newsfirstkannada.com

ಶುಭ್​ಮನ್​​ ಆಡ್ತಿಲ್ಲ ಆದ್ರೂ ಸಾಲು ಸಾಲು ಅವಕಾಶ.. ಗಿಲ್​ಗೆ ಇದೆಯಾ ಕ್ಯಾಪ್ಟನ್ ರೋಹಿತ್​, ಕೋಚ್ ರಾಹುಲ್ ಕೃಪಾಕಟಾಕ್ಷ ​

Share :

29-07-2023

    ಲಂಡನ್​ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಗಿಲ್ ವೈಫಲ್ಯ..!

    3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್​ ಪುತ್ತರ್​ಗೆ ಏನಾಗಿದೆ

    ವಿಂಡೀಸ್​​​ ಟೆಸ್ಟ್​ ಸರಣಿಯಲ್ಲಿ ಶುಭ್​ಮನ್ ಬ್ಯಾಟಿಂಗ್ ಡಲ್​

ಟ್ಯಾಲೆಂಟೆಡ್​ ಕ್ರಿಕೆಟರ್​ ಎಂದು ಬೇಷ್​ ಎನಿಸಿಕೊಂಡಿದ್ದ ಶುಭ್​ಮನ್​ ಗಿಲ್​ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ. ಇದ್ರ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ಮತ್ತೆ ಫೇವರಿಸಮ್​ನ ಚರ್ಚೆ ಜೋರಾಗಿದೆ. ಕೋಚ್​ ದ್ರಾವಿಡ್​, ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರಾ.?

ಭಾರತೀಯ ಕ್ರಿಕೆಟ್​ನಲ್ಲಿ ಮತ್ತೆ ಫೇವರಿಸಮ್​ನ ಸದ್ದು ಜೋರಾಗಿದೆ. ಕೋಚ್​- ಕ್ಯಾಪ್ಟನ್​​ ಕೃಪಾಕಟಾಕ್ಷ ಇದ್ರೆ ಸಾಲು ಸಾಲು ಪ್ಲಾಫ್​ ಶೋ ನೀಡಿದ್ರೂ, ಅವಕಾಶ ಸಿಗುತ್ತೆ. ಆದ್ರೆ, ಬೆಂಚ್​​ನಲ್ಲಿರೋ ಟ್ಯಾಲೆಂಟೆಡ್​ ಕ್ರಿಕೆಟರ್​ಗೆ ಮಾತ್ರ ​ಅನ್ಯಾಯ ಮಾಡಲಾಗ್ತಿದೆ ಅಂತಾ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ.

 

ಶುಭ್​ಮನ್​ ಗಿಲ್​

ಮೊದಲ ಏಕದಿನದಲ್ಲೂ ಶುಭ್​ಮನ್​ ಪ್ಲಾಫ್​ ಶೋ.!

ಸದ್ಯ ನಡೀತಾ ಪೇವರಿಸಮ್​ ಚರ್ಚೆಗೆ ನೇರಾ ನೇರ ಕಾರಣ ಶುಭ್​ಮನ್​ ಗಿಲ್​..! ಪ್ರಾಮಿಸಿಂಗ್​ ಯಂಗ್​ಸ್ಟರ್​ ಅನಿಸಿಕೊಂಡಿದ್ದ ಶುಭ್​ಮನ್,​ ಸದ್ಯ ವೈಫಲ್ಯದ ಹಾದಿ ತುಳಿದಿದ್ದಾರೆ. ವಿಂಡೀಸ್​ ವಿರುದ್ಧದ ಮೊದಲ ಏಕದಿನದಲ್ಲೂ 7 ರನ್​ಗಳಿಗೆ ಗಿಲ್​ ಪೆವಿಲಿಯನ್​ ಸೇರಿದ್ರು.

ವಿಂಡೀಸ್​​​ ಟೆಸ್ಟ್​ ಸರಣಿಯಲ್ಲೂ ಶುಭ್​ಮನ್​ ಸೈಲೆಂಟ್​​.!

