ಟೀಮ್ ಇಂಡಿಯಾದ ವೆರಿ ವೆರಿ ಸ್ಪೆಷಲ್ ಹೈದರಾಬಾದ್ ಪ್ಲೇಯರ್
ದ್ರಾವಿಡ್, ಗಂಗೂಲಿ, ಸಚಿನ್ ಜೊತೆ ಸಾಕಷ್ಟು ಮ್ಯಾಚ್ ಆಡಿದ್ದಾರೆ.!
1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ಟೀಮ್ನಲ್ಲಿದ್ದರು
ಈತ ದಶಕಗಳ ಕಾಲ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದ ಪ್ಲೇಯರ್. ಅದೆಷ್ಟೋ ಅವಿಸ್ಮರಣೀಯ ಗೆಲುವುಗಳ ರೂವಾರಿ ಕೂಡ ಹೌದು. ಆದ್ರೆ, ಈತನಿಗೆ ಒಂದೇ ಒಂದು ವಿಶ್ವಕಪ್ ಪಂದ್ಯವನ್ನ ಆಡುವ ಭಾಗ್ಯ ಸಿಗಲಿಲ್ಲ.
ವಿಶ್ವಕಪ್ ಮಹಾ ಸಮರದಲ್ಲಿ ತಂಡವನ್ನ ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗನ ಅಲ್ಟೀಮೇಟ್ ಡ್ರೀಮ್. ನಮ್ಮ ಟೀಮ್ ಇಂಡಿಯಾದ ವೆರಿ ವೆರಿ ಸ್ಪೆಷಲ್ ಆಟಗಾರ, ಹಲ ಸ್ಮರಣೀಯ ಗೆಲುವುಗಳ ರೂವಾರಿ, ಮಿಸ್ಟರ್ ಡಿಪೆಂಡೆಬೆಲ್ ವಿವಿಎಸ್ ಲಕ್ಷ್ಮಣ್ ಕನಸೂ ಇದೇ ಆಗಿತ್ತು. ಆದ್ರೆ, ಕನಸು ನನಸಾಗಲೇ ಇಲ್ಲ.
ಕರಿಯರ್ನಲ್ಲಿ 134 ಟೆಸ್ಟ್, 86 ಏಕದಿನ ಪಂದ್ಯಗಳಲ್ಲಿ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಪ್ರತಿನಿಧಿಸಿದ್ದಾರೆ. 1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಏಕದಿನ ವಿಶ್ವಕಪ್ ಆಡುವ ಭಾಗ್ಯ ಮಾತ್ರ ಸಿಗಲಿಲ್ಲ. 2003ರ ವಿಶ್ವಕಪ್ ಸಂದರ್ಭದಲ್ಲಿ ಲಕ್ಷ್ಮಣ್ಗೆ ಸ್ಥಾನ ಸಿಕ್ಕೇ ಸಿಗುತ್ತೆ ಎನ್ನಲಾಗಿತ್ತು. ಸ್ಲೋ ಬ್ಯಾಟಿಂಗ್ ಲಕ್ಷ್ಮಣ್ ಆಯ್ಕೆಗೆ ಅಡ್ಡಗಾಲಾಯ್ತಂತೆ.
ಹೀಗಾಗಿ ಲಕ್ಷ್ಮಣ್ ಬದಲು ದಿನೇಶ್ ಮೊಂಗಿಯಾಗೆ ಟೀಮ್ ಮ್ಯಾನೇಜ್ಮೆಂಟ್ ಮಣೆ ಹಾಕಿತು. ಆ ಬಳಿಕ ಬೇಸರಗೊಂಡ ಲಕ್ಷ್ಮಣ್ ಕ್ರಿಕೆಟ್ ಕರಿಯರ್ಗೆ ಫುಲ್ ಸ್ಟಾಫ್ ಇಡಲು ನಿರ್ಧರಿಸಿಬಿಟ್ಟಿದ್ರಂತೆ. ವಿಶ್ವಕಪ್ ಆಡದಿದ್ರೂ, ಉಳಿದಂತೆ ದೇಶಕ್ಕಾಗಿ ಆಡುತ್ತಿದ್ದೇನೆ ಎಂಬ ಹೆಮ್ಮೆಯ ಆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಲಕ್ಷ್ಮಣ್ ಈಗ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಮ್ ಇಂಡಿಯಾದ ವೆರಿ ವೆರಿ ಸ್ಪೆಷಲ್ ಹೈದರಾಬಾದ್ ಪ್ಲೇಯರ್
ದ್ರಾವಿಡ್, ಗಂಗೂಲಿ, ಸಚಿನ್ ಜೊತೆ ಸಾಕಷ್ಟು ಮ್ಯಾಚ್ ಆಡಿದ್ದಾರೆ.!
