newsfirstkannada.com

ಆಸಿಸ್​​ ಸರಣಿಗೆ ಅಚ್ಚರಿ ತಂಡ.. ಇಬ್ಬರು ನಾಯಕರು.. ಅಗರ್ಕರ್ ಹೆಣೆದ ಸೂತ್ರವೇನು..?

Share :

19-09-2023

    ಯಾರಿಗೆಲ್ಲಾ ಜಾಕ್​​​ಪಾಟ್? ಯಾರಿಗೆ ಗೇಟ್​ಪಾಸ್?

    3ನೇ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ಸ್​ ಕಮ್​ಬ್ಯಾಕ್

    20 ತಿಂಗಳ ಬಳಿಕ ಅಶ್ವಿನ್​ಗೆ ತೆರೆದ ಬಾಗಿಲು

ಮುಂಬರೋ ಆಸ್ಟ್ರೇಲಿಯಾ ಏಕದಿನ ಸರಣಿಗೆ ಟಿಮ್ ಇಂಡಿಯಾವನ್ನ ಅನೌನ್ಸ್ ಮಾಡಲಾಗಿದೆ. ಕಾಂಗರೂಗಳ ಸಂಹಾರಕ್ಕೆ ಬಲಿಷ್ಠ ತಂಡ ರೆಡಿಯಾಗಿದೆ. ಹೆಚ್ಚೇನೂ ಪ್ರಯೋಗಕ್ಕೆ ಮುಂದಾಗದಿದ್ರೂ ಕೆಲ ಅಚ್ಚರಿ ನಿರ್ಧಾರಗಳು ಹೊರಬಿದ್ದಿದೆ.

ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. ಸೆಪ್ಟೆಂಬರ್​ 22 ರಿಂದ ಆರಂಭಗೊಳ್ಳಿರುವ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡಿಕೊಂಡು ತಂಡ ಅನೌನ್ಸ್ ಮಾಡಿದ್ದು ಕೆಲ ಸರ್​​ಪ್ರೈಸ್ ನಿರ್ಧಾರ​ ಕೈಗೊಂಡಿದ್ದಾರೆ.

ಮೊದಲೆರಡು ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಆಸೀಸ್ ವಿರುದ್ಧ ನಡೆಯುವ ಮೊದಲೆರಡು ಪಂದ್ಯಕ್ಕೆ ಪ್ರತ್ಯೇಕ ತಂಡವನ್ನು ಅನೌನ್ಸ್ ಮಾಡಲಾಗಿದೆ. ಸ್ಟಾರ್​ ಪ್ಲೇಯರ್ಸ್​ಗೆ ರೆಸ್ಟ್​ ನೀಡಿ, ಯಂಗ್​​​​ಗನ್ಸ್​​​ಗೆ ಮಣೆ ಹಾಕಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಹಾಗೂ ಕುಲ್​ದೀಪ್ ಯಾದವ್​​​ ಮೊದಲೆರಡು ಪಂದ್ಯಗಳಿಂದ ರೆಸ್ಟ್​ ನೀಡಲಾಗಿದೆ. ಇವರ ಬದಲಿ ರುತುರಾಜ್​ ಗಾಯಕ್ವಾಡ್​​​, ತಿಲಕ್ ವರ್ಮಾ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ರೋಹಿತ್​ ಶರ್ಮಾಗೆ ರೆಸ್ಟ್​ ನೀಡಿದ್ದರಿಂದ ಕನ್ನಡಿಗ ಕೆ.ಎಲ್.ರಾಹುಲ್​ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ ಸುದೀರ್ಘ ಸಮಯದ ಬಳಿಕ ತಂಡ ಲೀಡ್ ಮಾಡುವ ಅವಕಾಶ ಸಿಕ್ಕಂತಾಗಿದೆ. ಸ್ಟಾರ್​​ ಆಲ್​ರೌಂಡರ್​ ಜಡೇಜಾಗೆ ವೈಸ್ ಕ್ಯಾಪ್ಟನ್​ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಕೆನಡಾ ಪ್ರತಿಕಾರ; ರಾಯಭಾರಿಯನ್ನು ಹೊರ ಹಾಕಿದ ಜಸ್ಟಿನ್ ಟ್ರುಡೊ ಸರ್ಕಾರ

3ನೇ ಪಂದ್ಯಕ್ಕೆ ಸ್ಟಾರ್​ ಪ್ಲೇಯರ್ಸ್​ ಕಮ್​ಬ್ಯಾಕ್

ಮೊದಲೆರಡು ಪಂದ್ಯಗಳಿಂದ ರೆಸ್ಟ್​​ ಪಡೆದಿದ್ದ ಪ್ರಮುಖ ಆಟಗಾರರು ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ರೋಹಿತ್​​​ ಶರ್ಮಾ ಎಂದಿನಂತೆ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇನ್ನುಳಿದಂತೆ ರನ್ ಮಾಸ್ಟರ್​ ವಿರಾಟ್ ಕೊಹ್ಲಿ ಫೈನಲ್​ ಫೈಟ್​​​​ ಕಣಕ್ಕಿಳಿಯಲಿದ್ದಾರೆ. ಆಸೀಸ್ ವಿರುದ್ಧ ಅದ್ಭುತ ರೆಕಾರ್ಡ್ಸ್ ಹೊಂದಿದ್ದು, ಗುಟುರು ಹಾಕೋದು ಫಿಕ್ಸ್​​​. ಏಷ್ಯಾಕಪ್​​​​​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡಿದ ವೈಸ್​​ ಕ್ಯಾಪ್ಟನ್​ ಹಾರ್ದಿಕ್​​ ಪಾಂಡ್ಯಗೆ 3ನೇ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ.

