ಕೆರಿಬಿಯನ್ ಟೂರ್ನಿಯ ವೇಳೆ ತಂಡದಲ್ಲಿ ಪ್ರಯೋಗ
ಹಿರಿಯ ಆಟಗಾರರಿಗೆ ರೆಸ್ಟ್, ಯುವ ಆಟಗಾರರಿಗೆ ಚಾನ್ಸ್
ಟೀಕೆಗಳಿಗೆ ಉತ್ತರ ನೀಡಿದ ಆಲ್ರೌಂಡರ್ ಜಡೇಜಾ..!
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಂ ಇಂಡಿಯಾದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ತವರಿನಲ್ಲಿ ನಡೆಯುವ 2023 ವಿಶ್ವಕಪ್ ಪಂದ್ಯಗಳು ಹಾಗೂ ಏಷ್ಯಕಪ್ಗೆ ಬಲಿಷ್ಠ ಟೀಮ್ ತಯಾರು ಮಾಡಬೇಕಿದೆ. ಹೀಗಾಗಿಯೇ ರೋಹಿತ್, ಕೊಹ್ಲಿ, ಶಮಿ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಆಲ್ರೌಂಡರ್ ಜಡೇಜಾ ಮಾತನಾಡಿದ್ದಾರೆ.
ತಂಡದಲ್ಲಿ ಬದಲಾವಣೆಗಳ ಬಗ್ಗೆ ಕೆಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ಉತ್ತರ ನೀಡಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್ಗಿಂತ ಮೊದಲು ಪ್ರಯೋಗ ಮಾಡಲು ಹಾಗೂ ಕಾಂಬಿನೇಷನ್ ಬದಲಾಯಿಸಲು ಇರುವ ಏಕೈಕ ಸರಣಿ ಇದಾಗಿದೆ. ಇದೇ ಕಾರಣಕ್ಕೆ ತಂಡದಲ್ಲಿ ಪ್ರಯೋಗ ನಡೆಸಲಾಗ್ತಿದೆ. ವಿಶ್ವಕಪ್ ಗೆಲ್ಲಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದು ಜಡೇಜಾ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೆರಿಬಿಯನ್ ಟೂರ್ನಿಯ ವೇಳೆ ತಂಡದಲ್ಲಿ ಪ್ರಯೋಗ
ಹಿರಿಯ ಆಟಗಾರರಿಗೆ ರೆಸ್ಟ್, ಯುವ ಆಟಗಾರರಿಗೆ ಚಾನ್ಸ್
ಟೀಕೆಗಳಿಗೆ ಉತ್ತರ ನೀಡಿದ ಆಲ್ರೌಂಡರ್ ಜಡೇಜಾ..!
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಂ ಇಂಡಿಯಾದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ತವರಿನಲ್ಲಿ ನಡೆಯುವ 2023 ವಿಶ್ವಕಪ್ ಪಂದ್ಯಗಳು ಹಾಗೂ ಏಷ್ಯಕಪ್ಗೆ ಬಲಿಷ್ಠ ಟೀಮ್ ತಯಾರು ಮಾಡಬೇಕಿದೆ. ಹೀಗಾಗಿಯೇ ರೋಹಿತ್, ಕೊಹ್ಲಿ, ಶಮಿ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಆಲ್ರೌಂಡರ್ ಜಡೇಜಾ ಮಾತನಾಡಿದ್ದಾರೆ.
ತಂಡದಲ್ಲಿ ಬದಲಾವಣೆಗಳ ಬಗ್ಗೆ ಕೆಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ಉತ್ತರ ನೀಡಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್ಗಿಂತ ಮೊದಲು ಪ್ರಯೋಗ ಮಾಡಲು ಹಾಗೂ ಕಾಂಬಿನೇಷನ್ ಬದಲಾಯಿಸಲು ಇರುವ ಏಕೈಕ ಸರಣಿ ಇದಾಗಿದೆ. ಇದೇ ಕಾರಣಕ್ಕೆ ತಂಡದಲ್ಲಿ ಪ್ರಯೋಗ ನಡೆಸಲಾಗ್ತಿದೆ. ವಿಶ್ವಕಪ್ ಗೆಲ್ಲಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದು ಜಡೇಜಾ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