ಏಷ್ಯಾನ್ ಗೇಮ್ಸ್ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ
ಯುಎಸ್ ಓಪನ್ ಟೆನಿಸ್ ಪಂದ್ಯವನ್ನ ವೀಕ್ಷಿಸಿದ ಮಾಹಿ
ಇಂಗ್ಲೀಷ್ನ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ ರಾಜಸ್ಥಾನ್ ರಾಯಲ್ಸ್
ಜಿಮ್ನಲ್ಲಿ ಸೆಷನ್ನಲ್ಲಿ ಟೀಮ್ ಇಂಡಿಯಾ!
ಏಷ್ಯಾಕಪ್ನ ಸೂಪರ್-4ಗೆ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಭಾನುವಾರ ಬದ್ಧವೈರಿ ಪಾಕಿಸ್ತಾನ ಎದುರು ಸೆಣಸಾಡಲಿದೆ. ಸದ್ಯ ಮೂರು ದಿನಗಳ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರು, ಸೂಪರ್-4ನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಜಿಮ್ನಲ್ಲಿ ಸಖತ್ ವರ್ಕೌಟ್ ನಡೆಸಿದ್ದಾರೆ. ಮಳೆಯಿಂದಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಸೇರಿದಂತೆ ಇತರೆ ಆಟಗಾರರು ಜಿಮ್ನಲ್ಲಿ ಕಸರತ್ತು ನಡೆಸ್ತಿದ್ದಾರೆ. ಈ ವಿಡಿಯೋವನ್ನ ಬಿಸಿಸಿಐ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಏಷ್ಯಾನ್ ಗೇಮ್ಸ್ಗೆ ಋತುರಾಜ್ ಕಸರತ್ತು..!
ಏಷ್ಯಾನ್ ಗೇಮ್ಸ್ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 23ರಿಂದ ನಡೆಯಲಿರುವ ಚೈನಾದಲ್ಲಿ ನಡೆಯಲಿರುವ ಏಷ್ಯಾನ್ ಗೇಮ್ಸ್ನಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಟೀಮ್ ಇಂಡಿಯಾ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ ನಾಯಕ ಋತುರಾಜ್ ಗಾಯಕ್ವಾಡ್ ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ. ಅಕ್ಟೋಬರ್ 5ರಿಂದ ಟೀಮ್ ಇಂಡಿಯಾ ಅಭಿಯಾನ ಆರಂಭವಾಗಲಿದ್ದು, ಅಫ್ಘಾನ್ ಅಥವಾ ಭೂತಾನ್ ಎದುರು ಸೆಣಸಾಡುವ ಸಾಧ್ಯತೆ ಇದೆ.
ಯುಸ್ ಓಪನ್ ಟೆನಿಸ್ ವೀಕ್ಷಿಸಿದ ಧೋನಿ
ಐಪಿಎಲ್ ಬಿಡುವಿನ ವೇಳೆಯನ್ನ ಎಂಎಸ್ ಧೋನಿ ಸಖತ್ ಎಂಜಾಯ ಮಾಡುತ್ತಿದ್ದಾರೆ. ಯುಎಸ್ ಓಪನ್ ಟೆನಿಸ್ ಪಂದ್ಯವನ್ನ ಮಾಹಿ ವೀಕ್ಷಿಸಿದ್ದಾರೆ.ಕಾರ್ಲೋಸ್ ಅಲ್ಕರಾಜ್ ಹಾಗೂ ಅಲೆಕ್ಸಾಂಡರ್ ಜ್ವೆರೆಲ್ ನಡುವಿನ ಸೆಮಿಫೈನಲ್ ಪಂದ್ಯವನ್ನ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ. ಈ ವಿಡಿಯೋ ಟ್ವಿಟ್ ಮಾಡಿರುವ ಸೋನಿ ಸ್ಪೋರ್ಟ್ಸ್ ನಮ್ಮಂತೆ ಧೋನಿ ಕೂಡ ಟೆನಿಸ್ ಅಭಿಮಾನಿ ಎಂದು ಬರೆದುಕೊಂಡಿದೆ. ಧೋನಿ ಸಾಕ್ಷಿಯಾದ ಈ ಪಂದ್ಯವನ್ನ ಕಾರ್ಲೋಸ್ ಅಲ್ಕರಾಜ್ 6-3,6-4 ರಿಂದ ಗೆದ್ದು ಬೀಗಿದರು.
ಕೌಂಟಿ ತಂಡದ ಖರೀದಿಗೆ ಮುಂದಾದ ಆರ್ಆರ್..!
