ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಸವಾಲ್
ಸ್ಟಾರ್ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್?
ಟೀಮ್ ಸೆಲೆಕ್ಷನ್ ವಿಚಾರದಲ್ಲಿ ದ್ರಾವಿಡ್ಗಿಲ್ಲ ಅಧಿಕಾರ?
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ರ ಸಾಮರ್ಥ್ಯದ ಬಗ್ಗೆ ಜೋರು ಚರ್ಚೆ ನಡೀತಿದೆ. ಸ್ಟಾರ್ ಆಟಗಾರರ ಮುಂದೆ ದ್ರಾವಿಡ್ ಆಟ ನಡೆಯಲ್ಲ ಅನ್ನೋ ವಾದ ಬಹುತೇಕರದ್ದಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭರಾಟೆ ಜೋರಾಗಿದೆ. ಮೊದಲ 2 ದಿನದ ಆಟ ಅಂತ್ಯ ಕಂಡಿದ್ದು ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಇದರ ನಡುವೆಯೇ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ರ ಬಗ್ಗೆ ದೊಡ್ಡ ಡಿಬೇಟ್ ನಡೀತಿದೆ. ಲೆಜೆಂಡ್ ಆಟಗಾರನ ಸಾಮರ್ಥ್ಯವನ್ನೇ ಹಲವರು ಪ್ರಶ್ನೆ ಮಾಡ್ತಿದ್ದಾರೆ.
ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಸವಾಲ್
ರಾಹುಲ್ ದ್ರಾವಿಡ್, ಕ್ರಿಕೆಟ್ ಲೋಕ ಕಂಡ ಗ್ರೆಟೆಸ್ಟ್ ಬ್ಯಾಟ್ಸ್ಮನ್. ವಿಶ್ವದ ಮೂಲೆ ಮೂಲೆ ರನ್ಗಳಿಸಿ ಬೌಲರ್ಗಳ ನಿದ್ದೆಗೆಡಿಸಿರೋ ಸರದಾರ. ದ್ರಾವಿಡ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವಂತೇ ಇಲ್ಲ. ಬ್ಯಾಟ್ಸ್ಮನ್ ಆಗಿ ಯಶಸ್ಸಿನ ಉತ್ತುಂಗಕ್ಕೇರಿದ ದ್ರಾವಿಡ್, ಜೂನಿಯರ್ ಲೆವೆಲ್ನಲ್ಲಿ ಕೋಚ್ ಆಗಿಯೂ ಸಕ್ಸಸ್ ಕಂಡರು. ಆದ್ರೆ ಈಗ ಟೀಮ್ ಇಂಡಿಯಾ ಕೋಚ್ ಆಗಿ ಸಕ್ಸಸ್ ಕಂಡರಾ ಅನ್ನೋ ಪ್ರಶ್ನೆ ಎದುರಾಗಿದೆ.
ಸ್ಟಾರ್ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್?
ಟೀಮ್ ಇಂಡಿಯಾದಲ್ಲಿ ಇರೋ ಬಹುತೇಕ ಆಟಗಾರರು ಸ್ಟಾರ್ಸ್. ಇವ್ರ ಮುಂದೆಯೇ ದ್ರಾವಿಡ್ ಮಂಕಾದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಅಂಡರ್-19 ಕೋಚ್ ದ್ರಾವಿಡ್ಗೂ ಈಗಿರೋ ದ್ರಾವಿಡ್ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ ಅಂತಿದ್ದಾರೆ ಫ್ಯಾನ್ಸ್. ಹೆಡ್ ಕೋಚ್ ಅಂದ್ರೆ ಒಂದರ್ಥದಲ್ಲಿ ಹೆಡ್ಮೇಷ್ಟ್ರು ಇದ್ದಂತೆ. ಹೀಗಾಗಿಯೇ ಈ ಸ್ಥಾನಕ್ಕೆ ದ್ರಾವಿಡ್ ಬೆಸ್ಟ್ ಆಯ್ಕೆ ಅಂತಾ ಎಲ್ರೂ ಭಾವಿಸಿದ್ರು. ಆದ್ರೆ ಆಗಿದ್ದೇ ಬೇರೆ!
