newsfirstkannada.com

ರೋಹಿತ್​ ವಿಷ್ಣುವಿನ ತಾಳ್ಮೆ; ಕೊಹ್ಲಿ ಉಗ್ರ ನರಸಿಂಹನ ಕೋಪ; ಈ ಸಲ ವಿಶ್ವಕಪ್​ ನಮ್ದೇ!

Share :

06-09-2023

    ವಿಶ್ವಕಪ್​ಗೆ ಜಬರ್ದಸ್ತ್​​ ಟೀಮ್​​! 15 ಮಂದಿಗೆ ಮಣೆ ಹಾಕಿದ ಬಿಸಿಸಿಐ

    ಟಾಪ್​ ಕ್ಲಾಸ್​ ಓಪನರ್ಸ್​ ಜತೆ ಸ್ಟ್ರಾಂಗ್​ ಮಿಡಲ್​ ಆರ್ಡರ್ ಕೂಡ ಇದೆ!

    ಆಲ್​​ರೌಂಡರ್ ಅಸ್ತ್ರ! ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್​ ಸಾಥ್​!

ಏಷ್ಯಾ ಕಪ್​ ರಣಾಂಗಣದಲ್ಲಿ ಭಾರತದ ಕ್ರಿಕೆಟ್​ ಕಲಿಗಳು ಸೆಣಸಾಟ ನಡೆಸುತ್ತಿದ್ದಾರೆ.. ಈ ಮಧ್ಯೆ ಮತ್ತೊಂದು ಸಮರಕ್ಕೆ ಸೆಲೆಕ್ಷನ್​ ಕಮಿಟಿ ಕಹಳೆ ಮೊಳಗಿಸಿದೆ.. ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ಪರ್ಫೆಕ್ಟ್​ ಆ್ಯಂಡ್ ಬೆಸ್ಟ್​ ಕಾಂಬಿನೇಷನ್​​​​​​​​​​​​​​​ಗೆ ಮಣೆ ಹಾಕಲಾಗಿದೆ.

ಸದ್ಯ ನಡೆಯುತ್ತಿರೋ ಏಷ್ಯಾಕಪ್​ ಸಮರದಲ್ಲಿ ಸೆಣಸಾಟ ನಡೆಸುತ್ತಿರೋ ಭಾರತದ ಕ್ರಿಕೆಟ್​ ತಂಡಕ್ಕೆ ಮತ್ತೊಂದು ಮಹಾಸಮರದ ಮುನ್ನುಡಿ ಬರೆದಿದೆ. ಏಕದಿನ ವಿಶ್ವಕಪ್​ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಮಿಷನ್-23ರ ಏಕದಿನ ವಿಶ್ವಕಪ್​​ ಗೆಲ್ಲೋಕೆ 15 ಮಂದಿ ರಣಕಲಿಗಳನ್ನ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಮೆಗಾ ಟೂರ್ನಿಯಲ್ಲಿ ಸೆಣಸಾಡಲು 7 ಮಂದಿ ಬ್ಯಾಟ್ಸ್​ಮನ್​​, ತಲಾ ನಾಲ್ವರು ಆಲ್​ರೌಂಡರ್ಸ್​ ಹಾಗೂ ವೇಗಿಗಳಿಗೆ ತಂಡದಲ್ಲಿ ಚಾನ್ಸ್​ ನೀಡಿದೆ.

ಜಬರ್ದಸ್ತ್​​ ಟೀಂ.. 15 ಮಂದಿಗೆ ಮಣೆ!

ಏಷ್ಯಾಕಪ್​ ತಂಡದಲ್ಲಿನ 18 ಆಟಗಾರರ ಪೈಕಿ ಸದ್ಯ 15 ಮಂದಿಗೆ ಏಕದಿನ ವಿಶ್ವಕಪ್​ನಲ್ಲಿ ಸೆಲೆಕ್ಷನ್​​​​​​ ಕಮಿಟಿ ಮಣೆಹಾಕಿದೆ. ವಿಶ್ವಕಪ್​ ಗೆಲ್ಲುವ ಭರವಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿರೋ ಭಾರತ 15 ಬಲಿಷ್ಟರ ತಂಡ ಕಟ್ಟಿಕೊಂಡು ಸಮರಕ್ಕಿಳಿಯಲು ಸಜ್ಜಾಗಿದೆ. ಏಕದಿನ ವಿಶ್ವಕಪ್​​ಗೆ ತಂಡದ ನಾಯಕತ್ವವನ್ನ ರೋಹಿತ್ ಶರ್ಮಾ ಹೆಗಲಿಗೆ ವಹಿಸಲಾಗಿದೆ.

