ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತ್ಯಾಗಮಯಿ ತಾಯಿ
ಪಾಪ.. ಮಗನ ಕಾಲೇಜು ಫೀಸ್ಗೆ 45 ಸಾವಿರ ರೂಪಾಯಿ ಬೇಕಿತ್ತು
ಯಾರೋ ಹೇಳಿದ ಮಾತಿನಂತೆ ಬಸ್ಗೆ ಸಿಲುಕಿ ಪ್ರಾಣ ಬಿಟ್ಟ ಅಮ್ಮ!
ಚೆನ್ನೈ: ಮಗನ ಕಾಲೇಜು ಫೀಸ್ ಕಟ್ಟಲು ಹಣವಿಲ್ಲದೇ ತಾಯಿಯೊಬ್ಬರು ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಗೆ ಸಡನ್ ಆಗಿ ಅಡ್ಡ ಹೋಗಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನ ಸೇಲಂ ನಗರದಲ್ಲಿ ನಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಹೃದಯ ವಿದ್ರಾವಕ ದೃಶ್ಯವು ನೋಡಿದವರ ಎದೆ ಝಲ್ಲೆನ್ನಿಸುವಂತೆ ಮಾಡಿದೆ.
ಈ ಮಹಿಳೆಯ ಹೆಸರು ಏನೆಂದು ತಿಳಿದು ಬಂದಿಲ್ಲವಾದರೂ ಇವರು ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಮಗ ಕಾಲೇಜಿಗೆ ಹೋಗುತ್ತಿದ್ದು 45,000 ರೂಪಾಯಿ ಕಾಲೇಜು ಫೀಸ್ ಕಟ್ಟಬೇಕೆಂದು ತಾಯಿ ಬಳಿ ಕೇಳಿದ್ದಾನೆ. ಹೀಗಾಗಿ ತಾಯಿ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಅವರಿವರ ಬಳಿ ಸಾಲ ಕೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ODI World Cup 2023: ಶ್ರೇಯಸ್ ಡೌಟ್, ರಿಷಭ್ ಔಟ್.. ಗಾಯಗೊಂಡ ಸ್ಟಾರ್ಗಳ ಕಮ್ಬ್ಯಾಕ್ ಯಾವಾಗ?
ಈ ವೇಳೆ ನೀನು ಅಪಘಾತದಲ್ಲಿ ಮೃತಪಟ್ಟರೇ 45,000 ರೂಪಾಯಿ ಕೊಡುತ್ತಾರೆ ಎಂದು ಯಾರೋ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾರೆ. ಇದನ್ನೇ ಬಲವಾಗಿ ನಂಬಿದ ಆ ಮಹಿಳೆ ವೇಗವಾಗಿ ಬರುತ್ತಿದ್ದ ತಮಿಳು ನಾಡು ಸಾರಿಗೆ ಬಸ್ ಮುಂದೆ ಸಡನ್ ಆಗಿ ಅಡ್ಡ ಬಂದಿದ್ದಾರೆ. ಇದರಿಂದ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಲ್ಲದೇ ಈ ಮಹಿಳೆಯು ಗಂಡನಿಂದ ಬೇರೆಯಾಗಿ ಸುಮಾರು 18 ವರ್ಷಗಳು ಆಗಿದ್ದವು ಎನ್ನಲಾಗಿದೆ. ನಂತರದ ವರ್ಷಗಳಲ್ಲಿ ತನ್ನ ಮಗ ಮತ್ತು ಮಗಳು ಜೊತೆ ಜೀವನ ಸಾಗಿಸುತ್ತಿದ್ದಳು. ಆದರೆ ಕಾಲೇಜು ಫೀಸ್ ಕಟ್ಟುವ ವಿಷಯದಲ್ಲಿ ಯಾರೋದು ದಾರಿ ತಪ್ಪಿಸುವಂತ ಮಾತುಗಳನ್ನು ಕೇಳಿ ಮಹಿಳೆಯು ತನ್ನ ಜೀವವನನ್ನೆ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಬಸ್ಗೆ ಅಡ್ಡ ಹೋಗಿ ಸಾವನ್ನಪ್ಪುವ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗನ ಕಾಲೇಜ್ ಫೀಸ್ ಕಟ್ಟಲು 45 ಸಾವಿರ ರೂಪಾಯಿ ಬೇಕಿತ್ತು. ತಾನು ಸಾವನ್ನಪ್ಪಿದರೆ ಮಗನ ಕಾಲೇಜು ಫೀಸ್ ಕಟ್ಟಬಹುದು ಎಂದು ಮಹಿಳೆಯೊಬ್ಬರು ಬಸ್ಗೆ ಅಡ್ಡ ಬಂದಿರೋ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡುತ್ತಿದ್ದ ಈ ಮಹಿಳೆಗೆ ಯಾರೋ ತಪ್ಪು ಮಾಹಿತಿ ನೀಡಿ ಈ ಅನಾಹುತಕ್ಕೆ… pic.twitter.com/b1xilKecGS
— NewsFirst Kannada (@NewsFirstKan) July 18, 2023
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತ್ಯಾಗಮಯಿ ತಾಯಿ
ಪಾಪ.. ಮಗನ ಕಾಲೇಜು ಫೀಸ್ಗೆ 45 ಸಾವಿರ ರೂಪಾಯಿ ಬೇಕಿತ್ತು
ಯಾರೋ ಹೇಳಿದ ಮಾತಿನಂತೆ ಬಸ್ಗೆ ಸಿಲುಕಿ ಪ್ರಾಣ ಬಿಟ್ಟ ಅಮ್ಮ!
