನ್ಡೇ ವಿಶ್ವಕಪ್​ ಕೂಡ ಆಡುವುದು ಸಾಧ್ಯತೆ ಕಮ್ಮಿ ಎಂದು ಹೇಳಲಾಗ್ತಿದೆ.

ಸ್ಯಾಮ್ಸನ್​​-ತಿಲಕ್​​​​..ಯಾರು ಆ ಅದೃಷ್ಟ ಶಾಲಿ .?

ಶ್ರೇಯಸ್​ ಅಯ್ಯರ್ ಅನುಪಸ್ಥಿತಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ನಿಜ. ಹಾಗಂತ ಎಲ್ಲವೂ ಮುಗಿದೇ ಹೋಯ್ತು ಎಂದಲ್ಲ. ಯಾಕಂದ್ರೆ ಸೆಪ್ಟೆಂಬರ್​ 28 ರವರೆಗೆ ವಿಶ್ವಕಪ್​​​​​​ಗೆ ಪ್ರಕಟಿಸಿದ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಹೀಗಾಗಿ ಶ್ರೇಯಸ್​​ ಹೊರಬಿದ್ದರೂ ಅವರ ಸ್ಥಾನ ತುಂಬಲು ಯಂಗ್​​ಗನ್ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್​ಗಿದೆ. ತಿಲಕ್​ ವರ್ಮಾ ಹಾಗೂ ಸ್ಯಾಮ್ಸನ್​ ಶ್ರೇಯಸ್​ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗ್ಲೇ ತಿಲಕ್ ವರ್ಮಾ ಏಷ್ಯಾಕಪ್​​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಿಕ್ಕ ಕೆಲವೇ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಲೆಕ್ಟರ್ಸ್​ ಮನಗೆದ್ದಿದ್ದಾರೆ.

ತಿಲಕ್ ವರ್ಮಾ

ಇನ್ನು ತಿಲಕ್ ವರ್ಮಾ ಜೊತೆ ಬಿಗ್ ಹಿಟ್ಟರ್​ ಸಂಜು ಸ್ಯಾಮ್ಸನ್ ಕೂಡ ರೇಸ್​​​ನಲ್ಲಿದ್ದಾರೆ. ತಿಲಕ್​ಗೆ ಹೋಲಿಸಿದ್ರೆ ಸ್ಯಾಮ್ಸನ್​ಗೆ ಅನುಭವ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿ ರನ್​ ಗುಡ್ಡೆ ಹಾಕುವ ತಾಕತ್ತು ಹೊಂದಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್​ ಸ್ಥಾನಕ್ಕಾಗಿ ತಿಲಕ್ ವರ್ಮಾ ಹಾಗೂ ಸ್ಯಾಮ್ಸನ್ ನಡುವೆ ಮೆಗಾ ಫೈಟ್ ಏರ್ಪಡೋದು ಖಚಿತ.

ಬ್ಯಾಕ್​ಅಪ್​ ಆಟಗಾರರ ಸ್ಥಾನಕ್ಕೆ ಪ್ರಬಲ ಪೈಪೋಟಿ..!

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ 3 ವಾರ ಬಾಕಿ ಇದೆ. ಅಷ್ಟರಲ್ಲಿ ಏನು ಬೇಕಾದ್ರು ಆಗಬಹುದು. ಶ್ರೇಯಸ್ ಅಲ್ಲದೇ ಉಳಿದ ಆಟಗಾರರು ಸಹ ಇಂಜುರಿಗೆ ತುತ್ತಾಗಬಹುದು. ಇದರಿಂದ ವಿಶ್ವಕಪ್ ಆಡುವ ಕನಸು ಕಮರಬಹುದು. ಹಾಗೊಂದು ವೇಳೆ ಆದಲ್ಲಿ ಬ್ಯಾಕ್​ಅಪ್​ ಆಟಗಾರರ ಸ್ಥಾನಕ್ಕೂ ರೇಸ್​ ಏರ್ಪಡಲಿದೆ. ಪ್ರಸಿದ್ಧ್​ ಕೃಷ್ಣ ಹಾಗೂ ಯುಜುವೇಂದ್ರ ಚಹಲ್​ಗೂ ಅದೃಷ್ಟ ಖುಲಾಯಿಸಬಹುದು. ಏನಕ್ಕೂ ವೇಯ್ಟ್​ ಆ್ಯಂಡ್ ಸೀ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್ ತಂಡದಲ್ಲಿ ಬದಲಾವಣೆ ಗಾಸಿಪ್; ಶ್ರೇಯಸ್ ಅಯ್ಯರ್ ಹೊರಹೋದ್ರೆ ಜಾಕ್​ಪಾಟ್ ಯಾರಿಗೆ?

