/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
- ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತ ಆಗಲಿದೆ
- ಸರ್ಕಾರದಿಂದ ಹಣ ಸಹಾಯ ಅಗುತ್ತದೆ
- ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧಿ ಖರೀದಿ ನಡೆಯಬಹುದು
- ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅನೇಕ ಅಡ್ಡಿಯಾಗಬಹುದು
- ವಿದೇಶದಲ್ಲಿ ಮಕ್ಕಳಿಂದ ಸಹಾಯ ಸಿಗಲಿದೆ
- ಕುಬೇರಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಷಭ
- ಕೋಪ ಉತ್ಸಾಹಗಳೆರಡನ್ನೂ ಕಡಿಮೆ ಮಾಡಿಕೊಳ್ಳಬೇಕಾಗಿದೆ
- ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
- ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಬಹುದು
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆ ಉಂಟಾಗಬಹುದು
- ಲಕ್ಷ್ಮೀ ಪ್ರಾಪ್ತಿಯಿದೆ ಖರ್ಚಿನ ವಿಚಾರದಲ್ಲಿ ಅಪಮಾನ
- ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿಮಾಡಿಕೊಳ್ಳಿ
- ಗಣಪತಿಗೆ ಹಾಲು ಜೇನುತುಪ್ಪ ಅರ್ಪಿಸಿ
ಮಿಥುನ
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
- ತಾಯಿಯವರಿಗೆ ಅಥವಾ ಹೆಂಡತಿಗೆ ಸಮಸ್ಯೆ ಕಾಣಬಹುದು
- ಅತಿಯಾದ ಶಿಸ್ತುನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
- ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
- ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
- ರಾಜಕೀಯ ವಿಚಾರಕ್ಕೆ ಉತ್ತಮ ದಿನ
- ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ
ಕಟಕ
- ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
- ವಾಹನಗಳ ಚಾಲನೆ ಪ್ರಯಾಣ ಅಪಾಯಕಾರಿ ಎಚ್ಚರಿಕೆ
- ಇಂದು ಹೊಸ ಕೆಲಸದ ಪ್ರಾರಂಭ ಬೇಡ
- ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
- ಕೆಲ ಸಮಯ ತುಂಬಾ ಹೆದರಿಕೆ ಕಾಣಬಹುದು
- ಮನೆಯಲ್ಲಿ ನಿಮ್ಮಿಂದ ನಿರೀಕ್ಷೆಗಳು ಹೆಚ್ಚಾಗಬಹುದು
- ವನದುರ್ಗಾದೇವಿಯನ್ನು ಪ್ರಾರ್ಥಿಸಿ
ಸಿಂಹ
- ಕೆಟ್ಟ ಜನರ ಜೊತೆ ವ್ಯವಹರಿಸುವುದನ್ನು ಬಿಡಿ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
- ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
- ಅನುಮಾನಾಸ್ಪದ ವರ್ತನೆಯಿಂದ ಅವಮಾನ ಆಗಲಿದೆ
- ಕಮೀಶನ್​ ಏಜೆಂಟ್ಸ್​ಗಳಿಗೆ ಹಣ ನಷ್ಟ ಸಂಭವ
- ಅತಿಯಾದ ಆತಂಕದಿಂದ ಸಮಸ್ಯೆಗಳು ಆಗಬಹುದು
- ಕುಬೇರನನ್ನು ಪ್ರಾರ್ಥಿಸಿ
ಕನ್ಯಾ
- ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
- ಪೂರ್ವಿಕರ ವೃತ್ತಿಯಿಂದ ಹಣಗಳಿಸಬಹುದು ತಾಳ್ಮೆ ಇರಲಿ
- ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
- ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣ ಆದಾಯವಿರುತ್ತದೆ
- ಮನೆಯಲ್ಲಿ ಧಾರ್ಮಿಕ ಕಾರ್ಯಚರಣೆಗೆ ಚಿಂತನೆ