ಚೆನ್ನೈ: ಮಗನ ಕಾಲೇಜು ಫೀಸ್ ಕಟ್ಟಲು ಹಣವಿಲ್ಲದೇ ತಾಯಿಯೊಬ್ಬರು ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಗೆ ಸಡನ್ ಆಗಿ ಅಡ್ಡ ಹೋಗಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನ ಸೇಲಂ ನಗರದಲ್ಲಿ ನಡೆದಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಹೃದಯ ವಿದ್ರಾವಕ ದೃಶ್ಯವು ನೋಡಿದವರ ಎದೆ ಝಲ್ಲೆನ್ನಿಸುವಂತೆ ಮಾಡಿದೆ.
ಈ ಮಹಿಳೆಯ ಹೆಸರು ಏನೆಂದು ತಿಳಿದು ಬಂದಿಲ್ಲವಾದರೂ ಇವರು ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಮಗ ಕಾಲೇಜಿಗೆ ಹೋಗುತ್ತಿದ್ದು 45,000 ರೂಪಾಯಿ ಕಾಲೇಜು ಫೀಸ್ ಕಟ್ಟಬೇಕೆಂದು ತಾಯಿ ಬಳಿ ಕೇಳಿದ್ದಾನೆ. ಹೀಗಾಗಿ ತಾಯಿ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಅವರಿವರ ಬಳಿ ಸಾಲ ಕೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ODI World Cup 2023: ಶ್ರೇಯಸ್ ಡೌಟ್, ರಿಷಭ್ ಔಟ್.. ಗಾಯಗೊಂಡ ಸ್ಟಾರ್ಗಳ ಕಮ್ಬ್ಯಾಕ್ ಯಾವಾಗ?
ಈ ವೇಳೆ ನೀನು ಅಪಘಾತದಲ್ಲಿ ಮೃತಪಟ್ಟರೇ 45,000 ರೂಪಾಯಿ ಕೊಡುತ್ತಾರೆ ಎಂದು ಯಾರೋ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾರೆ. ಇದನ್ನೇ ಬಲವಾಗಿ ನಂಬಿದ ಆ ಮಹಿಳೆ ವೇಗವಾಗಿ ಬರುತ್ತಿದ್ದ ತಮಿಳು ನಾಡು ಸಾರಿಗೆ ಬಸ್ ಮುಂದೆ ಸಡನ್ ಆಗಿ ಅಡ್ಡ ಬಂದಿದ್ದಾರೆ. ಇದರಿಂದ ಬಸ್ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಲ್ಲದೇ ಈ ಮಹಿಳೆಯು ಗಂಡನಿಂದ ಬೇರೆಯಾಗಿ ಸುಮಾರು 18 ವರ್ಷಗಳು ಆಗಿದ್ದವು ಎನ್ನಲಾಗಿದೆ. ನಂತರದ ವರ್ಷಗಳಲ್ಲಿ ತನ್ನ ಮಗ ಮತ್ತು ಮಗಳು ಜೊತೆ ಜೀವನ ಸಾಗಿಸುತ್ತಿದ್ದಳು. ಆದರೆ ಕಾಲೇಜು ಫೀಸ್ ಕಟ್ಟುವ ವಿಷಯದಲ್ಲಿ ಯಾರೋದು ದಾರಿ ತಪ್ಪಿಸುವಂತ ಮಾತುಗಳನ್ನು ಕೇಳಿ ಮಹಿಳೆಯು ತನ್ನ ಜೀವವನನ್ನೆ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಬಸ್ಗೆ ಅಡ್ಡ ಹೋಗಿ ಸಾವನ್ನಪ್ಪುವ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗನ ಕಾಲೇಜ್ ಫೀಸ್ ಕಟ್ಟಲು 45 ಸಾವಿರ ರೂಪಾಯಿ ಬೇಕಿತ್ತು. ತಾನು ಸಾವನ್ನಪ್ಪಿದರೆ ಮಗನ ಕಾಲೇಜು ಫೀಸ್ ಕಟ್ಟಬಹುದು ಎಂದು ಮಹಿಳೆಯೊಬ್ಬರು ಬಸ್ಗೆ ಅಡ್ಡ ಬಂದಿರೋ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡುತ್ತಿದ್ದ ಈ ಮಹಿಳೆಗೆ ಯಾರೋ ತಪ್ಪು ಮಾಹಿತಿ ನೀಡಿ ಈ ಅನಾಹುತಕ್ಕೆ… pic.twitter.com/b1xilKecGS
— NewsFirst Kannada (@NewsFirstKan) July 18, 2023