newsfirstkannada.com

Rain News: ಭೀಕರ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋದ 12 ಮಂದಿ.. ನಾಲ್ವರ ರಕ್ಷಣೆ, ಐವರು ಸಾವು

Share :

29-07-2023

    ಉಳಿದ ಮೂವರಿಗಾಗಿ ಮುಂದುವರಿದ ಶೋಧಕಾರ್ಯ

    ಪ್ರವಾಹಕ್ಕೆ ಸಿಲುಕಿದ್ದ ಒಟ್ಟು 80 ಜನರ ರಕ್ಷಣೆ

    ಮಳೆಯಿಂದ ಭಾರೀ ಅನಾಹುತ, ರಸ್ತೆ ಸಂಪರ್ಕ ಕಟ್

ತೆಲಂಗಾಣದ ಮುಲುಗು ಜಿಲ್ಲೆಯ ಕೊಂಡೈ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿದ್ದು, 8 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋದ 12 ಮಂದಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನುಳಿದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಮೂವರ ರಕ್ಷಣೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಎನ್​ಡಿಆರ್​​ಎಫ್ ಪಡೆ ಕೊಚ್ಚಿ ಹೋಗಿರುವ ಕೊಂಡೈ ಗ್ರಾಮದಲ್ಲಿ ಬೀಡುಬಿಟ್ಟು ಶೋಧಕಾರ್ಯ ನಡೆಸುತ್ತಿದೆ. ಈಗಾಗಲೇ ಗ್ರಾಮದಲ್ಲಿದ್ದ ಒಟ್ಟು 80 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಲುಗು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 22ರವರೆಗೆ 8 ಮಂದಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ತುಂಬಾನೇ ಅನಾಹುತಗಳು ಆಗಿವೆ. ಲೆಕ್ಕಕ್ಕೆ ಸಿಗದಷ್ಟು ರಸ್ತೆಗಳು ಬಂದ್ ಆಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain News: ಭೀಕರ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋದ 12 ಮಂದಿ.. ನಾಲ್ವರ ರಕ್ಷಣೆ, ಐವರು ಸಾವು

https://newsfirstlive.com/wp-content/uploads/2023/07/Telangana-1.jpg

    ಉಳಿದ ಮೂವರಿಗಾಗಿ ಮುಂದುವರಿದ ಶೋಧಕಾರ್ಯ

    ಪ್ರವಾಹಕ್ಕೆ ಸಿಲುಕಿದ್ದ ಒಟ್ಟು 80 ಜನರ ರಕ್ಷಣೆ

    ಮಳೆಯಿಂದ ಭಾರೀ ಅನಾಹುತ, ರಸ್ತೆ ಸಂಪರ್ಕ ಕಟ್

ತೆಲಂಗಾಣದ ಮುಲುಗು ಜಿಲ್ಲೆಯ ಕೊಂಡೈ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿದ್ದು, 8 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋದ 12 ಮಂದಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನುಳಿದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಮೂವರ ರಕ್ಷಣೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಎನ್​ಡಿಆರ್​​ಎಫ್ ಪಡೆ ಕೊಚ್ಚಿ ಹೋಗಿರುವ ಕೊಂಡೈ ಗ್ರಾಮದಲ್ಲಿ ಬೀಡುಬಿಟ್ಟು ಶೋಧಕಾರ್ಯ ನಡೆಸುತ್ತಿದೆ. ಈಗಾಗಲೇ ಗ್ರಾಮದಲ್ಲಿದ್ದ ಒಟ್ಟು 80 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಲುಗು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 22ರವರೆಗೆ 8 ಮಂದಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ತುಂಬಾನೇ ಅನಾಹುತಗಳು ಆಗಿವೆ. ಲೆಕ್ಕಕ್ಕೆ ಸಿಗದಷ್ಟು ರಸ್ತೆಗಳು ಬಂದ್ ಆಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More