ಬಿಗ್ಬಾಸ್ ಸೀನಸ್ 10ರಿಂದ ಇಂದು ಯಾವ ಸ್ಪರ್ಧಿ ಆಚೆ ಬರಬಹುದು
ನೀತು ವನಜಾಕ್ಷಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಸ್ನೇಹಿತ್?
ಬಿಗ್ಬಾಸ್ ಸ್ಪರ್ಧಿ ಸ್ನೇಹಿತ್ ಪಾಲಿಗೆ ಕೊಟ್ಟ ಮಾತೇ ಮುಳುವುಗುತ್ತಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಶುರುವಾಗಿ ಐದು ವಾರ ಮುಕ್ತಾಯಗೊಂಡಿದೆ. ಈಗ ಒಂದಲ್ಲ ಒಂದು ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಬಿಗ್ಬಾಸ್ ಸೀಸನ್ 10 ಆರನೇ ವಾರದಲ್ಲಿ ಎರಡು ಎಲಿಮಿನೇಷನ್ನ ನಡೆಯಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಶನಿವಾರದ ಎಪಿಸೋಡ್ನಲ್ಲಿ ಈಶಾನಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ಇಂದಿನ ಎಪಿಸೋಡ್ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ.
ಇನ್ನು, ನಾಮಿನೇಷನ್ ಸಿಟ್ನಲ್ಲಿ ನೀತು ವನಜಾಕ್ಷಿ, ಭಾಗ್ಯಶ್ರೀ, ನಮ್ರತಾ, ವಿನಯ್ ಇದ್ದಾರೆ. ಇವರ ಪೈಕಿ ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎಂದು ಇಂದಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ. ಇನ್ನೂ ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರವನ್ನು ಎಲ್ಲ ಸ್ಪರ್ಧಿಗಳಿಗೆ ಟಾಸ್ಕ್ ಮೂಲಕ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಹಾಗೇ ಪತ್ರವನ್ನು ಪಡೆಯುವ ಸಲುವಾಗಿ ಬಿಗ್ಬಾಸ್ ಸ್ಪರ್ಧಿಗಳು ಟಾಸ್ಕ್ ಆಡಿ ಗೆದ್ದಿದ್ದರು. ಅವರ ಪೈಕಿ ನೀತು ಅವರು ಕೂಡ ಅಮ್ಮನಿಂದ ಬಂದ ಪತ್ರವನ್ನು ಓದಲು ಹಂಬಲಿಸುತ್ತಿದ್ದರು.
View this post on Instagram
ಇದೇ ವೇಳೆ ಸ್ನೇಹಿತ್ ಅವರು ನೀತು ಬಳಿ ಬಂದು ನಿಮ್ಮ ಪತ್ರದ ಬದಲು ನಮ್ರತಾಗೆ ಬರಲಿ ಎಂದು ಬಿಗ್ಬಾಸ್ ಬಳಿ ಹೇಳಿ ಎಂದಿದ್ದರು. ಬಳಿಕ ನೀತು ಅವರಿಗೆ ಸ್ನೇಹಿತ್ ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್ ನಂತರ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನೀತು ಎಲಿಮಿನೇಟ್ ಆದರೆ ಅವರ ಬದಲಿಗೆ ಸ್ನೇಹಿತ್ ಔಟ್ ಆಗಬೇಕಾಗುತ್ತದೆ ಎನ್ನುತ್ತಾರೆ. ಆಗ ಬಿಗ್ಬಾಸ್ ಸ್ಪರ್ಧಿಗಳು ಫುಲ್ ಶಾಕ್ ಆಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ಬಾಸ್ ಸೀನಸ್ 10ರಿಂದ ಇಂದು ಯಾವ ಸ್ಪರ್ಧಿ ಆಚೆ ಬರಬಹುದು
ನೀತು ವನಜಾಕ್ಷಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಸ್ನೇಹಿತ್?
ಬಿಗ್ಬಾಸ್ ಸ್ಪರ್ಧಿ ಸ್ನೇಹಿತ್ ಪಾಲಿಗೆ ಕೊಟ್ಟ ಮಾತೇ ಮುಳುವುಗುತ್ತಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಶುರುವಾಗಿ ಐದು ವಾರ ಮುಕ್ತಾಯಗೊಂಡಿದೆ. ಈಗ ಒಂದಲ್ಲ ಒಂದು ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಬಿಗ್ಬಾಸ್ ಸೀಸನ್ 10 ಆರನೇ ವಾರದಲ್ಲಿ ಎರಡು ಎಲಿಮಿನೇಷನ್ನ ನಡೆಯಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಶನಿವಾರದ ಎಪಿಸೋಡ್ನಲ್ಲಿ ಈಶಾನಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ಇಂದಿನ ಎಪಿಸೋಡ್ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ.
ಇನ್ನು, ನಾಮಿನೇಷನ್ ಸಿಟ್ನಲ್ಲಿ ನೀತು ವನಜಾಕ್ಷಿ, ಭಾಗ್ಯಶ್ರೀ, ನಮ್ರತಾ, ವಿನಯ್ ಇದ್ದಾರೆ. ಇವರ ಪೈಕಿ ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎಂದು ಇಂದಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ. ಇನ್ನೂ ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರವನ್ನು ಎಲ್ಲ ಸ್ಪರ್ಧಿಗಳಿಗೆ ಟಾಸ್ಕ್ ಮೂಲಕ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಹಾಗೇ ಪತ್ರವನ್ನು ಪಡೆಯುವ ಸಲುವಾಗಿ ಬಿಗ್ಬಾಸ್ ಸ್ಪರ್ಧಿಗಳು ಟಾಸ್ಕ್ ಆಡಿ ಗೆದ್ದಿದ್ದರು. ಅವರ ಪೈಕಿ ನೀತು ಅವರು ಕೂಡ ಅಮ್ಮನಿಂದ ಬಂದ ಪತ್ರವನ್ನು ಓದಲು ಹಂಬಲಿಸುತ್ತಿದ್ದರು.
View this post on Instagram
ಇದೇ ವೇಳೆ ಸ್ನೇಹಿತ್ ಅವರು ನೀತು ಬಳಿ ಬಂದು ನಿಮ್ಮ ಪತ್ರದ ಬದಲು ನಮ್ರತಾಗೆ ಬರಲಿ ಎಂದು ಬಿಗ್ಬಾಸ್ ಬಳಿ ಹೇಳಿ ಎಂದಿದ್ದರು. ಬಳಿಕ ನೀತು ಅವರಿಗೆ ಸ್ನೇಹಿತ್ ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್ ನಂತರ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನೀತು ಎಲಿಮಿನೇಟ್ ಆದರೆ ಅವರ ಬದಲಿಗೆ ಸ್ನೇಹಿತ್ ಔಟ್ ಆಗಬೇಕಾಗುತ್ತದೆ ಎನ್ನುತ್ತಾರೆ. ಆಗ ಬಿಗ್ಬಾಸ್ ಸ್ಪರ್ಧಿಗಳು ಫುಲ್ ಶಾಕ್ ಆಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