- ಹೊಸ ಪರಿಚಯದವರಿಂದ ಮೋಸ ಹೋಗುತ್ತೀರಿ
- ತಾಳ್ಮೆಗಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿ
ತುಲಾ
- ನಿವೃತ್ತ ನೌಕರರಿಗೆ ಶುಭವಿಲ್ಲ
- ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
- ಮನಸ್ಸಿಂದ ಯಾವುದೇ ಕೆಲಸ ಮಾಡಿ ಶುಭವಿದೆ
- ಹೊಸ ಜನರ ಸಂಪರ್ಕ ಆಗಲಿದೆ
- ಗಂಡ-ಹೆಂಡತಿ ಮಧ್ಯೆ ಪರಸ್ಪರ ಅನುಮಾನ ದುಃಖ ಆಗಲಿದೆ
- ಹಿರಿಯರ ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
- ಶಿವಾರಾಧನೆ ಮಾಡಿ
ವೃಶ್ಚಿಕ
- ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
- ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬೇಕಾಗಬಹುದು
- ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡತೆರಬೇಕಾಗಲಿದೆ
- ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿಕೊಳ್ಳಿ
- ಸಮಯೋಚಿತವಾಗಿ ಮಾತಾನಾಡಬೇಕು
- ಹಣಕಾಸಿನ ವಿಚಾರದಲ್ಲಿ ಎಚ್ಚರತಪ್ಪಿ ವ್ಯತ್ಯಾಸಗಳಾಗಬಹುದು
- ಚಂಡಿಕಾಪಾರಾಯಣ ಮಾಡಿಸಿ
ಧನುಸ್ಸು
- ಮನೆಯಲ್ಲಿ ಭಿನ್ನಾಭಿಪ್ರಾಯ ಆಗಲಿದೆ
- ಕಷ್ಟಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
- ಯಾರಿಗೂ ಸಾಲಕೊಡಬೇಡಿ ಕೇಳಬೇಡಿ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
- ಹಣದ ವಿಚಾರಕ್ಕೆ ಕಲಹವಾಗಬಹುದು
- ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆವಹಿಸಿ
- ದುರ್ಗಾರಾಧನೆ ಮಾಡಿ
ಮಕರ
- ಸ್ಥಿರಾಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಬಹುದು
- ಮನೆಯವರ ಯೋಗಕ್ಷೇಮದಲ್ಲಿ ಗೊಂದಲ ಆಗಬಹುದು
- ಈ ದಿನ ಸಮಾಜ ಸೇವೆಯನ್ನು ಮಾಡಿ
- ಹಿರಿಯರ ಮಾರ್ಗದರ್ಶನದಿಂದ ವ್ಯಾಪಾರವನ್ನು ಪ್ರಾರಂಭಿಸಿ
- ನವವಿವಾಹಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು
- ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಪಠಿಸಿ
ಕುಂಭ
- ಕೈಹಿಡಿದ ಕೆಲಸಗಳು ಇಂದು ಪೂರ್ಣಗೊಳ್ಳುವುದು
- ಅನಗತ್ಯ ವಿಷಯಗಳಲ್ಲಿ ಭಾಗಿಯಾಗುತ್ತೀರಿ
- ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಸೇರಿ ಶಿಕ್ಷೆ ಅನುಭವಿಸುತ್ತೀರಿ
- ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು
- ಬೇರೆಯವರ ಸಹಾಯ ಮಾಡಿ ಹೆಸರು ಮಾಡುತ್ತೀರಿ
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
- ಸರಸ್ವತೀ ದೇವಿಯ ಆರಾಧನೆ
ಮೀನ
- ತುಂಬಾ ಆಯಾಸದ ದಿನವಾಗಿರುತ್ತದೆ
- ವಿದ್ಯಾರ್ಥಿಗಳು ಬೇಸರದಿಂದ ಬಲವಂತದಿಂದ ಓದಬಾರದು
- ಇಂದು ಅನಗತ್ಯ ಪ್ರಯಾಣ ಮಾಡಬೇಡಿ
- ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಉಂಟಾಗಬಹುದು
- ತಂದೆ-ತಾಯಿಯ ಜೊತೆಯಲ್ಲಿ ವಾದ ವಿವಾದ ಆಗಬಹುದು
- ಹಳೆಯ ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆ
- ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