ಟಾಪ್​ ಕ್ಲಾಸ್​ ಓಪನರ್ಸ್​.. ಸ್ಟ್ರಾಂಗ್​ ಮಿಡಲ್​ ಆರ್ಡರ್​!

ಕಳೆದ 2019ರ ಏಕದಿನ ವಿಶ್ವಕಪ್​ಗೆ ಹೋಲಿಸಿದ್ರೆ, ಈ ಬಾರಿಯ ಟಾಪ್ ಆರ್ಡರ್​ ಮತ್ತಷ್ಟು ಬಲಿಷ್ಠವಾಗಿದೆ. ಟಾಪ್ ಕ್ಲಾಸ್ ಆರಂಭಿಕರನ್ನೇ ಹೊಂದಿರುವ ಟೀಮ್ ಇಂಡಿಯಾ, ಮಿಡಲ್ ಆರ್ಡರ್​ನಲ್ಲೂ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​.ರಾಹುಲ್​​​ರಂಥ ಕ್ಲಾಲಿಟಿ ಬ್ಯಾಟ್ಸ್​ಮನ್​ಗಳನ್ನ ಹೊಂದಿದೆ.

ವಿಕೆಟ್​ ಕೀಪರ್​ ವಿಚಾರದಲ್ಲೂ ಸೆಲೆಕ್ಷನ್ ಕಮಿಟಿ ಎಚ್ಚರದ ಹೆಜ್ಜೆ ಇಟ್ಟಿದೆ. ಈ ಬಾರಿ ಇಶಾನ್ ಕಿಶನ್ ಆ್ಯಂಡ್ ಕೆ.ಎಲ್.ರಾಹುಲ್ ಇಬ್ಬರು ವಿಕೆಟ್ ಕೀಪರ್​ಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್​ಫ್ಯಾಕ್ಟ್​ ಓಪನರ್​ಗಳಾಗಿ ಬ್ಯಾಟ್ ಬೀಸಬಲ್ಲ ಇವರು, ಮಿಡಲ್ ಆರ್ಡರ್​ನಲ್ಲೂ ಮ್ಯಾಚ್​ ವಿನ್ನರ್​ಗಳಾಗುವ ಸಾಧ್ಯತೆ ಇದೆ.

ಕಳೆದ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಡೆಪ್ತ್ ಇಲ್ಲವೆಂಬ ಕೊರಗು ಸದಾ ಕೇಳ್ತಿತ್ತು.. ಇದೀಗ ಇದಕ್ಕೆ ಮದ್ದು ನೀಡುವ ಸಲುವಾಗಿಯೇ ನಾಲ್ವರು ಆಲ್​​ರೌಂಡರ್​ಗಳನ್ನ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಸೆಲಕ್ಷನ್​ ಕಮಿಟಿ ಮುಂದಾಗಿದೆ.

ಆಲ್​​ರೌಂಡರ್ ಅಸ್ತ್ರ!

ಆಲ್​​ರೌಂಡರ್​ಗಳಾಗಿ ಹಾರ್ದಿಕ್-ಜಡೇಜಾ ಜೊತೆಗೆ ಶಾರ್ದೂಲ್-ಅಕ್ಷರ್​​​​ಗೂ ಮಣೆ ಹಾಕಲಾಗಿದೆ. ಈ ನಾಲ್ವರ ಪೈಕಿ ಮೂವರು ಪ್ಲೇಯಿಂಗ್​​​​​​​​​​-XIನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ.. ತಂಡದಲ್ಲಿ ಕಾಣಿಸಿಕೊಳ್ತಿರು ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಸಹ ಸ್ಥಾನ ಪಡೆದಿದ್ದಾರೆ.

ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್​ ಸಾಥ್​!

ಟೀಮ್ ಇಂಡಿಯಾದ ವೇಗದ ಬೌಲಿಂಗ್​ ಡಿಪಾರ್ಟ್​ಮೆಂಟ್, ಈ ಹಿಂದಿಗಿಂತ ಸಖತ್ ಸ್ಟ್ರಾಂಗ್ ಆಗಿದೆ. ಬೌಲಿಂಗ್​ ವಿಭಾಗದಲ್ಲಿ ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಒಳಗೊಂಡ ತ್ರಿಮೂರ್ತಿ ವೇಗಿಗಳ ಸಾಮರ್ಥ್ಯವಿದೆ.. ಇವರ ಜೊತೆಗೆ ಸ್ಪಿನ್ ಆಲ್​ರೌಂಡರ್​ಗಳು ಮಿಂಚಿದ್ರೆ, ಟೀಮ್ ಇಂಡಿಯಾ ವಿಶ್ವಕಪ್​​ ಕನಸು ನನಸಾಗೋದು ಗ್ಯಾರಂಟಿ.

ಒಟ್ನಲ್ಲಿ 15 ಮಂದಿ ಆಟಗಾರರ ತಂಡ ಪೇಪರ್​ ಮೇಲೆ ಸಖತ್ ಸ್ಟ್ರಾಂಗ್ ಆಗಿದೆ.. ನಿರೀಕ್ಷೆಯಂತೆ ರಣಾಂಗಣದಲ್ಲಿ ಹುಲಿಗಳಂತೆ ಘರ್ಜಿಸಿದ್ರೆ, ಭಾರತ ವಿಶ್ವಕಪ್ ಗೆಲ್ಲೋದ್ರಲ್ಲಿ ಎರಡು ಮಾತೇ ಇಲ್ಲ ಅನ್ನೋ ಮಾತು ಅಭಿಮಾನಿಗಳ ಬಳಗದಲ್ಲಿ ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ ವಿಷ್ಣುವಿನ ತಾಳ್ಮೆ; ಕೊಹ್ಲಿ ಉಗ್ರ ನರಸಿಂಹನ ಕೋಪ; ಈ ಸಲ ವಿಶ್ವಕಪ್​ ನಮ್ದೇ!

https://newsfirstlive.com/wp-content/uploads/2023/09/Rohit_Kohli.jpg

    ವಿಶ್ವಕಪ್​ಗೆ ಜಬರ್ದಸ್ತ್​​ ಟೀಮ್​​! 15 ಮಂದಿಗೆ ಮಣೆ ಹಾಕಿದ ಬಿಸಿಸಿಐ

    ಟಾಪ್​ ಕ್ಲಾಸ್​ ಓಪನರ್ಸ್​ ಜತೆ ಸ್ಟ್ರಾಂಗ್​ ಮಿಡಲ್​ ಆರ್ಡರ್ ಕೂಡ ಇದೆ!

    ಆಲ್​​ರೌಂಡರ್ ಅಸ್ತ್ರ! ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್​ ಸಾಥ್​!

ಏಷ್ಯಾ ಕಪ್​ ರಣಾಂಗಣದಲ್ಲಿ ಭಾರತದ ಕ್ರಿಕೆಟ್​ ಕಲಿಗಳು ಸೆಣಸಾಟ ನಡೆಸುತ್ತಿದ್ದಾರೆ.. ಈ ಮಧ್ಯೆ ಮತ್ತೊಂದು ಸಮರಕ್ಕೆ ಸೆಲೆಕ್ಷನ್​ ಕಮಿಟಿ ಕಹಳೆ ಮೊಳಗಿಸಿದೆ.. ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ಪರ್ಫೆಕ್ಟ್​ ಆ್ಯಂಡ್ ಬೆಸ್ಟ್​ ಕಾಂಬಿನೇಷನ್​​​​​​​​​​​​​​​ಗೆ ಮಣೆ ಹಾಕಲಾಗಿದೆ.

