newsfirstkannada.com

VVS ಲಕ್ಷ್ಮಣ್ ಕರಿಯರ್ ಬದಲಿಸಿದ್ದೇ​ ತೆಂಡೂಲ್ಕರ್​.. ಸಚಿನ್​ ಹೇಳಿದ ಆ ಒಂದು ಮಾತು ಸಖತ್​ ಸ್ಟೋರಿಯಲ್ಲಿ..!

Share :

25-06-2023

    ಊಟ ಮುಗಿಸಿ ಲಕ್ಷ್ಮಣ್​ ವಾಕ್​ ಮಾಡುವಾಗ ಸಚಿನ್​ ಹೇಳಿದ್ದೇನು?

    ಕ್ರಿಕೆಟ್ ಇತಿಹಾಸದ ಪುಟದಲ್ಲಿ ಲಕ್ಷ್ಮಣ್​ ಹೆಸರು ಇರಲು ಸಚಿನ್ ಕಾರಣ

    ಸಚಿನ್​ ತೆಂಡೂಲ್ಕರ್ ಮಾತಿನಿಂದ ಲಕ್ಷ್ಮಣ್ ಬ್ಯಾಟಿಂಗ್​ನಲ್ಲಿ ಮಿಂಚು

ವಿವಿಎಸ್ ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್ ಕಂಡ ಒನ್ ಆಫ್ ದೀ ಕ್ಲಾಸಿಕ್ ಬ್ಯಾಟ್ಸ್​ಮನ್​. ಆದರೆ ಲಕ್ಷ್ಮಣ್​ ಟೆಸ್ಟ್ ಲೈಫ್ ಬದಲಿಸಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಶತಕಗಳ ಸರದಾರನ ಆ ಒಂದೇ ಒಂದು ಮಾತು ಲಕ್ಷ್ಮಣ್ ಹೆಸರು ಇತಿಹಾಸದ ಪುಟ ಸೇರಲು ಕಾರಣವಾಯಿತು. ಆ ಸ್ಫೂರ್ತಿದಾಯಕ ಕಥೆಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್. ಈ ಸಾಲಿಗೆ ನಿಲ್ಲುವ ಮತ್ತೊಬ್ಬ ಆಟಗಾರ ಅಂದ್ರೆ ಅದು ವಿವಿಎಸ್ ಲಕ್ಷ್ಮಣ್. ಕ್ಲಾಸ್ ಆಟಕ್ಕೆ ಹೆಸರುವಾಸಿಯಾಗಿರೋ ಲಕ್ಷ್ಮಣ್ ವೃತ್ತಿ ಜೀವನದಲ್ಲಿ ಅದೆಷ್ಟೋ ಮೆಮೊರೆಬಲ್ ಇನ್ನಿಂಗ್ಸ್ ಕಟ್ಟಿದ್ದಾರೆ. ಆ ಪೈಕಿ 1999 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಾರಿಸಿದ 167 ರನ್ ಅನ್ನ ಯಾರೊಬ್ಬರು ಮರೆಯಲಾರರು. ಯಾಕಂದ್ರೆ ಅದೊಂದು ಎಪಿಕ್ ಇನ್ನಿಂಗ್ಸ್. ಇಂತಹ ಎವರ್​ ಗ್ರೀನ್ ಇನ್ನಿಂಗ್ಸ್​ ಕಾರಣವಾಗಿದ್ದು ಸಚಿನ್ ತೆಂಡೂಲ್ಕರ್​ರ ಆ ಒಂದೇ ಒಂದು ಸ್ಫೂರ್ತಿದಾಯಕ ಮಾತು.