ಏಕದಿನ ಸರಣಿಯ ಮೊದಲ ಪಂದ್ಯ ಮಾತ್ರವಲ್ಲ.. ಅದಕ್ಕೂ ಮುನ್ನ ನಡೆದ ವಿಂಡೀಸ್​ ವಿರುದ್ಧದ 2 ಟೆಸ್ಟ್​ನಲ್ಲೂ ಗಿಲ್​ ನಿರಾಸೆ ಮೂಡಿಸಿ ಅಲ್ಪ ಮೊತ್ತಕ್ಕೆ ಪೆವಿಲಿಯನ್​ ಸೇರಿದ್ರು. ಅದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯದಲ್ಲೂ ರನ್​ಗಳಿಕೆಗೆ ಪರದಾಡಿದ್ದ ಗಿಲ್​, ಸುಲಭಕ್ಕೆ ಶರಣಾಗಿದ್ರು.

ಐಪಿಎಲ್​ ಬಳಿಕ ಗಿಲ್​ ಶೈನಿಂಗ್​ ಆಟ ಮಾಯ.!

2023ರ ಐಪಿಎಲ್​ನಲ್ಲಿ ಶುಭ್​ಮನ್​ ಗಿಲ್​ ಧಮಾಕಾ ಸೃಷ್ಟಿಸಿದ್ರು. 3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್​ ಪುತ್ತರ್​ 59.33ರ ಸರಾಸರಿಯಲ್ಲಿ ರನ್​ ಗಳಿಸಿದ್ರು. ಆದ್ರೆ, ಆ ಬಳಿಕ ಇಂಟರ್​ನ್ಯಾಷನಲ್​ ಅಖಾಡದಲ್ಲಿ ಗಿಲ್​ ರನ್​ಗಾಗಿ ಪರದಾಟ ನಡೆಸ್ತಿದ್ದಾರೆ. 2023ರ ಐಪಿಎಲ್​ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಪಂದ್ಯಗಳನ್ನಾಡಿದ ಗಿಲ್​, 16.60ರ ಸರಾಸರಿಯಲ್ಲಿ ಕೇವಲ 83 ರನ್​ಗಳಿಸಿದ್ದಾರೆ.

ಪ್ರಯೋಗಕ್ಕೆ ಮುಂದಾಗಿದ್ರೂ ಯಾಕಿಲ್ಲ ಬದಲಾವಣೆ.?

ಒಂದೆಡೆ ಶುಭ್​ಮನ್​ ಗಿಲ್​ ಪ್ಲಾಫ್​ ಶೋ ನೀಡ್ತಾ ಇದ್ರೆ, ಇನ್ನೊಂದೆಡೆ ಟೀಮ್​ ಇಂಡಿಯಾದಲ್ಲಿ ಬದಲಾವಣೆ ಜೋರಾಗಿದೆ. ವಿಂಡೀಸ್​ ವಿರುದ್ಧದ ಮೊದಲ ಏಕದಿನವೇ ಪಂದ್ಯದಲ್ಲೇ ಮ್ಯಾನೇಜ್​ಮೆಂಟ್​​ ಪ್ರಯೋಗವನ್ನ ನಡೆಸಿದೆ. ಆದ್ರೆ, ವೈಫಲ್ಯದ ಸುಳಿಗೆ ಸಿಲುಕಿರುವ ಗಿಲ್​ ಬದಲಾವಣೆಯ ವಿಚಾರದಲ್ಲಿ ಮ್ಯಾನೇಜ್​ಮೆಂಟ್​​ ಮೌನಕ್ಕೆ ಜಾರಿದೆ.

ಟ್ಯಾಲೆಂಟೆಡ್​ ಋತುರಾಜ್​ ಬೆಂಚ್​ಗೆ ಸೀಮಿತ..!

