1987ರಲ್ಲಿ ಏಕದಿನ ಪಂದ್ಯದಲ್ಲಿ ನಡೆದಿತ್ತಾ ಭಯಾನಕ ಪ್ಲಾನ್
ಸಂಚು ರೂಪಾಸಿದ ಸುದ್ದಿ ರಿವೀಲ್ ಆಗಿರೋದು ಹೇಗೆ ಗೊತ್ತಾ?
ರವಿಶಾಸ್ತ್ರಿಯನ್ನು ಸಮಾಧಾನ ಮಾಡಿದ್ದ ಇಮ್ರಾನ್ ಖಾನ್
ಮಾಜಿ ಕ್ರಿಕೆಟರ್ ರವಿ ಶಾಸ್ತ್ರಿ ಅಗ್ರೆಸ್ಸಿವ್ನೆಸ್ ಯಾರಿಗೆ ಗೊತ್ತಿಲ್ಲ. ಯಾವುದೇ ವಿಚಾರವನ್ನಾಗಲಿ ನೇರವಾಗಿ ಹೇಳುವ ಮನುಷ್ಯ. ಒಮ್ಮೆ ಸಿಕ್ಕಾಪಟ್ಟೆ ಕೋಪಗೊಂಡಿದ್ದ ಶಾಸ್ತ್ರಿ, ಪಾಕ್ ಆಟಗಾರನ ಕೊಲೆಗೆ ಮುಂದಾಗಿದ್ದೇಕೆ ಎಂಬ ವಿಚಾರವನ್ನ ಇವತ್ತಿನ ಸಖತ್ ಸ್ಟೋರಿಯಲ್ಲಿ ನೋಡೋಣ.
ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಸಕ್ಸಸ್ ಫುಲ್ ಕೋಚ್. ಕಾಮೆಂಟೇಟರ್ ಆ್ಯಂಡ್ ಭಾರತ ತಂಡದ ಮಾಜಿ ಕ್ಯಾಪ್ಟನ್. ರವಿಶಾಸ್ತ್ರಿ ಅವರು 1987ರಲ್ಲಿ ಪಾಕ್ನ ಜಾವೇದ್ ಮಿಯಾಂದಾದ್ ಸಾಯಿಸಲು ಮುಂದಾಗಿದ್ದರಂತೆ.
1987ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 5 ಟೆಸ್ಟ್, 6 ಪಂದ್ಯಗಳ ಏಕದಿನ ಸರಣಿಯಾಡಿತ್ತು. ಏಕದಿನ ಸರಣಿಯ 3ನೇ ಪಂದ್ಯಕ್ಕೆ ಹೈದ್ರಾಬಾದ್ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 44 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು.
ಭಾರತ ಆಟಗಾರರ ವಿರುದ್ಧ ಕೂಗಾಡಿದ್ದ ಜಾವೇದ್
ಈ ಟಾರ್ಗೆಟ್ ಬೆನ್ನತ್ತಿದ್ದ ಪಾಕ್ ಕೊನೆ ಎಸೆತದಲ್ಲಿ 2 ರನ್ ಗಳಿಸಬೇಕಿತ್ತು. ಆದರೆ ಅಬ್ದುಲ್ ಖಾದಿರ್ ರನ್ ಔಟ್ನಿಂದಾಗಿ 1 ರನ್ ಪೂರ್ಣಗೊಳಿಸಲಷ್ಟೇ ಶಕ್ತವಾಗಿ ಪಂದ್ಯ ಟೈ ಮಾಡಿಕೊಳ್ತು. ಐಸಿಸಿ ನಿಯಮದ ಅನ್ವಯ 7 ವಿಕೆಟ್ ಕಳೆದುಕೊಂಡಿದ್ದ ಪಾಕ್ ಸೋಲೊಪ್ಪಿಕೊಂಡ್ರೆ. 6 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಭಾರತ ಗೆದ್ದು ಬೀಗಿತ್ತು. ಆದರೆ ಸೋಲನ್ನ ಅರಗಿಸಿಕೊಳ್ಳದ ಪಾಕ್ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಜೋರಾಗಿ ಚೀಟರ್ಸ್ ಎಂದು ಭಾರತ ಆಟಗಾರರ ವಿರುದ್ಧ ಕೂಗಾಡಿದ್ದರು.
ಇದಕ್ಕೆ ಕುಪಿತಗೊಂಡಿದ್ದ ರವಿ ಶಾಸ್ತ್ರಿ, ಶೂ ತೆಗೆದುಕೊಂಡು ಮಿಯಾಂದಾದ್ ಕೊಲ್ಲಲು ಅಟ್ಟಾಡಿಸಿಕೊಂಡು ಪಾಕ್ ಡ್ರೆಸ್ಸಿಂಗ್ ರೂಮ್ಗೆ ಎಂಟ್ರಿ ನೀಡಿದ್ದರು. ರವಿ ಶಾಸ್ತ್ರಿಯ ಕೋಪವನ್ನ ಕಂಡ ಇಮ್ರಾನ್ ಖಾನ್, ಸಮಾಧಾನ ಮಾಡಿಸಿದ್ರಂತೆ. ಈ ವಿಚಾರವನ್ನ ರವಿ ಶಾಸ್ತ್ರಿ, Stargazing.. The Players in My Life ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
1987ರಲ್ಲಿ ಏಕದಿನ ಪಂದ್ಯದಲ್ಲಿ ನಡೆದಿತ್ತಾ ಭಯಾನಕ ಪ್ಲಾನ್
ಸಂಚು ರೂಪಾಸಿದ ಸುದ್ದಿ ರಿವೀಲ್ ಆಗಿರೋದು ಹೇಗೆ ಗೊತ್ತಾ?