ಐಪಿಎಲ್ನ ಪ್ರಖ್ಯಾತ ರಾಜಸ್ಥಾನ್ ರಾಯಲ್ಸ್ ಇಂಗ್ಲೀಷ್ನ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದೆ. ಈಗಾಗಲೇ ಕೆರಿಬಿಯನ್ ಪ್ರಿಮಿಯರ್ ಲೀಗ್, ಸೌತ್ ಆಫ್ರಿಕನ್ ಟಿ20 ಲೀಗ್ಗಳಲ್ಲಿ ತಂಡವನ್ನ ಖರೀದಿಸಿರುವ ರಾಜಸ್ಥಾನ್ ರಾಯಲ್ಸ್, ಈಗ ಸಂಕಷ್ಟಕ್ಕೆ ಸಿಲುಕಿರುವ ಪ್ರಸಿದ್ಧ ಕೌಂಟಿ ಕ್ರಿಕೆಟ್ ಕ್ಲಬ್ ಆಗಿರುವ ಯಾರ್ಕ್ಶೇರ್ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 260 ಕೋಟಿ ರೂಪಾಯಿ ಆಫರ್ ನೀಡಿರುವ ಬಗ್ಗೆ ವರದಿಯಾಗಿದೆ.
ಸೂಪರ್ ಓವರ್ನಲ್ಲಿ ಭುವಿ ಸೂಪರ್ ಬೌಲಿಂಗ್
ಟೀಮ್ ಇಂಡಿಯಾದಿಂದ ಹೊರಬಿದ್ದಿರೋ ಭುವನೇಶ್ವರ್ ಕುಮಾರ್ ಯುಪಿ ಟಿ20 ಲೀಗ್ನಲ್ಲಿ ಮಿಂಚಿನ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ನೋಯ್ಡಾ ಸೂಪರ್ ಕಿಂಗ್ಸ್-ಕಾಶಿ ರುದ್ರಸ್ ನಡುವಿನ ನಿಗದಿತ ಓವರ್ ಪದ್ಯ ಟೈ ಆಗಿತ್ತು. ಸೂಪರ್ ಓವರ್ನಲ್ಲಿ ನೋಯ್ಡಾ ತಂಡ ಎದುರಾಳಿಗೆ 20 ರನ್ ಗುರಿ ನೀಡಿತ್ತು. ಭುವನೇಶ್ವರ್ ಕುಮಾರ್ ಸೂಪರ್ ಬೌಲಿಂಗ್ ಮಾಡಿದ್ರು. 6 ಎಸೆತದಲ್ಲಿ ಬರೀ 11 ರನ್ ಬಿಟ್ಟು ಕೊಟ್ಟು ಗೆಲುವಿನ ರೂವಾರಿಯಾದ್ರು. ಆ ಮೂಲಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.
ಅಂಪೈರ್ ನಿರ್ಣಯ ಕಂಡು ತಬ್ಬಿಬ್ಬಾದ ಬ್ಯಾಟ್ಸ್ಮನ್..!
ಕ್ರಿಕೆಟ್ ಆಟ ಆಗಾಗ ಫನ್ನಿ ಮೂಮಿಂಟ್ಗಳಿಗೆ ಸಾಕ್ಷಿಯಾಗುತ್ತದೆ. ಅಂಪೈರ್ ನಿರ್ಣಯ ಕಂಡು ಬ್ಯಾಟ್ಸ್ಮನ್ ಒಬ್ಬ ತಬ್ಬಿಬ್ಬಾದ ಘಟನೆ ನಡೆದಿದೆ. ಬ್ಯಾಟ್ಸ್ಮನ್ ಪ್ಯಾಡ್ಗೆ ಬಡಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರುತ್ತೆ. ಬೌಲರ್ ಹಾಗೂ ಕೀಪರ್ ಔಟ್ ಎಂದು ಅಪೀಲ್ ಮಾಡ್ತಾರೆ. ಆರಂಭದಲ್ಲಿ ಅಂಪೈರ್ ಏನೂ ಪ್ರತಿಕ್ರಿಯಿಸದೇ ಸುಮ್ಮನಾಗ್ತಾರೆ. ಇನ್ನೇನು ಬೌಲರ್ ಚೆಂಡಿಡಿದು ಮತ್ತೆ ಬೌಲಿಂಗ್ ಮಾಡ್ಬೇಕು ಅನ್ನುವಷ್ಟರಲ್ಲಿ ಅಂಪೈರ್ ಔಟ್ ಎಂದು ತೀರ್ಪು ನೀಡ್ತಾರೆ. ಅಂಪೈರ್ ನಿರ್ಧಾರ ಕಂಡು ಬ್ಯಾಟ್ಸ್ಮನ್ ಒಂದು ಕ್ಷಣ ಶಾಕ್ ಆಗ್ತಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಏಷ್ಯಾನ್ ಗೇಮ್ಸ್ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ
ಯುಎಸ್ ಓಪನ್ ಟೆನಿಸ್ ಪಂದ್ಯವನ್ನ ವೀಕ್ಷಿಸಿದ ಮಾಹಿ
ಇಂಗ್ಲೀಷ್ನ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದ ರಾಜಸ್ಥಾನ್ ರಾಯಲ್ಸ್
ಜಿಮ್ನಲ್ಲಿ ಸೆಷನ್ನಲ್ಲಿ ಟೀಮ್ ಇಂಡಿಯಾ!