20 ತಿಂಗಳ ಬಳಿಕ ಸ್ಪಿನ್​ ಮಾಂತ್ರಿಕ ಅಶ್ವಿನ್​ಗೆ ತೆರೆದ ಬಾಗಿಲು

ಸರ್​ಪ್ರೈಸ್ ಎನ್ನುವಂತೆ ಸ್ಪಿನ್ ಮಾಂತ್ರಿಕ ಆರ್​​​ ಅಶ್ವಿನ್​ ಆಸೀಸ್ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ 20 ತಿಂಗಳ ಬಳಿಕ ಕೇರಂ ಸ್ಪೆಷಲಿಸ್ಟ್​​​ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರ ಜತೆ ಮತ್ತೋರ್ವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್​​​ಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ಬಹುತೇಕ ಏಷ್ಯಾಕಪ್​​​​​ ಟೂರ್ನಿಗೆ ಪ್ರಕಟಿಸಿದ ತಂಡವನ್ನೇ ಆಸ್ಟ್ರೇಲಿಯಾ ವಿರುದ್ಧವು ಕಣಕ್ಕಿಳಿಸಲಾಗಿದೆ. ಅಳೆದು ತೂಗಿ ಸಜ್ಜುಗೊಳಿಸಿರೋ ಇಂಡಿಯನ್ ಟೈಗರ್ಸ್​ ಕಾಂಗರೂಗಳನ್ನ ಬೇಟೆಯಾಡ್ತಾವಾ ? ಇಲ್ಲ ನಮ್ಮ ಗುಹೆಗೆ ಭಾರತೀಯ ಹುಲಿಗಳನ್ನೇ ಆಸ್ಟ್ರೇಲಿಯನ್ನರು ಬೇಟೆಯಾಡ್ತಾರಾ ಅನ್ನೋದಕ್ಕೆ ಇನ್ನೊಂದು ವಾರದಲ್ಲಿ ಕ್ಲಾರಿಟಿ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಸಿಸ್​​ ಸರಣಿಗೆ ಅಚ್ಚರಿ ತಂಡ.. ಇಬ್ಬರು ನಾಯಕರು.. ಅಗರ್ಕರ್ ಹೆಣೆದ ಸೂತ್ರವೇನು..?

https://newsfirstlive.com/wp-content/uploads/2023/09/Team_INDIA-7.jpg

    ಯಾರಿಗೆಲ್ಲಾ ಜಾಕ್​​​ಪಾಟ್? ಯಾರಿಗೆ ಗೇಟ್​ಪಾಸ್?

    3ನೇ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ಸ್​ ಕಮ್​ಬ್ಯಾಕ್

    20 ತಿಂಗಳ ಬಳಿಕ ಅಶ್ವಿನ್​ಗೆ ತೆರೆದ ಬಾಗಿಲು

ಮುಂಬರೋ ಆಸ್ಟ್ರೇಲಿಯಾ ಏಕದಿನ ಸರಣಿಗೆ ಟಿಮ್ ಇಂಡಿಯಾವನ್ನ ಅನೌನ್ಸ್ ಮಾಡಲಾಗಿದೆ. ಕಾಂಗರೂಗಳ ಸಂಹಾರಕ್ಕೆ ಬಲಿಷ್ಠ ತಂಡ ರೆಡಿಯಾಗಿದೆ. ಹೆಚ್ಚೇನೂ ಪ್ರಯೋಗಕ್ಕೆ ಮುಂದಾಗದಿದ್ರೂ ಕೆಲ ಅಚ್ಚರಿ ನಿರ್ಧಾರಗಳು ಹೊರಬಿದ್ದಿದೆ.

ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. ಸೆಪ್ಟೆಂಬರ್​ 22 ರಿಂದ ಆರಂಭಗೊಳ್ಳಿರುವ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡಿಕೊಂಡು ತಂಡ ಅನೌನ್ಸ್ ಮಾಡಿದ್ದು ಕೆಲ ಸರ್​​ಪ್ರೈಸ್ ನಿರ್ಧಾರ​ ಕೈಗೊಂಡಿದ್ದಾರೆ.