ಗಿಲ್​ರಂತೇ ಐಪಿಎಲ್​ನಲ್ಲಿ ಋತುರಾಜ್​ ಗಾಯಕ್ವಾಡ್​ ಕೂಡ ಅಬ್ಬರಿಸಿದ್ರು. 42.14ರ ಉತ್ತಮ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ರು. ಆದ್ರೆ, ಟೀಮ್​ ಇಂಡಿಯಾ ಪರ ಬೆಂಚ್​ಗೆ ಸೀಮಿತವಾಗಿದ್ದಾರೆ. ಗಾಯಕ್ವಾಡ್​​ಗೆ ಚಾನ್ಸ್​ ನೀಡೋ ಬಗ್ಗೆ ಮ್ಯಾನೇಜ್​ಮೆಂಟ್​ ಯೋಚಿಸ್ತಾನೆ ಇಲ್ಲ…!

ತಂಡದ ಆಯ್ಕೆಯಲ್ಲಿ ನಡೀತಿದ್ಯಾ ಫೇವರಿಸಮ್​​..?

ವೈಫಲ್ಯ ಅನುಭವಿಸ್ತಾ ಇದ್ರೂ, ಗಿಲ್​ಗೆ​ ಚಾನ್ಸ್​ ನೀಡ್ತಿರೋದು ಹಲವರ ಕಣ್ಣನ್ನ ಕೆಂಪಾಗಿಸಿದೆ. ಅದ್ರಲ್ಲೂ ಋತುರಾಜ್​ ಗಾಯಕ್ವಾಡ್​ರನ್ನ ಆಯ್ಕೆ ಮಾಡದೇ ನಿರ್ಲಕ್ಷ್ಯ ಮಾಡ್ತಿರೋದು ಫೇವರಿಸಮ್​ನ ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಕೆಲವರು ಕೋಚ್​ ದ್ರಾವಿಡ್​, ಶಿಷ್ಯ ಶುಭ್​ಮನ್​ ಪರ ಬ್ಯಾಟಿಂಗ್​ ನಡೆಸ್ತಿದ್ದಾರೆ ಎಂದು ನೇರವಾದ ಆರೋಪ ಮಾಡ್ತಿದ್ದಾರೆ. ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಕೂಡ ಪರೋಕ್ಷವಾಗಿ ಕುಟುಕಿದ್ದಾರೆ.

ವೆಂಕಟೇಶ್ ಪ್ರಸಾದ್

‘ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ’

‘ಶುಭ್‌ಮನ್ ಗಿಲ್​ರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಆದರೆ ದುಃಖಕರ ವಿಚಾರ ಏನಂದ್ರೆ, ಶುಭ್​ಮನ್​ ಪರ್ಫಾಮೆನ್ಸ್​ ಉತ್ತಮವಾಗಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಇನ್ನಿಂಗ್ಸ್‌ಗಳ ನಂತರ 30ರ ಸರಾಸರಿ ಸಾಮಾನ್ಯವಾಗಿದೆ. ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ ಎಂದು ಯೋಚಿಸಲೂ ಆಗ್ತಿಲ್ಲ’

ವೆಂಕಟೇಶ್​ ಪ್ರಸಾದ್​, ಮಾಜಿ ಕ್ರಿಕೆಟಿಗ

ಈ ಎಲ್ಲ ಟೀಕೆಗಳು, ಚರ್ಚೆಗಳ ಹೊರತಾಗಿ ಇಂದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್​ಗೆ ಅವಕಾಶ ಸಿಗೋದು ಬಹುತೇಕ ಖಚಿತ. ಈ ಚಾನ್ಸ್​​ನಲ್ಲಿ ಗಿಲ್​ ಪರ್ಫಾಮ್​ ಮಾಡಬೇಕಿದೆ. ​ಇಲ್ಲದಿದ್ರೆ, ಮ್ಯಾನೇಜ್​ಮೆಂಟ್​ ಶುಭ್​ಮನ್​ಗೆ ಕೊಕ್​ ನೀಡಿ, ಋತುರಾಜ್​ಗೆ ಚಾನ್ಸ್​ ನೀಡೋ ಬಗ್ಗೆ ಯೋಚಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶುಭ್​ಮನ್​​ ಆಡ್ತಿಲ್ಲ ಆದ್ರೂ ಸಾಲು ಸಾಲು ಅವಕಾಶ.. ಗಿಲ್​ಗೆ ಇದೆಯಾ ಕ್ಯಾಪ್ಟನ್ ರೋಹಿತ್​, ಕೋಚ್ ರಾಹುಲ್ ಕೃಪಾಕಟಾಕ್ಷ ​

https://newsfirstlive.com/wp-content/uploads/2023/07/ROHIT_SHARMA_GILL.jpg

    ಲಂಡನ್​ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಗಿಲ್ ವೈಫಲ್ಯ..!

