ಮಗನ ಬಗ್ಗೆ ಏನೆಲ್ಲಾ ಕನಸು ಕಟ್ಟಿಕೊಂಡಿದ್ರು ಸ್ಪಂದನಾ?
ಕದ್ದ ಚಿತ್ರದಲ್ಲಿ ನಟಿಸುತ್ತಿದ್ದಾರೆ ನಟ ವಿಜಯ್ ರಾಘವೇಂದ್ರ
ಸ್ಪಂದನಾ ಬಗ್ಗೆ ಮನಬಿಚ್ಚಿ ಮಾತನಾಡಿದ ಚಿನ್ನಾರಿ ಮತ್ತಾ
ಇತ್ತೀಚೆಗೆ ವಿದೇಶದಲ್ಲಿ ಹೃದಯಾಘಾತಕ್ಕೆ ಬಲಿಯಾದ ಸ್ಪಂದನಾ ಅವರ ಬಗ್ಗೆ ನಟ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ. ‘ಕದ್ದ ಚಿತ್ರ’ ಸಿನಿಮಾದಲ್ಲಿ ನಟ ವಿಜಿ ನಟಿಸುತ್ತಿದ್ದು, ಈ ಸಿನಿಮಾದ ಕುರಿತಾಗಿ ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ್ದಾರೆ.
ಸ್ಪಂದನಾ ಬಗ್ಗೆ ಮಾತನಾಡಿದ್ದ ನಟ ವಿಜಯ್ ರಾಘವೇಂದ್ರ, ಆಕೆಗೆ ಮಗ ಶೌರ್ಯನ ಬಗ್ಗೆ ಇದ್ದ ಆಸೆ ಮತ್ತು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಅವನು ಚೆನ್ನಾಗಿ ಓದಬೇಕು, ಅವನ ಕಾಲ ಮೇಲೆ ಸ್ವಾವಲಂಬಿಯಾಗಿ ನಿಲ್ಲಬೇಕು. ಯಾರ ಮೇಲೂ ಡಿಪೆಂಡ್ ಆಗಬಾರದು. ಬಹಳ ಗಟ್ಟಿಯಾಗಿರಬೇಕು, ಚುರುಕಾಗಿರಬೇಕು. ಒಳ್ಳೆಯ ಹೆಸರು ಮಾಡಬೇಕು ಎಂಬುದೇ ಸ್ಪಂದನಾಳಿಗೆ ಇದ್ದ ಆಸೆ ಎಂದು ಹೇಳಿದ್ದಾರೆ.
ನಂತರವ ಮಾತು ಮುಂದುವರಿಸಿದ ಅವರು, ಸ್ಪಂದನಾ ಯಾವಾಗಲೂ ಗೌರವಕ್ಕೆ ಬದುಕಿದವಳು. ಅದನ್ನು ನಾನು ಕಾಪಾಡಿದರೆ ಸಾಕು. ಯಾಕಂದ್ರೆ ನನ್ನ ಮಗನನ್ನು ಕೂಡ ಹಾಗೆಯೇ ಬೆಳೆಸಿದಳು. ಯಾರು ಬೆರಳು ಮಾಡಿ ತೋರಿಸಬಾರದು. ನಗು ನಗುತ್ತಾ ಇರಬೇಕು. ಎಲ್ಲರ ಜೊತೆಗೂ ಆಗಬರಬೇಕು. ಅದು ಇವಾಗ ಅವ್ನು ಒಂದು ದಿಕ್ಕಿನಲ್ಲಿ ಇದ್ದಾನೆ. ಸರಿಯಾದ ದಿಕ್ಕಿನಲ್ಲಿ ಇದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗನ ಬಗ್ಗೆ ಏನೆಲ್ಲಾ ಕನಸು ಕಟ್ಟಿಕೊಂಡಿದ್ರು ಸ್ಪಂದನಾ?
ಕದ್ದ ಚಿತ್ರದಲ್ಲಿ ನಟಿಸುತ್ತಿದ್ದಾರೆ ನಟ ವಿಜಯ್ ರಾಘವೇಂದ್ರ
ಸ್ಪಂದನಾ ಬಗ್ಗೆ ಮನಬಿಚ್ಚಿ ಮಾತನಾಡಿದ ಚಿನ್ನಾರಿ ಮತ್ತಾ
ಇತ್ತೀಚೆಗೆ ವಿದೇಶದಲ್ಲಿ ಹೃದಯಾಘಾತಕ್ಕೆ ಬಲಿಯಾದ ಸ್ಪಂದನಾ ಅವರ ಬಗ್ಗೆ ನಟ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ. ‘ಕದ್ದ ಚಿತ್ರ’ ಸಿನಿಮಾದಲ್ಲಿ ನಟ ವಿಜಿ ನಟಿಸುತ್ತಿದ್ದು, ಈ ಸಿನಿಮಾದ ಕುರಿತಾಗಿ ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ್ದಾರೆ.
ಸ್ಪಂದನಾ ಬಗ್ಗೆ ಮಾತನಾಡಿದ್ದ ನಟ ವಿಜಯ್ ರಾಘವೇಂದ್ರ, ಆಕೆಗೆ ಮಗ ಶೌರ್ಯನ ಬಗ್ಗೆ ಇದ್ದ ಆಸೆ ಮತ್ತು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಅವನು ಚೆನ್ನಾಗಿ ಓದಬೇಕು, ಅವನ ಕಾಲ ಮೇಲೆ ಸ್ವಾವಲಂಬಿಯಾಗಿ ನಿಲ್ಲಬೇಕು. ಯಾರ ಮೇಲೂ ಡಿಪೆಂಡ್ ಆಗಬಾರದು. ಬಹಳ ಗಟ್ಟಿಯಾಗಿರಬೇಕು, ಚುರುಕಾಗಿರಬೇಕು. ಒಳ್ಳೆಯ ಹೆಸರು ಮಾಡಬೇಕು ಎಂಬುದೇ ಸ್ಪಂದನಾಳಿಗೆ ಇದ್ದ ಆಸೆ ಎಂದು ಹೇಳಿದ್ದಾರೆ.
ನಂತರವ ಮಾತು ಮುಂದುವರಿಸಿದ ಅವರು, ಸ್ಪಂದನಾ ಯಾವಾಗಲೂ ಗೌರವಕ್ಕೆ ಬದುಕಿದವಳು. ಅದನ್ನು ನಾನು ಕಾಪಾಡಿದರೆ ಸಾಕು. ಯಾಕಂದ್ರೆ ನನ್ನ ಮಗನನ್ನು ಕೂಡ ಹಾಗೆಯೇ ಬೆಳೆಸಿದಳು. ಯಾರು ಬೆರಳು ಮಾಡಿ ತೋರಿಸಬಾರದು. ನಗು ನಗುತ್ತಾ ಇರಬೇಕು. ಎಲ್ಲರ ಜೊತೆಗೂ ಆಗಬರಬೇಕು. ಅದು ಇವಾಗ ಅವ್ನು ಒಂದು ದಿಕ್ಕಿನಲ್ಲಿ ಇದ್ದಾನೆ. ಸರಿಯಾದ ದಿಕ್ಕಿನಲ್ಲಿ ಇದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