ರವಿಶಾಸ್ತ್ರಿಯನ್ನು ಸಮಾಧಾನ ಮಾಡಿದ್ದ ಇಮ್ರಾನ್ ಖಾನ್
ಮಾಜಿ ಕ್ರಿಕೆಟರ್ ರವಿ ಶಾಸ್ತ್ರಿ ಅಗ್ರೆಸ್ಸಿವ್ನೆಸ್ ಯಾರಿಗೆ ಗೊತ್ತಿಲ್ಲ. ಯಾವುದೇ ವಿಚಾರವನ್ನಾಗಲಿ ನೇರವಾಗಿ ಹೇಳುವ ಮನುಷ್ಯ. ಒಮ್ಮೆ ಸಿಕ್ಕಾಪಟ್ಟೆ ಕೋಪಗೊಂಡಿದ್ದ ಶಾಸ್ತ್ರಿ, ಪಾಕ್ ಆಟಗಾರನ ಕೊಲೆಗೆ ಮುಂದಾಗಿದ್ದೇಕೆ ಎಂಬ ವಿಚಾರವನ್ನ ಇವತ್ತಿನ ಸಖತ್ ಸ್ಟೋರಿಯಲ್ಲಿ ನೋಡೋಣ.
ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಸಕ್ಸಸ್ ಫುಲ್ ಕೋಚ್. ಕಾಮೆಂಟೇಟರ್ ಆ್ಯಂಡ್ ಭಾರತ ತಂಡದ ಮಾಜಿ ಕ್ಯಾಪ್ಟನ್. ರವಿಶಾಸ್ತ್ರಿ ಅವರು 1987ರಲ್ಲಿ ಪಾಕ್ನ ಜಾವೇದ್ ಮಿಯಾಂದಾದ್ ಸಾಯಿಸಲು ಮುಂದಾಗಿದ್ದರಂತೆ.
1987ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 5 ಟೆಸ್ಟ್, 6 ಪಂದ್ಯಗಳ ಏಕದಿನ ಸರಣಿಯಾಡಿತ್ತು. ಏಕದಿನ ಸರಣಿಯ 3ನೇ ಪಂದ್ಯಕ್ಕೆ ಹೈದ್ರಾಬಾದ್ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 44 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತ್ತು.
ಭಾರತ ಆಟಗಾರರ ವಿರುದ್ಧ ಕೂಗಾಡಿದ್ದ ಜಾವೇದ್
ಈ ಟಾರ್ಗೆಟ್ ಬೆನ್ನತ್ತಿದ್ದ ಪಾಕ್ ಕೊನೆ ಎಸೆತದಲ್ಲಿ 2 ರನ್ ಗಳಿಸಬೇಕಿತ್ತು. ಆದರೆ ಅಬ್ದುಲ್ ಖಾದಿರ್ ರನ್ ಔಟ್ನಿಂದಾಗಿ 1 ರನ್ ಪೂರ್ಣಗೊಳಿಸಲಷ್ಟೇ ಶಕ್ತವಾಗಿ ಪಂದ್ಯ ಟೈ ಮಾಡಿಕೊಳ್ತು. ಐಸಿಸಿ ನಿಯಮದ ಅನ್ವಯ 7 ವಿಕೆಟ್ ಕಳೆದುಕೊಂಡಿದ್ದ ಪಾಕ್ ಸೋಲೊಪ್ಪಿಕೊಂಡ್ರೆ. 6 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಭಾರತ ಗೆದ್ದು ಬೀಗಿತ್ತು. ಆದರೆ ಸೋಲನ್ನ ಅರಗಿಸಿಕೊಳ್ಳದ ಪಾಕ್ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಜೋರಾಗಿ ಚೀಟರ್ಸ್ ಎಂದು ಭಾರತ ಆಟಗಾರರ ವಿರುದ್ಧ ಕೂಗಾಡಿದ್ದರು.
ಇದಕ್ಕೆ ಕುಪಿತಗೊಂಡಿದ್ದ ರವಿ ಶಾಸ್ತ್ರಿ, ಶೂ ತೆಗೆದುಕೊಂಡು ಮಿಯಾಂದಾದ್ ಕೊಲ್ಲಲು ಅಟ್ಟಾಡಿಸಿಕೊಂಡು ಪಾಕ್ ಡ್ರೆಸ್ಸಿಂಗ್ ರೂಮ್ಗೆ ಎಂಟ್ರಿ ನೀಡಿದ್ದರು. ರವಿ ಶಾಸ್ತ್ರಿಯ ಕೋಪವನ್ನ ಕಂಡ ಇಮ್ರಾನ್ ಖಾನ್, ಸಮಾಧಾನ ಮಾಡಿಸಿದ್ರಂತೆ. ಈ ವಿಚಾರವನ್ನ ರವಿ ಶಾಸ್ತ್ರಿ, Stargazing.. The Players in My Life ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