ಸದ್ಯ ನಡೆಯುತ್ತಿರೋ ಏಷ್ಯಾಕಪ್​ ಸಮರದಲ್ಲಿ ಸೆಣಸಾಟ ನಡೆಸುತ್ತಿರೋ ಭಾರತದ ಕ್ರಿಕೆಟ್​ ತಂಡಕ್ಕೆ ಮತ್ತೊಂದು ಮಹಾಸಮರದ ಮುನ್ನುಡಿ ಬರೆದಿದೆ. ಏಕದಿನ ವಿಶ್ವಕಪ್​ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಮಿಷನ್-23ರ ಏಕದಿನ ವಿಶ್ವಕಪ್​​ ಗೆಲ್ಲೋಕೆ 15 ಮಂದಿ ರಣಕಲಿಗಳನ್ನ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಮೆಗಾ ಟೂರ್ನಿಯಲ್ಲಿ ಸೆಣಸಾಡಲು 7 ಮಂದಿ ಬ್ಯಾಟ್ಸ್​ಮನ್​​, ತಲಾ ನಾಲ್ವರು ಆಲ್​ರೌಂಡರ್ಸ್​ ಹಾಗೂ ವೇಗಿಗಳಿಗೆ ತಂಡದಲ್ಲಿ ಚಾನ್ಸ್​ ನೀಡಿದೆ.

ಜಬರ್ದಸ್ತ್​​ ಟೀಂ.. 15 ಮಂದಿಗೆ ಮಣೆ!

ಏಷ್ಯಾಕಪ್​ ತಂಡದಲ್ಲಿನ 18 ಆಟಗಾರರ ಪೈಕಿ ಸದ್ಯ 15 ಮಂದಿಗೆ ಏಕದಿನ ವಿಶ್ವಕಪ್​ನಲ್ಲಿ ಸೆಲೆಕ್ಷನ್​​​​​​ ಕಮಿಟಿ ಮಣೆಹಾಕಿದೆ. ವಿಶ್ವಕಪ್​ ಗೆಲ್ಲುವ ಭರವಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿರೋ ಭಾರತ 15 ಬಲಿಷ್ಟರ ತಂಡ ಕಟ್ಟಿಕೊಂಡು ಸಮರಕ್ಕಿಳಿಯಲು ಸಜ್ಜಾಗಿದೆ. ಏಕದಿನ ವಿಶ್ವಕಪ್​​ಗೆ ತಂಡದ ನಾಯಕತ್ವವನ್ನ ರೋಹಿತ್ ಶರ್ಮಾ ಹೆಗಲಿಗೆ ವಹಿಸಲಾಗಿದೆ.

ಟಾಪ್​ ಕ್ಲಾಸ್​ ಓಪನರ್ಸ್​.. ಸ್ಟ್ರಾಂಗ್​ ಮಿಡಲ್​ ಆರ್ಡರ್​!

ಕಳೆದ 2019ರ ಏಕದಿನ ವಿಶ್ವಕಪ್​ಗೆ ಹೋಲಿಸಿದ್ರೆ, ಈ ಬಾರಿಯ ಟಾಪ್ ಆರ್ಡರ್​ ಮತ್ತಷ್ಟು ಬಲಿಷ್ಠವಾಗಿದೆ. ಟಾಪ್ ಕ್ಲಾಸ್ ಆರಂಭಿಕರನ್ನೇ ಹೊಂದಿರುವ ಟೀಮ್ ಇಂಡಿಯಾ, ಮಿಡಲ್ ಆರ್ಡರ್​ನಲ್ಲೂ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​.ರಾಹುಲ್​​​ರಂಥ ಕ್ಲಾಲಿಟಿ ಬ್ಯಾಟ್ಸ್​ಮನ್​ಗಳನ್ನ ಹೊಂದಿದೆ.