ಮೊದಲೆರಡು ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಆಸೀಸ್ ವಿರುದ್ಧ ನಡೆಯುವ ಮೊದಲೆರಡು ಪಂದ್ಯಕ್ಕೆ ಪ್ರತ್ಯೇಕ ತಂಡವನ್ನು ಅನೌನ್ಸ್ ಮಾಡಲಾಗಿದೆ. ಸ್ಟಾರ್​ ಪ್ಲೇಯರ್ಸ್​ಗೆ ರೆಸ್ಟ್​ ನೀಡಿ, ಯಂಗ್​​​​ಗನ್ಸ್​​​ಗೆ ಮಣೆ ಹಾಕಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಹಾಗೂ ಕುಲ್​ದೀಪ್ ಯಾದವ್​​​ ಮೊದಲೆರಡು ಪಂದ್ಯಗಳಿಂದ ರೆಸ್ಟ್​ ನೀಡಲಾಗಿದೆ. ಇವರ ಬದಲಿ ರುತುರಾಜ್​ ಗಾಯಕ್ವಾಡ್​​​, ತಿಲಕ್ ವರ್ಮಾ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ರೋಹಿತ್​ ಶರ್ಮಾಗೆ ರೆಸ್ಟ್​ ನೀಡಿದ್ದರಿಂದ ಕನ್ನಡಿಗ ಕೆ.ಎಲ್.ರಾಹುಲ್​ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ ಸುದೀರ್ಘ ಸಮಯದ ಬಳಿಕ ತಂಡ ಲೀಡ್ ಮಾಡುವ ಅವಕಾಶ ಸಿಕ್ಕಂತಾಗಿದೆ. ಸ್ಟಾರ್​​ ಆಲ್​ರೌಂಡರ್​ ಜಡೇಜಾಗೆ ವೈಸ್ ಕ್ಯಾಪ್ಟನ್​ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಕೆನಡಾ ಪ್ರತಿಕಾರ; ರಾಯಭಾರಿಯನ್ನು ಹೊರ ಹಾಕಿದ ಜಸ್ಟಿನ್ ಟ್ರುಡೊ ಸರ್ಕಾರ

3ನೇ ಪಂದ್ಯಕ್ಕೆ ಸ್ಟಾರ್​ ಪ್ಲೇಯರ್ಸ್​ ಕಮ್​ಬ್ಯಾಕ್

ಮೊದಲೆರಡು ಪಂದ್ಯಗಳಿಂದ ರೆಸ್ಟ್​​ ಪಡೆದಿದ್ದ ಪ್ರಮುಖ ಆಟಗಾರರು ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ರೋಹಿತ್​​​ ಶರ್ಮಾ ಎಂದಿನಂತೆ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇನ್ನುಳಿದಂತೆ ರನ್ ಮಾಸ್ಟರ್​ ವಿರಾಟ್ ಕೊಹ್ಲಿ ಫೈನಲ್​ ಫೈಟ್​​​​ ಕಣಕ್ಕಿಳಿಯಲಿದ್ದಾರೆ. ಆಸೀಸ್ ವಿರುದ್ಧ ಅದ್ಭುತ ರೆಕಾರ್ಡ್ಸ್ ಹೊಂದಿದ್ದು, ಗುಟುರು ಹಾಕೋದು ಫಿಕ್ಸ್​​​. ಏಷ್ಯಾಕಪ್​​​​​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡಿದ ವೈಸ್​​ ಕ್ಯಾಪ್ಟನ್​ ಹಾರ್ದಿಕ್​​ ಪಾಂಡ್ಯಗೆ 3ನೇ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ.

20 ತಿಂಗಳ ಬಳಿಕ ಸ್ಪಿನ್​ ಮಾಂತ್ರಿಕ ಅಶ್ವಿನ್​ಗೆ ತೆರೆದ ಬಾಗಿಲು

ಸರ್​ಪ್ರೈಸ್ ಎನ್ನುವಂತೆ ಸ್ಪಿನ್ ಮಾಂತ್ರಿಕ ಆರ್​​​ ಅಶ್ವಿನ್​ ಆಸೀಸ್ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ 20 ತಿಂಗಳ ಬಳಿಕ ಕೇರಂ ಸ್ಪೆಷಲಿಸ್ಟ್​​​ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರ ಜತೆ ಮತ್ತೋರ್ವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್​​​ಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ಬಹುತೇಕ ಏಷ್ಯಾಕಪ್​​​​​ ಟೂರ್ನಿಗೆ ಪ್ರಕಟಿಸಿದ ತಂಡವನ್ನೇ ಆಸ್ಟ್ರೇಲಿಯಾ ವಿರುದ್ಧವು ಕಣಕ್ಕಿಳಿಸಲಾಗಿದೆ. ಅಳೆದು ತೂಗಿ ಸಜ್ಜುಗೊಳಿಸಿರೋ ಇಂಡಿಯನ್ ಟೈಗರ್ಸ್​ ಕಾಂಗರೂಗಳನ್ನ ಬೇಟೆಯಾಡ್ತಾವಾ ? ಇಲ್ಲ ನಮ್ಮ ಗುಹೆಗೆ ಭಾರತೀಯ ಹುಲಿಗಳನ್ನೇ ಆಸ್ಟ್ರೇಲಿಯನ್ನರು ಬೇಟೆಯಾಡ್ತಾರಾ ಅನ್ನೋದಕ್ಕೆ ಇನ್ನೊಂದು ವಾರದಲ್ಲಿ ಕ್ಲಾರಿಟಿ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More