ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧಾರ
ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕ್ರಮ
ಸಿದ್ದರಾಮಯ್ಯ ಬಜೆಟ್ನ ಸೂಪರ್ ಹೈಲೈಟ್ಸ್ ಇಲ್ಲಿದೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಆಗಿದೆ. ಕರ್ನಾಟಕ ಸರ್ಕಾರ ಮಂಡಿಸಿದ ಬಜೆಟ್ನ ಪ್ರಮುಖ ಅಂಶಗಳು ಇಲ್ಲಿವೆ.
ಮದ್ಯಪ್ರಿಯರಿಗೆ ‘ಬರೆ’
- ಬಜೆಟ್ನಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿದ ಸರ್ಕಾರ
- ಮದ್ಯದ ಬೆಲೆ ಸ್ಲಾಬ್ಗಳ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ
- ಮದ್ಯದ ಹಾಲಿ ದರಗಳ ಮೇಲೆ ಶೇಕಡ 20ರಷ್ಟು ಸುಂಕ ಹೆಚ್ಚಳ
- ಬಿಯರ್ ಮೇಲಿನ ಅಬಕಾರಿ ಸುಂಕ 175-185ಕ್ಕೆ ಹೆಚ್ಚಳ
- ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ಕೃಷಿಗೆ ಸಿಕ್ಕಿದ್ದೇನು?
- ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ 100 ಕೋಟಿ ವೆಚ್ಚ
- ನವೋದ್ಯಮ ಎಂಬ ಹೊಸ ಯೋಜನೆಯಡಿ 10 ಕೋಟಿ ಅನುದಾನ
- ನಂದಿನಿ ಮಾದರಿಯ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ
- ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆಗೆ 10 ಕೋಟಿ ರೂ, ಅನುದಾನ ಮೀಸಲು
- ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಶೇ.4ರ ಬಡ್ಡಿ ದರದಲ್ಲಿ ಸಾಲ
- ನವೋದ್ಯಮಿಗಳ ಬೆಂಬಲ ನೀಡಲು 5 ಕೋಟಿ ಆರ್ಥಿಕ ನೆರವು
- 100 ಹಾರ್ವೆಸ್ಟರ್ ಹಬ್ ಸ್ಥಾಪನೆ ಮಾಡಲು 50 ಕೋಟಿ ಅನುದಾನ
ತೋಟಗಾರಿಕೆಗೆ ಸಿಕ್ಕಿದ್ದೇನು?
- ಸುಮಾರು 5 ಕೋಟಿ ವೆಚ್ಚದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ
- ಉತ್ಪನ್ನಗಳ ಸಂಸ್ಕರಣೆಗೆ 8 ಶೀತಲ ಘಟಕಗಳ ನಿರ್ಮಾಣ
- ರಾಜ್ಯದಲ್ಲಿ ಕಾಫಿ ಎಕೋ ಟೂರಿಸಂ ಉತ್ತೇಜಿಸಲು ಕ್ರಮ
- ಹೈಸ್ಕೂಲ್ ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಯೋಜನೆ
ರೇಷ್ಮೆಗೆ ಬಂಪರ್
- ರಾಮನಗರದಲ್ಲಿ ರೇಷ್ಮೆಗಾಗಿ ಹೈಟೆಕ್ ಮಾರುಕಟ್ಟೆ ನಿರ್ಮಾಣ
- ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರ್ಕೆಟ್
- ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ‘
ಮೀನುಗಾರಿಕೆ
- ಮೀನುಗಾರರಿಗೆ ಬಡ್ಡಿರಹಿತವಾಗಿ ಸಾಲದ ಮಿತಿ 3 ಲಕ್ಷ ರೂ.ಗೆ ಏರಿಕೆ
- ಬೋಟ್ಗಳಿಗೆ ಡಿಸೇಲ್ ಮಿತಿ ಹೆಚ್ಚಳ, ಸರ್ಕಾರದಿಂದ 250 ಕೋಟಿ ನೆರವು
- ಮೀನುಗಾರಿಕಾ ದೋಣಿ ಇಂಜಿನ್ ಬದಲಾಯಿಸಲು 50 ಸಾವಿರ ನೆರವು
- ಸೀಮೆಎಣ್ಣೆ ಇಂಜಿನ್ ಬದಲಾವಣೆಗೆ 20 ಕೋಟಿ ಅನುದಾನ ಮೀಸಲು
- ಹೆಚ್ಚಿನ ಮೀನು ಮರಿ ಉತ್ಪಾದಿಸಲು ಒಳನಾಡು ಮೀನುಗಾರಿಕೆ ಪ್ರೋತ್ಸಾಹ
- ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಉತ್ತಮ ಮಾರುಕಟ್ಟೆ ಸ್ಥಾಪನೆ
- ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶೈತ್ಯಾಗಾರಗಳ ಸ್ಥಾಪನೆ
- ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧಾರ
ಸಹಕಾರ
- ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲದ ಮಿತಿ ಹೆಚ್ಚಳ
- 3 ಲಕ್ಷ ರೂ,ಗಳಿಂದ 5 ಲಕ್ಷ ರೂ.ಗೆ ಸಾಲದ ಮಿತಿ ಏರಿಕೆ
- ರೈತರಿಗೆ 25 ಸಾವಿರ ಕೋಟಿ ರೂ, ಸಾಲ ವಿತರಣೆಯ ಗುರಿ
- ಗೋದಾಮು ನಿರ್ಮಿಸಲು ಶೇ.7ರ ಬಡ್ಡಿ ದರದಲ್ಲಿ 20 ಲಕ್ಷ ರೂ.
- ಕೆಪ್ಯಾಕ್ ಸಹಯೋಗದಲ್ಲಿ ಮಿನಿ ಶೀತಲ ಗೃಹ ಸ್ಥಾಪನೆ
- ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲ ಗೃಹ
- ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ತೀರ್ಮಾನ
- ಹಮಾಲರಿಗೆ ನೀಡುವ ಶವಸಂಸ್ಕಾರ ಮೊತ್ತ 25 ಸಾವಿರಕ್ಕೆ ಏರಿಕೆ
ರಾಷ್ಟ್ರೀಯ ಶಿಕ್ಷಣ ನೀತಿ ರದ್ದು
- ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು ಮಾಡಲು ನಿರ್ಧಾರ
- ಹೊಸ ಶಿಕ್ಷಣ ನೀತಿ ರೂಪಿಸಲಿರುವ ರಾಜ್ಯ ಸರ್ಕಾರ ತೀರ್ಮಾನ
- ನಕಲಿ ಅಂಕಪಟ್ಟಿ ಹಾವಳಿ ತಪ್ಪಿಸಲು ಡಿಜಿಟಲ್ ಸರ್ಕಾರ ಮೊರೆ
- ಡಿಜಿ ಲಾಕರ್ನಲ್ಲಿ ಮಕ್ಕಳ ಅಂಕ ಪಟ್ಟಿ ಪ್ರಮಾಣಪತ್ರ ಶೇಖರಣೆ‘
ಪಶುಸಂಗೋಪನೆಗೆ ಬಂಪರ್
- ಜಾನುವಾರಗಳ ಆಕಸ್ಮಿಕ ಸಾವಿಗೆ ಸನುಗ್ರಹ ಯೋಜನೆ
- ಕುರಿ, ಮೇಕೆ ಸಾವಿಗೆ 5 ಸಾವಿರ ರೂಪಾಯಿ ಪರಿಹಾರ
- ಹಸು ಎಮ್ಮೆ ಎತ್ತುಗಳಿಗೆ 10 ಸಾವಿರ ರೂಪಾಯಿ ಪರಿಹಾರ
‘ಗ್ಯಾರಂಟಿ’ಗೆ ಹಣ ಲೆಕ್ಕ
- 5 ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ವೆಚ್ಚ