1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ಟೀಮ್ನಲ್ಲಿದ್ದರು
ಈತ ದಶಕಗಳ ಕಾಲ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದ ಪ್ಲೇಯರ್. ಅದೆಷ್ಟೋ ಅವಿಸ್ಮರಣೀಯ ಗೆಲುವುಗಳ ರೂವಾರಿ ಕೂಡ ಹೌದು. ಆದ್ರೆ, ಈತನಿಗೆ ಒಂದೇ ಒಂದು ವಿಶ್ವಕಪ್ ಪಂದ್ಯವನ್ನ ಆಡುವ ಭಾಗ್ಯ ಸಿಗಲಿಲ್ಲ.
ವಿಶ್ವಕಪ್ ಮಹಾ ಸಮರದಲ್ಲಿ ತಂಡವನ್ನ ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗನ ಅಲ್ಟೀಮೇಟ್ ಡ್ರೀಮ್. ನಮ್ಮ ಟೀಮ್ ಇಂಡಿಯಾದ ವೆರಿ ವೆರಿ ಸ್ಪೆಷಲ್ ಆಟಗಾರ, ಹಲ ಸ್ಮರಣೀಯ ಗೆಲುವುಗಳ ರೂವಾರಿ, ಮಿಸ್ಟರ್ ಡಿಪೆಂಡೆಬೆಲ್ ವಿವಿಎಸ್ ಲಕ್ಷ್ಮಣ್ ಕನಸೂ ಇದೇ ಆಗಿತ್ತು. ಆದ್ರೆ, ಕನಸು ನನಸಾಗಲೇ ಇಲ್ಲ.
ಕರಿಯರ್ನಲ್ಲಿ 134 ಟೆಸ್ಟ್, 86 ಏಕದಿನ ಪಂದ್ಯಗಳಲ್ಲಿ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಪ್ರತಿನಿಧಿಸಿದ್ದಾರೆ. 1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಏಕದಿನ ವಿಶ್ವಕಪ್ ಆಡುವ ಭಾಗ್ಯ ಮಾತ್ರ ಸಿಗಲಿಲ್ಲ. 2003ರ ವಿಶ್ವಕಪ್ ಸಂದರ್ಭದಲ್ಲಿ ಲಕ್ಷ್ಮಣ್ಗೆ ಸ್ಥಾನ ಸಿಕ್ಕೇ ಸಿಗುತ್ತೆ ಎನ್ನಲಾಗಿತ್ತು. ಸ್ಲೋ ಬ್ಯಾಟಿಂಗ್ ಲಕ್ಷ್ಮಣ್ ಆಯ್ಕೆಗೆ ಅಡ್ಡಗಾಲಾಯ್ತಂತೆ.
ಹೀಗಾಗಿ ಲಕ್ಷ್ಮಣ್ ಬದಲು ದಿನೇಶ್ ಮೊಂಗಿಯಾಗೆ ಟೀಮ್ ಮ್ಯಾನೇಜ್ಮೆಂಟ್ ಮಣೆ ಹಾಕಿತು. ಆ ಬಳಿಕ ಬೇಸರಗೊಂಡ ಲಕ್ಷ್ಮಣ್ ಕ್ರಿಕೆಟ್ ಕರಿಯರ್ಗೆ ಫುಲ್ ಸ್ಟಾಫ್ ಇಡಲು ನಿರ್ಧರಿಸಿಬಿಟ್ಟಿದ್ರಂತೆ. ವಿಶ್ವಕಪ್ ಆಡದಿದ್ರೂ, ಉಳಿದಂತೆ ದೇಶಕ್ಕಾಗಿ ಆಡುತ್ತಿದ್ದೇನೆ ಎಂಬ ಹೆಮ್ಮೆಯ ಆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಲಕ್ಷ್ಮಣ್ ಈಗ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