ಟೀಮ್ ಸೆಲೆಕ್ಷನ್ ವಿಚಾರದಲ್ಲಿ ದ್ರಾವಿಡ್ಗಿಲ್ಲ ಅಧಿಕಾರ?
ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ನಾಯಕನಷ್ಟೇ, ಕೋಚ್ಗೂ ಜವಾಬ್ದಾರಿಯಿರುತ್ತೆ. ಆದ್ರೆ ಈ ವಿಚಾರದಲ್ಲಿ ದ್ರಾವಿಡ್ಗೆ ಅಧಿಕಾರವೇ ಇಲ್ಲ ಅನ್ನೋ ಪ್ರಶ್ನೆ ಎಲ್ಲರೂ ಕಾಡ್ತಿದೆ. ಇದಕ್ಕೆ ತಾಜಾ ಉದಾಹರಣೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ. ಈ ಪ್ರತಿಷ್ಠೆಯ ಕದನದಲ್ಲಿ ಅಶ್ವಿನ್ರನ್ನು ಕಣಕ್ಕಿಳಿಸೋ ಇರಾದೆ ಕೋಚ್ ದ್ರಾವಿಡ್ದಾಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ. ಕ್ಯಾಪ್ಟನ್ ರೋಹಿತ್ ನಿರ್ಧಾರದ ಮುಂದೆ ದ್ರಾವಿಡ್ ಹಿಂದೆ ಬಿದ್ರು.
ನಾಗ್ಪುರ ಟೆಸ್ಟ್ನಲ್ಲೂ ಕೋಚ್ ವಿರುದ್ಧ ಕ್ಯಾಪ್ಟನ್ಗೆ ಜಯ
ಈ ಹಿಂದೆ ಆಸ್ಟ್ರೇಲಿಯಾ ಭಾರತದ ಪ್ರವಾಸಕ್ಕೆ ಬಂದಾಗ್ಲೂ ಟೀಮ್ ಸೆಲೆಕ್ಷನ್ ದೊಡ್ಡ ಡಿಬೇಟ್ ಆಗಿತ್ತು. ಸೂರ್ಯ ಕುಮಾರ್ ಯಾದವ್ VS ಶುಭ್ಮನ್ ಗಿಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಅನ್ನೋದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಆಗ ತವರಿನ ಸೂರ್ಯ ಕುಮಾರ್ ಬೆಂಬಲಕ್ಕೆ ರೋಹಿತ್ ಶರ್ಮಾ ನಿಂತಿದ್ರು. ಇನ್ನೊಂದೆಡೆ ಶಿಷ್ಯ ಶುಭ್ಮನ್ ಗಿಲ್ ಪರ ದ್ರಾವಿಡ್ ಬ್ಯಾಟಿಂಗ್ ಮಾಡ್ತಿದ್ರು. ಆದ್ರೆ ಕೊನೆಗೆ ಚಾನ್ಸ್ ಸಿಕ್ಕಿದ್ದು ಟೆಸ್ಟ್ ಕ್ರಿಕಟ್ಗೆ ಫಿಟ್ ಆಗೋದೆ ಇಲ್ಲ ಅನ್ನೋ ಸೂರ್ಯ ಕುಮಾರ್ ಯಾದವ್ಗೆ.