    3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್​ ಪುತ್ತರ್​ಗೆ ಏನಾಗಿದೆ

    ವಿಂಡೀಸ್​​​ ಟೆಸ್ಟ್​ ಸರಣಿಯಲ್ಲಿ ಶುಭ್​ಮನ್ ಬ್ಯಾಟಿಂಗ್ ಡಲ್​

ಟ್ಯಾಲೆಂಟೆಡ್​ ಕ್ರಿಕೆಟರ್​ ಎಂದು ಬೇಷ್​ ಎನಿಸಿಕೊಂಡಿದ್ದ ಶುಭ್​ಮನ್​ ಗಿಲ್​ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ. ಇದ್ರ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ಮತ್ತೆ ಫೇವರಿಸಮ್​ನ ಚರ್ಚೆ ಜೋರಾಗಿದೆ. ಕೋಚ್​ ದ್ರಾವಿಡ್​, ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರಾ.?

ಭಾರತೀಯ ಕ್ರಿಕೆಟ್​ನಲ್ಲಿ ಮತ್ತೆ ಫೇವರಿಸಮ್​ನ ಸದ್ದು ಜೋರಾಗಿದೆ. ಕೋಚ್​- ಕ್ಯಾಪ್ಟನ್​​ ಕೃಪಾಕಟಾಕ್ಷ ಇದ್ರೆ ಸಾಲು ಸಾಲು ಪ್ಲಾಫ್​ ಶೋ ನೀಡಿದ್ರೂ, ಅವಕಾಶ ಸಿಗುತ್ತೆ. ಆದ್ರೆ, ಬೆಂಚ್​​ನಲ್ಲಿರೋ ಟ್ಯಾಲೆಂಟೆಡ್​ ಕ್ರಿಕೆಟರ್​ಗೆ ಮಾತ್ರ ​ಅನ್ಯಾಯ ಮಾಡಲಾಗ್ತಿದೆ ಅಂತಾ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ.

 

ಶುಭ್​ಮನ್​ ಗಿಲ್​

ಮೊದಲ ಏಕದಿನದಲ್ಲೂ ಶುಭ್​ಮನ್​ ಪ್ಲಾಫ್​ ಶೋ.!

ಸದ್ಯ ನಡೀತಾ ಪೇವರಿಸಮ್​ ಚರ್ಚೆಗೆ ನೇರಾ ನೇರ ಕಾರಣ ಶುಭ್​ಮನ್​ ಗಿಲ್​..! ಪ್ರಾಮಿಸಿಂಗ್​ ಯಂಗ್​ಸ್ಟರ್​ ಅನಿಸಿಕೊಂಡಿದ್ದ ಶುಭ್​ಮನ್,​ ಸದ್ಯ ವೈಫಲ್ಯದ ಹಾದಿ ತುಳಿದಿದ್ದಾರೆ. ವಿಂಡೀಸ್​ ವಿರುದ್ಧದ ಮೊದಲ ಏಕದಿನದಲ್ಲೂ 7 ರನ್​ಗಳಿಗೆ ಗಿಲ್​ ಪೆವಿಲಿಯನ್​ ಸೇರಿದ್ರು.

ವಿಂಡೀಸ್​​​ ಟೆಸ್ಟ್​ ಸರಣಿಯಲ್ಲೂ ಶುಭ್​ಮನ್​ ಸೈಲೆಂಟ್​​.!

