newsfirstkannada.com

ಕಾವೇರಿ ನದಿಗೆ ಹಾರಿ ಪ್ರಾಣ ಬಿಟ್ಟ ದೇವನೂರು ಮಠದ ಸ್ವಾಮೀಜಿ; ಮೂಡುಕುತೊರೆ ಬಳಿ ಮೃತದೇಹ ಪತ್ತೆ

Share :

10-07-2023

    ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದೇವನೂರು ಮಠದ ಸ್ವಾಮೀಜಿ

    ಟಿ. ನರಸೀಪುರ ತಾಲೂಕಿನ ಮೂಡುಕುತೊರೆ ಬಳಿ ಪತ್ತೆಯಾದ ಮೃತದೇಹ

    ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಶಿವಪ್ಪ ದೇವರು

ಮೈಸೂರು: ಕಾವೇರಿ ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಟಿ.ನರಸೀಪುರ ತಾಲೂಕಿನ ಮೂಡುಕುತೊರೆಯ ಬಳಿ ನಡೆದಿದೆ. ಶಿವಪ್ಪ ದೇವರು (60) ಮೃತ ಸ್ವಾಮೀಜಿ.

ಮೃತ ಸ್ವಾಮೀಜಿ ನಂಜನಗೂಡಿನ ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದರು. ಕಳೆದೆರಡು ದಿನದಿಂದ ಸ್ವಾಮೀಜಿ ಶಿವಪ್ಪ ದೇವರು ನಾಪತ್ತೆಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠ ಹಾಗೂ ಭಕ್ತರಲ್ಲಿ ಉತ್ತಮ ಹೆಸರನ್ನು ಗಳಸಿಕೊಂಡಿದ್ದರು. ಮೃತ ಸ್ವಾಮೀಜಿ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರು.

ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಲಕಾಡು ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ನದಿಗೆ ಹಾರಿ ಪ್ರಾಣ ಬಿಟ್ಟ ದೇವನೂರು ಮಠದ ಸ್ವಾಮೀಜಿ; ಮೂಡುಕುತೊರೆ ಬಳಿ ಮೃತದೇಹ ಪತ್ತೆ

https://newsfirstlive.com/wp-content/uploads/2023/07/swamiji-death-2.jpg

    ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದೇವನೂರು ಮಠದ ಸ್ವಾಮೀಜಿ

    ಟಿ. ನರಸೀಪುರ ತಾಲೂಕಿನ ಮೂಡುಕುತೊರೆ ಬಳಿ ಪತ್ತೆಯಾದ ಮೃತದೇಹ

    ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಶಿವಪ್ಪ ದೇವರು

ಮೈಸೂರು: ಕಾವೇರಿ ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಟಿ.ನರಸೀಪುರ ತಾಲೂಕಿನ ಮೂಡುಕುತೊರೆಯ ಬಳಿ ನಡೆದಿದೆ. ಶಿವಪ್ಪ ದೇವರು (60) ಮೃತ ಸ್ವಾಮೀಜಿ.

ಮೃತ ಸ್ವಾಮೀಜಿ ನಂಜನಗೂಡಿನ ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದರು. ಕಳೆದೆರಡು ದಿನದಿಂದ ಸ್ವಾಮೀಜಿ ಶಿವಪ್ಪ ದೇವರು ನಾಪತ್ತೆಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠ ಹಾಗೂ ಭಕ್ತರಲ್ಲಿ ಉತ್ತಮ ಹೆಸರನ್ನು ಗಳಸಿಕೊಂಡಿದ್ದರು. ಮೃತ ಸ್ವಾಮೀಜಿ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರು.

ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಲಕಾಡು ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More