newsfirstkannada.com

ವರ್ತೂರು ಸಂತೋಷ್​​​ ಒಬ್ಬ ಡೂಪ್ಲಿಕೇಟ್ ರೈತ.. ಮಾವ ಹೀಗೆ ಹೇಳಲು ಕಾರಣವೇನು..?

Share :

14-11-2023

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರೋ ವರ್ತೂರು

    ಹುಲಿ ಉಂಗುರದ ಆರೋಪದ ಮೇಲೆ ಸಂತೋಷ್​ ಅರೆಸ್ಟ್​​!​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ವರ್ತೂರು ವಿಡಿಯೋ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​​ 10ಕ್ಕೆ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​​ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಅವರು ಹುಲಿ ಉಂಗುರು ಧರಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು. ಬಳಿಕ ಷರತ್ತುಬದ್ಧ ಜಾಮೀನು ಮೇಲೆ ಬಿಗ್​ಬಾಸ್​ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದರು.

ಇನ್ನು ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಅವರು ವರ್ತೂರು ಸಂತೋಷ್​ ಅವರನ್ನು ಸೇಫ್​ ಮಾಡಿದ್ದರು. ಸೇಫ್​​ ಆದ ಬಳಿಕ ನನಗೆ ಇಲ್ಲಿ ಇರಲು ಕಷ್ಟ ಆಗುತ್ತಿದೆ ಎಂದು ಕಿಚ್ಚ ಸುದೀಪ್​ ಮುಂದೆ ಹೇಳಿದ್ದರು. ಬಳಿಕ ಬಿಗ್​ಬಾಸ್​ ಮನೆ ಮಂದಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟಾದರೂ ಒಪ್ಪದ ವರ್ತೂರು ಸಂತೋಷ್​ ಅವರನ್ನು ಖುದ್ದು ಅವರ ತಾಯಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟು ಅವರಲ್ಲಿ ಧೈರ್ಯ ತುಂಬಿದ್ದರು. ಬಳಿಕ ವರ್ತೂರು ಸಂತೋಷ್​​ ಅವರು ಓಕೆ ನಾನು ಆಟವನ್ನು ಆಡುತ್ತೇನೆ ಎಂದು ಹೇಳಿದ್ದರು.

ಇದಾದ ಬೆನ್ನಲ್ಲೇ ವರ್ತೂರು ಸಂತೋಷ್​ ಅವರು 5-03- 2020ರಂದು ಮದುವೆಯಾಗಿದ್ದಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದವು. ಇದೀಗ ಈ ಬಗ್ಗೆ ಖುದ್ದು ವರ್ತೂರು ಸಂತೀಷ್​ ಅವರ ಮಾವ FARM INDIA 22 ಅನ್ನೋ ಯುಟ್ಯೂಬ್‌ ಚಾನೆಲ್‌ನಲ್ಲಿ ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ. ಕೇವಲ ಒಂದು ಜೊತೆ ಹಳ್ಳಿಕಾರ್ ಹಸುಗಳನ್ನು ಕಟ್ಟಿಕೊಂಡು ತಾನೊಬ್ಬ ಹಳ್ಳಿಕಾರ್ ಉಳಿವಿಗೆ ಹೋರಾಟ ಮಾಡುವ ರೈತ ಎನ್ನುವುದು ಮಹಾ ಸುಳ್ಳು. ಚಿಕ್ಕಂದಿನಿಂದಲೂ ಶೋಕಿ ಮಾಡುತ್ತಲೇ ಬೆಳೆದ ವರ್ತೂರು ಸಂತೋಷ್ ನಿಜವಾಗಿಯೂ ಎಂಬಿಎ ಪದವೀಧರ ಅಲ್ಲ ಎಂದಿದ್ದಾರೆ.

ಮಾಧ್ಯಮದವರು ಬಂದಾಗ ಮಾತ್ರ ಹಳ್ಳಿಕಾರ್ ಹಸುಗಳ ಮೈಮೇಲೆ ನೀರು ಬಿಡುವುದು ಸಣ್ಣಪುಟ್ಟ ಕೆಲಸಗಳನ್ನು ಮಾಡುವುದನ್ನು ಮಾಡಿ ನಾಟಕವಾಡುವುದನ್ನು ಕರಗತ ಮಾಡಿಕೊಂಡಂತಹ ನಾಟಕಕಾರ. ಆದರೆ ರಾಜ್ಯದ ರೈತರು ವರ್ತೂರು ಸಂತೋಷನನ್ನು ಒಳ್ಳೆಯ ರೈತ ಎಂದುಕೊಂಡಿರುವುದು ದೊಡ್ಡ ಮೂರ್ಖತನ. ವರ್ತೂರು ಸಂತೋಷ ತನ್ನದೊಂದು ಪುಡಿ ರೌಡಿಗಳ ಪಡೆಯನ್ನು ಕಟ್ಟಿಕೊಂಡು ತನ್ನ ಪರವಾಗಿ ಪ್ರಚಾರವನ್ನು ಮಾಡಿಕೊಂಡು ಮೆರೆಯುತ್ತಿರುವ ಡೂಪ್ಲಿಕೇಟ್ ರೈತ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್​​​ ಒಬ್ಬ ಡೂಪ್ಲಿಕೇಟ್ ರೈತ.. ಮಾವ ಹೀಗೆ ಹೇಳಲು ಕಾರಣವೇನು..?

