ನ್ಯೂಜಿಲೆಂಡ್ ವಿರುದ್ಧ ಭಾರತ ಇಂದು ಸೆಣಸಾಟ
ಹಳೇ ಸೇಡು ತೀರಿಸಿಕೊಳ್ಳುವ ಛಲದಲ್ಲಿ ರೋಹಿತ್ ಟೀಂ
ಕಿವೀಸ್ ಮಣಿಸಲು ಭಾರತಕ್ಕೆ ಬೇಕಿದೆ ಬಲಿಷ್ಠ ಪ್ಲೇಯಿಂಗ್-11
ಟೀಮ್ ಇಂಡಿಯಾದಲ್ಲಿ ಎಲ್ಲಾ ಸರಿಹೋಯ್ತು ಅನ್ನೋವಾಗಲೇ ಹೊಸ ಟೆನ್ಶನ್ ಶುರುವಾಗಿದೆ. ಮೆಗಾ ಟೂರ್ನಿಯಲ್ಲಿ 4 ಪಂದ್ಯಗಳನ್ನ ಆಡಿದ್ದೂ ಆಯ್ತು. ಗೆದ್ದಿದ್ದೂ ಆಯ್ತು… ಆದ್ರೂ ತಂಡದಲ್ಲಿ ಗೊಂದಲ ಮಾತ್ರ ಬಗೆಹರಿದಿಲ್ಲ. ಇಂದಿನ ಪಂದ್ಯಕ್ಕೂ ಮುನ್ನ ರೋಹಿತ್-ದ್ರಾವಿಡ್ ಇಬ್ಬರ ಮುಂದೆ ಬಿಗ್ ಟಾಸ್ಕ್ ಇದೆ. ಆ ಸವಾಲನ್ನು ಗೆಲ್ಲೋದು ಸುಲಭದ ವಿಚಾರ ಅಲ್ಲವೇ ಅಲ್ಲ.
ಗೊಂದಲದ ಗೂಡಾದ ಟೀಮ್ ಇಂಡಿಯಾ..!
ವಿಶ್ವಕಪ್ ಮಹಾಸಮರದಲ್ಲಿಂದು ಬಿಗ್ ಫೈಟ್. ಟೇಬಲ್ ಟಾಪರ್ಸ್ ನಡುವಿನ ಕದನಕ್ಕೆ ಧರ್ಮಶಾಲಾದಲ್ಲಿ ಅಖಾಡ ಸಜ್ಜಾಗಿದೆ. ಟೂರ್ನಿಯಲ್ಲಿ ಈವರೆಗೆ ಸೋಲೆ ಕಾಣದ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ, ಇಂತಾ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಗೊಂದಲದ ಗೂಡಾಗಿದೆ.
ಹಾರ್ದಿಕ್ ಔಟ್.. ಸೆಲೆಕ್ಷನ್ ಹೆಡ್ಡೇಕ್..!
ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಿಂದ ಹೊರ ಬಿದ್ದಿದ್ದಾರೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಔಟ್ ಆದ ಬೆನ್ನಲ್ಲೇ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾಗೆ ರಿಪ್ಲೇಸ್ಮೆಂಟ್ ಆಯ್ಕೆ ಇನ್ನಿಲ್ಲದ ಟೆನ್ಶನ್ ತಂದಿಟ್ಟಿದೆ. ಅಷ್ಟರಮಟ್ಟಿಗೆ ಹಾರ್ದಿಕ್ ಅಲಭ್ಯತೆ ಟೀಮ್ ಬ್ಯಾಲೆನ್ಸ್ಗೆ ದೊಡ್ಡ ಹೊಡೆತ ಕೊಟ್ಟಿದೆ.
ಐವರ ನಡುವೆ ಫೈಟ್.. ಯಾರಿಗೆ ಚಾನ್ಸ್..?
ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಅನ್ನೋದು ತಂಡಕ್ಕಿರೋ ದೊಡ್ಡ ಟೆನ್ಶನ್ ಆಗಿದೆ. ಸೂರ್ಯ ಕುಮಾರ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಹಾಗೂ ಆರ್.ಅಶ್ವಿನ್ ನಡುವೆ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ರೆ, ಶಾರ್ದೂಲ್ ಠಾಕೂರ್ ಸ್ಥಾನ ಉಳಿಸಿಕೊಳ್ಳೋ ಸರ್ಕಸ್ಗೆ ಬಿದ್ದಿದ್ದಾರೆ.
ಸೂರ್ಯಗೆ ಮಣೆ ಹಾಕ್ತಾರಾ.? ಕಿಶನ್ ಚಾನ್ಸ್ ಕೊಡ್ತಾರಾ.?