ಏಷ್ಯಾಕಪ್ನ ಸೂಪರ್-4ಗೆ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಭಾನುವಾರ ಬದ್ಧವೈರಿ ಪಾಕಿಸ್ತಾನ ಎದುರು ಸೆಣಸಾಡಲಿದೆ. ಸದ್ಯ ಮೂರು ದಿನಗಳ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರು, ಸೂಪರ್-4ನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಜಿಮ್ನಲ್ಲಿ ಸಖತ್ ವರ್ಕೌಟ್ ನಡೆಸಿದ್ದಾರೆ. ಮಳೆಯಿಂದಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಸೇರಿದಂತೆ ಇತರೆ ಆಟಗಾರರು ಜಿಮ್ನಲ್ಲಿ ಕಸರತ್ತು ನಡೆಸ್ತಿದ್ದಾರೆ. ಈ ವಿಡಿಯೋವನ್ನ ಬಿಸಿಸಿಐ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಏಷ್ಯಾನ್ ಗೇಮ್ಸ್ಗೆ ಋತುರಾಜ್ ಕಸರತ್ತು..!
ಏಷ್ಯಾನ್ ಗೇಮ್ಸ್ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 23ರಿಂದ ನಡೆಯಲಿರುವ ಚೈನಾದಲ್ಲಿ ನಡೆಯಲಿರುವ ಏಷ್ಯಾನ್ ಗೇಮ್ಸ್ನಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಟೀಮ್ ಇಂಡಿಯಾ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ ನಾಯಕ ಋತುರಾಜ್ ಗಾಯಕ್ವಾಡ್ ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ. ಅಕ್ಟೋಬರ್ 5ರಿಂದ ಟೀಮ್ ಇಂಡಿಯಾ ಅಭಿಯಾನ ಆರಂಭವಾಗಲಿದ್ದು, ಅಫ್ಘಾನ್ ಅಥವಾ ಭೂತಾನ್ ಎದುರು ಸೆಣಸಾಡುವ ಸಾಧ್ಯತೆ ಇದೆ.
ಯುಸ್ ಓಪನ್ ಟೆನಿಸ್ ವೀಕ್ಷಿಸಿದ ಧೋನಿ
ಐಪಿಎಲ್ ಬಿಡುವಿನ ವೇಳೆಯನ್ನ ಎಂಎಸ್ ಧೋನಿ ಸಖತ್ ಎಂಜಾಯ ಮಾಡುತ್ತಿದ್ದಾರೆ. ಯುಎಸ್ ಓಪನ್ ಟೆನಿಸ್ ಪಂದ್ಯವನ್ನ ಮಾಹಿ ವೀಕ್ಷಿಸಿದ್ದಾರೆ.ಕಾರ್ಲೋಸ್ ಅಲ್ಕರಾಜ್ ಹಾಗೂ ಅಲೆಕ್ಸಾಂಡರ್ ಜ್ವೆರೆಲ್ ನಡುವಿನ ಸೆಮಿಫೈನಲ್ ಪಂದ್ಯವನ್ನ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ. ಈ ವಿಡಿಯೋ ಟ್ವಿಟ್ ಮಾಡಿರುವ ಸೋನಿ ಸ್ಪೋರ್ಟ್ಸ್ ನಮ್ಮಂತೆ ಧೋನಿ ಕೂಡ ಟೆನಿಸ್ ಅಭಿಮಾನಿ ಎಂದು ಬರೆದುಕೊಂಡಿದೆ. ಧೋನಿ ಸಾಕ್ಷಿಯಾದ ಈ ಪಂದ್ಯವನ್ನ ಕಾರ್ಲೋಸ್ ಅಲ್ಕರಾಜ್ 6-3,6-4 ರಿಂದ ಗೆದ್ದು ಬೀಗಿದರು.
ಕೌಂಟಿ ತಂಡದ ಖರೀದಿಗೆ ಮುಂದಾದ ಆರ್ಆರ್..!