https://newsfirstlive.com/wp-content/uploads/2023/07/Shreyas-Iyer.jpg

    ಶ್ರೇಯಸ್ ಔಟ್ ಆದರೆ ತಂಡಕ್ಕೆ ಸೇರಲು ಈ ಇಬ್ಬರಲ್ಲಿ ಭಾರೀ ಫೈಟ್​

    ಸೆಪ್ಟೆಂಬರ್​ 28 ರವರೆಗೆ ವಿಶ್ವಕಪ್​​​​​ ತಂಡದಲ್ಲಿ ಬದಲಾವಣೆಗೆ ಅವಕಾಶ

    ಭಾರತದಲ್ಲಿ ನಡೆಯೋ ಏಕದಿನ ವಿಶ್ವಕಪ್ ಟೂರ್ನಿಗೆ 3 ವಾರ ಬಾಕಿ

ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುತ್ತಾ? ಶ್ರೇಯಸ್ ಅಯ್ಯರ್​ ಇಂಜುರಿ ಬಳಿಕ ಇಂತಹದೊಂದು ಪ್ರಶ್ನೆ ಎದ್ದಿದೆ. ಹಾಗೊಂದು ವೇಳೆ ಶ್ರೇಯಸ್​​​ ವಿಶ್ವಕಪ್​​ ಮಹಾಸಮರದಿಂದ ಕಿಕೌಟಾದ್ರೆ ಹಲವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆ ಲಕ್ಕಿಮ್ಯಾನ್ಸ್​​​ ಯಾರು?

ಒನ್ಡೇ ವರ್ಲ್ಡ್ ಕಪ್​​​ ಕ್ರಿಕೆಟ್ ಫೆಸ್ಟಿವಲ್ ಅಂತ ಕರೆಸಿಕೊಳ್ಳುವ ಈ ಮಹಾಸಮರಕ್ಕೆ ಆಲ್​ರೆಡಿ ವೇದಿಕೆ ಸಜ್ಜಾಗಿದೆ. ಅಕ್ಟೋಬರ್​​ 5 ರಿಂದ ಟೂರ್ನಿಗೆ ಗ್ರ್ಯಾಂಡ್​​​ ಕಿಕ್​ಸ್ಟಾರ್ಟ್​ ಸಿಗಲಿದೆ. ಈ ಪ್ರತಿಷ್ಠಿತ ಟೂರ್ನಿ ಗೆಲ್ಲಲು ಬಿಸಿಸಿಐ 15 ಸದಸ್ಯರ ಪರ್ಫೆಕ್ಟ್​​ ತಂಡವನ್ನ ಸಜ್ಜುಗೊಳಿಸಿದೆ. ಇನ್ನೇನು ಅಖಾಡಕ್ಕೆ ಧುಮುಕೋದಷ್ಟೆ ಬಾಕಿ. ಇಂತಹ ಹೊತ್ತಲ್ಲಿ ಟೀಮ್ ಇಂಡಿಯಾದ ವಿಶ್ವಕಪ್​​ ತಂಡದಲ್ಲಿ ಮತ್ತೆ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಸಂಜು ಸ್ಯಾಮ್ಸನ್​

ಶ್ರೇಯಸ್​​ ಅಯ್ಯರ್​​ ವಿಶ್ವಕಪ್ ಆಡೋದು ಅನುಮಾನ..!

ಇಂಜುರಿಯಿಂದ ಸಂಪೂರ್ಣ ಚೇತರಿಕೆ ಕಂಡು ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್​ ಕಥೆ ಅದೇ ರಾಗ ಅದೇ ಹಾಡು ಅನ್ನುವಂತಾಗಿದೆ. ಏಷ್ಯಾಕಪ್​​ನಲ್ಲಿ ಶ್ರೇಯಸ್​ ಆಟ ಜಸ್ಟ್​ ಎರಡೇ ಗೇಮ್​​​​​​​ಗೆ ಮುಗಿದಿದೆ. ಪಾಕಿಸ್ತಾನ ವಿರುದ್ಧ ಸೂಪರ್​​​-4 ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿ ಮುಂಬೈಕರ್​​ ಇನ್ನೂ ಫುಲ್​ ಫಿಟ್ ಆಗಿಲ್ಲ. ನಾಳೆ ಫೈನಲ್​​​​ ಪಂದ್ಯ ಆಡುವುದು ಕೂಡ ಅನುಮಾನ ಎನ್ನಲಾಗ್ತಿದೆ. ಇಂಜುರಿ ಗಂಭೀರವಾದ ಹಿನ್ನೆಲೆ ಬಿಸಿಸಿಐ ಮೆಡಿಕಲ್ ಟೀಮ್​ ತೀವ್ರ ನಿಗಾವಹಿಸಿದೆ.

ಸರ್ಜರಿಗೆ ಒಳಗಾದ ಶ್ರೇಯಸ್​​​ ರಿಕವರಿ ಆಗೋದು ಕಷ್ಟ ?