6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಬ್ಯಾಟಿಂಗ್ ಬಲದವಾಗಿದ್ರು. ಬ್ಯಾಟಿಂಗ್ ಡೆಪ್ತ್ ಇದ್ದ ಒಂದು ಕಾರಣದಿಂದಲೇ ಟೂರ್ನಿಯಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಫಿಯರ್ಲೆಸ್ ಬ್ಯಾಟಿಂಗ್ ನಡೆಸ್ತಿದ್ರು. ಆದ್ರೆ, ಇಂದಿನ ಪಂದ್ಯಕ್ಕೆ ಹಾರ್ದಿಕ್ ಅಲಭ್ಯರಾಗಿದ್ದಾರೆ. ಹೀಗಾಗಿ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಬೇಕಂದ್ರೆ, ಸೂರ್ಯ ಕುಮಾರ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ನೀಡಬೇಕಿದೆ. ಲೆಫ್ಟ್ ಹ್ಯಾಂಡರ್ ಕಿಶನ್ಗಿಂತ ಫಿನಿಷಿರ್ ರೋಲ್ಗೆ ಪರ್ಫೆಕ್ಟ್ ಆಗಿ ಸೂಟ್ ಆಗೋ ಸೂರ್ಯ ರೇಸ್ನಲ್ಲಿ ಮುಂದಿದ್ದಾರೆ.
ಬ್ಯಾಟಿಂಗ್ಗೆ ಬಲ ಬಂದ್ರೆ ಬ್ಯಾಲೆನ್ಸ್ ತಪ್ಪುತ್ತೆ ಬೌಲಿಂಗ್
ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಲು ರೋಹಿತ್ ಮುಂದಾದ್ರೆ ಬೌಲಿಂಗ್ ಬ್ಯಾಲೆನ್ಸ್ ತಪ್ಪೋದು ಕನ್ಫರ್ಮ್. ಇರೋ ಐವರು ಬೌಲರ್ಗಳಿಗೆ ಫುಲ್ ಓವರ್ ಕೋಟಾ ಕಂಪ್ಲೀಟ್ ಮಾಡೋ ಜವಾಬ್ದಾರಿ ಬೀಳಲಿದೆ. ಹಾಗೇನಾದ್ರೂ ಆದರೆ ಶಾರ್ದೂಲ್ ಠಾಕೂರ್ಗೆ ಕೊಕ್ ಕೊಡೋದು ಪಕ್ಕಾ. ಯಾಕಂದ್ರೆ 10 ಓವರ್ ಕೋಟಾವನ್ನು ಶಾರ್ದೂಲ್ ಪೂರೈಸ್ತಾರಾ ಎಂಬ ಪ್ರಶ್ನೆಗೆ ತಂಡದಲ್ಲೇ ಉತ್ತರ ಇಲ್ಲ.
ಧರ್ಮಶಾಲಾದಲ್ಲಿ ಅಶ್ವಿನ್ ವರ್ಕೌಟ್ ಆಗಲ್ಲ
ಧರ್ಮಶಾಲಾ ಪಿಚ್ನಲ್ಲಿ ಸ್ಪಿನ್ ವರ್ಕೌಟ್ ಆಗೋದು ಡೌಟೇ. ಹೀಗಾಗಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯೋದು ಬೆಸ್ಟ್ ಆಯ್ಕೆಯಾಗಿದೆ. ಬೂಮ್ರಾ, ಸಿರಾಜ್ ಜೊತೆಗೆ ಶಮಿ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ. ಶಾರ್ದೂಲ್ ಬದಲು ಶಮಿ ಹಾಗೂ ಹಾರ್ದಿಕ್ ಸ್ಥಾನದಲ್ಲಿ ಸೂರ್ಯನಿಗೆ ಚಾನ್ಸ್ ನೀಡೋದು ಸದ್ಯಕ್ಕಿರೋ ಬೆಸ್ಟ್ ಆಪ್ಷನ್. ಇದ್ರಿಂದ ಬ್ಯಾಟಿಂಗ್ ಡೆಪ್ತ್ ಕೂಡ ಸಿಗುತ್ತೆ. ಬೌಲಿಂಗ್ ಬಲವೂ ಹೆಚ್ಚುತ್ತೆ.