ಏಕದಿನ ಸರಣಿಯ ಮೊದಲ ಪಂದ್ಯ ಮಾತ್ರವಲ್ಲ.. ಅದಕ್ಕೂ ಮುನ್ನ ನಡೆದ ವಿಂಡೀಸ್​ ವಿರುದ್ಧದ 2 ಟೆಸ್ಟ್​ನಲ್ಲೂ ಗಿಲ್​ ನಿರಾಸೆ ಮೂಡಿಸಿ ಅಲ್ಪ ಮೊತ್ತಕ್ಕೆ ಪೆವಿಲಿಯನ್​ ಸೇರಿದ್ರು. ಅದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯದಲ್ಲೂ ರನ್​ಗಳಿಕೆಗೆ ಪರದಾಡಿದ್ದ ಗಿಲ್​, ಸುಲಭಕ್ಕೆ ಶರಣಾಗಿದ್ರು.

ಐಪಿಎಲ್​ ಬಳಿಕ ಗಿಲ್​ ಶೈನಿಂಗ್​ ಆಟ ಮಾಯ.!

2023ರ ಐಪಿಎಲ್​ನಲ್ಲಿ ಶುಭ್​ಮನ್​ ಗಿಲ್​ ಧಮಾಕಾ ಸೃಷ್ಟಿಸಿದ್ರು. 3 ಸೆಂಚುರಿ ಸಿಡಿಸಿ ಘರ್ಜಿಸಿದ್ದ ಪಂಜಾಬ್​ ಪುತ್ತರ್​ 59.33ರ ಸರಾಸರಿಯಲ್ಲಿ ರನ್​ ಗಳಿಸಿದ್ರು. ಆದ್ರೆ, ಆ ಬಳಿಕ ಇಂಟರ್​ನ್ಯಾಷನಲ್​ ಅಖಾಡದಲ್ಲಿ ಗಿಲ್​ ರನ್​ಗಾಗಿ ಪರದಾಟ ನಡೆಸ್ತಿದ್ದಾರೆ. 2023ರ ಐಪಿಎಲ್​ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಪಂದ್ಯಗಳನ್ನಾಡಿದ ಗಿಲ್​, 16.60ರ ಸರಾಸರಿಯಲ್ಲಿ ಕೇವಲ 83 ರನ್​ಗಳಿಸಿದ್ದಾರೆ.

ಪ್ರಯೋಗಕ್ಕೆ ಮುಂದಾಗಿದ್ರೂ ಯಾಕಿಲ್ಲ ಬದಲಾವಣೆ.?

ಒಂದೆಡೆ ಶುಭ್​ಮನ್​ ಗಿಲ್​ ಪ್ಲಾಫ್​ ಶೋ ನೀಡ್ತಾ ಇದ್ರೆ, ಇನ್ನೊಂದೆಡೆ ಟೀಮ್​ ಇಂಡಿಯಾದಲ್ಲಿ ಬದಲಾವಣೆ ಜೋರಾಗಿದೆ. ವಿಂಡೀಸ್​ ವಿರುದ್ಧದ ಮೊದಲ ಏಕದಿನವೇ ಪಂದ್ಯದಲ್ಲೇ ಮ್ಯಾನೇಜ್​ಮೆಂಟ್​​ ಪ್ರಯೋಗವನ್ನ ನಡೆಸಿದೆ. ಆದ್ರೆ, ವೈಫಲ್ಯದ ಸುಳಿಗೆ ಸಿಲುಕಿರುವ ಗಿಲ್​ ಬದಲಾವಣೆಯ ವಿಚಾರದಲ್ಲಿ ಮ್ಯಾನೇಜ್​ಮೆಂಟ್​​ ಮೌನಕ್ಕೆ ಜಾರಿದೆ.

ಟ್ಯಾಲೆಂಟೆಡ್​ ಋತುರಾಜ್​ ಬೆಂಚ್​ಗೆ ಸೀಮಿತ..!

