ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪ
ಅತ್ಯಾಚಾರ್ ಕೇಸ್ನಲ್ಲಿ ತಮಿಳುನಾಡು ಮಾಜಿ ಡಿಜಿಪಿಗೆ 3 ವರ್ಷ ಜೈಲು
3 ವರ್ಷ ಜೈಲು ಜತೆಗೆ 10 ಸಾವಿರ ದಂಡ ವಿಧಿಸಿದ ವಿಲ್ಲುಪುರಂ ಕೋರ್ಟ್
ಚೆನ್ನೈ: ಅತ್ಯಾಚಾರ ಕೇಸ್ವೊಂದರಲ್ಲಿ ತಮಿಳುನಾಡು ಮಾಜಿ ಡಿಜಿಪಿ ರಾಜೇಶ್ ದಾಸ್ ಎಂಬುವರಿಗೆ 3 ವರ್ಷ ಜೈಲಾಗಿದೆ. ತನ್ನ ಸಹೋದ್ಯೋಗಿ ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ರಾಜೇಶ್ ದಾಸ್ಗೆ ಮೂರು ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ವಿಲ್ಲುಪುರಂ ಕೋರ್ಟ್ ಆದೇಶಿಸಿದೆ.
2 ವರ್ಷಗಳ ಹಿಂದೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜೇಶ್ ದಾಸ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಅಂದಿನ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಭದ್ರತೆ ಒದಗಿಸಲು ಒಟ್ಟಿಗೆ ಹೋಗುತ್ತಿದ್ದಾಗ ರಾಜೇಶ್ ದಾಸ್ ತನ್ನನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ. ನಾನು ಒಪ್ಪದಿದ್ದಾಗ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂದು ನೀಡಿದ ದೂರಿನಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಆರೋಪಿಸಿದ್ದರು.
ಕಾನೂನು ತಜ್ಞರ ಸಮಿತಿ ರಚನೆ
ಅಂದು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ ಡಿಜಿಪಿ ಆಗಿದ್ದ ರಾಜೇಶ್ ದಾಸ್ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು. ಅಲ್ಲದೇ ಕೇಸ್ ತನಿಖೆಗಾಗಿ ಆರು ಮಂದಿ ನೇತೃತ್ವದ ಕಾನೂನು ತಜ್ಞರ ಸಮಿತಿ ನೇಮಿಸಿ ಆದೇಶಿಸಿತ್ತು.
ಇನ್ನು, ಕೇಸ್ನಲ್ಲಿ ಇದುವರೆಗೂ 68ಕ್ಕೂ ಹೆಚ್ಚು ಮಂದಿ ಸ್ಟೇಟ್ಮೆಂಟ್ ರೆಕಾರ್ಡ್ ಮಾಡಲಾಗಿದೆ. ಜತೆಗೆ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಅಪೀಲ್ ಮಾಡಲು ರಾಜೇಶ್ ದಾಸ್ಗೆ 30 ದಿನ ಬೇಲ್ ಕೂಡ ಸ್ಯಾಂಕ್ಷನ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪ
ಅತ್ಯಾಚಾರ್ ಕೇಸ್ನಲ್ಲಿ ತಮಿಳುನಾಡು ಮಾಜಿ ಡಿಜಿಪಿಗೆ 3 ವರ್ಷ ಜೈಲು
3 ವರ್ಷ ಜೈಲು ಜತೆಗೆ 10 ಸಾವಿರ ದಂಡ ವಿಧಿಸಿದ ವಿಲ್ಲುಪುರಂ ಕೋರ್ಟ್
ಚೆನ್ನೈ: ಅತ್ಯಾಚಾರ ಕೇಸ್ವೊಂದರಲ್ಲಿ ತಮಿಳುನಾಡು ಮಾಜಿ ಡಿಜಿಪಿ ರಾಜೇಶ್ ದಾಸ್ ಎಂಬುವರಿಗೆ 3 ವರ್ಷ ಜೈಲಾಗಿದೆ. ತನ್ನ ಸಹೋದ್ಯೋಗಿ ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ರಾಜೇಶ್ ದಾಸ್ಗೆ ಮೂರು ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ವಿಲ್ಲುಪುರಂ ಕೋರ್ಟ್ ಆದೇಶಿಸಿದೆ.
2 ವರ್ಷಗಳ ಹಿಂದೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜೇಶ್ ದಾಸ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಅಂದಿನ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಭದ್ರತೆ ಒದಗಿಸಲು ಒಟ್ಟಿಗೆ ಹೋಗುತ್ತಿದ್ದಾಗ ರಾಜೇಶ್ ದಾಸ್ ತನ್ನನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ. ನಾನು ಒಪ್ಪದಿದ್ದಾಗ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂದು ನೀಡಿದ ದೂರಿನಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಆರೋಪಿಸಿದ್ದರು.
ಕಾನೂನು ತಜ್ಞರ ಸಮಿತಿ ರಚನೆ
ಅಂದು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ AIADMK ಸರ್ಕಾರ ಡಿಜಿಪಿ ಆಗಿದ್ದ ರಾಜೇಶ್ ದಾಸ್ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು. ಅಲ್ಲದೇ ಕೇಸ್ ತನಿಖೆಗಾಗಿ ಆರು ಮಂದಿ ನೇತೃತ್ವದ ಕಾನೂನು ತಜ್ಞರ ಸಮಿತಿ ನೇಮಿಸಿ ಆದೇಶಿಸಿತ್ತು.
ಇನ್ನು, ಕೇಸ್ನಲ್ಲಿ ಇದುವರೆಗೂ 68ಕ್ಕೂ ಹೆಚ್ಚು ಮಂದಿ ಸ್ಟೇಟ್ಮೆಂಟ್ ರೆಕಾರ್ಡ್ ಮಾಡಲಾಗಿದೆ. ಜತೆಗೆ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಅಪೀಲ್ ಮಾಡಲು ರಾಜೇಶ್ ದಾಸ್ಗೆ 30 ದಿನ ಬೇಲ್ ಕೂಡ ಸ್ಯಾಂಕ್ಷನ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