newsfirstkannada.com

ಅತ್ಯಾಚಾರ ಆರೋಪ ಕೇಸ್​; ನಿರ್ಮಾಪಕ ‘ಸ್ವಯಂಕೃಷಿ’ ವೀರೇಂದ್ರ ಬಾಬು ಮತ್ತೆ ಅರೆಸ್ಟ್..!

Share :

12-08-2023

    ಕೊಡಿಗೆಹಳ್ಳಿ ಠಾಣೆಯಲ್ಲಿ ಕೇಸ್ ದಾಖಲು

    ಪ್ರಜ್ಞೆ ತಪ್ಪಿಸಿ ರೇಪ್ ಮಾಡಿ ವಿಕೃತಿ ಆರೋಪ

    ವಿಡಿಯೋ ಇಟ್ಕೊಂಡು ಹಣ ಸುಲಿಗೆ ಆರೋಪ

ಬೆಂಗಳೂರು: ನಟ, ನಿರ್ಮಾಪಕ ‘ಸ್ವಯಂಕೃಷಿ’ ವೀರೇಂದ್ರ ಬಾಬು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

ಏನಿದು ಪ್ರಕರಣ..?

ಕೊಡಿಗೆಹಳ್ಳಿ ಠಾಣೆಯಲ್ಲಿ 2021ರಲ್ಲಿ ಮಹಿಳೆಯೊಬ್ಬರು ವೀರೇಂದ್ರ ಬಾಬು ವಿರುದ್ಧ ದೂರು ನೀಡಿದ್ದರು. ನನ್ನನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ. ನಂತರ ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡೋದಾಗಿ ಬೆದರಿಕೆ ಹಾಕಿದ್ದ. ಬ್ಲ್ಯಾಕ್​ಮೇಲ್ ಮಾಡಿ ನನ್ನಿಂದ 15 ಲಕ್ಷ ರೂಪಾಯಿ ಕಿತ್ತುಕೊಂಡಿದ್ದಾನೆ ಎಂದು ದೂರು ನೀಡಿದ್ದರು.

ಇದೀಗ ಕಳೆದ ಜುಲೈ 30 ರಂದು ಮತ್ತೆ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಅದೇ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯನ್ನ ಕಾರಿನಲ್ಲಿ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿರುವ ಆರೋಪ‌‌ ಮಾಡಿದ್ದಾಳೆ. ಈ ಆರೋಪ ಸಂಬಂಧ ವೀರಪ್ಪ ಬಾಬು ಹಾಗೂ ಆತನ ಸ್ನೇಹಿತರ ಮೇಲೆ ಎಫ್ಐಆರ್ ದಾಖಲಿಸಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ಯಾಚಾರ ಆರೋಪ ಕೇಸ್​; ನಿರ್ಮಾಪಕ ‘ಸ್ವಯಂಕೃಷಿ’ ವೀರೇಂದ್ರ ಬಾಬು ಮತ್ತೆ ಅರೆಸ್ಟ್..!

https://newsfirstlive.com/wp-content/uploads/2023/08/Veerendrabaabu.jpg

    ಕೊಡಿಗೆಹಳ್ಳಿ ಠಾಣೆಯಲ್ಲಿ ಕೇಸ್ ದಾಖಲು

    ಪ್ರಜ್ಞೆ ತಪ್ಪಿಸಿ ರೇಪ್ ಮಾಡಿ ವಿಕೃತಿ ಆರೋಪ

    ವಿಡಿಯೋ ಇಟ್ಕೊಂಡು ಹಣ ಸುಲಿಗೆ ಆರೋಪ

ಬೆಂಗಳೂರು: ನಟ, ನಿರ್ಮಾಪಕ ‘ಸ್ವಯಂಕೃಷಿ’ ವೀರೇಂದ್ರ ಬಾಬು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

ಏನಿದು ಪ್ರಕರಣ..?

ಕೊಡಿಗೆಹಳ್ಳಿ ಠಾಣೆಯಲ್ಲಿ 2021ರಲ್ಲಿ ಮಹಿಳೆಯೊಬ್ಬರು ವೀರೇಂದ್ರ ಬಾಬು ವಿರುದ್ಧ ದೂರು ನೀಡಿದ್ದರು. ನನ್ನನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ. ನಂತರ ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡೋದಾಗಿ ಬೆದರಿಕೆ ಹಾಕಿದ್ದ. ಬ್ಲ್ಯಾಕ್​ಮೇಲ್ ಮಾಡಿ ನನ್ನಿಂದ 15 ಲಕ್ಷ ರೂಪಾಯಿ ಕಿತ್ತುಕೊಂಡಿದ್ದಾನೆ ಎಂದು ದೂರು ನೀಡಿದ್ದರು.

ಇದೀಗ ಕಳೆದ ಜುಲೈ 30 ರಂದು ಮತ್ತೆ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಅದೇ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯನ್ನ ಕಾರಿನಲ್ಲಿ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿರುವ ಆರೋಪ‌‌ ಮಾಡಿದ್ದಾಳೆ. ಈ ಆರೋಪ ಸಂಬಂಧ ವೀರಪ್ಪ ಬಾಬು ಹಾಗೂ ಆತನ ಸ್ನೇಹಿತರ ಮೇಲೆ ಎಫ್ಐಆರ್ ದಾಖಲಿಸಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More