- ಪ್ರತಿ ಕುಟುಂಬಕ್ಕೆ ಮಾಸಿಕ 4-5 ಸಾವಿರ ರೂಪಾಯಿ ಹಣ ನೀಡಿಕೆ
- ವಾರ್ಷಿಕ 48 ಸಾವಿರದಿಂದ 60 ಸಾವಿರ ರೂಪಾಯಿ ಆರ್ಥಿಕ ನೆರವು
- ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ತೆರಿಗೆ ಸೋರಿಗೆ ತಡೆಗಟ್ಟುವುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಗ್ಯಾರಂಟಿಗೆ ಹಣ ಸಂಗ್ರಹ
ನೀರಾವರಿ
- 770 ಕೋಟಿ ರೂ. ವೆಚ್ಚದಲ್ಲಿ 19 ಕೆರೆ ತುಂಬಿಸುವ ಯೋಜನೆ
- ಕೆ.ಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ಯೋಜನೆಯ 2ನೇ ಹಂತ ಜಾರಿ
- ಚಿಕ್ಕಬಳ್ಳಾಪುರ, ಕೋಲಾರದ 296 ಕೆರೆ ತುಂಬಿಸೋ ಯೋಜನೆ
- 529 ಕೋಟಿ ರೂ.ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ
- ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಕ್ಕೆ ಕ್ರಮ
- ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕ್ರಮ
ಶಿಕ್ಷಣ
- ಶಾಲೆಗಳಲ್ಲಿ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ
- ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದು ಮಾಡಲು ನಿರ್ಧಾರ
- ಹೊಸ ಶಿಕ್ಷಣ ನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನ
- ಶಾಲೆಗಳಲ್ಲಿ ಶೌಚಾಲಯ ಘಟಕ ನಿರ್ಮಾಣಕ್ಕೆ 850 ಕೋಟಿ
- SKSJTI ಎಂಜಿನಿಯರಿಂಗ್ ಕಾಲೇಜಿನ ಜವಳಿ ತಂತ್ರಜ್ಞಾನ ಮೇಲ್ದರ್ಜೆಗೆ
- ನಕಲಿ ಅಂಕಪಟ್ಟಿ ಹಾವಳಿ ತಪ್ಪಿಸಲು ಡಿಜಿಟಲ್ಗೆ ಸರ್ಕಾರ ಮೊರೆ
- ಡಿಜಿ ಲಾಕರ್ನಲ್ಲಿ ಮಕ್ಕಳ ಅಂಕ ಪಟ್ಟಿ ಪ್ರಮಾಣಪತ್ರ ಶೇಖರಣೆ
- ಎಲ್ಲಾ ಶಿಷ್ಯ ವೇತನಗಳನ್ನ ಒಗ್ಗೂಡಿಸಿ ಏಕ ಶಿಷ್ಯ ವೇತನ ಯೋಜನೆ
- ಅತ್ಯುತ್ತಮ ಸಾಧನೆ ಮಾಡುವ ವಿವಿಗಳಿಗೆ 50 ಲಕ್ಷ ಪ್ರೋತ್ಸಾಹ ಧನ
- ವೃತ್ತಿ ಚೈತನ್ಯ ಯೋಜನೆಯಡಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ
ವೈದ್ಯಕೀಯ ಶಿಕ್ಷಣ
- ಕೊಪ್ಪಳ, ಗದಗ, ಕಾರವಾರ, ಕೊಡಗು ಜಿಲ್ಲೆಗಳಲ್ಲಿ ಆಸ್ಪತ್ರೆ
- 450 ಬೆಡ್ಗಳನ್ನ ಹೊಂದಿರುವ ಆಸ್ಪತ್ರೆಗಳ ನಿರ್ಮಾಣ
- ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು
- ಮೈಸೂರು, ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು
- ಬೆಂಗಳೂರಲ್ಲಿ 5 ಕೋಟಿ ವೆಚ್ಚದಲ್ಲಿ ರಕ್ತನಿಧಿ ನಿರ್ವಹಣಾ ವ್ಯವಸ್ಥೆ
ಬೆಂಗಳೂರು
- 800 ಕೋಟಿ ವೆಚ್ಚದಲ್ಲಿ 100 ಕಿ.ಮೀ. ಉದ್ದದ ವೈಟ್ ಟಾಪ್ ರಸ್ತೆ
- ಬೆಂಗಳೂರಿನಲ್ಲಿ ವೈಟ್ ಟಾಪ್ ರಸ್ತೆ ನಿರ್ಮಾಣಕ್ಕೆ 800 ಕೋಟಿ
- ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಪ್ರಯತ್ನ
- ಕಾನೂನು ಅಡಚಣೆ ನಿವಾರಿಸಿಕೊಂಡ ಯೋಜನೆ ಜಾರಿಗೆ ಯತ್ನ
- ಬೆಂಗಳೂರಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಒತ್ತುವರಿ ತೆರವು
- ನಮ್ಮ ಮೆಟ್ರೋ ಜಾಲ 3 ವರ್ಷದಲ್ಲಿ 70-176 ಕಿಮೀಗೆ ವಿಸ್ತರಿಸುವ ಗುರಿ
- 2026ಕ್ಕೆ ಏರ್ಪೋರ್ಟ್ ಲೈನ್ ಮೆಟ್ರೋ ಕಾರ್ಯರಂಭಕ್ಕೆ ಕ್ರಮ
- ಸಬ್ ಅರ್ಬನ್ ರೈಲು ಯೋಜನೆಗೆ 1 ಸಾವಿರ ಕೋಟಿ ಅನುದಾನ
ಸುರಕ್ಷತೆಗೆ ಆದ್ಯತೆ
- ಬೆಂಗಳೂರಲ್ಲೇ 5 ಸಂಚಾರಿ, 6 ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ
- ನೈತಿಕ ಪೊಲೀಸ್ಗಿರಿ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
- CID, CCD, CEN ಪೊಲೀಸ್ ಠಾಣೆಗಳ ಉನ್ನತೀಕರಣಕ್ಕೆ 10 ಕೋಟಿ
- ಬೆಂಗಳೂರಲ್ಲಿ ಟ್ರಾಫಿಕ್ ಹಾಗೂ ಮಹಿಳೆಯರ ಸುರಕ್ಷತೆಗೆ ಕ್ರಮ
- ಕಾನೂನು ಸುವ್ಯವಸ್ಥೆ ಬಲವರ್ಧನೆಗೆ ಸರ್ಕಾರದಿಂದ ಕ್ರಮ
- ಪೊಲೀಸರಿಗೆ ಡ್ರೋನ್, ಬಾಡಿವೋರ್ನ್ ಕ್ಯಾಮೆರಾ ಒದಗಿಸಲು ಕ್ರಮ
- ಕಾನ್ಫೆರನ್ಸ್ ಮೂಲಕ ಖೈದಿಗಳನ್ನ ಕೋರ್ಟ್ಗೆ ಹಾಜರು ಪಡಿಸುವುದು
- ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ನಿರ್ದಾಕ್ಷಿಣ್ಯ ಕ್ರಮ
ಎಪಿಎಂಸಿ ಕಾಯ್ದೆ ರದ್ದು
- ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ತೀರ್ಮಾನ
- ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ
- ಕೃಷಿ ಮಾರುಕಟ್ಟೆಗಳ ಆಧಾಯ ಕುಸಿತದಿಂದಾಗಿ ಕ್ರಮ
- ಮುಕ್ತ ಮಾರುಕಟ್ಟೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ವಂಚನೆ
- ಈ ಅವ್ಯವಸ್ಥೆ ಸರಿಪಡಿಸಲು ಎಪಿಎಂಸಿ ತಿದ್ದುಪಡಿ ವಾಪಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