ವಿಕೆಟ್​ ಕೀಪರ್​ ವಿಚಾರದಲ್ಲೂ ಸೆಲೆಕ್ಷನ್ ಕಮಿಟಿ ಎಚ್ಚರದ ಹೆಜ್ಜೆ ಇಟ್ಟಿದೆ. ಈ ಬಾರಿ ಇಶಾನ್ ಕಿಶನ್ ಆ್ಯಂಡ್ ಕೆ.ಎಲ್.ರಾಹುಲ್ ಇಬ್ಬರು ವಿಕೆಟ್ ಕೀಪರ್​ಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್​ಫ್ಯಾಕ್ಟ್​ ಓಪನರ್​ಗಳಾಗಿ ಬ್ಯಾಟ್ ಬೀಸಬಲ್ಲ ಇವರು, ಮಿಡಲ್ ಆರ್ಡರ್​ನಲ್ಲೂ ಮ್ಯಾಚ್​ ವಿನ್ನರ್​ಗಳಾಗುವ ಸಾಧ್ಯತೆ ಇದೆ.

ಕಳೆದ ಕೆಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಡೆಪ್ತ್ ಇಲ್ಲವೆಂಬ ಕೊರಗು ಸದಾ ಕೇಳ್ತಿತ್ತು.. ಇದೀಗ ಇದಕ್ಕೆ ಮದ್ದು ನೀಡುವ ಸಲುವಾಗಿಯೇ ನಾಲ್ವರು ಆಲ್​​ರೌಂಡರ್​ಗಳನ್ನ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಸೆಲಕ್ಷನ್​ ಕಮಿಟಿ ಮುಂದಾಗಿದೆ.

ಆಲ್​​ರೌಂಡರ್ ಅಸ್ತ್ರ!

ಆಲ್​​ರೌಂಡರ್​ಗಳಾಗಿ ಹಾರ್ದಿಕ್-ಜಡೇಜಾ ಜೊತೆಗೆ ಶಾರ್ದೂಲ್-ಅಕ್ಷರ್​​​​ಗೂ ಮಣೆ ಹಾಕಲಾಗಿದೆ. ಈ ನಾಲ್ವರ ಪೈಕಿ ಮೂವರು ಪ್ಲೇಯಿಂಗ್​​​​​​​​​​-XIನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ.. ತಂಡದಲ್ಲಿ ಕಾಣಿಸಿಕೊಳ್ತಿರು ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಸಹ ಸ್ಥಾನ ಪಡೆದಿದ್ದಾರೆ.

ಭಾರತ ತಂಡಕ್ಕೆ ಬಲಿಷ್ಠ ವೇಗಿಗಳ ಬೌಲಿಂಗ್​ ಸಾಥ್​!

ಟೀಮ್ ಇಂಡಿಯಾದ ವೇಗದ ಬೌಲಿಂಗ್​ ಡಿಪಾರ್ಟ್​ಮೆಂಟ್, ಈ ಹಿಂದಿಗಿಂತ ಸಖತ್ ಸ್ಟ್ರಾಂಗ್ ಆಗಿದೆ. ಬೌಲಿಂಗ್​ ವಿಭಾಗದಲ್ಲಿ ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಒಳಗೊಂಡ ತ್ರಿಮೂರ್ತಿ ವೇಗಿಗಳ ಸಾಮರ್ಥ್ಯವಿದೆ.. ಇವರ ಜೊತೆಗೆ ಸ್ಪಿನ್ ಆಲ್​ರೌಂಡರ್​ಗಳು ಮಿಂಚಿದ್ರೆ, ಟೀಮ್ ಇಂಡಿಯಾ ವಿಶ್ವಕಪ್​​ ಕನಸು ನನಸಾಗೋದು ಗ್ಯಾರಂಟಿ.

ಒಟ್ನಲ್ಲಿ 15 ಮಂದಿ ಆಟಗಾರರ ತಂಡ ಪೇಪರ್​ ಮೇಲೆ ಸಖತ್ ಸ್ಟ್ರಾಂಗ್ ಆಗಿದೆ.. ನಿರೀಕ್ಷೆಯಂತೆ ರಣಾಂಗಣದಲ್ಲಿ ಹುಲಿಗಳಂತೆ ಘರ್ಜಿಸಿದ್ರೆ, ಭಾರತ ವಿಶ್ವಕಪ್ ಗೆಲ್ಲೋದ್ರಲ್ಲಿ ಎರಡು ಮಾತೇ ಇಲ್ಲ ಅನ್ನೋ ಮಾತು ಅಭಿಮಾನಿಗಳ ಬಳಗದಲ್ಲಿ ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More