ಐಪಿಎಲ್ನ ಪ್ರಖ್ಯಾತ ರಾಜಸ್ಥಾನ್ ರಾಯಲ್ಸ್ ಇಂಗ್ಲೀಷ್ನ ಕೌಂಟಿ ಕ್ರಿಕೆಟ್ನತ್ತ ಮುಖ ಮಾಡಿದೆ. ಈಗಾಗಲೇ ಕೆರಿಬಿಯನ್ ಪ್ರಿಮಿಯರ್ ಲೀಗ್, ಸೌತ್ ಆಫ್ರಿಕನ್ ಟಿ20 ಲೀಗ್ಗಳಲ್ಲಿ ತಂಡವನ್ನ ಖರೀದಿಸಿರುವ ರಾಜಸ್ಥಾನ್ ರಾಯಲ್ಸ್, ಈಗ ಸಂಕಷ್ಟಕ್ಕೆ ಸಿಲುಕಿರುವ ಪ್ರಸಿದ್ಧ ಕೌಂಟಿ ಕ್ರಿಕೆಟ್ ಕ್ಲಬ್ ಆಗಿರುವ ಯಾರ್ಕ್ಶೇರ್ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 260 ಕೋಟಿ ರೂಪಾಯಿ ಆಫರ್ ನೀಡಿರುವ ಬಗ್ಗೆ ವರದಿಯಾಗಿದೆ.
ಸೂಪರ್ ಓವರ್ನಲ್ಲಿ ಭುವಿ ಸೂಪರ್ ಬೌಲಿಂಗ್
ಟೀಮ್ ಇಂಡಿಯಾದಿಂದ ಹೊರಬಿದ್ದಿರೋ ಭುವನೇಶ್ವರ್ ಕುಮಾರ್ ಯುಪಿ ಟಿ20 ಲೀಗ್ನಲ್ಲಿ ಮಿಂಚಿನ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ನೋಯ್ಡಾ ಸೂಪರ್ ಕಿಂಗ್ಸ್-ಕಾಶಿ ರುದ್ರಸ್ ನಡುವಿನ ನಿಗದಿತ ಓವರ್ ಪದ್ಯ ಟೈ ಆಗಿತ್ತು. ಸೂಪರ್ ಓವರ್ನಲ್ಲಿ ನೋಯ್ಡಾ ತಂಡ ಎದುರಾಳಿಗೆ 20 ರನ್ ಗುರಿ ನೀಡಿತ್ತು. ಭುವನೇಶ್ವರ್ ಕುಮಾರ್ ಸೂಪರ್ ಬೌಲಿಂಗ್ ಮಾಡಿದ್ರು. 6 ಎಸೆತದಲ್ಲಿ ಬರೀ 11 ರನ್ ಬಿಟ್ಟು ಕೊಟ್ಟು ಗೆಲುವಿನ ರೂವಾರಿಯಾದ್ರು. ಆ ಮೂಲಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.
ಅಂಪೈರ್ ನಿರ್ಣಯ ಕಂಡು ತಬ್ಬಿಬ್ಬಾದ ಬ್ಯಾಟ್ಸ್ಮನ್..!
ಕ್ರಿಕೆಟ್ ಆಟ ಆಗಾಗ ಫನ್ನಿ ಮೂಮಿಂಟ್ಗಳಿಗೆ ಸಾಕ್ಷಿಯಾಗುತ್ತದೆ. ಅಂಪೈರ್ ನಿರ್ಣಯ ಕಂಡು ಬ್ಯಾಟ್ಸ್ಮನ್ ಒಬ್ಬ ತಬ್ಬಿಬ್ಬಾದ ಘಟನೆ ನಡೆದಿದೆ. ಬ್ಯಾಟ್ಸ್ಮನ್ ಪ್ಯಾಡ್ಗೆ ಬಡಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರುತ್ತೆ. ಬೌಲರ್ ಹಾಗೂ ಕೀಪರ್ ಔಟ್ ಎಂದು ಅಪೀಲ್ ಮಾಡ್ತಾರೆ. ಆರಂಭದಲ್ಲಿ ಅಂಪೈರ್ ಏನೂ ಪ್ರತಿಕ್ರಿಯಿಸದೇ ಸುಮ್ಮನಾಗ್ತಾರೆ. ಇನ್ನೇನು ಬೌಲರ್ ಚೆಂಡಿಡಿದು ಮತ್ತೆ ಬೌಲಿಂಗ್ ಮಾಡ್ಬೇಕು ಅನ್ನುವಷ್ಟರಲ್ಲಿ ಅಂಪೈರ್ ಔಟ್ ಎಂದು ತೀರ್ಪು ನೀಡ್ತಾರೆ. ಅಂಪೈರ್ ನಿರ್ಧಾರ ಕಂಡು ಬ್ಯಾಟ್ಸ್ಮನ್ ಒಂದು ಕ್ಷಣ ಶಾಕ್ ಆಗ್ತಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