ಒಟ್ಟಿನಲ್ಲಿ, ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಟೀಮ್ ಇಂಡಿಯಾದ ಟೀಮ್ ಕಾಂಬಿನೇಷನ್ ಏನಿರುತ್ತೆ ಅನ್ನೋದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೋಹಿತ್-ದ್ರಾವಿಡ್ ನಡೆ ಏನು? ಯಾರಿಗೆ ಚಾನ್ಸ್.? ಯಾರಿಗೆ ಕೊಕ್.? ಅನ್ನೋ ಪ್ರಶ್ನೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನ್ಯೂಜಿಲೆಂಡ್ ವಿರುದ್ಧ ಭಾರತ ಇಂದು ಸೆಣಸಾಟ
ಹಳೇ ಸೇಡು ತೀರಿಸಿಕೊಳ್ಳುವ ಛಲದಲ್ಲಿ ರೋಹಿತ್ ಟೀಂ
ಕಿವೀಸ್ ಮಣಿಸಲು ಭಾರತಕ್ಕೆ ಬೇಕಿದೆ ಬಲಿಷ್ಠ ಪ್ಲೇಯಿಂಗ್-11
ಟೀಮ್ ಇಂಡಿಯಾದಲ್ಲಿ ಎಲ್ಲಾ ಸರಿಹೋಯ್ತು ಅನ್ನೋವಾಗಲೇ ಹೊಸ ಟೆನ್ಶನ್ ಶುರುವಾಗಿದೆ. ಮೆಗಾ ಟೂರ್ನಿಯಲ್ಲಿ 4 ಪಂದ್ಯಗಳನ್ನ ಆಡಿದ್ದೂ ಆಯ್ತು. ಗೆದ್ದಿದ್ದೂ ಆಯ್ತು… ಆದ್ರೂ ತಂಡದಲ್ಲಿ ಗೊಂದಲ ಮಾತ್ರ ಬಗೆಹರಿದಿಲ್ಲ. ಇಂದಿನ ಪಂದ್ಯಕ್ಕೂ ಮುನ್ನ ರೋಹಿತ್-ದ್ರಾವಿಡ್ ಇಬ್ಬರ ಮುಂದೆ ಬಿಗ್ ಟಾಸ್ಕ್ ಇದೆ. ಆ ಸವಾಲನ್ನು ಗೆಲ್ಲೋದು ಸುಲಭದ ವಿಚಾರ ಅಲ್ಲವೇ ಅಲ್ಲ.
ಗೊಂದಲದ ಗೂಡಾದ ಟೀಮ್ ಇಂಡಿಯಾ..!
ವಿಶ್ವಕಪ್ ಮಹಾಸಮರದಲ್ಲಿಂದು ಬಿಗ್ ಫೈಟ್. ಟೇಬಲ್ ಟಾಪರ್ಸ್ ನಡುವಿನ ಕದನಕ್ಕೆ ಧರ್ಮಶಾಲಾದಲ್ಲಿ ಅಖಾಡ ಸಜ್ಜಾಗಿದೆ. ಟೂರ್ನಿಯಲ್ಲಿ ಈವರೆಗೆ ಸೋಲೆ ಕಾಣದ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ, ಇಂತಾ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಗೊಂದಲದ ಗೂಡಾಗಿದೆ.
ಹಾರ್ದಿಕ್ ಔಟ್.. ಸೆಲೆಕ್ಷನ್ ಹೆಡ್ಡೇಕ್..!
ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಿಂದ ಹೊರ ಬಿದ್ದಿದ್ದಾರೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಔಟ್ ಆದ ಬೆನ್ನಲ್ಲೇ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾಗೆ ರಿಪ್ಲೇಸ್ಮೆಂಟ್ ಆಯ್ಕೆ ಇನ್ನಿಲ್ಲದ ಟೆನ್ಶನ್ ತಂದಿಟ್ಟಿದೆ. ಅಷ್ಟರಮಟ್ಟಿಗೆ ಹಾರ್ದಿಕ್ ಅಲಭ್ಯತೆ ಟೀಮ್ ಬ್ಯಾಲೆನ್ಸ್ಗೆ ದೊಡ್ಡ ಹೊಡೆತ ಕೊಟ್ಟಿದೆ.
ಐವರ ನಡುವೆ ಫೈಟ್.. ಯಾರಿಗೆ ಚಾನ್ಸ್..?
ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಅನ್ನೋದು ತಂಡಕ್ಕಿರೋ ದೊಡ್ಡ ಟೆನ್ಶನ್ ಆಗಿದೆ. ಸೂರ್ಯ ಕುಮಾರ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಹಾಗೂ ಆರ್.ಅಶ್ವಿನ್ ನಡುವೆ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ರೆ, ಶಾರ್ದೂಲ್ ಠಾಕೂರ್ ಸ್ಥಾನ ಉಳಿಸಿಕೊಳ್ಳೋ ಸರ್ಕಸ್ಗೆ ಬಿದ್ದಿದ್ದಾರೆ.
ಸೂರ್ಯಗೆ ಮಣೆ ಹಾಕ್ತಾರಾ.? ಕಿಶನ್ ಚಾನ್ಸ್ ಕೊಡ್ತಾರಾ.?