ಗಿಲ್​ರಂತೇ ಐಪಿಎಲ್​ನಲ್ಲಿ ಋತುರಾಜ್​ ಗಾಯಕ್ವಾಡ್​ ಕೂಡ ಅಬ್ಬರಿಸಿದ್ರು. 42.14ರ ಉತ್ತಮ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ರು. ಆದ್ರೆ, ಟೀಮ್​ ಇಂಡಿಯಾ ಪರ ಬೆಂಚ್​ಗೆ ಸೀಮಿತವಾಗಿದ್ದಾರೆ. ಗಾಯಕ್ವಾಡ್​​ಗೆ ಚಾನ್ಸ್​ ನೀಡೋ ಬಗ್ಗೆ ಮ್ಯಾನೇಜ್​ಮೆಂಟ್​ ಯೋಚಿಸ್ತಾನೆ ಇಲ್ಲ…!

ತಂಡದ ಆಯ್ಕೆಯಲ್ಲಿ ನಡೀತಿದ್ಯಾ ಫೇವರಿಸಮ್​​..?

ವೈಫಲ್ಯ ಅನುಭವಿಸ್ತಾ ಇದ್ರೂ, ಗಿಲ್​ಗೆ​ ಚಾನ್ಸ್​ ನೀಡ್ತಿರೋದು ಹಲವರ ಕಣ್ಣನ್ನ ಕೆಂಪಾಗಿಸಿದೆ. ಅದ್ರಲ್ಲೂ ಋತುರಾಜ್​ ಗಾಯಕ್ವಾಡ್​ರನ್ನ ಆಯ್ಕೆ ಮಾಡದೇ ನಿರ್ಲಕ್ಷ್ಯ ಮಾಡ್ತಿರೋದು ಫೇವರಿಸಮ್​ನ ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಕೆಲವರು ಕೋಚ್​ ದ್ರಾವಿಡ್​, ಶಿಷ್ಯ ಶುಭ್​ಮನ್​ ಪರ ಬ್ಯಾಟಿಂಗ್​ ನಡೆಸ್ತಿದ್ದಾರೆ ಎಂದು ನೇರವಾದ ಆರೋಪ ಮಾಡ್ತಿದ್ದಾರೆ. ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಕೂಡ ಪರೋಕ್ಷವಾಗಿ ಕುಟುಕಿದ್ದಾರೆ.

ವೆಂಕಟೇಶ್ ಪ್ರಸಾದ್

‘ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ’

‘ಶುಭ್‌ಮನ್ ಗಿಲ್​ರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಆದರೆ ದುಃಖಕರ ವಿಚಾರ ಏನಂದ್ರೆ, ಶುಭ್​ಮನ್​ ಪರ್ಫಾಮೆನ್ಸ್​ ಉತ್ತಮವಾಗಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಇನ್ನಿಂಗ್ಸ್‌ಗಳ ನಂತರ 30ರ ಸರಾಸರಿ ಸಾಮಾನ್ಯವಾಗಿದೆ. ಯಾರಿಗೆ ಇಷ್ಟು ಅವಕಾಶ ಸಿಕ್ಕಿದೆ ಎಂದು ಯೋಚಿಸಲೂ ಆಗ್ತಿಲ್ಲ’

ವೆಂಕಟೇಶ್​ ಪ್ರಸಾದ್​, ಮಾಜಿ ಕ್ರಿಕೆಟಿಗ

ಈ ಎಲ್ಲ ಟೀಕೆಗಳು, ಚರ್ಚೆಗಳ ಹೊರತಾಗಿ ಇಂದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್​ಗೆ ಅವಕಾಶ ಸಿಗೋದು ಬಹುತೇಕ ಖಚಿತ. ಈ ಚಾನ್ಸ್​​ನಲ್ಲಿ ಗಿಲ್​ ಪರ್ಫಾಮ್​ ಮಾಡಬೇಕಿದೆ. ​ಇಲ್ಲದಿದ್ರೆ, ಮ್ಯಾನೇಜ್​ಮೆಂಟ್​ ಶುಭ್​ಮನ್​ಗೆ ಕೊಕ್​ ನೀಡಿ, ಋತುರಾಜ್​ಗೆ ಚಾನ್ಸ್​ ನೀಡೋ ಬಗ್ಗೆ ಯೋಚಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More