ಹೌದು, 1999 ರಲ್ಲಿ ಭಾರತ ತಂಡ ಆಸಿಸ್ ಪ್ರವಾಸ ಕೈಗೊಂಡಿತ್ತು. ಮೊದಲೆರಡು ಟೆಸ್ಟ್ ಪಂದ್ಯಗಳನ್ನ ಸೋತು ಸುಣ್ಣವಾಗಿತ್ತು. ಆಗ ಸಚಿನ್ ಮತ್ತು ಲಕ್ಷ್ಮಣ್ ಡಿನ್ನರ್ ಮುಗಿಸಿ ವಾಕಿಂಗ್ ಮಾಡುತ್ತಿದ್ದರು. ಆಗ ಸಚಿನ್ ಅವರು ಲಕ್ಷ್ಮಣ್​ಗೆ ಒಂದು ಮಾತನ್ನು ಹೇಳ್ತಾರೆ. ಅದೇನಂದ್ರೆ ನೀವು ನನಗಿಂತ ಟ್ಯಾಲೆಂಟೆಡ್ ಅಂತಾರೆ. ಸಚಿನ್​ರ ಈ ಮಾತು ಲಕ್ಷ್ಮಣ್​ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಮಾಸ್ಟರ್ ಬ್ಲಾಸ್ಟರ್ ಮಾತು ಕೇಳಿದ ಮೇಲೆ ಲಕ್ಷ್ಮಣ್ ಬ್ಯಾಟಿಂಗ್​ನಲ್ಲಿ ಮಿಂಚಲಾರಂಭಿಸಿದ್ರು. ಸಿಡ್ನಿ ಟೆಸ್ಟ್​ನಲ್ಲಿ ಅಮೋಘ 167 ರನ್ ಹೊಡೆದ್ರೆ, ಕ್ರಿಕೆಟ್ ಕಾಶಿ ಕೊಲ್ಕತ್ತಾದಲ್ಲಿ 232 ರನ್ ಬಾರಿಸಲು ಕ್ರಿಕೆಟ್ ದೇವರ ಸ್ಫೂರ್ತಿಯ ಮಾತುಗಳೇ ಕಾರವಾಯ್ತು. ಇದನ್ನ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VVS ಲಕ್ಷ್ಮಣ್ ಕರಿಯರ್ ಬದಲಿಸಿದ್ದೇ​ ತೆಂಡೂಲ್ಕರ್​.. ಸಚಿನ್​ ಹೇಳಿದ ಆ ಒಂದು ಮಾತು ಸಖತ್​ ಸ್ಟೋರಿಯಲ್ಲಿ..!

https://newsfirstlive.com/wp-content/uploads/2023/06/SACHIN_LAXMAN_1.jpg

    ಊಟ ಮುಗಿಸಿ ಲಕ್ಷ್ಮಣ್​ ವಾಕ್​ ಮಾಡುವಾಗ ಸಚಿನ್​ ಹೇಳಿದ್ದೇನು?