ಜೂನಿಯರ್ ಕ್ರಿಕೆಟ್ನಲ್ಲಿದ್ದಾಗ ದ್ರಾವಿಡ್ ಬಾಸ್
ಟೀಮ್ ಇಂಡಿಯಾ ಕೋಚ್ ಆಗೋಕೂ ಮುನ್ನ NCA ಡೈರೆಕ್ಟರ್ ಆಗಿದ್ದ ದ್ರಾವಿಡ್, ಜೂನಿಯರ್ ಲೆವೆಲ್ನ ಕ್ರಿಕೆಟರ್ಗಳನ್ನು ಟ್ರೈನ್ ಮಾಡ್ತಿದ್ರು. ಆಗ ಕೋಚಿಂಗ್ ಸ್ಟೈಲ್ ಬೇರೆನೇ ಇತ್ತು. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲೂ ಯಶಸ್ಸು ಸಾಧಿಸಿದ್ರು. ಈ ಕಾರಣದಿಂದಲೇ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗ್ತಾರೆ ಅಂದಾಗ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಆದ್ರೆ ಟೀಮ್ ಇಂಡಿಯಾ ಕೋಚ್ ಆದ ಮೇಲೆ ಆಗಿದ್ದೇ ಬೇರೆ.
ಕೇವಲ ಕ್ಯಾಪ್ಟನ್ ರೋಹಿತ್ ಶರ್ಮಾ ವಿಚಾರದಲ್ಲಿ ಮಾತ್ರವಲ್ಲ. ಉಳಿದ ಸೀನಿಯರ್ ಆಟಗಾರರ ವಿಚಾರದಲ್ಲೂ ದ್ರಾವಿಡ್ ಖಡಕ್ನೆಸ್ ಮಾಯವಾಗಿದ್ದು ಕಂಡುಬಂದಿದೆ. ಅದರ ಜೊತೆಗೆ ಏಷ್ಯಾಕಪ್ ಟೂರ್ನಿ, ಟಿ20 ವಿಶ್ವಕಪ್ ಟೂರ್ನಿಯಂತಹ ಬಿಗ್ ಟೂರ್ನಮೆಂಟ್ಗಳ ಸೋಲುಗಳು ಕೂಡ ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವಂತೆ ಮಾಡಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಸವಾಲ್
ಸ್ಟಾರ್ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್?
ಟೀಮ್ ಸೆಲೆಕ್ಷನ್ ವಿಚಾರದಲ್ಲಿ ದ್ರಾವಿಡ್ಗಿಲ್ಲ ಅಧಿಕಾರ?
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ರ ಸಾಮರ್ಥ್ಯದ ಬಗ್ಗೆ ಜೋರು ಚರ್ಚೆ ನಡೀತಿದೆ. ಸ್ಟಾರ್ ಆಟಗಾರರ ಮುಂದೆ ದ್ರಾವಿಡ್ ಆಟ ನಡೆಯಲ್ಲ ಅನ್ನೋ ವಾದ ಬಹುತೇಕರದ್ದಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭರಾಟೆ ಜೋರಾಗಿದೆ. ಮೊದಲ 2 ದಿನದ ಆಟ ಅಂತ್ಯ ಕಂಡಿದ್ದು ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಇದರ ನಡುವೆಯೇ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ರ ಬಗ್ಗೆ ದೊಡ್ಡ ಡಿಬೇಟ್ ನಡೀತಿದೆ. ಲೆಜೆಂಡ್ ಆಟಗಾರನ ಸಾಮರ್ಥ್ಯವನ್ನೇ ಹಲವರು ಪ್ರಶ್ನೆ ಮಾಡ್ತಿದ್ದಾರೆ.
ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಸವಾಲ್
ರಾಹುಲ್ ದ್ರಾವಿಡ್, ಕ್ರಿಕೆಟ್ ಲೋಕ ಕಂಡ ಗ್ರೆಟೆಸ್ಟ್ ಬ್ಯಾಟ್ಸ್ಮನ್. ವಿಶ್ವದ ಮೂಲೆ ಮೂಲೆ ರನ್ಗಳಿಸಿ ಬೌಲರ್ಗಳ ನಿದ್ದೆಗೆಡಿಸಿರೋ ಸರದಾರ. ದ್ರಾವಿಡ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವಂತೇ ಇಲ್ಲ. ಬ್ಯಾಟ್ಸ್ಮನ್ ಆಗಿ ಯಶಸ್ಸಿನ ಉತ್ತುಂಗಕ್ಕೇರಿದ ದ್ರಾವಿಡ್, ಜೂನಿಯರ್ ಲೆವೆಲ್ನಲ್ಲಿ ಕೋಚ್ ಆಗಿಯೂ ಸಕ್ಸಸ್ ಕಂಡರು. ಆದ್ರೆ ಈಗ ಟೀಮ್ ಇಂಡಿಯಾ ಕೋಚ್ ಆಗಿ ಸಕ್ಸಸ್ ಕಂಡರಾ ಅನ್ನೋ ಪ್ರಶ್ನೆ ಎದುರಾಗಿದೆ.
ಸ್ಟಾರ್ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್?
ಟೀಮ್ ಇಂಡಿಯಾದಲ್ಲಿ ಇರೋ ಬಹುತೇಕ ಆಟಗಾರರು ಸ್ಟಾರ್ಸ್. ಇವ್ರ ಮುಂದೆಯೇ ದ್ರಾವಿಡ್ ಮಂಕಾದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಅಂಡರ್-19 ಕೋಚ್ ದ್ರಾವಿಡ್ಗೂ ಈಗಿರೋ ದ್ರಾವಿಡ್ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ ಅಂತಿದ್ದಾರೆ ಫ್ಯಾನ್ಸ್. ಹೆಡ್ ಕೋಚ್ ಅಂದ್ರೆ ಒಂದರ್ಥದಲ್ಲಿ ಹೆಡ್ಮೇಷ್ಟ್ರು ಇದ್ದಂತೆ. ಹೀಗಾಗಿಯೇ ಈ ಸ್ಥಾನಕ್ಕೆ ದ್ರಾವಿಡ್ ಬೆಸ್ಟ್ ಆಯ್ಕೆ ಅಂತಾ ಎಲ್ರೂ ಭಾವಿಸಿದ್ರು. ಆದ್ರೆ ಆಗಿದ್ದೇ ಬೇರೆ!
ಟೀಮ್ ಸೆಲೆಕ್ಷನ್ ವಿಚಾರದಲ್ಲಿ ದ್ರಾವಿಡ್ಗಿಲ್ಲ ಅಧಿಕಾರ?
ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ನಾಯಕನಷ್ಟೇ, ಕೋಚ್ಗೂ ಜವಾಬ್ದಾರಿಯಿರುತ್ತೆ. ಆದ್ರೆ ಈ ವಿಚಾರದಲ್ಲಿ ದ್ರಾವಿಡ್ಗೆ ಅಧಿಕಾರವೇ ಇಲ್ಲ ಅನ್ನೋ ಪ್ರಶ್ನೆ ಎಲ್ಲರೂ ಕಾಡ್ತಿದೆ. ಇದಕ್ಕೆ ತಾಜಾ ಉದಾಹರಣೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ. ಈ ಪ್ರತಿಷ್ಠೆಯ ಕದನದಲ್ಲಿ ಅಶ್ವಿನ್ರನ್ನು ಕಣಕ್ಕಿಳಿಸೋ ಇರಾದೆ ಕೋಚ್ ದ್ರಾವಿಡ್ದಾಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ. ಕ್ಯಾಪ್ಟನ್ ರೋಹಿತ್ ನಿರ್ಧಾರದ ಮುಂದೆ ದ್ರಾವಿಡ್ ಹಿಂದೆ ಬಿದ್ರು.