ಸದ್ಯ ಬೆನ್ನುನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ರಿಕವರಿ ಸುಲಭವಿಲ್ಲ. ಯಾಕಂದ್ರೆ ಈಗಾಗ್ಲೇ ಮುಂಬೈಕರ್​​​ ಬೆನ್ನುನೋವಿನ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿದ್ರು. ಇದೀಗ ಮತ್ತೆ ಇಂಜುರಿ ಪೆಡಂಭೂತ ವಕ್ಕರಿಸಿದೆ. ಚೇತರಿಕೆಗೆ ಸುದೀರ್ಘ ಸಮಯ ಹಿಡಿಯಲಿದೆ ಎಂದು ಹೇಳಲಾಗ್ತಿದೆ. ಇದು ನಿಜ ಆಗಿದ್ದೇ ಆದ್ದಲ್ಲಿ ಶ್ರೇಯಸ್​ ಅಯ್ಯರ್ ಉಳಿದ ಏಷ್ಯಾಕಪ್​ ಪಂದ್ಯಗಳು ಸೇರಿದಂತೆ ಮುಂಬರೋ ಒನ್ಡೇ ವಿಶ್ವಕಪ್​ ಕೂಡ ಆಡುವುದು ಸಾಧ್ಯತೆ ಕಮ್ಮಿ ಎಂದು ಹೇಳಲಾಗ್ತಿದೆ.

ಸ್ಯಾಮ್ಸನ್​​-ತಿಲಕ್​​​​..ಯಾರು ಆ ಅದೃಷ್ಟ ಶಾಲಿ .?

ಶ್ರೇಯಸ್​ ಅಯ್ಯರ್ ಅನುಪಸ್ಥಿತಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ನಿಜ. ಹಾಗಂತ ಎಲ್ಲವೂ ಮುಗಿದೇ ಹೋಯ್ತು ಎಂದಲ್ಲ. ಯಾಕಂದ್ರೆ ಸೆಪ್ಟೆಂಬರ್​ 28 ರವರೆಗೆ ವಿಶ್ವಕಪ್​​​​​​ಗೆ ಪ್ರಕಟಿಸಿದ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಹೀಗಾಗಿ ಶ್ರೇಯಸ್​​ ಹೊರಬಿದ್ದರೂ ಅವರ ಸ್ಥಾನ ತುಂಬಲು ಯಂಗ್​​ಗನ್ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್​ಗಿದೆ. ತಿಲಕ್​ ವರ್ಮಾ ಹಾಗೂ ಸ್ಯಾಮ್ಸನ್​ ಶ್ರೇಯಸ್​ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗ್ಲೇ ತಿಲಕ್ ವರ್ಮಾ ಏಷ್ಯಾಕಪ್​​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಿಕ್ಕ ಕೆಲವೇ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಲೆಕ್ಟರ್ಸ್​ ಮನಗೆದ್ದಿದ್ದಾರೆ.

ತಿಲಕ್ ವರ್ಮಾ

ಇನ್ನು ತಿಲಕ್ ವರ್ಮಾ ಜೊತೆ ಬಿಗ್ ಹಿಟ್ಟರ್​ ಸಂಜು ಸ್ಯಾಮ್ಸನ್ ಕೂಡ ರೇಸ್​​​ನಲ್ಲಿದ್ದಾರೆ. ತಿಲಕ್​ಗೆ ಹೋಲಿಸಿದ್ರೆ ಸ್ಯಾಮ್ಸನ್​ಗೆ ಅನುಭವ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿ ರನ್​ ಗುಡ್ಡೆ ಹಾಕುವ ತಾಕತ್ತು ಹೊಂದಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್​ ಸ್ಥಾನಕ್ಕಾಗಿ ತಿಲಕ್ ವರ್ಮಾ ಹಾಗೂ ಸ್ಯಾಮ್ಸನ್ ನಡುವೆ ಮೆಗಾ ಫೈಟ್ ಏರ್ಪಡೋದು ಖಚಿತ.

ಬ್ಯಾಕ್​ಅಪ್​ ಆಟಗಾರರ ಸ್ಥಾನಕ್ಕೆ ಪ್ರಬಲ ಪೈಪೋಟಿ..!

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ 3 ವಾರ ಬಾಕಿ ಇದೆ. ಅಷ್ಟರಲ್ಲಿ ಏನು ಬೇಕಾದ್ರು ಆಗಬಹುದು. ಶ್ರೇಯಸ್ ಅಲ್ಲದೇ ಉಳಿದ ಆಟಗಾರರು ಸಹ ಇಂಜುರಿಗೆ ತುತ್ತಾಗಬಹುದು. ಇದರಿಂದ ವಿಶ್ವಕಪ್ ಆಡುವ ಕನಸು ಕಮರಬಹುದು. ಹಾಗೊಂದು ವೇಳೆ ಆದಲ್ಲಿ ಬ್ಯಾಕ್​ಅಪ್​ ಆಟಗಾರರ ಸ್ಥಾನಕ್ಕೂ ರೇಸ್​ ಏರ್ಪಡಲಿದೆ. ಪ್ರಸಿದ್ಧ್​ ಕೃಷ್ಣ ಹಾಗೂ ಯುಜುವೇಂದ್ರ ಚಹಲ್​ಗೂ ಅದೃಷ್ಟ ಖುಲಾಯಿಸಬಹುದು. ಏನಕ್ಕೂ ವೇಯ್ಟ್​ ಆ್ಯಂಡ್ ಸೀ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More