https://newsfirstlive.com/wp-content/uploads/2023/11/bigg-boss-2023-11-14T150321.931.jpg

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರೋ ವರ್ತೂರು

    ಹುಲಿ ಉಂಗುರದ ಆರೋಪದ ಮೇಲೆ ಸಂತೋಷ್​ ಅರೆಸ್ಟ್​​!​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ವರ್ತೂರು ವಿಡಿಯೋ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​​ 10ಕ್ಕೆ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​​ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಅವರು ಹುಲಿ ಉಂಗುರು ಧರಿಸಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು. ಬಳಿಕ ಷರತ್ತುಬದ್ಧ ಜಾಮೀನು ಮೇಲೆ ಬಿಗ್​ಬಾಸ್​ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದರು.

ಇನ್ನು ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಅವರು ವರ್ತೂರು ಸಂತೋಷ್​ ಅವರನ್ನು ಸೇಫ್​ ಮಾಡಿದ್ದರು. ಸೇಫ್​​ ಆದ ಬಳಿಕ ನನಗೆ ಇಲ್ಲಿ ಇರಲು ಕಷ್ಟ ಆಗುತ್ತಿದೆ ಎಂದು ಕಿಚ್ಚ ಸುದೀಪ್​ ಮುಂದೆ ಹೇಳಿದ್ದರು. ಬಳಿಕ ಬಿಗ್​ಬಾಸ್​ ಮನೆ ಮಂದಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟಾದರೂ ಒಪ್ಪದ ವರ್ತೂರು ಸಂತೋಷ್​ ಅವರನ್ನು ಖುದ್ದು ಅವರ ತಾಯಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟು ಅವರಲ್ಲಿ ಧೈರ್ಯ ತುಂಬಿದ್ದರು. ಬಳಿಕ ವರ್ತೂರು ಸಂತೋಷ್​​ ಅವರು ಓಕೆ ನಾನು ಆಟವನ್ನು ಆಡುತ್ತೇನೆ ಎಂದು ಹೇಳಿದ್ದರು.

ಇದಾದ ಬೆನ್ನಲ್ಲೇ ವರ್ತೂರು ಸಂತೋಷ್​ ಅವರು 5-03- 2020ರಂದು ಮದುವೆಯಾಗಿದ್ದಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದವು. ಇದೀಗ ಈ ಬಗ್ಗೆ ಖುದ್ದು ವರ್ತೂರು ಸಂತೀಷ್​ ಅವರ ಮಾವ FARM INDIA 22 ಅನ್ನೋ ಯುಟ್ಯೂಬ್‌ ಚಾನೆಲ್‌ನಲ್ಲಿ ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ. ಕೇವಲ ಒಂದು ಜೊತೆ ಹಳ್ಳಿಕಾರ್ ಹಸುಗಳನ್ನು ಕಟ್ಟಿಕೊಂಡು ತಾನೊಬ್ಬ ಹಳ್ಳಿಕಾರ್ ಉಳಿವಿಗೆ ಹೋರಾಟ ಮಾಡುವ ರೈತ ಎನ್ನುವುದು ಮಹಾ ಸುಳ್ಳು. ಚಿಕ್ಕಂದಿನಿಂದಲೂ ಶೋಕಿ ಮಾಡುತ್ತಲೇ ಬೆಳೆದ ವರ್ತೂರು ಸಂತೋಷ್ ನಿಜವಾಗಿಯೂ ಎಂಬಿಎ ಪದವೀಧರ ಅಲ್ಲ ಎಂದಿದ್ದಾರೆ.

ಮಾಧ್ಯಮದವರು ಬಂದಾಗ ಮಾತ್ರ ಹಳ್ಳಿಕಾರ್ ಹಸುಗಳ ಮೈಮೇಲೆ ನೀರು ಬಿಡುವುದು ಸಣ್ಣಪುಟ್ಟ ಕೆಲಸಗಳನ್ನು ಮಾಡುವುದನ್ನು ಮಾಡಿ ನಾಟಕವಾಡುವುದನ್ನು ಕರಗತ ಮಾಡಿಕೊಂಡಂತಹ ನಾಟಕಕಾರ. ಆದರೆ ರಾಜ್ಯದ ರೈತರು ವರ್ತೂರು ಸಂತೋಷನನ್ನು ಒಳ್ಳೆಯ ರೈತ ಎಂದುಕೊಂಡಿರುವುದು ದೊಡ್ಡ ಮೂರ್ಖತನ. ವರ್ತೂರು ಸಂತೋಷ ತನ್ನದೊಂದು ಪುಡಿ ರೌಡಿಗಳ ಪಡೆಯನ್ನು ಕಟ್ಟಿಕೊಂಡು ತನ್ನ ಪರವಾಗಿ ಪ್ರಚಾರವನ್ನು ಮಾಡಿಕೊಂಡು ಮೆರೆಯುತ್ತಿರುವ ಡೂಪ್ಲಿಕೇಟ್ ರೈತ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More