ನಾಗ್ಪುರ ಟೆಸ್ಟ್ನಲ್ಲೂ ಕೋಚ್ ವಿರುದ್ಧ ಕ್ಯಾಪ್ಟನ್ಗೆ ಜಯ
ಈ ಹಿಂದೆ ಆಸ್ಟ್ರೇಲಿಯಾ ಭಾರತದ ಪ್ರವಾಸಕ್ಕೆ ಬಂದಾಗ್ಲೂ ಟೀಮ್ ಸೆಲೆಕ್ಷನ್ ದೊಡ್ಡ ಡಿಬೇಟ್ ಆಗಿತ್ತು. ಸೂರ್ಯ ಕುಮಾರ್ ಯಾದವ್ VS ಶುಭ್ಮನ್ ಗಿಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಅನ್ನೋದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಆಗ ತವರಿನ ಸೂರ್ಯ ಕುಮಾರ್ ಬೆಂಬಲಕ್ಕೆ ರೋಹಿತ್ ಶರ್ಮಾ ನಿಂತಿದ್ರು. ಇನ್ನೊಂದೆಡೆ ಶಿಷ್ಯ ಶುಭ್ಮನ್ ಗಿಲ್ ಪರ ದ್ರಾವಿಡ್ ಬ್ಯಾಟಿಂಗ್ ಮಾಡ್ತಿದ್ರು. ಆದ್ರೆ ಕೊನೆಗೆ ಚಾನ್ಸ್ ಸಿಕ್ಕಿದ್ದು ಟೆಸ್ಟ್ ಕ್ರಿಕಟ್ಗೆ ಫಿಟ್ ಆಗೋದೆ ಇಲ್ಲ ಅನ್ನೋ ಸೂರ್ಯ ಕುಮಾರ್ ಯಾದವ್ಗೆ.
ಜೂನಿಯರ್ ಕ್ರಿಕೆಟ್ನಲ್ಲಿದ್ದಾಗ ದ್ರಾವಿಡ್ ಬಾಸ್
ಟೀಮ್ ಇಂಡಿಯಾ ಕೋಚ್ ಆಗೋಕೂ ಮುನ್ನ NCA ಡೈರೆಕ್ಟರ್ ಆಗಿದ್ದ ದ್ರಾವಿಡ್, ಜೂನಿಯರ್ ಲೆವೆಲ್ನ ಕ್ರಿಕೆಟರ್ಗಳನ್ನು ಟ್ರೈನ್ ಮಾಡ್ತಿದ್ರು. ಆಗ ಕೋಚಿಂಗ್ ಸ್ಟೈಲ್ ಬೇರೆನೇ ಇತ್ತು. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲೂ ಯಶಸ್ಸು ಸಾಧಿಸಿದ್ರು. ಈ ಕಾರಣದಿಂದಲೇ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗ್ತಾರೆ ಅಂದಾಗ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಆದ್ರೆ ಟೀಮ್ ಇಂಡಿಯಾ ಕೋಚ್ ಆದ ಮೇಲೆ ಆಗಿದ್ದೇ ಬೇರೆ.
ಕೇವಲ ಕ್ಯಾಪ್ಟನ್ ರೋಹಿತ್ ಶರ್ಮಾ ವಿಚಾರದಲ್ಲಿ ಮಾತ್ರವಲ್ಲ. ಉಳಿದ ಸೀನಿಯರ್ ಆಟಗಾರರ ವಿಚಾರದಲ್ಲೂ ದ್ರಾವಿಡ್ ಖಡಕ್ನೆಸ್ ಮಾಯವಾಗಿದ್ದು ಕಂಡುಬಂದಿದೆ. ಅದರ ಜೊತೆಗೆ ಏಷ್ಯಾಕಪ್ ಟೂರ್ನಿ, ಟಿ20 ವಿಶ್ವಕಪ್ ಟೂರ್ನಿಯಂತಹ ಬಿಗ್ ಟೂರ್ನಮೆಂಟ್ಗಳ ಸೋಲುಗಳು ಕೂಡ ಕೋಚ್ ದ್ರಾವಿಡ್ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವಂತೆ ಮಾಡಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್