6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಬ್ಯಾಟಿಂಗ್ ಬಲದವಾಗಿದ್ರು. ಬ್ಯಾಟಿಂಗ್ ಡೆಪ್ತ್ ಇದ್ದ ಒಂದು ಕಾರಣದಿಂದಲೇ ಟೂರ್ನಿಯಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಫಿಯರ್ಲೆಸ್ ಬ್ಯಾಟಿಂಗ್ ನಡೆಸ್ತಿದ್ರು. ಆದ್ರೆ, ಇಂದಿನ ಪಂದ್ಯಕ್ಕೆ ಹಾರ್ದಿಕ್ ಅಲಭ್ಯರಾಗಿದ್ದಾರೆ. ಹೀಗಾಗಿ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಬೇಕಂದ್ರೆ, ಸೂರ್ಯ ಕುಮಾರ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ನೀಡಬೇಕಿದೆ. ಲೆಫ್ಟ್ ಹ್ಯಾಂಡರ್ ಕಿಶನ್ಗಿಂತ ಫಿನಿಷಿರ್ ರೋಲ್ಗೆ ಪರ್ಫೆಕ್ಟ್ ಆಗಿ ಸೂಟ್ ಆಗೋ ಸೂರ್ಯ ರೇಸ್ನಲ್ಲಿ ಮುಂದಿದ್ದಾರೆ.
ಬ್ಯಾಟಿಂಗ್ಗೆ ಬಲ ಬಂದ್ರೆ ಬ್ಯಾಲೆನ್ಸ್ ತಪ್ಪುತ್ತೆ ಬೌಲಿಂಗ್
ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಲು ರೋಹಿತ್ ಮುಂದಾದ್ರೆ ಬೌಲಿಂಗ್ ಬ್ಯಾಲೆನ್ಸ್ ತಪ್ಪೋದು ಕನ್ಫರ್ಮ್. ಇರೋ ಐವರು ಬೌಲರ್ಗಳಿಗೆ ಫುಲ್ ಓವರ್ ಕೋಟಾ ಕಂಪ್ಲೀಟ್ ಮಾಡೋ ಜವಾಬ್ದಾರಿ ಬೀಳಲಿದೆ. ಹಾಗೇನಾದ್ರೂ ಆದರೆ ಶಾರ್ದೂಲ್ ಠಾಕೂರ್ಗೆ ಕೊಕ್ ಕೊಡೋದು ಪಕ್ಕಾ. ಯಾಕಂದ್ರೆ 10 ಓವರ್ ಕೋಟಾವನ್ನು ಶಾರ್ದೂಲ್ ಪೂರೈಸ್ತಾರಾ ಎಂಬ ಪ್ರಶ್ನೆಗೆ ತಂಡದಲ್ಲೇ ಉತ್ತರ ಇಲ್ಲ.
ಧರ್ಮಶಾಲಾದಲ್ಲಿ ಅಶ್ವಿನ್ ವರ್ಕೌಟ್ ಆಗಲ್ಲ
ಧರ್ಮಶಾಲಾ ಪಿಚ್ನಲ್ಲಿ ಸ್ಪಿನ್ ವರ್ಕೌಟ್ ಆಗೋದು ಡೌಟೇ. ಹೀಗಾಗಿ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯೋದು ಬೆಸ್ಟ್ ಆಯ್ಕೆಯಾಗಿದೆ. ಬೂಮ್ರಾ, ಸಿರಾಜ್ ಜೊತೆಗೆ ಶಮಿ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ. ಶಾರ್ದೂಲ್ ಬದಲು ಶಮಿ ಹಾಗೂ ಹಾರ್ದಿಕ್ ಸ್ಥಾನದಲ್ಲಿ ಸೂರ್ಯನಿಗೆ ಚಾನ್ಸ್ ನೀಡೋದು ಸದ್ಯಕ್ಕಿರೋ ಬೆಸ್ಟ್ ಆಪ್ಷನ್. ಇದ್ರಿಂದ ಬ್ಯಾಟಿಂಗ್ ಡೆಪ್ತ್ ಕೂಡ ಸಿಗುತ್ತೆ. ಬೌಲಿಂಗ್ ಬಲವೂ ಹೆಚ್ಚುತ್ತೆ.
ಒಟ್ಟಿನಲ್ಲಿ, ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಟೀಮ್ ಇಂಡಿಯಾದ ಟೀಮ್ ಕಾಂಬಿನೇಷನ್ ಏನಿರುತ್ತೆ ಅನ್ನೋದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೋಹಿತ್-ದ್ರಾವಿಡ್ ನಡೆ ಏನು? ಯಾರಿಗೆ ಚಾನ್ಸ್.? ಯಾರಿಗೆ ಕೊಕ್.? ಅನ್ನೋ ಪ್ರಶ್ನೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್