    ಕ್ರಿಕೆಟ್ ಇತಿಹಾಸದ ಪುಟದಲ್ಲಿ ಲಕ್ಷ್ಮಣ್​ ಹೆಸರು ಇರಲು ಸಚಿನ್ ಕಾರಣ

    ಸಚಿನ್​ ತೆಂಡೂಲ್ಕರ್ ಮಾತಿನಿಂದ ಲಕ್ಷ್ಮಣ್ ಬ್ಯಾಟಿಂಗ್​ನಲ್ಲಿ ಮಿಂಚು

ವಿವಿಎಸ್ ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್ ಕಂಡ ಒನ್ ಆಫ್ ದೀ ಕ್ಲಾಸಿಕ್ ಬ್ಯಾಟ್ಸ್​ಮನ್​. ಆದರೆ ಲಕ್ಷ್ಮಣ್​ ಟೆಸ್ಟ್ ಲೈಫ್ ಬದಲಿಸಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಶತಕಗಳ ಸರದಾರನ ಆ ಒಂದೇ ಒಂದು ಮಾತು ಲಕ್ಷ್ಮಣ್ ಹೆಸರು ಇತಿಹಾಸದ ಪುಟ ಸೇರಲು ಕಾರಣವಾಯಿತು. ಆ ಸ್ಫೂರ್ತಿದಾಯಕ ಕಥೆಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್. ಈ ಸಾಲಿಗೆ ನಿಲ್ಲುವ ಮತ್ತೊಬ್ಬ ಆಟಗಾರ ಅಂದ್ರೆ ಅದು ವಿವಿಎಸ್ ಲಕ್ಷ್ಮಣ್. ಕ್ಲಾಸ್ ಆಟಕ್ಕೆ ಹೆಸರುವಾಸಿಯಾಗಿರೋ ಲಕ್ಷ್ಮಣ್ ವೃತ್ತಿ ಜೀವನದಲ್ಲಿ ಅದೆಷ್ಟೋ ಮೆಮೊರೆಬಲ್ ಇನ್ನಿಂಗ್ಸ್ ಕಟ್ಟಿದ್ದಾರೆ. ಆ ಪೈಕಿ 1999 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಾರಿಸಿದ 167 ರನ್ ಅನ್ನ ಯಾರೊಬ್ಬರು ಮರೆಯಲಾರರು. ಯಾಕಂದ್ರೆ ಅದೊಂದು ಎಪಿಕ್ ಇನ್ನಿಂಗ್ಸ್. ಇಂತಹ ಎವರ್​ ಗ್ರೀನ್ ಇನ್ನಿಂಗ್ಸ್​ ಕಾರಣವಾಗಿದ್ದು ಸಚಿನ್ ತೆಂಡೂಲ್ಕರ್​ರ ಆ ಒಂದೇ ಒಂದು ಸ್ಫೂರ್ತಿದಾಯಕ ಮಾತು.

ಹೌದು, 1999 ರಲ್ಲಿ ಭಾರತ ತಂಡ ಆಸಿಸ್ ಪ್ರವಾಸ ಕೈಗೊಂಡಿತ್ತು. ಮೊದಲೆರಡು ಟೆಸ್ಟ್ ಪಂದ್ಯಗಳನ್ನ ಸೋತು ಸುಣ್ಣವಾಗಿತ್ತು. ಆಗ ಸಚಿನ್ ಮತ್ತು ಲಕ್ಷ್ಮಣ್ ಡಿನ್ನರ್ ಮುಗಿಸಿ ವಾಕಿಂಗ್ ಮಾಡುತ್ತಿದ್ದರು. ಆಗ ಸಚಿನ್ ಅವರು ಲಕ್ಷ್ಮಣ್​ಗೆ ಒಂದು ಮಾತನ್ನು ಹೇಳ್ತಾರೆ. ಅದೇನಂದ್ರೆ ನೀವು ನನಗಿಂತ ಟ್ಯಾಲೆಂಟೆಡ್ ಅಂತಾರೆ. ಸಚಿನ್​ರ ಈ ಮಾತು ಲಕ್ಷ್ಮಣ್​ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಮಾಸ್ಟರ್ ಬ್ಲಾಸ್ಟರ್ ಮಾತು ಕೇಳಿದ ಮೇಲೆ ಲಕ್ಷ್ಮಣ್ ಬ್ಯಾಟಿಂಗ್​ನಲ್ಲಿ ಮಿಂಚಲಾರಂಭಿಸಿದ್ರು. ಸಿಡ್ನಿ ಟೆಸ್ಟ್​ನಲ್ಲಿ ಅಮೋಘ 167 ರನ್ ಹೊಡೆದ್ರೆ, ಕ್ರಿಕೆಟ್ ಕಾಶಿ ಕೊಲ್ಕತ್ತಾದಲ್ಲಿ 232 ರನ್ ಬಾರಿಸಲು ಕ್ರಿಕೆಟ್ ದೇವರ ಸ್ಫೂರ್ತಿಯ ಮಾತುಗಳೇ ಕಾರವಾಯ್ತು. ಇದನ್ನ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More